Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮಾನಸ ಸರೋವರ ಯಾತ್ರೆಗೆ ಅರ್ಜಿ ಸಲ್ಲಿಸೋದು ಹೇಗೆ? ಎಷ್ಟು ಖರ್ಚಾಗಲಿದೆ?
ಕೋವಿಡ್ ಹಾಗೂ ಚೀನಾ ನಡುವಿನ ಬಿಕ್ಕಟ್ಟಿನ ಸಮಯದಲ್ಲಿ ತಾತ್ಕಾಲಿಕವಾಗಿ ಕೊನೆಯಗೊಂಡಿದ್ದ ಕೈಲಾಸ ಮಾನಸ ಸರೋವರ ಯಾತ್ರೆ ಈ ವರ್ಷ ಜುಲೈನಲ್ಲಿ ಆರಂಭಗೊಂಡಿತ್ತು. 5 ವರ್ಷಗಳ ವಿರಾಮದ ಬಳಿಕ ಮತ್ತೆ ಆರಂಭಗೊಂಡ ಯಾತ್ರೆ ಮುಂದುವರೆಸಲು ಯಾತ್ರಿಗಳು ನೋಂದಾಯಿಸಿಕೊಳ್ಳಲು ಮುಂದಾಗಿದ್ದರು. ಅದಾದ ಬಳಿಕ ಸುಮಾರು 36 ಯಾತ್ರಿಗಳ ಮೊದಲ ತಂಡ 5 ವರ್ಷದ ಬಳಿಕ ಸಿಕ್ಕಿಂ ದಾಟಿ ಚೀನಾ ಗಡಿ ದಾಟಿ ಮುಂದೆ ಸಾಗಿದ್ದರು.
ಈ ಯಾತ್ರೆಗೆ ನಿಗದಿತ ಸಮಯದಲ್ಲಿ ಹಾಗೆ ಪೂರ್ವ ನೋಂದಾಯಿತರಿಗೆ ಮಾತ್ರವೇ ಅವಕಾಶ ನೀಡಲಾಗುತ್ತದೆ. ಈ ವರ್ಷ ಸುಮಾರು 750 ಮಂದಿ ಈ ಯಾತ್ರೆಗೆ ಆಯ್ಕೆಯಾಗಿದ್ದರು. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸ ಪರ್ವತವು ಶಿವನ ವಾಸಸ್ಥಾನವಾಗಿದ್ದು, ಮತ್ತು ಅದನ್ನು ಪ್ರದಕ್ಷಿಣೆ ಹಾಕಿ ಮಾನಸ ಸರೋವರದಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ.

ಕೈಲಾಸ ಪರ್ವತ ಮತ್ತು ಮಾನಸ ಸರೋವರದ ಶಾಂತತೆಗೆ ಹೆಸರಾಗಿದೆ. ಕಟ್ಟುನಿಟ್ಟಾದ ಅರ್ಹತಾ ಮಾನದಂಡಗಳು ಮತ್ತು ಎಚ್ಚರಿಕೆಯ ಸಿದ್ಧತೆಯೊಂದಿಗೆ, ಯಾತ್ರಿಕರು ಶಿವನ ವಾಸಸ್ಥಾನ ಮತ್ತು ಮಾನಸ ಸರೋವರದ ಪ್ರಶಾಂತ, ಪವಿತ್ರ ಧಾಮಕ್ಕೆ ಭೇಟಿ ನೀಡುತ್ತಾರೆ. ಈ ಪರ್ವತವು
ಟಿಬೆಟಿಯನ್ ಸ್ವಾಯತ್ತ ಪ್ರದೇಶದ ದೂರದ ಪಶ್ಚಿಮ ಹಿಮಾಲಯ ಶ್ರೇಣಿಗಳಲ್ಲಿ ನೆಲೆಗೊಂಡಿದೆ.
ಬರೋಬ್ಬರಿ 6,638 ಮೀಟರ್ ಎತ್ತರವಿರುವ ಭವ್ಯವಾದ, ವಜ್ರದ ಆಕಾರ ಹೊಂದಿರುವ ಕೈಲಾಸ ಪರ್ವತ ಆಧ್ಯಾತ್ಮಿಕ ವಿಚಾರವಾಗಿ ಶಾಂತಿಯ ಮೂಲವಾಗಿ ಪರಿಗಣಿಸಲಾಗಿದೆ. ಇದು ಕೇವಲ ಹಿಂದುಗಳಿಗೆ ಮಾತ್ರವಲ್ಲದೆ ಜೈನ, ಬೌದ್ಧ ಹಾಗೂ ಬಾನ್ ಸಂಪ್ರದಾಯಿಗಳಿಗೂ ಪ್ರಮುಖ ಯಾತ್ರಾ ಸ್ಥಳವಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರತಿ ವರ್ಷ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಅಧಿಕೃತ ಕೈಲಾಸ ಮಾನಸಸರೋವರ ಯಾತ್ರೆಯನ್ನು ನಡೆಸಲಿದೆ.
ಕೈಲಾಸ ಮಾನಸ ಸರೋವರ ಯಾತ್ರೆಗೆ ಆಯ್ಕೆ ಹೇಗೆ ಮಾಡುತ್ತಾರೆ?
ಕೈಲಾಸ ಮಾನಸ ಯಾತ್ರೆಯ ಸಂಬಂಧ ಎಲ್ಲರನ್ನೂ ಆಯ್ಕೆ ಮಾಡುವುದಿಲ್ಲ. ಈ ಯಾತ್ರೆಗೆ ತೆರಳಲು ಹಲವು ನಿಯಮಗಳು, ಅರ್ಹತಾ ಮಾನದಂಡಗಳಿವೆ. ಅರ್ಜಿ ಸಲ್ಲಿಸುವ ಭಕ್ತರು ಹಲವು ಷರತ್ತುಗಳಿಗೆ ಬದ್ದರಾಗಿರಬೇಕು. ಹಾಗೆ ಇಲಾಖಾ ನಿಯಮಗಳು ಮತ್ತು ಅರ್ಹತೆಯನ್ನು ಹೊಂದಿರಬೇಕು.
ಭಕ್ತರಿಗೆ ಇರಬೇಕಾದ ಅರ್ಹತೆ ಏನು?
ಭಾರತದ ಪ್ರಜೆಯಾಗಿರಬೇಕು
6 ತಿಂಗಳ ಮಾನ್ಯವಾಗಿರುವ ಭಾರತದ ಪಾಸ್ಪೋರ್ಟ್ ಹೊಂದಿರಬೇಕು
25 ವರ್ಷ ಮೇಲ್ಪಟ್ಟು 70 ವರ್ಷ ವಯಸ್ಸಿನೊಳಗಿರಬೇಕು
ದೈಹಿಕವಾಗಿ ಸದೃಢರಾಗಿರಬೇಕು ಮತ್ತು ವೈದ್ಯಕೀಯ ಪ್ರಮಾಣ ಪತ್ರ ನೀಡಬೇಕು
ಕೈಲಾಸ ಯಾತ್ರೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಸ್ಕ್ಯಾನ್ ಮಾಡಿದ ಪಾಸ್ಪೋರ್ಟ್ ಸೈಜ್ ಫೋಟೋ, ವೈಯಕ್ತಿಕ ಮಾಹಿತಿ ಹೊಂದಿರುವ ದಾಖಲೆಗಳು, ಆಧಾರ್, ಗುರುತಿನ ಚೀಟಿ, ಕುಟುಂಬ ಮಾಹಿತಿಯ ದಾಖಲೆ, ವೈದ್ಯಕೀಯ ಪ್ರಮಾಣ ಪತ್ರ (ಅಗತ್ಯತೆ ಇದ್ದರೆ) ಪಾಸ್ಪೋರ್ಟ್ ಸೇರಿ ಕೆಲವು ದಾಖಲೆಗಳ ನೀಡಬೇಕಾಗುತ್ತದೆ.
ಮಾನಸ ಸರೋವರ ಯಾತ್ರೆಗೆ ಅಂದಾಜು ಎಷ್ಟು ಖರ್ಚಾಗುತ್ತದೆ
ತೀರ್ಥಯಾತ್ರೆಯ ವೆಚ್ಚವು ಆಯ್ಕೆ ಮಾಡಿದ ಮಾರ್ಗವನ್ನು ಅವಲಂಬಿಸಿ ಬದಲಾಗುತ್ತದೆ. ಉತ್ತರಾಖಂಡ್ ಮಾರ್ಗವು 1.74 ರೂಪಾಯಿ ವೆಚ್ಚದಾಯಕವಾಗಿದ್ದರೆ ಸಿಕ್ಕಿಂನ ಮಾರ್ಗವು ಪ್ರತಿ ವ್ಯಕ್ತಿಗೆ 2.83 ಲಕ್ಷ ರೂಪಾಯಿ ಖರ್ಚಾಗಲಿದೆ. ಈ ಖರ್ಚು ವೈಯಕ್ತಿಕ ಕಾರಣದಿಂದಾಗಿ ಹೆಚ್ಚು ಕಡಿಮೆ ಆಗಬಹುದು. ಹಾಗೆ ನೀವು ಯಾವ ಭಾಗದಿಂದ ಪ್ರಯಾಣಿಸುತ್ತೀರಿ ಎನ್ನುವುದು ಸೇರಿದಂತೆ ಹಲವು ಕಾರಣಗಳಿಂದ ಈ ಮೊತ್ತ ಬದಲಾಗುತ್ತದೆ. ಹಾಗೆ ಲಘು ವಿಮಾನ ಸೇವೆಯನ್ನು ಸಹ ಆರಂಭಿಸಿದ್ದನ್ನು ಇಲ್ಲಿ ನೆನೆಯಬಹುದು.



Click it and Unblock the Notifications