Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ರೈಲ್ವೆ ನಿಲ್ದಾಣವೇ ಇಲ್ಲದ ಭಾರತದ ಏಕೈಕ ರಾಜ್ಯ ಇದು..! ಯಾವುದು? ಏಕೆ ರೈಲ್ವೆ ಸಂಪರ್ಕವಿಲ್ಲ..?
ಭಾರತೀಯ ರೈಲ್ವೆ ಹಾಗೂ ಭಾರತೀಯ ಪೋಸ್ಟ್ ಎರಡು ಇಲಾಖೆಗಳು ಅತ್ಯಂತ ದೊಡ್ಡ ಹಾಗು ವಿಶ್ವದಲ್ಲೇ ತನ್ನ ಸಂಪರ್ಕಕ್ಕೆ ಹೆಸರು ಗಳಿಸಿವೆ. ದೇಶದ ಮೂಲೆ ಮೂಲೆಗೂ ಈ ಎರಡರಲ್ಲಿ ಒಂದು ಸೇವೆ ತಲುಪಿಯೇ ತಲುಪುತ್ತದೆ. ಇನ್ನು ಭಾರತದಲ್ಲಿ ರೈಲ್ವೆ ಸಂಪರ್ಕ ಎಂದರೆ ಜನರ ಜೀವನಾಡಿಯಾಗಿದೆ. ಕಡಿಮೆ ಹಣದಲ್ಲಿ ದೂರ ಊರಿಗೆ ಪ್ರಯಾಣಿಸಲು ಈಗ ರೈಲ್ವೆಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅದರಲ್ಲೂ ರೈಲ್ವೆ ಮೇಲ್ದರ್ಜೆಗೆ ಏರಿಸುತ್ತಿರುವುದು ಇಲಾಖೆ ಮತ್ತಷ್ಟು ಸೇವೆ ನೀಡಲು ಸಹಕಾರಿಯಾಗುತ್ತಿದೆ.
ಭಾರತೀಯ ರೈಲ್ವೆ ಅತೀ ಹೆಚ್ಚು ಸೌಕರರ ಹೊಂದಿರುವ ಇಲಾಖೆ ಎಂಬ ಕೀರ್ತಿ ಪಡೆದಿದೆ. ಹಾಗೆ ರೈಲ್ವೆಯಲ್ಲಿ ನಿತ್ಯ ಲಕ್ಷ ಲಕ್ಷ ಜನರು ಪ್ರಯಾಣಿಸುತ್ತಾರೆ. ಹೀಗಾಗಿ ಭಾರತೀಯ ರೈಲ್ಬೆ ಈಗ ಹಳ್ಳಿ ಹಳ್ಳಿಗೂ ತಲುಪಿರುವ ಒಂದು ಸುಸರ್ಜಿತವಾದ ವ್ಯವಸ್ಥೆಯಾಗಿದೆ. ರೈಲ್ಬೆ ನಿಲ್ದಾಣಗಳು ಕೂಡ ಈಗ ವಿಶ್ವದ ಗಮನ ಸೆಳೆಯುತ್ತಿದೆ.

ಇಷ್ಟೆಲ್ಲಾ ಕೀರ್ತಿ ಹೊಂದಿರುವ ಈ ಭಾರತೀಯ ರೈಲ್ವೆಯು ಭಾರತದ ಇದೊಂದು ರಾಜ್ಯಕ್ಕೆ ಇಂದಿಗೂ ತಲುಪಲು ಆಗಿಲ್ಲ. ಹೌದು ಈ ರಾಜ್ಯದಲ್ಲಿ ಇಂದಿಗೂ ಒಂದೇ ಒಂದು ರೈಲ್ವೆ ನಿಲ್ದಾಣ ಕೂಡ ಇಲ್ಲ. ನಿಮಗೆ ಅಚ್ಚರಿಯಾಗಬಹುದು. ಭಾರತದಲ್ಲಿ ಮೂಲೆ ಮೂಲೆಗೂ ಹಬ್ಬಿರುವ ರೈಲ್ವೆ ಸಂಪರ್ಕ ಇಡೀ ರಾಜ್ಯವೊಂದರಲ್ಲಿ ಇಲ್ಲ ಎಂದರೆ ಹೇಗೆ? ಹೌದು ಹಿಮಾಲಯ ಶ್ರೇಣಿಯಲ್ಲಿ ಸಿಗುವಂತಹ ಪುಟ್ಟ ರಾಜ್ಯ ಸಿಕ್ಕಿಂನಲ್ಲಿ ಒಂದೇ ಒಂದು ರೈಲ್ವೆ ನಿಲ್ದಾಣವಿಲ್ಲ.
ಸಿಕ್ಕಿಂನಲ್ಲಿ ರೈಲ್ವೆ ನಿಲ್ದಾಣ ಏಕಿಲ್ಲ.?
ಹಿಮಾಲಯದ ಮಡಿಲಲ್ಲಿ ನೆಲೆಸಿರುವ ಹಾಗೂ ಪ್ರವಾಸಿಗರಿಗೆ ಸ್ವರ್ಗ ಎನಿಸುವಂತಹ ಈ ಸಿಕ್ಕಿಂನಲ್ಲಿ ರೈಲು ನಿಲ್ದಾಣಗಳಿಲ್ಲ. ಸಿಕ್ಕಿಂನ ಭೂ ಪ್ರದೇಶ ಹಾಗೂ ಅಲ್ಲಿನ ಹವಾಮಾನವು ರೈಲ್ವೆ ಸಂಚಾರಕ್ಕೆ ಸಹಕಾರಿಯಾಗಿಲ್ಲ. ಅಲ್ಲಿನ ರಸ್ತೆ ಮಾರ್ಗಗಳೇ ಅತ್ಯಂತ ಅಪಾಯಕಾರಿ ಹಾಗೂ ಸಾಹಸಮಯ ಯಾತ್ರೆಯಾಗಿ ಬದಲಾಗಿವೆ. ಕಡಿದಾದ ಕಣಿವೆಗಳು, ಕಿರಿದಾದ ಹಾದಿಗಳು ಮತ್ತು ಎತ್ತರದ ಪರ್ವತಗಳು ತುಂಬಿರುವುದರಿಂದ ಅಲ್ಲಿ ರೈಲ್ವೆ ಮಾರ್ಗ ನಿರ್ಮಿಸುವುದು ಅಸಾಧ್ಯ.
ಆದ್ರೆ ಈಗ ಪರಿಸ್ಥಿತಿ ಬದಲಾಗುವ ನಿರೀಕ್ಷೆ ಇದೆ. ಇದೇ ವರ್ಷ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊಟ್ಟ ಮೊದಲ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಆದ್ರೆ ಈ ನಿಲ್ದಾಣ ಪೂರ್ಣಗೊಂಡರೂ ಕೂಡ ಇಡೀ ರಾಜ್ಯದಲ್ಲಿ ಓಡಾಡಿದ ಮೊದಲ ರೈಲು ಎಂಬ ಹೆಗ್ಗಳಿಕೆ ಪಡೆಯಲಿದೆ. ಆದ್ರೆ ಇದೊಂದೇ ನಿಲ್ದಾಣ ಮಾತ್ರ ಅಲ್ಲಿ ನಿರ್ಮಿಸಲಾಗುತ್ತಿದ್ದು, ಇದೇ ಕೊನೆಯಾಗಬಹುದು.
ರೈಲ್ವೇ ನಿಲ್ದಾಣವಿಲ್ಲದ ಭಾರತದ ಏಕೈಕ ರಾಜ್ಯ ಸಿಕ್ಕಿಂ ಆಗಿರಬಹುದು, ಆದರೆ ಪ್ರಕೃತಿ ಸೊಬಗನ್ನು ಸವಿಯಲು ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ನಿತ್ಯ ಹೆಚ್ಚಾಗುತ್ತಲೇ ಇರುತ್ತದೆ. ತ್ಸೋಮ್ಗೊ ಸರೋವರದಿಂದ ಖೆಚಿಯೋಪಾಲ್ರಿ ಸರೋವರ ಸೇರಿ ಹಲವು ಪ್ರವಾಸಿ ತಾಣಗಳನ್ನು ಸಿಕ್ಕಿಂ ತನ್ನಲ್ಲಿಟ್ಟುಕೊಂಡಿದೆ.
ಟಿಬೆಟಿಯನ್ನರು ಹೆಚ್ಚಾಗಿ ನೆಲೆಸಿರುವ ಈ ಪ್ರದೇಶದಲ್ಲಿ ಅವರ ದೇವಾಲಗಳು, ದೊಡ್ಡ ದೊಡ್ಡ ಮೂರ್ತಿಗಳ ನೋಡಬಹುದಾಗಿದೆ. ಹೀಗಾಗಿ ಪ್ರವಾಸಿಗರಿಂದ ಈ ರಾಜ್ಯ ತುಂಬಿರುತ್ತದೆ. ಇಷ್ಟಾದರು ಇದೊಂದೇ ರಾಜ್ಯದಲ್ಲಿ ಈಗ ರೈಲ್ವೆ ಸಂಪರ್ಕವಿಲ್ಲ. ಇರುವಂತಹ ರಸ್ತೆ ಮಾರ್ಗ ಕೂಡ ಕಡಿದಾಗಿ, ಅತ್ಯಂತ ಅಪಾಯಕಾರಿ ಎನ್ನುವಂತಿದೆ.



Click it and Unblock the Notifications