Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬಿಎಂಟಿಸಿಯ ರಮೇಶ-ಸುರೇಶ ಹರಿಕತೆ ವೀಡಿಯೋ ನೋಡಿದ್ದೀರಾ?
ಬೆಂಗಳೂರು ಟ್ರಾಫಿಕ್ ಹೇಗಿದೆಯೆಂದು ನಿಮಗೆಲ್ಲಾ ಗೊತ್ತು? ಇಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಯಾರೂ ಎಷ್ಟು ಕಿ. ಮೀ ಇದೆ ಎಂದು ಯಾರೂ ಲೆಕ್ಕಾಚಾರ ಹಾಕುವುದಿಲ್ಲ, ಬದಲಿಗೆ ಎಷ್ಟು ಗಂಟೆ ಬೇಕು ಎಂದೇ ನೋಡುತ್ತಾರೆ. ಏಕೆಂದರೆ ಕೆಲವೊಮ್ಮೆ ಜಸ್ಟ್ ಒಂದು ಕಿಮೀ ಹೋಗಲು ಒಂದು ಅರ್ಧ ಗಂಟೆ ತೆಗೆದುಕೊಳ್ಳುವುದೂ ಉಂಟು. ಬೆಂಗಳೂರಿನಲ್ಲಿ 2-3 ಕಿ. ಮೀ ದೂರವಿರುವ ಸ್ಥಳಕ್ಕೆ ಹೋಗಲು ಗಾಡಿಯಲ್ಲಿ ಹೋಗುವುದಕ್ಕಿಂತ ಕಾಲ್ನಡಿಗೆಯಲ್ಲಿ ಹೋದರೆ ಬೇಗ ತಲುಪಬಹುದು ಅಲ್ವಾ?

ಇನ್ನು ಕಾರಿನಲ್ಲಿ ಹೋಗುವುದಾದರೆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತು, ನಿಂತು ಹೋಗುವಾಗಲೇ ಬಿಪಿ ಹೆಚ್ಚಾಗಿರುತ್ತದೆ, ಇನ್ನು ಆಫೀಸ್ನಲ್ಲಿ ಬಾಸ್ ಕಳುಹಿಸಿದ ಮೇಲ್ಗಳನ್ನು ನೋಡುವಾಗ ಕೆಲಸ ಪ್ರಾರಂಭಿಸುವ ಮುನ್ನವೇ ಸುಸ್ತಾಗಿರುತ್ತದೆ, ಆದ್ದರಿಂದ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತೇವೆ. ಇದನ್ನು ಬಿಎಂಟಿಸಿಯವರು ಸೊಗಸಾದ ವೀಡಿಯೋ ಮಾಡುವ ಮೂಲಕ ಸ್ವಂತ ವಾಹನ ಬಳಸುವ ಬದಲಿಗೆ ಬಿಬಿಎಂಟಿ ಬಸ್ ಬಳಸಿದರೆ ನಿಮಗೆ ಹಾಗೂ ಪರಸರಕ್ಕೆ ಎಷ್ಟೆಲ್ಲಾ ಲಾಭಗಳಿವೆ ಎಂದು ತುಂಬಾ ಸೊಗಸಾದ ಹರಿಕತೆಯ ರೂಪದಲ್ಲಿ ಹೇಳಿದ್ದಾರೆ ನೋಡಿ:
ಕಲಿಯುಗದ ಮಧ್ಯಕಾಲದಲ್ಲಿ ಭರತ ಭೂಮಿಯ ಕರ್ನಾಟಕ ರಾಜ್ಯದ ಬೆಂಗಳೂರಿನ ಸಿಲ್ಕ್ಬೋರ್ಡ್ ಜಂಕ್ಷನ್ನಲ್ಲಿ ಬೆಳಗ್ಗೆ ಹೊತ್ತಿನಲ್ಲಿ ಪ್ರಯಾಣಿಕರು ಬಸ್ಗಾಗಿ ಕಾಯುತ್ತಿರುತ್ತಾರೆ. ರಮೇಶ ಹಾಗೂ ಸುರೇಶ ಎಂಬ ಎರಡು ಸಾಫ್ಟ್ ಎಂಜಿನಿಯರ್ಗಳು ಬೆಳಗ್ಗೆ ಆಫೀಸ್ಗೆ ಹೊರಡುತ್ತಿರುತ್ತಾರೆ. ಸುರೇಶ ತನ್ನ ಸ್ವಂತ ಕಾರಿನಲ್ಲಿ ಆಫೀಸ್ಗೆ ತೆರಳಿದರೆ ರಮೇಶ ಬಿಎಂಟಿಸಿ ಬಸ್ನಲ್ಲಿ ತೆರಳುತ್ತಾರೆ. ಕಾರಿನಲ್ಲಿ ತೆರಳಿದ ಸುರೇಶ ಅಲ್ಲಲ್ಲಿ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತು ಸುಸ್ತಾಗಿ ಆಫೀಸ್ಗೆ ಬಂದು ಅಲ್ಲಿ ಸರಿಯಾಗಿ ಕೆಲಸ ಮಾಡಲಾಗದೆ ಬಾಸ್ನಿಂದ ಬೈಗುಳ ತಿಂದು, ಮನೆಗೆ ಬಂದಾಗ ಅಲ್ಲಿ ಹೆಂಡತಿ ಕಡೆಯಿಂದಲೂ ಬೈಗುಳ ತಿಂದು ಆತನ ಜೀವನ ಕಷ್ಟಕರವಾಗಿದ್ದರೆ, ಇತ್ತ ಬಿಎಂಟಿಸಿ ಬದುಕಿನಲ್ಲಿ ಹೋಗುವ ರಮೇಶ ಹಾಡುಗಳನ್ನು ಕೇಳುತ್ತಾ, ಪುಸ್ತಕಗಳನ್ನು ಹೋದುತ್ತಾ, ಜನರೊಂದಿಗೆ ಮಾತನಾಡುತ್ತಾ ಯಾವುದೇ ದಣಿವಿಲ್ಲದೆ ಆಫೀಸ್ ಮುಟ್ಟುತ್ತಾನೆ. ನಂತರ ಆಫೀಸ್ನಲ್ಲಿ ಚೆನ್ನಾಗಿ ಕೆಲಸ ಮಾಡಿ ಬಾಸ್ನ ಹೊಗಳಿಕೆ ಸಿಕ್ಕಿ ಖುಷಿ-ಖುಷಿಯಾಗಿ ಮನೆಗೆ ಬಂದು ಮನೆಯಿಂದಲೂ ಹೆಂಡತಿಯ ಮೆಚ್ಚುಗೆ ಪಡೆದು ಖುಷಿ-ಖುಷಿಯಾಗಿ ಜೀವನ ಸಾಗಿಸುತ್ತಿದ್ದಾನೆ.
ಆದ್ದರಿಂದ ನಿಮ್ಮ ವಾಹನ ಚಲಾಯಿಸಿಕೊಂಡು ಹೋಗಿ ಮಾನಸಿಕ ಒತ್ತಡ ಅನುಭವಿಸುವುದಕ್ಕಿಂತ, ಬಿಎಂಟಿಸಿ ಬಳಸಿದರೆ ನಿಮಗೆ, ನಿಮ್ಮ ಜೇಬು ಹಾಗೂ ಪರಿಸರಕ್ಕೂ ಒಳ್ಳೆಯದು ಎಂದು ಹೇಳುತ್ತಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯ ನೋಡುವಾಗ ನಮ್ಮ ಬೆಂಗಳೂರು ಆ ರೀತಿ ಕಲುಷಿತವಾಗುವುದಕ್ಕಿಂತ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಯೋಚಿಸಿಯಾದರೂ ಸ್ವಂತ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ವಾಹನ ಹೆಚ್ಚಾಗಿ ಬಳಸಬೆಕಾಗಿದೆ.



Click it and Unblock the Notifications