Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಪಾತಿ-ಊಟಕ್ಕೆ ರಾಜ್ಮಾ ಮಸಾಲೆ ಮಾಡಿ ನೋಡಿ.! ಇದರ ರುಚಿ ಮನಸೋಲದವರಿಲ್ಲ!!
ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟದ ಜೊತೆಗೆ ಯಾವುದಾದರೊಂದು ಪಲ್ಯ, ಮಸಾಲೆಯುಕ್ತ ಫ್ರೈ, ಉಪ್ಪಿನಕಾಯಿ ಹೀಗೆ ಏನಾದರು ಒಂದು ಸೈಡ್ಸ್ ಇದ್ದರೆ ಊಟ ತಿಂಡಿ ರುಚಿ ದುಪ್ಪಟ್ಟ ಆಗುತ್ತೆ. ಹೀಗಾಗಿ ಎಲ್ಲರ ಮನೆಯಲ್ಲಿ ಒಂದೊಂದು ಪಲ್ಯ, ಗ್ರೇವಿ, ಫ್ರೈ ಏನಾದರು ಒಂದು ಖಾದ್ಯ ವಿಶೇಷವಾಗಿ ಮಾಡಿಯೇ ಮಾಡುತ್ತಾರೆ. ಹೀಗಾಗಿ ನಾವು ಊಟ ತಿಂಡಿಗೆ ಏನಾದರು ಪಲ್ಯ ಇದ್ದರೇನೆ ಆ ಹೊತ್ತಿನ ಊಟ ರುಚಿಯಾಗಿರುತ್ತೆ.
ಈಗ ನಾವು ಊಟ-ತಿಂಡಿಗೆ ಮಾಡಬಹುದಾದ ಅದ್ಭುತವಾದ ರುಚಿ ನೀಡುವ ರಾಜ್ಮಾ ಮಸಾಲೆ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ನೀವು ಕೂಡ ಬೇಳೆ ಕಾಳುಗಳ ಪ್ರಿಯರಾಗಿದ್ದರೆ ರಾಜ್ಮಾ ಮಸಾಲೆ ಸವಿದಿರುತ್ತೀರಿ. ಮದುವೆ ಮನೆಯಲ್ಲಿ, ಶುಭ ಕಾರ್ಯಗಳಲ್ಲಿ ಮಾಡಿರುವುದನ್ನು ಸವಿದಿರಬಹುದು. ಬಹಳ ರುಚಿಕರವಾದ ಈ ರಾಜ್ಮಾ ಮಸಾಲೆ ಆರೋಗ್ಯಕ್ಕೂ ಬಹಳ ಉತ್ತಮ.

ರಾಜ್ಮಾ ಮಸಾಲೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ರಾಜ್ಮಾ ಮಸಾಲೆಯ ಘಮಲು ಮೂಗಿನ ಮೇಲೆ ಬಿದ್ದರೆ ಬಾಯಲ್ಲಿ ನೀರು ಬರುವುದು ಪಕ್ಕ. ರಾಜ್ಮಾ ಮಸಾಲವನ್ನು ನಾವು ಹೋಟೆಲ್ನಲ್ಲಿ ಸವಿದ ರುಚಿಯಂತೆಯೇ ಮನೆಯಲ್ಲೂ ಮಾಡಬಹುದು. ನಾವಿಂದು ಈ ರಾಜ್ಮಾ ಮಸಾಲೆ ಮಾಡುವ ಕುರಿತು ತಿಳಿದುಕೊಳ್ಳೋಣ.
ರಾಜ್ಮಾ ಮಸಾಲೆ ಮನೆಯಲ್ಲೇ ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ರಾಜ್ಮಾ ಮಸಾಲೆ ಮಾಡಲು ಬೇಕಾಗುವ ಪದಾರ್ಥಗಳು
- ರಾಜ್ಮಾ ಕಾಳು
- ಟೊಮೆಟೋ
- ಈರುಳ್ಳಿ
- ಎಣ್ಣೆ
- ಮೊಸರು
- ಅರಶಿಣ
- ಬೆಳ್ಳುಳ್ಳಿ
- ಖಾರದ ಪುಡಿ
- ಗರಂ ಮಸಾಲೆ
- ಜೀರಿಗೆ
- ಹಸಿ ಮೆಣಸು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
ರಾಜ್ಮಾ ಮಸಾಲೆ ಮಾಡುವುದು ಹೇಗೆ?
ಮೊದಲು ರಾಜ್ಮಾ ಕಾಳನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಹಾಕಿ ನೆನೆಸಿಡಬೇಕು. ಮೊದಲು ಒಂದು ಕುಕ್ಕರ್ ಇಟ್ಟು ಅದಕ್ಕೆ 2 ಗ್ಲಾಸ್ ನೀರು ಹಾಕಿ ಪಲಾವ್ ಎಲೆ, ಲವಂಗ, ಚೆಕ್ಕೆ ಹಾಕಬೇಕು. ಅನಂತರ ನೆನೆಸಿಟ್ಟಿರುವ ರಾಜ್ಮಾ ಕಾಳುಗಳ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ ಸುಮಾರು 8 ಸೀಟಿ ಹೊಡೆಯಲು ಬಿಡಬೇಕು.
8 ಸೀಟಿ ಹೊಡೆಯಲು ಬಿಟ್ಟು ಈಗ ಒಂದು ಮಿಕ್ಸಿ ಜಾರ್ಗೆ ಟೊಮೆಟೋ ಹಾಕಿಕೊಂಡಿ ಪೇಸ್ಟ್ ಮಾಡಿಕೊಳ್ಳಿ. ಈಗ ಕುಕ್ಕರ್ ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಬೆಂದಿದೆಯೇ ನೋಡಿಕೊಳ್ಳಿ. ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾಗಲು ಬಿಡಿ. ನಂತರ ಇದಕ್ಕೆ ಜಿರಿಗೆ, ಹಸಿ ಮೆಣಸು, ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಅನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿಣ ಹಾಕಿ ಮಿಕ್ಸ್ ಮಾಡಿಕೊಂಡು ಇದಕ್ಕೆ ಮಿಕ್ಸಿಯಲ್ಲಿ ಪೇಸ್ಟ್ ಮಾಡಿದ್ದ ಟೊಮೆಟೋವನ್ನು ಹಾಕಿಕೊಂಡು ಗರಂ ಮಸಾಲೆ, ಖಾರದ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು 3 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಈಗ ಸ್ವಲ್ಪ ಮೊಸರು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಅನಂತರ ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ ಬೇಯಲು ಬಿಡಿ.
ಇನ್ನೂ ಇದು ರುಚಿಯಾಗಿ ಬರಬೇಕು ಅಂದ್ರೆ ಸ್ವಲ್ಪ ಗೋಡಂಬಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಹಾಕುತ್ತಾರೆ. ಹಾಗೆ ಸ್ವಲ್ಪ ಬೆಣ್ಣೆ ಮಿಕ್ಸ್ ಮಾಡಿದರೆ ಮತ್ತಷ್ಟು ರುಚಿ ಬರುವುದು ಖಚಿತ. ಇದು ಚಪಾತಿ, ಅನ್ನ, ಪರೋಟ, ದೋಸೆ, ಇಡ್ಲಿ ಹೀಗೆ ಯಾವುದೇ ಖಾದ್ಯದ ಜೊತೆಗೂ ಸವಿಯಬಹುದು.



Click it and Unblock the Notifications