Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಬಿಎಂಟಿಸಿಯ ರಮೇಶ-ಸುರೇಶ ಹರಿಕತೆ ವೀಡಿಯೋ ನೋಡಿದ್ದೀರಾ?
ಬೆಂಗಳೂರು ಟ್ರಾಫಿಕ್ ಹೇಗಿದೆಯೆಂದು ನಿಮಗೆಲ್ಲಾ ಗೊತ್ತು? ಇಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಯಾರೂ ಎಷ್ಟು ಕಿ. ಮೀ ಇದೆ ಎಂದು ಯಾರೂ ಲೆಕ್ಕಾಚಾರ ಹಾಕುವುದಿಲ್ಲ, ಬದಲಿಗೆ ಎಷ್ಟು ಗಂಟೆ ಬೇಕು ಎಂದೇ ನೋಡುತ್ತಾರೆ. ಏಕೆಂದರೆ ಕೆಲವೊಮ್ಮೆ ಜಸ್ಟ್ ಒಂದು ಕಿಮೀ ಹೋಗಲು ಒಂದು ಅರ್ಧ ಗಂಟೆ ತೆಗೆದುಕೊಳ್ಳುವುದೂ ಉಂಟು. ಬೆಂಗಳೂರಿನಲ್ಲಿ 2-3 ಕಿ. ಮೀ ದೂರವಿರುವ ಸ್ಥಳಕ್ಕೆ ಹೋಗಲು ಗಾಡಿಯಲ್ಲಿ ಹೋಗುವುದಕ್ಕಿಂತ ಕಾಲ್ನಡಿಗೆಯಲ್ಲಿ ಹೋದರೆ ಬೇಗ ತಲುಪಬಹುದು ಅಲ್ವಾ?

ಇನ್ನು ಕಾರಿನಲ್ಲಿ ಹೋಗುವುದಾದರೆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತು, ನಿಂತು ಹೋಗುವಾಗಲೇ ಬಿಪಿ ಹೆಚ್ಚಾಗಿರುತ್ತದೆ, ಇನ್ನು ಆಫೀಸ್ನಲ್ಲಿ ಬಾಸ್ ಕಳುಹಿಸಿದ ಮೇಲ್ಗಳನ್ನು ನೋಡುವಾಗ ಕೆಲಸ ಪ್ರಾರಂಭಿಸುವ ಮುನ್ನವೇ ಸುಸ್ತಾಗಿರುತ್ತದೆ, ಆದ್ದರಿಂದ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತೇವೆ. ಇದನ್ನು ಬಿಎಂಟಿಸಿಯವರು ಸೊಗಸಾದ ವೀಡಿಯೋ ಮಾಡುವ ಮೂಲಕ ಸ್ವಂತ ವಾಹನ ಬಳಸುವ ಬದಲಿಗೆ ಬಿಬಿಎಂಟಿ ಬಸ್ ಬಳಸಿದರೆ ನಿಮಗೆ ಹಾಗೂ ಪರಸರಕ್ಕೆ ಎಷ್ಟೆಲ್ಲಾ ಲಾಭಗಳಿವೆ ಎಂದು ತುಂಬಾ ಸೊಗಸಾದ ಹರಿಕತೆಯ ರೂಪದಲ್ಲಿ ಹೇಳಿದ್ದಾರೆ ನೋಡಿ:
ಕಲಿಯುಗದ ಮಧ್ಯಕಾಲದಲ್ಲಿ ಭರತ ಭೂಮಿಯ ಕರ್ನಾಟಕ ರಾಜ್ಯದ ಬೆಂಗಳೂರಿನ ಸಿಲ್ಕ್ಬೋರ್ಡ್ ಜಂಕ್ಷನ್ನಲ್ಲಿ ಬೆಳಗ್ಗೆ ಹೊತ್ತಿನಲ್ಲಿ ಪ್ರಯಾಣಿಕರು ಬಸ್ಗಾಗಿ ಕಾಯುತ್ತಿರುತ್ತಾರೆ. ರಮೇಶ ಹಾಗೂ ಸುರೇಶ ಎಂಬ ಎರಡು ಸಾಫ್ಟ್ ಎಂಜಿನಿಯರ್ಗಳು ಬೆಳಗ್ಗೆ ಆಫೀಸ್ಗೆ ಹೊರಡುತ್ತಿರುತ್ತಾರೆ. ಸುರೇಶ ತನ್ನ ಸ್ವಂತ ಕಾರಿನಲ್ಲಿ ಆಫೀಸ್ಗೆ ತೆರಳಿದರೆ ರಮೇಶ ಬಿಎಂಟಿಸಿ ಬಸ್ನಲ್ಲಿ ತೆರಳುತ್ತಾರೆ. ಕಾರಿನಲ್ಲಿ ತೆರಳಿದ ಸುರೇಶ ಅಲ್ಲಲ್ಲಿ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತು ಸುಸ್ತಾಗಿ ಆಫೀಸ್ಗೆ ಬಂದು ಅಲ್ಲಿ ಸರಿಯಾಗಿ ಕೆಲಸ ಮಾಡಲಾಗದೆ ಬಾಸ್ನಿಂದ ಬೈಗುಳ ತಿಂದು, ಮನೆಗೆ ಬಂದಾಗ ಅಲ್ಲಿ ಹೆಂಡತಿ ಕಡೆಯಿಂದಲೂ ಬೈಗುಳ ತಿಂದು ಆತನ ಜೀವನ ಕಷ್ಟಕರವಾಗಿದ್ದರೆ, ಇತ್ತ ಬಿಎಂಟಿಸಿ ಬದುಕಿನಲ್ಲಿ ಹೋಗುವ ರಮೇಶ ಹಾಡುಗಳನ್ನು ಕೇಳುತ್ತಾ, ಪುಸ್ತಕಗಳನ್ನು ಹೋದುತ್ತಾ, ಜನರೊಂದಿಗೆ ಮಾತನಾಡುತ್ತಾ ಯಾವುದೇ ದಣಿವಿಲ್ಲದೆ ಆಫೀಸ್ ಮುಟ್ಟುತ್ತಾನೆ. ನಂತರ ಆಫೀಸ್ನಲ್ಲಿ ಚೆನ್ನಾಗಿ ಕೆಲಸ ಮಾಡಿ ಬಾಸ್ನ ಹೊಗಳಿಕೆ ಸಿಕ್ಕಿ ಖುಷಿ-ಖುಷಿಯಾಗಿ ಮನೆಗೆ ಬಂದು ಮನೆಯಿಂದಲೂ ಹೆಂಡತಿಯ ಮೆಚ್ಚುಗೆ ಪಡೆದು ಖುಷಿ-ಖುಷಿಯಾಗಿ ಜೀವನ ಸಾಗಿಸುತ್ತಿದ್ದಾನೆ.
ಆದ್ದರಿಂದ ನಿಮ್ಮ ವಾಹನ ಚಲಾಯಿಸಿಕೊಂಡು ಹೋಗಿ ಮಾನಸಿಕ ಒತ್ತಡ ಅನುಭವಿಸುವುದಕ್ಕಿಂತ, ಬಿಎಂಟಿಸಿ ಬಳಸಿದರೆ ನಿಮಗೆ, ನಿಮ್ಮ ಜೇಬು ಹಾಗೂ ಪರಿಸರಕ್ಕೂ ಒಳ್ಳೆಯದು ಎಂದು ಹೇಳುತ್ತಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯ ನೋಡುವಾಗ ನಮ್ಮ ಬೆಂಗಳೂರು ಆ ರೀತಿ ಕಲುಷಿತವಾಗುವುದಕ್ಕಿಂತ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಯೋಚಿಸಿಯಾದರೂ ಸ್ವಂತ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ವಾಹನ ಹೆಚ್ಚಾಗಿ ಬಳಸಬೆಕಾಗಿದೆ.



Click it and Unblock the Notifications