Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಭಾರತದ ಕೇಸರಿಗೆ ಚಿನ್ನದ ಬೆಲೆ..! ಪ್ರತಿ ಕೆ.ಜಿ ₹4.95 ಲಕ್ಷಕ್ಕೆ ಮಾರಾಟ
ವಿಶ್ವದಲ್ಲಿ ಚಿನ್ನಕ್ಕಿಂತ ದುಬಾರಿಯಾದ ವಸ್ತುಗಳು ಬೇಕಾದಷ್ಟು ಸಿಗುತ್ತವೆ. ಭಾರತದಲ್ಲೂ ಚಿನ್ನಕ್ಕಿಂತ ದುಬಾರಿ ವಸ್ತುಗಳ ಬೆಳೆಯಲಾಗುತ್ತದೆ. ಅದರಲ್ಲಿ ಕಾಶ್ಮೀರದಲ್ಲಿ ಬೆಳೆಯಲಾಗುವ ಕೇಸರಿ ಸಹ ಒಂದಾಗಿದೆ. ಕೇಸರಿಗೆ ಈಗ ಚಿನ್ನಕ್ಕಿಂತ ದುಬಾರಿ ಬೆಲೆ ಬಂದಿದೆ. ಅದರಲ್ಲೂ ಭಾರತದ ಕೇಸರಿಗೆ ಈಗ ಲಕ್ಷ ಲಕ್ಷ ಬೆಲೆ ಬಂದಿದೆ.
ವಿಶ್ವದ ಅತ್ಯಂತ ದುಬಾರಿ ಮಸಾಲೆಯಾದ ಕೇಸರಿ ಬೆಲೆಯು ಗಗನಕ್ಕೇರಿದೆ. ಪ್ರತಿ ಕೆ.ಜಿ ಭಾರತದ ಕೇಸರಿಯು 4.95 ಲಕ್ಷ ರೂಪಾಯಿಗಳಿಗೆ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ. ಕಳೆದ ಒಂದು ತಿಂಗಳಿನಿಂದ ಭಾರತದ ಕೇಸರಿ ಬೆಲೆಗಳು ಸಗಟು ಮಾರುಕಟ್ಟೆಯಲ್ಲಿ ಶೇ. 20 ರಷ್ಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ. 27 ರಷ್ಟು ಹೆಚ್ಚಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಮಧ್ಯೆ ಇರಾನ್ನಿಂದ ಕೇಸರಿ ಪೂರೈಕೆಯಲ್ಲಿ ವ್ಯತ್ಯಯ ಸಂಭವಿಸಿರುವುದು ಈ ಬೆಲೆ ಏರಿಕೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
"ಉತ್ತಮ ಗುಣಮಟ್ಟದ ಭಾರತೀಯ ಕೇಸರಿ ಈಗ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 3.5-3.6 ಲಕ್ಷಕ್ಕೆ ಮಾರಾಟವಾಗುತ್ತಿದೆ, ಪಶ್ಚಿಮ ಏಷ್ಯಾದಲ್ಲಿ ಇತ್ತೀಚಿನ ಕಲಹ ಪ್ರಾರಂಭವಾಗುವ ಮೊದಲು 2.8-3 ಲಕ್ಷಕ್ಕೆ ಹೋಲಿಸಿದರೆ, ಇದರ ಬೆಲೆ 4.95 ಲಕ್ಷ ರೂ.ಗೆ ಮಾರಾಟವಾಗುತ್ತಿದೆ. ಶುಕ್ರವಾರ ಸುಮಾರು 70 ಗ್ರಾಂ ಚಿನ್ನದ ಬೆಲೆ 10 ಗ್ರಾಂಗೆ 72,633 ರೂ. ಆಗಿತ್ತು ಇದಕ್ಕಿಂತ ದುಬಾರಿ ಬೆಲೆಗೆ ಕೇಸರಿ ಮಾರಾಟವಾಗುತ್ತಿದೆ.
ವಿಶ್ವದಲ್ಲೇ ಅತೀ ಹೆಚ್ಚು ಕೇಸರಿಯನ್ನು ಇರಾನ್ನಲ್ಲಿ ಬೆಳೆಯಲಾಗುತ್ತದೆ. ಪ್ರತಿ ವರ್ಷ ಸುಮಾರು 430 ಟನ್ಗಳಷ್ಟು ಕೇಸರಿ ಉತ್ಪಾದನೆಯನ್ನು ಇರಾನ್ ಹೊಂದಿದೆ. ಇದು ಕೇಸರಿಯ ಜಾಗತಿಕ ಉತ್ಪಾದನೆಯ ಸುಮಾರು ಶೇ. 90 ರಷ್ಟು ಪಾಲು ಹೊಂದಿದೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ ಕೇವಲ ಕಾಶ್ಮೀರದಲ್ಲಿ ಮಾತ್ರ ಕೇಸರಿಯನ್ನು ಬೆಳೆಯಲಾಗುತ್ತದೆ. ಇದು ಸಹ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.
"ಕೆಂಪು ಚಿನ್ನ" ಎಂದೂ ಕರೆಯಲ್ಪಡುವ ಕೇಸರಿಯನ್ನು ಕಣಿವೆ ರಾಜ್ಯದಲ್ಲಿ ಕೇವಲ 5,707 ಹೆಕ್ಟೇರ್ ಭೂಮಿಯಲ್ಲಿ ಬೆಳೆಯಲಾಗುತ್ತದೆ. ಇದರಲ್ಲಿ ಶೇ. 90 ಕ್ಕಿಂತ ಹೆಚ್ಚು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಉಳಿದಂತೆ ಮಧ್ಯ ಕಾಶ್ಮೀರದ ಬುದ್ಗಾಮ್ ಮತ್ತು ಶ್ರೀನಗರ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.
ಕಾಶ್ಮೀರಿ ಕೇಸರಿಯನ್ನು ವರ್ಷಕ್ಕೊಮ್ಮೆ ಅಂದರೆ ಅಕ್ಟೋಬರ್ ಅಂತ್ಯದಿಂದ ನವೆಂಬರ್ ಮಧ್ಯದವರೆಗೆ ಕೊಯ್ಲು ಮಾಡಲಾಗುತ್ತದೆ ಮತ್ತು ಒಂದು ಕಿಲೋಗ್ರಾಂ ಕೇಸರಿ ಪಡೆಯಬೇಕಾದರೆ ಬರೋಬ್ಬರಿ 150,000 ಕ್ಕೂ ಹೆಚ್ಚು ಹೂವುಗಳನ್ನು ಕೊಯ್ಲು ಮಾಡಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ಅಂದುಕೊಂಡಷ್ಟು ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿಯೂ ಕೇಸರಿಯ ಬೆಲೆ ಗಗನಕ್ಕೇರುತ್ತಿದೆ.
ಕೇಸರಿ ಬೇರೆ ಕಡೆ ಏಕೆ ಬೆಳೆಯಲು ಸಾಧ್ಯವಿಲ್ಲ
ಭಾರತದಲ್ಲಿ ಕಾಶ್ಮೀರದಲ್ಲಿ ಮಾತ್ರ ಈ ಕೇಸರಿಯನ್ನು ಬೆಳೆಯಲಾಗುತ್ತದೆ. ಇದು ಶೀತ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಹೀಗಾಗಿ ಹಿಮ ಪ್ರದೇಶವಾದ ಕಾಶ್ಮೀರ ಈ ಕೇಸರಿ ಬೆಳೆಗೆ ಹೇಳಿ ಮಾಡಿಸಿರುವ ಸ್ಥಳವಾಗಿದೆ.
ಕೇಸರಿ ಯಾಕೆ ದುಬಾರಿ
ಕೇಸರಿಯು ಹಲವು ಔಷಧಿಯ ಗುಣ ಹೊಂದಿರುವ ಒಂದು ಮಸಾಲೆಯಾಗಿರುವ ಕಾರಣ ಇದರ ಬೆಲೆ ಹೆಚ್ಚಾಗಿದೆ. ಕೇಸರಿ ಟೀ-ಕಾಫಿ, ಕೇಸರಿ ಹಾಲು ಸೇರಿದಂತೆ ಹತ್ತು ಹಲವು ಖಾದ್ಯಗಳಲ್ಲೂ ಇದನ್ನು ಬಳಸಲಾಗುತ್ತದೆ.
ಮಾರುಕಟ್ಟೆಯಲ್ಲಿ ನಕಲಿ ಕೇಸರಿ
ಕೇಸರಿ ಬೆಲೆ ಗಗನಕ್ಕೇರಿದ್ದೇ ತಡ ಮಾರುಕಟ್ಟೆಗೆ ನಕಲಿ ಕೇಸರಿ ದಾಳಿ ಮಾಡಿವೆ. ಸಣ್ಣ ಸಣ್ಣ ಗಿಡಗಳ ಬೇರುಗಳನ್ನು ತೆಗೆದು ಅದಕ್ಕೆ ಕೆಂಪು ಬಣ್ಣ ಹಾಗೂ ಅರಶಿನ ಹಾಕಿ ಅದನ್ನು ಬಿಸಿಲಿನಲ್ಲಿ ಒಣಗಿಸಿ ಕಾಶ್ಮೀರಿ ಕೇಸರಿ ಎಂದು ಮಾರಾಟ ಮಾಡುವುದು ಸಹ ಕಂಡುಬರುತ್ತದೆ. ಇನ್ನು ಕೇಸರಿಯನ್ನು ನೀರಿಗೆ ಹಾಕಿದಾಗ ಅದು ಬಣ್ಣ ಬಿಟ್ಟುಕೊಂಡರೆ ಅದು ಖಂಡಿತ ನಕಲಿ ಕೇಸರಿ. ನೈಜ ಕೇಸರಿ ನೀರಿನಲ್ಲಿ ಎಂದಿಗೂ ತನ್ನ ಬಣ್ಣ ಬಿಡುವುದಿಲ್ಲ.



Click it and Unblock the Notifications