Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಾಕು ನಾಯಿಗೆ ಶರ್ಮಾಜಿ ಎಂದು ನಾಮಕರಣ: ಪೊಲೀಸ್ ಠಾಣೆ ಮೆಟ್ಟಿಲೇರಿತು ಪ್ರಕರಣ..ಏಕೆ ಗೊತ್ತಾ?
ಈಗ ಮನೆ ಮನೆಯಲ್ಲೂ ನಾಯಿಯನ್ನು ಸಾಕುವುದು ಫ್ಯಾಷನ್ ಆಗಿದೆ. ಅದ್ರಲ್ಲೂ ನಗರ ಪ್ರದೇಶದಲ್ಲಿ ಸಾವಿರದಿಂದ ಲಕ್ಷ ರೂಪಾಯಿ ನಾಯಿಗಳ ತಂದು ಸಾಕುವುದು ನೋಡಬಹುದು. ಹಾಗೆ ನಾಯಿ ಸಾಕುವುದಕ್ಕೂ ಹಲವು ನಿಯಮಗಳ ಹೇರಿಕೆ ಮಾಡುವುದು ಸಹ ನೋಡಿರುತ್ತೇವೆ. ಸಾಮಾನ್ಯವಾಗಿ ನಗರದಲ್ಲಿ ನಾಯಿಗಳ ಸಾಕುವುದು ಈಗ ಕಷ್ಟ ಎನ್ನುವಂತಾಗಿದೆ. ಅವುಗಳ ಔಷದೋಪಚಾರ, ಸುರಕ್ಷತೆಗೆ ಈಗ ಹೆಚ್ಚು ಸಮಯ ನೀಡಬೇಕಾಗುತ್ತದೆ.
ಹಾಗೆ ಸಾಕು ನಾಯಿಗಳು ಯಾರ ಮೇಲಾದರು ದಾಳಿ ಮಾಡಿದರೆ ಮಾಲೀಕರ ಮೇಲೆ ಈಗ ಪ್ರಕರಣ ದಾಖಲಾಗುತ್ತದೆ. ಇನ್ನು ಇಂತಹ ನಾಯಿ ದಾಳಿ ಪ್ರಕರಣಗಳು ಹೆಚ್ಚುತ್ತಲೇ ಇದೆ. ಆದ್ರೆ ಇಲ್ಲೊಂದು ಕಡೆ ನಾಯಿಗೆ ಹೆಸರಿಟ್ಟ ಕಾರಣಕ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದೆ.

ಮಧ್ಯಪ್ರದೇಶದ ಇಂದೋರ್ನಲ್ಲಿ ವ್ಯಕ್ತಿಯೊಬ್ಬ ತನ್ನ ನಾಯಿಗೆ 'ಶರ್ಮಾಜಿ' ಎಂದು ನಾಮಕರಣ ಮಾಡಿದ್ದಾನೆ. ಜರ್ಮನ್ ಶಫರ್ಡ್ ತಳಿಯ ನಾಯಿಗೆ ಆತ ಶರ್ಮಾಜಿ ಎಂದು ಹೆಸರಿಟ್ಟಿರುವುದು ಈಗ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಏಕೆಂದರೆ ನಾಯಿ ಮಾಲಿಕರು ತನ್ನ ಪಕ್ಕದ ಮನೆಯಲ್ಲಿ ವಾಸವಿರುವ ವ್ಯಕ್ತಿಯ ಹೆಸರನ್ನು ನಾಯಿಗೆ ಇಟ್ಟುದ್ದಾನೆ ಎಂದು ಆರೋಪಿಸಲಾಗಿದೆ.
ವೀರೇಂದ್ರ ಶರ್ಮಾ ಮತ್ತು ಅವರ ಪತ್ನಿ ಕಿರಣ್ ಸಲ್ಲಿಸಿದ ದೂರಿನಲ್ಲಿ, ಭೂಪೇಂದ್ರ ಸಿಂಗ್ 'ಉದ್ದೇಶಪೂರ್ವಕವಾಗಿ ನಾಯಿಯನ್ನು 'ಶರ್ಮಾ ಜಿ' ಎಂದು ಕರೆದರು ಮತ್ತು ಸ್ನೇಹಿತರ ಮುಂದೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರು.' ಸಿಂಗ್ ತಮ್ಮ ನಾಯಿಗೆ 'ಶರ್ಮಾ' ಎಂದು ಹೆಸರಿಸಿದ್ದರಿಂದ ಅವರು ಅಸಮಾಧಾನಗೊಂಡಿದ್ದಾರೆ. ಈ ವಿಚಾರವಾಗಿ ನಾಯಿ ಮಾಲಿಕರು ಕೇಳಿದಾಗ ಇಬ್ಬರ ನಡುವೆ ಗಲಾಟೆ ನಡೆದು ಬಡಿದಾಡಿಕೊಂಡಿದ್ದಾರೆ. ಗಾಯಗೊಂಡ ದಂಪತಿ ಪೊಲೀಸ್ ಠಾಣೆಗೆ ಹೋಗಿ ರಾಜೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ಭಾರತದಲ್ಲಿ ನಾಯಿ ಸಾಕಲು ಇರುವ ನಿಯಮಗಳೇನು ಗೊತ್ತಾ?
ಭಾರತದಲ್ಲಿ ನಾಯಿಗಳ ಸಾಕಲು ಹಲವು ನಿಯಮಗಳಿಗೆ. ಆಯಾ ರಾಜ್ಯ ಸರ್ಕಾರಗಳು ಒಂದೊಂದು ರೀತಿಯ ನಿಯನಗಳು, ಕಾನೂನುಗಳ ಜಾರಿ ಮಾಡಿವೆ. ದೆಹಲಿ ಸೇರಿದಂತೆ ಭಾರತದಾದ್ಯಂತ ಅನೇಕ ನಗರಗಳಲ್ಲಿ, ನಾಯಿಯನ್ನು ಸಾಕಲು ಪರವಾನಗಿ ಪಡೆಯುವುದು ಅಗತ್ಯ. ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಆಡಳಿಗಳು ಈ ಕೆಲಸ ಮಾಡುತ್ತವೆ. ಹಾಗೆ ಮರಿಗಳ ಹಾಕಿದಾಗ ಅಥವಾ ಹೊಸದಾಗಿ ಮನೆಗೆ ತಂದಾಗ ಅವುಗಳ ನೋಂದಣಿ ಮಾಡುವುದು ಕೂಡ ಕಡ್ಡಾಯ. ಈ ಪರವಾನಗಿ ವರ್ಷಕ್ಕೊಮ್ಮೆ ನವೀಕರಿಸಬೇಕು. ಇದು ರೇಬಿಸ್ ಚುಚ್ಚು ಮದ್ದು ಹಾಕಿಸಲು ಕೂಡ ಸಹಕಾರಿಯಾಗಲಿದೆ.
ಇನ್ನು ಸೂರತ್ನಲ್ಲಿ ನಾಯಿ ಸಾಕಬೇಕಾದರೆ ಕನಿಷ್ಠ 10 ಮನೆಯವರ ಎನ್ಒಸಿ ಪಡೆಯಬೇಕಿದೆ. ಅಕ್ಕ ಪಕ್ಕದ 10 ಮನೆಯವರ ಬಳಿ ಸಹಿ ಸಂಗ್ರಹಿಸಿ ತಕರಾರಿ ಇಲ್ಲ ಎಂಬುದನ್ನು ಲಿಖಿತ ರೂಪದಲ್ಲಿ ನೀಡಬೇಕಿದೆ. ಹಾಗೆ ಪರವಾನಗಿ ಇಲ್ಲದೆ ನಾಯಿಯನ್ನು ಸಾಕುವುದು ಕಾನೂನು ಬಾಹಿರ ಆಗಲಿದೆ. ಅಂತಹ ಸಂದರ್ಭಗಳಲ್ಲಿ, ಮಾಲೀಕರಿಗೆ ದಂಡ ವಿಧಿಸಬಹುದು. ಸಾಮಾನ್ಯವಾಗಿ ಮೊದಲು ಎಚ್ಚರಿಕೆ ನೀಡಲಾಗುತ್ತದೆ, ಆದರೆ ಸಾಕುಪ್ರಾಣಿ ಗಮನಿಸದೆ ತಿರುಗಾಡುತ್ತಿರುವುದು ಕಂಡುಬಂದರೆ, ಸ್ಥಳಿಯಾಡಳಿತ ವಶಕ್ಕೆ ಪಡೆಯಬಹುದು. ಲಕ್ನೋದಂತಹ ಕೆಲವು ನಗರಗಳಲ್ಲಿ ಪರವಾನಗಿ ಪಡೆಯದ ನಾಯಿಗಳಿಗೆ
5,000 ರೂ.ಗಳವರೆಗೆ ದಂಡ ವಿಧಿಸುವ ಕಾನೂನು ಕೂಡ ಇದೆ.



Click it and Unblock the Notifications