Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಯರ ದಿನವಾದ ಗುರುವಾರದಂದು ಪೂಜೆ ಮಾಡುವುದು ಹೇಗೆ? ವಿಧಿ ವಿಧಾನಗಳೇನು ನೋಡಿ.!
ಅಪಾರ ಮಹಿಮರೂ ದಯಾಳುಗಳೂ ಯತಿಶ್ರೇಷ್ಠರೂ ಆಗಿರುವ ಶ್ರೀ ರಾಘವೇಂದ್ರಸ್ವಾಮಿಗಳು ಮಂತ್ರಾಲಯದಲ್ಲಿ ನೆಲೆಸಿದ್ದಾರೆ. ಭಕ್ತರ ಆರಾಧ್ಯ ದೇವ ಎಂದೇ ಗುರುಗಳು ಪ್ರಸಿದ್ಧಿ ಪಡೆದಿದ್ದಾರೆ. ನಿತ್ಯವೂ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆಯುತ್ತಾರೆ. ಭಕ್ತರನ್ನು ನೆನೆದರೆ ಕ್ಷಣ ಮಾತ್ರದಲ್ಲಿ ಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಅವರ ಭಕ್ತರಲ್ಲಿದೆ. ಅಲ್ಲದೆ ನಂಬಿ ಬಂದ ಭಕ್ತರನ್ನು ರಾಯರು ಎಂದಿಗೂ ಕೈಬಿಡುವುದಿಲ್ಲ.
ಹಾಗೆ ಗುರುವಾರ ರಾಯರ ಪೂಜೆಗೆ ಸೂಕ್ತ ದಿನವಂತೆ. ಪ್ರತೀ ಗುರುವಾರದಂದು ಶ್ರೀ ರಾಘವೇಂದ್ರರ ಪೂಜೆ ಅಥವಾ ಉಪವಾಸ ವ್ರತ ಮಾಡಬೇಕು. ಪೂಸ ನಕ್ಷತ್ರನಲ್ಲಿ ಬರುವಂತಹ ಗುರುವಾರವು ಪೂಜೆ ಅತೀ ಶುಭವೆನ್ನಲಾಗಿದೆ. ನಮ್ಮ ಸಾಮಾನ್ಯ ವಿಧಿವಿಧಾನದಂತೆ ಪೂಜೆ ಮಾಡಬಹುದು. ಆದರೆ ನಾವು ಸ್ವಚ್ಛವಾಗಿರುವುದು ಅತೀ ಅಗತ್ಯ.

ಆರು ಗುರುವಾರಗಳ ಕಾಲ ಪೂಜೆ ಮಾಡಬೇಕು ಮತ್ತು ಅಂತ್ಯದ ಪೂಜೆ ಏಳನೇ ಗುರುವಾರದಂದು ಮಾಡಬೇಕು.ಏಳನೇ ಗುರುವಾರದಂದು ಪೂಜೆ ಮಾಡಬೇಕು ಮತ್ತು ಇದು ಪೂಜೆ ಕೊನೆಗೊಳಿಸಲು ಅಂತಿಮ ಗುರುವಾರವಾಗಿದೆ ಮತ್ತು ಇದಕ್ಕೆ ವಿಶೇಷ ಬದ್ಧತೆ ತೋರಿಸಬೇಕು.ಹಾಗಾದರೆ ಪೂಜೆ ಮಾಡುವುದು ಹೇಗೆ? ವಿಧಿ ವಿಧಾನಗಳು ಇಲ್ಲಿವೆ ನೋಡಿ.
ಪೂಜೆ ಮಾಡುವಂತಹ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಿ
ಪೂಜೆ ಮಾಡುವಂತಹ ಜಾಗವನ್ನು ಮೊದಲು ಶುಚಿಗೊಳಿಸಿ. ಬಳಿಕ ಈ ಜಾಗದಲ್ಲಿ ಕೊಲಂ ಅಥವಾ ರಂಗೋಲಿ ಹಾಕಿ. ಇದರ ಬಳಿಕ ಸಣ್ಣ ಮನಾಯಿ(ಮರದಿಂದ ಮಾಡಿದ ಕುಳಿತುಕೊಳ್ಳುವ ಸಾಧನ) ಇಡಿ ಮತ್ತು ಇದನ್ನು ಶುದ್ಧ ಮಾಡಿಕೊಂಡು, ಇದಕ್ಕೂ ರಂಗೋಲಿ ಹಚ್ಚಿ. ಮನಾಯಿಯ ಮೇಲೆ ಶ್ರೀ ರಾಘವೇಂದ್ರರ್ ಫೋಟೊ ಇಡಿ. ಈ ಫೋಟೊವನ್ನು ಸ್ವಚ್ಛಗೊಳಿಸಿ ಮತ್ತು ಇದಕ್ಕೆ ಶ್ರೀಗಂಧ ಮತ್ತು ಕುಂಕುಮ ಹಾಕಿ. ಇದರ ಬಳಿಕ ತುಳಸಿ ಮಾಲೆ ಮತ್ತು ಬೇರೆ ಹೂಗಳ ಮಾಲೆ ಫೋಟೊಗೆ ಹಾಕಿ.
ಬೆಳಗುವ ದೀಪವನ್ನಿಡಿ
ಫೋಟೋದ ಮುಂದೆ ಐದು ಕಡೆಗಳಿಂದ ಬೆಳಗುವ ದೀಪವನ್ನಿಡಿ. ಒಳ್ಳೆಯ ಹಣ್ಣುಗಳು, ತೆಂಗಿನಕಾಯಿ, ವೀಲ್ಯದ ಎಲೆಗಳನ್ನು ತೆಗೆದುಕೊಳ್ಳಿ. ರಾಘವೇಂದ್ರ ರಾಯರ ಫೋಟೋವಿದ್ದರೆ ಅದನ್ನು ಚೆನ್ನಾಗಿ ಒದ್ದೆ ಬಟ್ಟೆಯಿಂದ ಒರೆಸಿ, ಮೂರ್ತಿಯಿದ್ದರೆ ನೀರನ್ನು ಸಂಪ್ರೋಕ್ಷಿಸಿ. ಈಗ ರಾಘವೇಂದ್ರರ ಫೋಟೊದ ಮುಂದೆ ದೀಪ ಹಚ್ಚಿ.
ಈ ಮಂತ್ರವನ್ನು ಹೇಳಿ..
ಪೂಜೆ ಆರಂಭಿಸುವ ಮೊದಲು ನಿಮ್ಮ ಮನಸ್ಸು ಶುದ್ಧವಾಗಿರಲಿ ಮತ್ತು ಅದನ್ನು ನಿಯಂತ್ರಿಸಿಕೊಳ್ಳಿ. ಎಲ್ಲಾ ಇಚ್ಛೆಗಳು ಪೂರ್ತಿಯಾಗಲಿ ಎಂದು ಬೇಡಿಕೊಳ್ಳಿ. ಫೋಟೊದ ಮುಂದೆ ಕುಳೀತು ಧೂಪ ನೀಡಿ ಮತ್ತು ಇದರ ಬಳಿಕ ನೈವೇದ್ಯ ಅರ್ಪಿಸಿ. 2-3 ತುಳಸಿ ಎಲೆಗಳನ್ನು ತೆಗೆದುಕೊಂಡು ಅಂಗೈಯಲ್ಲಿ ಇಟ್ಟುಕೊಂಡು ಫೋಟೊ ಮತ್ತು ದೀಪಕ್ಕೆ ಪ್ರದಕ್ಷಿಣೆ ಬನ್ನಿ. ನೀವು 11 ಸಲ ಪ್ರದಕ್ಷಿಣೆ ಬರಬೇಕು ಮತ್ತು ಹೀಗೆ ಮಾಡುವಾಗ ಈ ಮಂತ್ರವನ್ನು ಹೇಳಿ.
ಪೂಜ್ಯಾಯಾ ರಾಘವೇಂದ್ರಾಯ
ಸತ್ಯಧರ್ಮ ರಧಾಯಚ
ಭಜತಾಂ ಕಲ್ಪವೃಕ್ಷಯಾ ನಮತಾಂ
ಶ್ರೀ ಕಾಮಧೇನುವೇ
ಶ್ರೀ ರಾಘವೇಂದ್ರರ ಪೂಜಿಸಲು ಗುರುವಾರವು ಒಳ್ಳೆಯದು. ಆದರ ಯಾವುದೇ ಒಳ್ಳೆಯ ದಿನದಂದು ನೀವು ಈ ಪೂಜೆ ಆರಂಭಿಸಬಹುದು. ಇದಕ್ಕೆ ನೀವು ಗುರುವಾರಕ್ಕಾಗಿ ಕಾರಯಬೇಕಿಲ್ಲ.ಪುರುಷರು ಧೋತಿ(ಬಿಳಿ ಪಂಚೆ) ಧರಿಸಬೇಕು ಮತ್ತು ಖಾಲಿ ಮೈಯಲ್ಲಿ ಇರಬೇಕು. ಪೂಜೆಯ ವೇಳೆ ಮಹಿಳೆಯರು ಸೀರೆ ಉಡಬೇಕು.
ನೀವು ಗುರುವಾರ ಬೆಳಗ್ಗೆ ಪೂಜೆ ಮಾಡುವಿರಾದರೆ ಬುಧವಾರ ರಾತ್ರಿ ಪೂಜೆಗೆ ಉಡುವ ಬಟ್ಟೆಯನ್ನು ನೀರಿನಲ್ಲಿ ನೆನೆಸಿಡಿ ಮತ್ತು ಇದರ ಬಳಿಕ ಪೂಜೆಗೆ ಸಂಬಂಧಿಸಿದ ಬಟ್ಟೆಗಳು ಒಣಗಿಸುವ ಜಾಗದಲ್ಲಿ ಇದನ್ನು ಒಣಗಿಸಿ. ಪೂಜೆಯ ದಿನ ಹಾಸಿಗೆ ಅಥವಾ ದಿಂಬು ಬಳಸಬೇಡಿ. ನೆಲದ ಮೇಲೆ ಶುದ್ಧ ಬಟ್ಟೆ ಅಥವಾ ಚಾಪೆ ಹಾಕಿ ಮಲಗಿ.
ಬೆಳಗ್ಗೆ 5 ಗಂಟೆಗೆ ಎದ್ದು ಬಳಿಕ ಪೂಜೆ ಮಾಡಿ
ಬೆಳಗ್ಗಿನಿಂದಲೇ ಉಪವಾಸ ಮಾಡಿ. ಉಪವಾಸ ಮಾಡಲು ಸಾಧ್ಯವಿಲ್ಲದೆ ಇದ್ದರೆ ಆಗ ಹಣ್ಣುಗಳನ್ನು ತಿಂದು ಹಾಲು ಕುಡಿಯಿರಿ. ಈ ವ್ರತ ಆಚರಿಸುವ ವಾರ ಮಾಂಸಹಾರ ಸೇವನೆ ಮಾಡಲೇಬಾರದು, ಮನೆಯಲ್ಲಿಯೂ ಮಾಡದಿದ್ದರೆ ಉತ್ತಮ. ಪ್ರತಿ ಗುರುವಾರ ಉಪವಾಸದ ಜೊತೆ ಮನೆಯಲ್ಲಿ ಮಾಂಸಹಾರ ಮಾಡದಂತೆ ನೋಡಿಕೊಳ್ಳುವುದು ಉತ್ತಮ.



Click it and Unblock the Notifications
