Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
3ನೇ ಮಹಾಯುದ್ಧದ ಕುರಿತಂತೆ ಭಾರತೀಯ ಜ್ಯೋತಿಷಿಯ ಭವಿಷ್ಯ..! ಮತ್ತೊಮ್ಮೆ ಆತ ಹೇಳಿದ್ದೇನು?
ವಿಶ್ವದ ಹಲವು ರಾಷ್ಟಗಳೀಗ ಯುದ್ಧದಂತಹ ಭಯಾನಕ ಬಲೆಯೊಳಗೆ ಸಿಲುಕಿವೆ. ಒಂದಲ್ಲಾ ಒಂದು ದೇಶ ಮತ್ತೊಂದು ದೇಶದ ವಿರುದ್ಧ ನಿಂತಿದೆ. ಅದರಲ್ಲೂ ಪ್ರಭಾವಿ ರಾಷ್ಟ್ರಗಳೆಂದು ಕರೆಸಿಕೊಳ್ಳುವ ದೊಡ್ಡ ದೇಶಗಳು ಪರಮಾಣು ಬಾಂಬ್ ಬೆದರಿಕೆ ಹಾಕುತ್ತಿರುವುದು ಹಾಗೂ ಅಣ್ವಸ್ತ್ರಗಳ ಪರೀಕ್ಷೆ ನಡೆಸುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇದೆಲ್ಲದರ ನಡುವೆ ಕಳೆದ ಕೆಲವು ವರ್ಷಗಳಿಂದಲೂ 3ನೇ ಮಹಾಯುದ್ಧದ ಆತಂಕ ಎದುರಾಗಿ ನಿಂತಿದೆ. ವಿಶ್ವದ ಬಹುತೇಕ ರಾಷ್ಟ್ರಗಳು 3ನೇ ಮಹಾಯುದ್ಧಕ್ಕೆ ಸನ್ನದ್ಧವಾಗಿವೆ ಅಂತಲೇ ಬಿಂಬಿಸಲಾಗುತ್ತಿದೆ. ಯಾವ ಕ್ಷಣದಲ್ಲಿ ಬೇಕಾದರು ಮೂರನೇ ವಿಶ್ವ ಸಮರ ಆರಂಭವಾಗಬಹುದು ಎಂಬುದು ಜನರ ಆತಂಕ. ಕೆಲವೊಂದು ರಾಷ್ಟ್ರಗಳಂತೂ ಈಗಾಗಲೇ ಯುದ್ಧದಲ್ಲಿ ತೊಡಗಿವೆ. ಇದು 3ನೇ ವಿಶ್ವ ಯುದ್ಧದಕ್ಕೆ ದಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ ಈ ಮೊದಲು 3ನೇ ಮಹಾ ಯುದ್ಧದ ಕುರಿತು ಭವಿಷ್ಯ ನುಡಿದಿದ್ದ ಭಾರತದ ಜ್ಯೋತಿಷಿಯೊಬ್ಬರು ಈಗ ಮತ್ತೆ ಸುದ್ದಿಯಾಗಿದ್ದಾರೆ. ಆತ ಇದೇ ಜೂನ್ 18ರಂದು 3ನೇ ಮಹಾ ಯುದ್ಧಕ್ಕೆ ಕಾರಣವಾಗುವಂತ ಘಟನೆ ನಡೆಯಲಿದೆ ಎಂದಿದ್ದರು. ಆದರೆ ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಆದರೆ ಅವರು ಅಂದೇ ಜೂನ್ 29ರಂದು ಸಹ 3ನೇ ಮಹಾಯುದ್ಧಕ್ಕೆ ಕಾರಣವಾಗಬಹುದಾದ ಘಟನೆ ನಡೆಯಲಿದೆ ಎಂದಿದ್ದರು.
ಹರಿಯಾಣದ ಪಂಚಕುಲದ ಜ್ಯೋತಿಷಿ ಕುಶಾಲ್ ಕುಮಾರ್ ಅವರು ಮೇ 23 ರಂದು, ಗಳವಾರ, 18 ಜೂನ್ 2024 ರಂದು ಪ್ರಬಲವಾದ ಗ್ರಹಗಳ ಪ್ರಚೋದನೆಯನ್ನು ಹೊಂದಿದೆ. 10 ಮತ್ತು 29 ಜೂನ್ ಸಹ ಇದೇ ರೀತಿಯ ಗ್ರಹ ಗತಿಗಳಿವೆ. ಹೀಗಾಗಿ ಈ ದಿನದಲ್ಲಿ 3ನೇ ಮಹಾಯುದ್ಧದ ಪೂಕರ ಘಟನೆಗಳು ನಡೆಯಲಿದೆ ಎಂದಿದ್ದರು.
ಅವರ ಈ ಹೇಳಿಕೆ ಬಹಳ ಸದ್ದು ಮಾಡಿತ್ತಲ್ಲದೆ ಭಾರೀ ಚರ್ಚೆಗೂ ಕಾರಣವಾಗಿತ್ತು, ಆದರೆ ಅವರು ಹೇಳಿದ್ದ ಈ ದಿನಾಂಕದಂದು ಯಾವುದೂ ಸಂಭವಿಸಿಲ್ಲ. ಈ ಕುರಿತು ಅವರು ಈಗ ಮತ್ತೆ ಮಾತನಾಡಿದ್ದು, ಅವರ ಹೇಳಿಕೆಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.
ಕುಶಾಲ್ ಕುಮಾರ್ ಅವರು ಇತ್ತೀಚೆಗೆ ಮತ್ತೊಂದು ಮಧ್ಯಮ ಪೋಸ್ಟ್ ಅನ್ನು ಪ್ರಕಟಿಸಿದ್ದು, ಅದರಲ್ಲಿ ಅವರು "ಮುನ್ಸೂಚಕ ಎಚ್ಚರಿಕೆಗಳನ್ನು" ಉಲ್ಲೇಖಿಸಿದ್ದಾರೆ, ಅದು ಸಹ 3 ನೇ ಮಹಾಯುದ್ಧದ ಪ್ರಾರಂಭಕ್ಕೆ ಸಂಬಂಧಿಸಿದೆ. ಜೂನ್ 29 ಸಹ ಈ ರೀತಿ ವಿದ್ಯಮಾನಕ್ಕೆ ಕಾರಣವಾಗುವ ಅಂಶ ಬೆಳಕಿಗೆ ಬರಬಹುದು ಎಂದು ಪುನರ್ ಉಚ್ಛರಿಸಿದ್ದಾರೆ.
ಅವರ ಪ್ರಕಾರ ಜೂನ್ 29ರಂದು 3ನೇ ಮಹಾಯುದ್ಧಕ್ಕೆ ಕಾರಣವಾಗುವಂತಹ ಘಟನೆ ನಡೆಯುವುದು ಖಚಿತವಂತೆ. ಆದರೆ ಯಾವ ಘಟನೆ ನಡೆಯಲಿದೆ ಎಂಬುದನ್ನು ಅವರು ವಿವರಣೆ ಮಾತ್ರ ನೀಡಿಲ್ಲ. ಈ ವಿಚಾರ ವಿದೇಶಿ ಮಾಧ್ಯಮದಲ್ಲೂ ಬಹಳ ಚರ್ಚೆಗೆ ಕಾರಣವಾಗಿದೆ.

ಜೂನ್ 13 ರಂದು ಜ್ಯೋತಿಷಿಯು "ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳ ಮೇಲೆ ಒಂಬತ್ತು ಜನರನ್ನು ಕೊಂದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ್ದಾರೆ. ನಂತರ ಅವರು ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವಿನ ಸಂಘರ್ಷದ ಉಲ್ಬಣ ಮತ್ತು ಹೆಚ್ಚಿನದನ್ನು ಉಲ್ಲೇಖಿಸುತ್ತಾರೆ. ಅವರು ಚೀನಾ ಮತ್ತು ತೈವಾನ್ ನಡುವೆ ಬೆಳೆಯುತ್ತಿರುವ ಉದ್ವಿಗ್ನತೆಯನ್ನು ಸಹ ಮೊದಲೆ ಊಹಿಸಿದ್ದರಂತೆ.
ಇನ್ನು ಜಗತ್ತಿನ ಅತ್ಯಂತ ನಿಖರ ಭವಿಷ್ಯವಾಣಿಗಳ ನುಡಿಯುವಾತ ನಾಸ್ಟ್ರಾಡಾಮಸ್ ಸಹ ಈ 3ನೇ ಮಹಾ ಯುದ್ಧದ ಕುರಿತಂತೆ ಹೇಳಿದ್ದಾರೆ. ಅಲ್ಲದೆ ಅವರ ಹತ್ತಾರು ಭವಿಷ್ಯಗಳು ನಿಜವಾಗಿವೆ ಅದರಲ್ಲಿ ಕೋವಿಡ್ ಹಾಗೂ ಹವಾಮಾನ ಏರಿಕೆ ಸೇರಿದಂತೆ ಕೆಲವೊಂದರ ಭೀಕರ ಪರಿಣಾಮ ಎದುರಿಸಿದ್ದೇವೆ.



Click it and Unblock the Notifications









