Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಬಿಎಂಟಿಸಿಯ ರಮೇಶ-ಸುರೇಶ ಹರಿಕತೆ ವೀಡಿಯೋ ನೋಡಿದ್ದೀರಾ?
ಬೆಂಗಳೂರು ಟ್ರಾಫಿಕ್ ಹೇಗಿದೆಯೆಂದು ನಿಮಗೆಲ್ಲಾ ಗೊತ್ತು? ಇಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಯಾರೂ ಎಷ್ಟು ಕಿ. ಮೀ ಇದೆ ಎಂದು ಯಾರೂ ಲೆಕ್ಕಾಚಾರ ಹಾಕುವುದಿಲ್ಲ, ಬದಲಿಗೆ ಎಷ್ಟು ಗಂಟೆ ಬೇಕು ಎಂದೇ ನೋಡುತ್ತಾರೆ. ಏಕೆಂದರೆ ಕೆಲವೊಮ್ಮೆ ಜಸ್ಟ್ ಒಂದು ಕಿಮೀ ಹೋಗಲು ಒಂದು ಅರ್ಧ ಗಂಟೆ ತೆಗೆದುಕೊಳ್ಳುವುದೂ ಉಂಟು. ಬೆಂಗಳೂರಿನಲ್ಲಿ 2-3 ಕಿ. ಮೀ ದೂರವಿರುವ ಸ್ಥಳಕ್ಕೆ ಹೋಗಲು ಗಾಡಿಯಲ್ಲಿ ಹೋಗುವುದಕ್ಕಿಂತ ಕಾಲ್ನಡಿಗೆಯಲ್ಲಿ ಹೋದರೆ ಬೇಗ ತಲುಪಬಹುದು ಅಲ್ವಾ?

ಇನ್ನು ಕಾರಿನಲ್ಲಿ ಹೋಗುವುದಾದರೆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತು, ನಿಂತು ಹೋಗುವಾಗಲೇ ಬಿಪಿ ಹೆಚ್ಚಾಗಿರುತ್ತದೆ, ಇನ್ನು ಆಫೀಸ್ನಲ್ಲಿ ಬಾಸ್ ಕಳುಹಿಸಿದ ಮೇಲ್ಗಳನ್ನು ನೋಡುವಾಗ ಕೆಲಸ ಪ್ರಾರಂಭಿಸುವ ಮುನ್ನವೇ ಸುಸ್ತಾಗಿರುತ್ತದೆ, ಆದ್ದರಿಂದ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತೇವೆ. ಇದನ್ನು ಬಿಎಂಟಿಸಿಯವರು ಸೊಗಸಾದ ವೀಡಿಯೋ ಮಾಡುವ ಮೂಲಕ ಸ್ವಂತ ವಾಹನ ಬಳಸುವ ಬದಲಿಗೆ ಬಿಬಿಎಂಟಿ ಬಸ್ ಬಳಸಿದರೆ ನಿಮಗೆ ಹಾಗೂ ಪರಸರಕ್ಕೆ ಎಷ್ಟೆಲ್ಲಾ ಲಾಭಗಳಿವೆ ಎಂದು ತುಂಬಾ ಸೊಗಸಾದ ಹರಿಕತೆಯ ರೂಪದಲ್ಲಿ ಹೇಳಿದ್ದಾರೆ ನೋಡಿ:
ಕಲಿಯುಗದ ಮಧ್ಯಕಾಲದಲ್ಲಿ ಭರತ ಭೂಮಿಯ ಕರ್ನಾಟಕ ರಾಜ್ಯದ ಬೆಂಗಳೂರಿನ ಸಿಲ್ಕ್ಬೋರ್ಡ್ ಜಂಕ್ಷನ್ನಲ್ಲಿ ಬೆಳಗ್ಗೆ ಹೊತ್ತಿನಲ್ಲಿ ಪ್ರಯಾಣಿಕರು ಬಸ್ಗಾಗಿ ಕಾಯುತ್ತಿರುತ್ತಾರೆ. ರಮೇಶ ಹಾಗೂ ಸುರೇಶ ಎಂಬ ಎರಡು ಸಾಫ್ಟ್ ಎಂಜಿನಿಯರ್ಗಳು ಬೆಳಗ್ಗೆ ಆಫೀಸ್ಗೆ ಹೊರಡುತ್ತಿರುತ್ತಾರೆ. ಸುರೇಶ ತನ್ನ ಸ್ವಂತ ಕಾರಿನಲ್ಲಿ ಆಫೀಸ್ಗೆ ತೆರಳಿದರೆ ರಮೇಶ ಬಿಎಂಟಿಸಿ ಬಸ್ನಲ್ಲಿ ತೆರಳುತ್ತಾರೆ. ಕಾರಿನಲ್ಲಿ ತೆರಳಿದ ಸುರೇಶ ಅಲ್ಲಲ್ಲಿ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತು ಸುಸ್ತಾಗಿ ಆಫೀಸ್ಗೆ ಬಂದು ಅಲ್ಲಿ ಸರಿಯಾಗಿ ಕೆಲಸ ಮಾಡಲಾಗದೆ ಬಾಸ್ನಿಂದ ಬೈಗುಳ ತಿಂದು, ಮನೆಗೆ ಬಂದಾಗ ಅಲ್ಲಿ ಹೆಂಡತಿ ಕಡೆಯಿಂದಲೂ ಬೈಗುಳ ತಿಂದು ಆತನ ಜೀವನ ಕಷ್ಟಕರವಾಗಿದ್ದರೆ, ಇತ್ತ ಬಿಎಂಟಿಸಿ ಬದುಕಿನಲ್ಲಿ ಹೋಗುವ ರಮೇಶ ಹಾಡುಗಳನ್ನು ಕೇಳುತ್ತಾ, ಪುಸ್ತಕಗಳನ್ನು ಹೋದುತ್ತಾ, ಜನರೊಂದಿಗೆ ಮಾತನಾಡುತ್ತಾ ಯಾವುದೇ ದಣಿವಿಲ್ಲದೆ ಆಫೀಸ್ ಮುಟ್ಟುತ್ತಾನೆ. ನಂತರ ಆಫೀಸ್ನಲ್ಲಿ ಚೆನ್ನಾಗಿ ಕೆಲಸ ಮಾಡಿ ಬಾಸ್ನ ಹೊಗಳಿಕೆ ಸಿಕ್ಕಿ ಖುಷಿ-ಖುಷಿಯಾಗಿ ಮನೆಗೆ ಬಂದು ಮನೆಯಿಂದಲೂ ಹೆಂಡತಿಯ ಮೆಚ್ಚುಗೆ ಪಡೆದು ಖುಷಿ-ಖುಷಿಯಾಗಿ ಜೀವನ ಸಾಗಿಸುತ್ತಿದ್ದಾನೆ.
ಆದ್ದರಿಂದ ನಿಮ್ಮ ವಾಹನ ಚಲಾಯಿಸಿಕೊಂಡು ಹೋಗಿ ಮಾನಸಿಕ ಒತ್ತಡ ಅನುಭವಿಸುವುದಕ್ಕಿಂತ, ಬಿಎಂಟಿಸಿ ಬಳಸಿದರೆ ನಿಮಗೆ, ನಿಮ್ಮ ಜೇಬು ಹಾಗೂ ಪರಿಸರಕ್ಕೂ ಒಳ್ಳೆಯದು ಎಂದು ಹೇಳುತ್ತಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯ ನೋಡುವಾಗ ನಮ್ಮ ಬೆಂಗಳೂರು ಆ ರೀತಿ ಕಲುಷಿತವಾಗುವುದಕ್ಕಿಂತ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಯೋಚಿಸಿಯಾದರೂ ಸ್ವಂತ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ವಾಹನ ಹೆಚ್ಚಾಗಿ ಬಳಸಬೆಕಾಗಿದೆ.



Click it and Unblock the Notifications