Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇನ್ಫೂಸಿಸ್ನ ಆಫಿಸ್ ಬಾಯ್ ಈಗ ₹2 ಕೋಟಿ ಆದಾಯದ ಕಂಪನಿಯ ಒಡೆಯ..!!
ಯಾರ ಜೀವನ ಯಾವಾಗ, ಯಾವ ಕ್ಷಣದಲ್ಲಿ ಬದಲಾಗುತ್ತದೆ ಅನ್ನೋದನ್ನ ಯಾರು ಸಹ ಊಹಿಸಲು ಸಾಧ್ಯವಿಲ್ಲ. ಹಾಗೆ ಯಾರ ಅದೃಷ್ಟದಿಂದ ಉತ್ತುಂಗಕ್ಕೆ ಏರಬಹುದು ಯಾವಾಗ ಜೀವನ ಬದಲಾಗಬಹುದು ಎಂಬುದು ಸಹ ಅರಿವಿರುವುದಿಲ್ಲ. ಹಾಗೆ ಕಷ್ಟಪಟ್ಟು ಕೆಲಸ ಮಾಡಿದರೆ ಅದರ ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂಬ ಮಾತು ಸಹ ಸತ್ಯವಾದ ಅದೆಷ್ಟೋ ಪ್ರಸಂಗಗಳ ನಾವು ನೋಡಿದ್ದೇವೆ, ಕೇಳಿದ್ದೇವೆ ಕೂಡ.
ಕಷ್ಟ ಪಟ್ಟು ದುಡಿದರೆ, ತಮ್ಮ ದುಡಿಮೆಯನ್ನೇ ಶ್ರದ್ಧೆಯಿಂದ ಮಾಡಿದರೆ ಎಂತಹ ಯಶಸ್ಸನ್ನಾದರು ಗಳಿಸಬಹುದು ಎಂಬುದಕ್ಕೆ ಈ ದಾದಾಸಾಹೇಬ್ ಭಗತ್ ಎಂಬಾತನೇ ಜೀವಂತ ಸಾಕ್ಷಿ. ಆತ ಮಹಾರಾಷ್ಟ್ರದ ಬೀಡ್ ಎಂಬ ಪುಟ್ಟ ಗ್ರಾಮವೊಂದರಿಂದ ಬಂದು ದೊಡ್ಡ ಕಂಪನಿಯಲ್ಲಿ ಆಫಿಸ್ ಬಾಯ್ ಆಗಿ ಕೆಲಸ ಮಾಡಿ ಈಗ ಕಂಪನಿ ಸಿಇಒ ಆಗಿ ಬೆಳೆದು ನಿಂತಿದ್ದಾನೆ.

ಸಣ್ಣ ಹಳ್ಳಿಯಾಗಿ ಹುಟ್ಟಿ ಬೆಳೆದ ದಾದಾಸಾಹೇಬ್ ಭಗತ್ ಪ್ರೌಢಶಾಲೆ ಮುಗಿಸುತ್ತಿದ್ದಂತೆ ದೊಡ್ಡ ಕನಸಿನೊಂದಿಗೆ ಪುಣೆಗೆ ಬಂದಿಳಿದಿದ್ದ. ಆತನಿಗೆ ಓದಿಗಿಂತಲೂ ಕೆಲಸ ಮಾಡುವುದೇ ಆ ಸಮಯಕ್ಕೆ ಮುಖ್ಯವಾಗಿತ್ತು. ಹೀಗಾಗಿ ಕೆಲಸಕ್ಕಾಗಿ ಆತ ಬೀದಿ ಬೀದಿ ಅಲೆದಾಡಿದ್ದ. ಈ ವೇಳೆ ರೂಮ್ ಬಾಯ್ ಆಗಿ ತಿಂಗಳಿಗೆ ಕೇವಲ 9 ಸಾವಿರ ರೂಪಾಯಿ ಪಡೆಯುವ ಕೆಲಸಕ್ಕೆ ಸೇರಿದರು. 2009ರಲ್ಲಿ ಆತ ಈ ಕೆಲಸ ಪಡೆದಿದ್ದನಂತೆ.
ಇದಾದ ಬಳಿಕ ಇನ್ಫೋಸಿಸ್ ಕಂಪನಿಗೆ ಆಫಿಸ್ ಬಾಯ್ ಆಗಿ ಸೇರಿದ್ದರಂತೆ. ಈ ವೇಳೆಗಾಗಲೆ ಅವರಲ್ಲಿ ಸಾಫ್ಟ್ವೇರ್, ಕೋಡಿಂಗ್ ಕುರಿತಂತೆ ಆಸಕ್ತಿ ಮೂಡಿತ್ತು. ಇದೇ ಆಫಿಸ್ನಲ್ಲಿ ಟೀ, ಕಾಫಿ, ಊಟ, ತಿಂಡಿ, ನೀರು ಕೊಡುವ ಕಾರ್ಯ ಮಾಡುತ್ತಿದ್ದರು. ಆದರೆ ಸಾಫ್ಟ್ವೇರ್ನಲ್ಲಿ ಆಸಕ್ತಿ ಇದ್ದರೆ ಏನು ಮಾಡಲು ಸಾಧ್ಯವಿಲ್ಲ ಆ ಕುರಿತ ಡಿಗ್ರಿಯ ಅಗತ್ಯವಿದೆ ಎಂದು ತಿಳಿದುಕೊಂಡರು.
ಹೀಗಾಗಿ ಹಗಲು ಕೆಲಸ ಮಾಡಿ ರಾತ್ರಿ ಕಾಲೇಜು ಸೇರಿದರು. ಅನಿಮೇಷನ್ ಮತ್ತು ಡಿಸೈನರ್ ಕೋರ್ಸ್ ತೆಗೆದುಕೊಂಡರು. ಬಳಿಕ ಮುಂಬೈ ಬಿಟ್ಟು ಹೈದರಾಬಾದ್ಗೆ ತೆರಳಿದರು ಇನ್ನು ಡಿಸೈನಿಂಗ್ ಗ್ರಾಫಿಕ್ಸ್ ಕೆಲಸ ಮಾಡುವಾಗಲೇ ಕೋಡಿಂಗ್ ಕಲಿಯಲು ಮುಂದಾದರು. ಕೋಡಿಂಗ್ ಕಲಿತ ಅವರು ಮುಂಬೈಗೆ ಮರಳಿದರು. ಅಲ್ಲಿ ಫ್ರೈಮ್ ಫೋಕರ್ಸ್ ವರ್ಲ್ಡ್ ಸಂಸ್ಥೆಯಲ್ಲಿ ರೋಟೋ ಆರ್ಟಿಸ್ಟ್ ಆಗಿ ಕೆಲಸ ಮಾಡಲು ಆರಂಭಿಸಿದರು. ಈ ಸಂಸ್ಥೆ ಹಾಲಿವುಡ್ ಸಿನಿಮಾಗಳಿಗೂ ವಿಎಫ್ಎಕ್ಸ್, ಗ್ರಾಫಿಕ್ಸ್, ಅನಿಮೇಷನ್ ನೀಡುತ್ತಿತ್ತು.
ಅನಿಮೇಷನ್ ಕೋರ್ಸ್ ಮುಗಿಸಿದ ನಂತರ, ದಾದಾಸಾಹೇಬ್ ಭಗತ್ ಮುಂಬೈನಲ್ಲಿ ತಮ್ಮ ಮೊದಲ ನಿಜವಾದ ಉದ್ಯೋಗವನ್ನು ಪಡೆದರು. "ನಾರ್ನಿಯಾ" ಮತ್ತು "ಸ್ಟಾರ್ ವಾರ್ಸ್" ನಂತಹ ಹಾಲಿವುಡ್ ಚಲನಚಿತ್ರಗಳಿಗೆ ಕೊಡುಗೆ ನೀಡಿದ ಪ್ರೈಮ್ ಫೋಕಸ್ ವರ್ಲ್ಡ್ನಲ್ಲಿ ರೋಟೋ ಆರ್ಟಿಸ್ಟ್ ಆಗಿ ಕೆಲಸ ಮಾಡುವುದನ್ನು ಅವರ ವೃತ್ತಿಜೀವನವು ಕಂಡಿತು. ಅವರು ರಿಲಯನ್ಸ್ ಮೀಡಿಯಾವರ್ಕ್ಸ್ ಲಿಮಿಟೆಡ್ ಮತ್ತು ಮ್ಯಾಜಿಕ್ ಎನ್ ಕಲರ್ಸ್ ಇಂಕ್ನಲ್ಲಿ ತಮ್ಮ ಕೌಶಲ್ಯಗಳನ್ನು ಮತ್ತಷ್ಟು ಹೆಚ್ಚಿಸಿಕೊಂಡರು, ವಿವಿಧ ಅನಿಮೇಷನ್ ಮತ್ತು ದೃಶ್ಯ ಪರಿಣಾಮಗಳ ಯೋಜನೆಗಳಲ್ಲಿ ಕೆಲಸ ಮಾಡಿದರು.
ಇದಾದ ಬಳಿಕ ಭಗತ್ 2015ರಲ್ಲಿ ತಮ್ಮದೆ ಅನಿಮೇಷನ್ ಸಂಸ್ಥೆ ತೆರೆಯಲು ಮುಂದಾದರು, ಬಳಿಕ ಇದಕ್ಕೆ Ninthmotion ಎಂದು ಹೆಸರಿಟ್ಟರು. ಇದು ಬಿಬಿಸಿ ಮತ್ತು 9XM ಎಂಬ ದೊಡ್ಡ ದೊಡ್ಡ ಚಾನಲ್ಗಳಿಗೆ ತಮ್ಮ ಅನಿಮೇಷನ್ ಹಂಚಿಕೊಂಡಿತು, ಇಲ್ಲಿಂದ ಭಗತ್ ಜೀವನ ಸಂಪೂರ್ಣ ಬದಲಾಯಿತು. ಇದಾಗಿ ಭಗತ್ ಡೂಗ್ರಾಫಿಕ್ಸ್ ಎಂಬ ಸಂಸ್ಥೆ ಕಟ್ಟಿದರು. ಮಹಾರಾಷ್ಟ್ರ, ದೆಹಲಿ, ಬೆಂಗಳೂರು ಮತ್ತು ಅಂತರರಾಷ್ಟ್ರೀಯ ಸ್ಥಳಗಳು ಸೇರಿದಂತೆ ವಿವಿಧ ಪ್ರದೇಶಗಳಿಂದ 10,000 ಸಕ್ರಿಯ ಬಳಕೆದಾರರನ್ನು ಡೂಗ್ರಾಫಿಕ್ಸ್ ಹೊಂದಿತ್ತು. ಈಗ ಈ ಕಂಪನಿ ವಾರ್ಷಿಕ 2 ಕೋಟಿಗೂ ಹೆಚ್ಚಿನ ಆದಾಯ ಗಳಿಸುತ್ತಿದೆ.



Click it and Unblock the Notifications