Latest Updates
-
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ
ರಾಯರ ದಿನವಾದ ಗುರುವಾರದಂದು ಪೂಜೆ ಮಾಡುವುದು ಹೇಗೆ? ವಿಧಿ ವಿಧಾನಗಳೇನು ನೋಡಿ.!
ಅಪಾರ ಮಹಿಮರೂ ದಯಾಳುಗಳೂ ಯತಿಶ್ರೇಷ್ಠರೂ ಆಗಿರುವ ಶ್ರೀ ರಾಘವೇಂದ್ರಸ್ವಾಮಿಗಳು ಮಂತ್ರಾಲಯದಲ್ಲಿ ನೆಲೆಸಿದ್ದಾರೆ. ಭಕ್ತರ ಆರಾಧ್ಯ ದೇವ ಎಂದೇ ಗುರುಗಳು ಪ್ರಸಿದ್ಧಿ ಪಡೆದಿದ್ದಾರೆ. ನಿತ್ಯವೂ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆಯುತ್ತಾರೆ. ಭಕ್ತರನ್ನು ನೆನೆದರೆ ಕ್ಷಣ ಮಾತ್ರದಲ್ಲಿ ಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಅವರ ಭಕ್ತರಲ್ಲಿದೆ. ಅಲ್ಲದೆ ನಂಬಿ ಬಂದ ಭಕ್ತರನ್ನು ರಾಯರು ಎಂದಿಗೂ ಕೈಬಿಡುವುದಿಲ್ಲ.
ಹಾಗೆ ಗುರುವಾರ ರಾಯರ ಪೂಜೆಗೆ ಸೂಕ್ತ ದಿನವಂತೆ. ಪ್ರತೀ ಗುರುವಾರದಂದು ಶ್ರೀ ರಾಘವೇಂದ್ರರ ಪೂಜೆ ಅಥವಾ ಉಪವಾಸ ವ್ರತ ಮಾಡಬೇಕು. ಪೂಸ ನಕ್ಷತ್ರನಲ್ಲಿ ಬರುವಂತಹ ಗುರುವಾರವು ಪೂಜೆ ಅತೀ ಶುಭವೆನ್ನಲಾಗಿದೆ. ನಮ್ಮ ಸಾಮಾನ್ಯ ವಿಧಿವಿಧಾನದಂತೆ ಪೂಜೆ ಮಾಡಬಹುದು. ಆದರೆ ನಾವು ಸ್ವಚ್ಛವಾಗಿರುವುದು ಅತೀ ಅಗತ್ಯ.

ಆರು ಗುರುವಾರಗಳ ಕಾಲ ಪೂಜೆ ಮಾಡಬೇಕು ಮತ್ತು ಅಂತ್ಯದ ಪೂಜೆ ಏಳನೇ ಗುರುವಾರದಂದು ಮಾಡಬೇಕು.ಏಳನೇ ಗುರುವಾರದಂದು ಪೂಜೆ ಮಾಡಬೇಕು ಮತ್ತು ಇದು ಪೂಜೆ ಕೊನೆಗೊಳಿಸಲು ಅಂತಿಮ ಗುರುವಾರವಾಗಿದೆ ಮತ್ತು ಇದಕ್ಕೆ ವಿಶೇಷ ಬದ್ಧತೆ ತೋರಿಸಬೇಕು.ಹಾಗಾದರೆ ಪೂಜೆ ಮಾಡುವುದು ಹೇಗೆ? ವಿಧಿ ವಿಧಾನಗಳು ಇಲ್ಲಿವೆ ನೋಡಿ.
ಪೂಜೆ ಮಾಡುವಂತಹ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಿ
ಪೂಜೆ ಮಾಡುವಂತಹ ಜಾಗವನ್ನು ಮೊದಲು ಶುಚಿಗೊಳಿಸಿ. ಬಳಿಕ ಈ ಜಾಗದಲ್ಲಿ ಕೊಲಂ ಅಥವಾ ರಂಗೋಲಿ ಹಾಕಿ. ಇದರ ಬಳಿಕ ಸಣ್ಣ ಮನಾಯಿ(ಮರದಿಂದ ಮಾಡಿದ ಕುಳಿತುಕೊಳ್ಳುವ ಸಾಧನ) ಇಡಿ ಮತ್ತು ಇದನ್ನು ಶುದ್ಧ ಮಾಡಿಕೊಂಡು, ಇದಕ್ಕೂ ರಂಗೋಲಿ ಹಚ್ಚಿ. ಮನಾಯಿಯ ಮೇಲೆ ಶ್ರೀ ರಾಘವೇಂದ್ರರ್ ಫೋಟೊ ಇಡಿ. ಈ ಫೋಟೊವನ್ನು ಸ್ವಚ್ಛಗೊಳಿಸಿ ಮತ್ತು ಇದಕ್ಕೆ ಶ್ರೀಗಂಧ ಮತ್ತು ಕುಂಕುಮ ಹಾಕಿ. ಇದರ ಬಳಿಕ ತುಳಸಿ ಮಾಲೆ ಮತ್ತು ಬೇರೆ ಹೂಗಳ ಮಾಲೆ ಫೋಟೊಗೆ ಹಾಕಿ.
ಬೆಳಗುವ ದೀಪವನ್ನಿಡಿ
ಫೋಟೋದ ಮುಂದೆ ಐದು ಕಡೆಗಳಿಂದ ಬೆಳಗುವ ದೀಪವನ್ನಿಡಿ. ಒಳ್ಳೆಯ ಹಣ್ಣುಗಳು, ತೆಂಗಿನಕಾಯಿ, ವೀಲ್ಯದ ಎಲೆಗಳನ್ನು ತೆಗೆದುಕೊಳ್ಳಿ. ರಾಘವೇಂದ್ರ ರಾಯರ ಫೋಟೋವಿದ್ದರೆ ಅದನ್ನು ಚೆನ್ನಾಗಿ ಒದ್ದೆ ಬಟ್ಟೆಯಿಂದ ಒರೆಸಿ, ಮೂರ್ತಿಯಿದ್ದರೆ ನೀರನ್ನು ಸಂಪ್ರೋಕ್ಷಿಸಿ. ಈಗ ರಾಘವೇಂದ್ರರ ಫೋಟೊದ ಮುಂದೆ ದೀಪ ಹಚ್ಚಿ.
ಈ ಮಂತ್ರವನ್ನು ಹೇಳಿ..
ಪೂಜೆ ಆರಂಭಿಸುವ ಮೊದಲು ನಿಮ್ಮ ಮನಸ್ಸು ಶುದ್ಧವಾಗಿರಲಿ ಮತ್ತು ಅದನ್ನು ನಿಯಂತ್ರಿಸಿಕೊಳ್ಳಿ. ಎಲ್ಲಾ ಇಚ್ಛೆಗಳು ಪೂರ್ತಿಯಾಗಲಿ ಎಂದು ಬೇಡಿಕೊಳ್ಳಿ. ಫೋಟೊದ ಮುಂದೆ ಕುಳೀತು ಧೂಪ ನೀಡಿ ಮತ್ತು ಇದರ ಬಳಿಕ ನೈವೇದ್ಯ ಅರ್ಪಿಸಿ. 2-3 ತುಳಸಿ ಎಲೆಗಳನ್ನು ತೆಗೆದುಕೊಂಡು ಅಂಗೈಯಲ್ಲಿ ಇಟ್ಟುಕೊಂಡು ಫೋಟೊ ಮತ್ತು ದೀಪಕ್ಕೆ ಪ್ರದಕ್ಷಿಣೆ ಬನ್ನಿ. ನೀವು 11 ಸಲ ಪ್ರದಕ್ಷಿಣೆ ಬರಬೇಕು ಮತ್ತು ಹೀಗೆ ಮಾಡುವಾಗ ಈ ಮಂತ್ರವನ್ನು ಹೇಳಿ.
ಪೂಜ್ಯಾಯಾ ರಾಘವೇಂದ್ರಾಯ
ಸತ್ಯಧರ್ಮ ರಧಾಯಚ
ಭಜತಾಂ ಕಲ್ಪವೃಕ್ಷಯಾ ನಮತಾಂ
ಶ್ರೀ ಕಾಮಧೇನುವೇ
ಶ್ರೀ ರಾಘವೇಂದ್ರರ ಪೂಜಿಸಲು ಗುರುವಾರವು ಒಳ್ಳೆಯದು. ಆದರ ಯಾವುದೇ ಒಳ್ಳೆಯ ದಿನದಂದು ನೀವು ಈ ಪೂಜೆ ಆರಂಭಿಸಬಹುದು. ಇದಕ್ಕೆ ನೀವು ಗುರುವಾರಕ್ಕಾಗಿ ಕಾರಯಬೇಕಿಲ್ಲ.ಪುರುಷರು ಧೋತಿ(ಬಿಳಿ ಪಂಚೆ) ಧರಿಸಬೇಕು ಮತ್ತು ಖಾಲಿ ಮೈಯಲ್ಲಿ ಇರಬೇಕು. ಪೂಜೆಯ ವೇಳೆ ಮಹಿಳೆಯರು ಸೀರೆ ಉಡಬೇಕು.
ನೀವು ಗುರುವಾರ ಬೆಳಗ್ಗೆ ಪೂಜೆ ಮಾಡುವಿರಾದರೆ ಬುಧವಾರ ರಾತ್ರಿ ಪೂಜೆಗೆ ಉಡುವ ಬಟ್ಟೆಯನ್ನು ನೀರಿನಲ್ಲಿ ನೆನೆಸಿಡಿ ಮತ್ತು ಇದರ ಬಳಿಕ ಪೂಜೆಗೆ ಸಂಬಂಧಿಸಿದ ಬಟ್ಟೆಗಳು ಒಣಗಿಸುವ ಜಾಗದಲ್ಲಿ ಇದನ್ನು ಒಣಗಿಸಿ. ಪೂಜೆಯ ದಿನ ಹಾಸಿಗೆ ಅಥವಾ ದಿಂಬು ಬಳಸಬೇಡಿ. ನೆಲದ ಮೇಲೆ ಶುದ್ಧ ಬಟ್ಟೆ ಅಥವಾ ಚಾಪೆ ಹಾಕಿ ಮಲಗಿ.
ಬೆಳಗ್ಗೆ 5 ಗಂಟೆಗೆ ಎದ್ದು ಬಳಿಕ ಪೂಜೆ ಮಾಡಿ
ಬೆಳಗ್ಗಿನಿಂದಲೇ ಉಪವಾಸ ಮಾಡಿ. ಉಪವಾಸ ಮಾಡಲು ಸಾಧ್ಯವಿಲ್ಲದೆ ಇದ್ದರೆ ಆಗ ಹಣ್ಣುಗಳನ್ನು ತಿಂದು ಹಾಲು ಕುಡಿಯಿರಿ. ಈ ವ್ರತ ಆಚರಿಸುವ ವಾರ ಮಾಂಸಹಾರ ಸೇವನೆ ಮಾಡಲೇಬಾರದು, ಮನೆಯಲ್ಲಿಯೂ ಮಾಡದಿದ್ದರೆ ಉತ್ತಮ. ಪ್ರತಿ ಗುರುವಾರ ಉಪವಾಸದ ಜೊತೆ ಮನೆಯಲ್ಲಿ ಮಾಂಸಹಾರ ಮಾಡದಂತೆ ನೋಡಿಕೊಳ್ಳುವುದು ಉತ್ತಮ.



Click it and Unblock the Notifications












