Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಹೊಸ ವರ್ಷದಲ್ಲಿ ಒಳಿತಾಗಲು ಸೂರ್ಯಗ್ರಹಣದ ವೇಳೆ ಏನು ಮಾಡಬೇಕು?
ಈ ಬಾರಿ ವರ್ಷಾಂತ್ಯದಲ್ಲಿ ಡಿಸೆಂಬರ್ 26ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ಜ್ಯೋತಿಷ್ಯ ಪ್ರಕಾರ ಸುರ್ಯಗ್ರಹಣದ ಸಮಯದಲ್ಲಿ ಏನು ಮಾಡಬಾರದು, ಏನು ಮಾಡಬೇಕು ಎಂಬ ಕೆಲವೊಂದು ನಿಯಮಗಳಿವೆ. ಸೂರ್ಯಗ್ರಹಣ ಕಳೆದ ಕೆಲವೇ ದಿನಗಳಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಿದ್ದೇವೆ.

ಈ ಬರುವ ಹೊಸ ವರ್ಷ ನಮ್ಮ ಜೀವನದಲ್ಲಿ ನೆಮ್ಮದಿ, ಖುಷಿ ನೀಡಬೇಕು, ಕಷ್ಟಗಳು ದೂರವಾಗಬೇಕು ಎಂಬ ನಿರೀಕ್ಷೆಯಲ್ಲಿಯೇ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತೇವೆ. ಹೊಸ ವರ್ಷದಲ್ಲಿ ಸೂರ್ಯ ಗ್ರಹಣದ ದೋಷ ಉಂಟಾಗದಿರಲು ಈ ಧಾರ್ಮಿಕ ನಂಬಿಕೆಗಳನ್ನು ಪಾಲಿಸಿದರೆ ಒಳಿತಾಗುವುದು.

ಸೂರ್ಯಗ್ರಹಣ ಸಮಯದಲ್ಲಿ ಮಂತ್ರವನ್ನು ಹೇಳಿ
ಗ್ರಹಣಪರ್ವದಲ್ಲಿ ಮಂತ್ರಗಳನ್ನು ಹೇಳುವುದರಿಂದ ಉತ್ತಮ ಫಲ ಸಿಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದ್ದರಿಂದ ಈ ಸಮಯದಲ್ಲಿ ತುಪ್ಪದ ದೀಪವನ್ನು ಹಚ್ಚಿಟ್ಟು ದೇವರ ನಾಮ ಹೇಳುವುದು, ಮಂತ್ರ ಪಠಣ ಮಾಡುವುದು ಮಾಡಿದರೆ ಜಾತಕದಲ್ಲಿರುವ ಗ್ರಹ ದೋಷಗಳು ಪರಿಹಾರವಾಗುತ್ತದೆ ಹಾಗೂ ಹೊಸ ವರ್ಷದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವಂತಾಗುವುದು.

ರಾಹು-ಕೇತುವನ್ನು ಶಾಂತಗೊಳಿಸಿ
ಈ ವರ್ಷಕ್ಕಿಂತದಿನ ವರ್ಷ ಉತ್ತಮವಾಗಬೇಕೆಂದು ಬಯಸುವುದಾದರೆ ರಾಹು-ಕೇತು ದೋಷವನ್ನು ಪರಿಹಾರ ಮಾಡಬೇಕು. ಸೂರ್ಯಗ್ರಹಣ ಸಮಯದಲ್ಲಿ ಮಂತ್ರ ಪಠಣ ಮಾಡುವುದರಿಂದ ರಾಹು-ಕೇತು ಶಾಂತವಾಗುವುದು.ರಾಹು-ಕೇತು ಶಾಂತವಾದರೆ ಜೀವನದಲ್ಲಿ ಅನಗತ್ಯ ಸಮಸ್ಯೆಗಳು ದೂರವಾಗುತ್ತದೆ.

ಪವಿತ್ರ ಸ್ನಾನ
ಸೂರ್ಯಗ್ರಹಣ ನಂತರ ನೀವು ಪವಿತ್ರ ನದಿಯಲ್ಲಿ ಸ್ನಾನ ಮಾಡಿ. ಇದನ್ನು ಮಾಡಲು ಸಾಧ್ಯವಾಗದಿದ್ದರೆ, ನೀವು ಸ್ನಾನ ಮಾಡುವ ನೀರಿನಲ್ಲಿ ಗಂಗಾ ನೀರನ್ನು ಬೆರೆಸಿ ಸ್ನಾನ ಮಾಡಬಹುದು. ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನಮಾನ ಲಭಿಸುವುದು.

ದಾನ ಮಾಡಿ
ಸೂರ್ಯಗ್ರಹಣ ನಂತರ ವ್ಯಕ್ತಿಯು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡುವುದರಿಂದ ಪುಣ್ಯ ಸಿಗುವುದು. ಆಹಾರ, ಬಟ್ಟೆ, ಹಣ ಇತ್ಯಾದಿಗಳ ದೇಣಿಗೆ ಜೀವನದ ತೊಂದರೆಗಳನ್ನು ಕೊನೆಗೊಳಿಸುತ್ತದೆ. ಈ ಪರಿಹಾರದೊಂದಿಗೆ, ಹೊಸ ವರ್ಷದಲ್ಲಿ, ಗ್ರಹಗಳ ಸಂಕಟದಿಂದ ಸ್ವಾತಂತ್ರ್ಯದೊಂದಿಗೆ, ಬಡ್ತಿ ಮತ್ತು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆಗಳೂ ಹೆಚ್ಚಾಗುತ್ತವೆ. ಇದರಿಂದ ಶನಿದೇವನ ಕೃಪೆಗೆ ಪಾತ್ರರಾಗುವಿರಿ, ಒಳಿತು ಉಂಟಾಗುವುದು.

ಅರಳಿ ಮರಕ್ಕೆ ನೀರು ಹಾಕಿ
ಸೂರ್ಯಗ್ರಹಣದ ಬಳಿಕ ಆಲದ ಮರಕ್ಕೆ ನೀರು ಹಾಕುವುದು ಒಳ್ಳೆಯದು. ಇದರಿಂದ ನಕಾರಾತ್ಮಕ ಶಕ್ತಿಯನ್ನು ದೂರವಿಡಬಹುದು ಕುಟುಂಬದಲ್ಲಿ ಶಾಂತಿ ನೆಲೆಸುವುದು ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.
ಸೂರ್ಯಗ್ರಹಣದ ವೇಳೆ ಆಹಾರ ಸೇವಿಸುವುದು, ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆಗೆ ಹೋಗುವುದು ಮಾಡಿದರೆ ಇದರಿಂದ ದಾರಿದ್ರ್ಯ ಉಂಟಾಗುವುದು.



Click it and Unblock the Notifications











