Latest Updates
-
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಶುಕ್ರವಾರ ಈ ಲಕ್ಷ್ಮಿ ಕುಬೇರ ಮಂತ್ರ ಪಠಿಸಿ, ಆರ್ಥಿಕ ಸಂಕಷ್ಟ ದೂರಾಗುವುದು
ಶುಕ್ರವಾರ ಲಕ್ಷ್ಮಿ ಪೂಜೆ ಮಾಡಿದರೆ ಲಕ್ಷ್ಮಿ ನಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಎಂಬುವುದು ಅವಳನ್ನು ನಂಬಿರುವ ಭಕ್ತರ ಬಲವಾದ ನಂಬಿಕೆ. ಶ್ರೀ ಲಕ್ಷ್ಮಿಯನ್ನು ಪ್ರತಿ ಶುಕ್ರವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಈ ದಿನ ಉಪವಾಸವಿದ್ದು ಲಕ್ಷ್ಮಿಯನ್ನು ಆರಾಧಿಸಿದರೆ ಇನ್ನೂ ಒಳ್ಳೆಯದು, ಅವಳ ಕೃಪೆಗೆ ಬೇಗನೆ ಪಾತ್ರರಾಗುವಿರಿ.

ಲಕ್ಷ್ಮಿ ಒಲಿದರೆ ಹಣದ ಕೊರತೆಯೇ ಇರುವುದಿಲ್ಲ, ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚುವುದು, ಆದ್ದರಿಂದ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಎಲ್ಲರೂ ಬಯಸುತ್ತಾರೆ. ನೀವು ಸಂಪತ್ತು ಹೆಚ್ಚಲು ಶುಕ್ರವಾರ ಪೂಜೆ ಮಾಡುವಾಗ ಲಕ್ಷ್ಮಿ ಕುಬೇರ ಮಂತ್ರಗಳನ್ನು ಹೇಳಿದರೆ ಇನ್ನೂ ಒಳ್ಳೆಯದು.
ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಹೇಗೆ ಮಾಡಬೇಕು? ಈ ದಿನ ಪಠಿಸಬೇಕಾದ ಮಂತ್ರಗಳು ಇವುಗಳ ಕುರಿತ ಮಾಹಿತಿ ಇಲ್ಲಿದೆ:
ಲಕ್ಷ್ಮಿ ಪೂಜೆಗೆ ಸಿದ್ಧತೆ
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ. ಮಡಿ ಬಟ್ಟೆ ಧರಿಸಿ.
* ಶುಕ್ರವಾರ ಲಕ್ಷ್ಮಿಯನ್ನು ಪೂಜಿಸುವ ಮುನ್ನ ದೇವರ ಪೂಜಾ ವಸ್ತುಗಳು ಹಾಗೂ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಕು. ಅವಳ ಮೂರ್ತಿಯನ್ನು ತೊಳೆದು ಇಡಬೇಕು, ಫೋಟೋವಾದರೆ ಒರೆಸಿ ಇಡಿ.
* ಮನೆಮುಂದೆ ಹಾಗೂ ದೇವರ ಕೋಣೆಯಲ್ಲಿ ರಂಗೋಲಿ ಹಾಕಿ.
* ನಂತರ ದೇವಯನ್ನು ಹಲಗೆಯ ಮೇಲೆ ಪ್ರತಿಷ್ಠಾಪಿಸಿ, ಅವಳಿಗೆ ಬಟ್ಟೆ, ಆಭರಣ, ಹೂ, ಹಣ್ಣುಗಳಿಂದ ಅಲಂಕರಿಸಿ.
* ಲಕ್ಷ್ಮಿಯನ್ನು ಪೂಜಿಸುವಾಗ ತುಂದು ಕಂಚಿನ ತಂಬಿಗೆಯಲ್ಲಿ ನೀರು ತುಂಬಿ ಅದರಲ್ಲಿ ನಾಣ್ಯ ಹಾಕಿ, ಜುಟ್ಟು ಇರುವ ತೆಂಗಿನಕಾಯಿ ಇಟ್ಟು ಕುಂಕುಮ ಇಡಲು ಮರೆಯದಿರಿ.
* ಶಂಖವೂ ಇದ್ದರೆ ಒಳ್ಳೆಯದು.
* ದೇವಿಗೆ ದೈವೇದ್ಯ ಅರ್ಪಿಸಲು ಅಕ್ಕಿ ಪಾಯಸ ಮಾಡಿಡಿ.
* ನಂತರ ದೇವಿಗೆ ತುಪ್ಪದ ದೀಪ ಹಚ್ಚಿ ಮಂತ್ರಗಳನ್ನು ಹೇಳಿ
* ನಂತರ ದೇವಿಗೆ ನೈವೇದ್ಯ ಅರ್ಪಿಸಿ.
* ನಂತರ ಆ ಪ್ರಸಾದವನ್ನು ಮನೆಮಂದಿಗೆ ಹಂಚಿ.
ಸಂಜೆ ಹೊತ್ತಿನಲ್ಲಿ ಲಕ್ಷ್ಮಿ ಪೂಜೆ
ಸಂಜೆ ಹೊತ್ತು ಲಕ್ಷ್ಮಿ ದೀಪ ಹಚ್ಚಿದ ಬಳಿಕ ಅವಳಿಗೆ ಆರತಿ ಮಾಡಿ ಮನೆ ಮುಂದೆ ತುಪ್ಪದ ಹಚ್ಚಿಡಬೇಕು. ದೀಪದ ಬತ್ತಿಗೆ ಕೆಂಪು ಬಣ್ಣದ ನೂಲು ಬಳಸಿದರೆ ಇನ್ನೂ ಒಳ್ಳೆಯದು. ಅವಳಿಗೆ ಬಿಳಿ ಹಾಗೂ ಕೆಂಪು ಹೂಗಳನ್ನು ಅರ್ಪಿಸಿ. ಮನೆ ಬಾಗಿಲಿನಲ್ಲಿ ದೀಪ ಬೆಳಗುವುದರಿಂದ ಲಕ್ಷ್ಮಿ ಒಲಿಯುತ್ತಾಳೆ ಇದರಿಂದ ನಿಮ್ಮ ಆರ್ಥಿಕತೆಯನ್ನು ಸುಧಾರಣೆ ಕಾಣುವಿರಿ.
ಶುಕ್ರವಾರ ಈ ಲಕ್ಷ್ಮಿ ಕುಬೇರ ಮಂತ್ರ ಪಠಿಸಿ
ಲಕ್ಷ್ಮಿ ಕುಬೇರ ಮಂತ್ರ: .
"ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ, ಅಷ್ಟ ಲಕ್ಷ್ಮಿ ಮಮ ಗೃಹೆ ಧನಂ ಪುರಾಯ ಪುರಾಯ ನಮಃ"
ಮಹಾಲಕ್ಷ್ಮಿ ಮಂತ್ರ:
"ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲಾಯೆ ಪ್ರಸೀದ, ಪ್ರಸೀದ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಯೆ ನಮಃ"
ಕುಬೇರ ಮಂತ್ರ:
ಓಂ ಶ್ರೀಂ ಒಂ ಹ್ರೀಂ ಶ್ರೀಂ ಓಂ ಹ್ರೀಂ ಶ್ರೀಂ ಕ್ಲೀಮ್ ವಿತ್ತೆಶ್ವರಾಯ ನಮಃ
ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ ಧನಧಾನ್ಯಸಮೃದ್ಧಿಂ ಮೇ ದೇಹಿ ದಾಪಯ ಸ್ವಾಹಾ
ಈ ಮಂತ್ರಗಳನ್ನು ಪಠಿಸುವುದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.



Click it and Unblock the Notifications
