Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ನಾಗರ ಹಾವಿಗೂ ಇವೆ ಗೋರಿಗಳು..! ಬನಗಳು ಹುಟ್ಟಿಕೊಂಡಿದ್ದು ಏಕೆ ಗೊತ್ತಾ?
ಹಿಂದುಗಳ ಹಬ್ಬವಾಗಿರುವ ನಾಗರ ಪಂಚಮಿಯಂದು ಶ್ರದ್ಧಾ ಭಕ್ತಿಯಿಂದ ನಾಗರ ಶಿಲೆಗಳಿಗೆ ಪೂಜೆ ಮಾಡಲಾಗುತ್ತದೆ. ನಾಗರ ಬನದಲ್ಲಿ ವಿಶೇಷ ಪೂಜೆ ಹಾಗೂ ಕಲ್ಲಿಗೆ ಹಾಲೆರೆದು ಜನ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ನಾಗರ ಪಂಚಮಿ ಹಿಂದೂಗಳಿಗೆ ಪ್ರಮುಖ ಹಬ್ಬವಾಗಿದೆ. ಈ ನಾಗ ದೇವತೆಯ ಆಚರಣೆಯ, ಪೂಜೆಯ ಮತ್ತು ನೈವೇಧ್ಯಗಳ ಹಿಂದೆ ಕೆಲವೊಂದು ಪುರಾಣ ಕತೆಗಳು ಮತ್ತು ಸತ್ಯಾಂಶಗಳು ಇವೆ.
ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ. ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣನು ಕಾಳಿಯ ಎಂಬ ಹಾವಿನ ಉಪಟಳದಿಂದ ಜನರನ್ನು ರಕ್ಷಿಸಿದ ದಿನವೆಂದು ಈ ದಿನವನ್ನು ಕರೆಯಲಾಗುತ್ತದೆ. ಆದರೆ ನಿಮಗೆ ಗೊತ್ತಾ ನಾಗರಬನಗಳು ಹುಟ್ಟಿಕೊಂಡಿದ್ದು ಹೇಗೆ? ಈ ಹಬ್ಬ ಹುಟ್ಟಿದ್ದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಪ್ರತಿ ಊರಲ್ಲೂ ಒಂದೊಂದು ನಾಗರ ಬನ ಇರುವುದು ನಾವು ನೋಡುತ್ತೇವೆ. ನಿಮಗೆ ಅಚ್ಚರಿಯಾಗಬಹುದು. ಕಾಡುಗಳಲ್ಲಿಯೂ ನಾಗರ ಕಲ್ಲುಗಳು ಪತ್ತೆಯಾಗುತ್ತೆ. ಗ್ರಾಮದಲ್ಲೊಂದು ನಾಗರ ಬನ ಇರುವುದನ್ನು ನಾವು ನೋಡಿರುತ್ತೇವೆ. ಹಾಗಾದ್ರೆ ಈ ನಾಗರ ಬನಗಳು ಹುಟ್ಟಿಕೊಂಡಿದ್ದು ಹೇಗೆ ಎಂಬುದೇ ಅಚ್ಚರಿಯ ಮಾಹಿತಿಯಾಗಿದೆ.
ಪ್ರತಿ ಊರಿನಲ್ಲಿ ನಾಗರ ಹಾವುಗಳನ್ನು ದೇವರ ಸ್ವರೂಪ ಎಂದು ಪೂಜಿಸಲಾಗಿತ್ತು. ಊರಿನಲ್ಲಿ ಯಾವುದಾದರು ನಾಗರ ಹಾವು ಸತ್ತಿದ್ದರೆ ಅಂತಹ ಹಾವುಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದರು. ನಮ್ಮ ಪೂರ್ವಜರು ಈ ರೀತಿ ಸತ್ತ ಹಾವುಗಳಿಗೆ ಕಾರ್ಯ ಮಾಡಲು ಮಾಡಿಟ್ಟ ಸ್ಥಳ ಇದಾಗಿದ್ದವಂತೆ. ಬಳಿಕ ಅದೇ ಜಾಗದಲ್ಲಿ ಕಲ್ಲುಗಳ ಇಟ್ಟು ಪೂಜಿಸಲು ಮುಂದಾದರು, ಬರು ಬರುತ್ತಾ ಈ ಜಾಗಗಳು ನಾಗರ ಬನಗಳಾದವು. ನೀವು ಕಾಡಿನಲ್ಲಿ ಕೆಲವೊಮ್ಮೆ ಒಂದೇ ಒಂದು ನಾಗರ ಕಲ್ಲು ಸಿಕ್ಕುವುದು ಸಮಾನ್ಯ, ಈ ರೀತಿ ಪೂರ್ವಜರು ಹಾವಿನ ಅಂತ್ಯ ಸಂಸ್ಕಾರದ ಬಳಿಕ ಅಲ್ಲಿ ಕಲ್ಲುಗಳನ್ನು ಗುರುತುಗಳಿಗಾಗಿ ಇಡುತ್ತಿದ್ದರು ಎಂದು ಹೇಳಲಾಗಿದೆ.
ಹೀಗಾಗಿ ನಾಗರ ಪಂಚಮಿ ಎಂದು ಈ ದಿನ ಜನರು ಭೂಮಿಯನ್ನು ಅಗೆಯಲು ಹೋಗುವುದಿಲ್ಲ. ಅದರ ಬದಲಿಗೆ ನಾಗರ ಕಲ್ಲು, ಮಣ್ಣಿನ ನಾಗ ಅಥವಾ ಚಿತ್ರ ಪಟದ ಮುಂದೆ ಉರಿದ ಭತ್ತ, ಧೂರ್ವವನ್ನು ಇಟ್ಟು ಪೂಜಿಸಲಾಗುತ್ತದೆ. ಇನ್ನು ಹಿಂದೆ ಇದು ಮಳೆಗಾಲದ ಸಮಯದಲ್ಲಿ ಹೆಚ್ಚಾಗಿ ಹಾವುಗಳು ಹೊರಗೆ ಕಾಣಿಸಿಕೊಳ್ಳುತ್ತಿದ್ದ ಕಾರಣದಿಂದ ಪೂರ್ವಜರು ಭಯಗೊಂಡು ಅವುಗಳಿಗೆ ಪೂಜೆ ಮಾಡಲು ಮುಂದಾದರಂತೆ. ಇದರಿಂದ ನಾಗರ ಪಂಚಮಿ ಆರಂಭಗೊಂಡಿತು ಎಂದು ಹೇಳಲಾಗಿದೆ.
ನಾಗನಿಗೆ ಇದೆ ಗೋರಿಗಳು
ಮನುಷ್ಯರಿಗೆ ಮಾತ್ರವಲ್ಲ ನಾಗರ ಹಾವಿಗೂ ಗೋರಿ ಕಟ್ಟಿರುವುದನ್ನು ನಾವು ನೋಡಬಹುದು. ಮಂಗಳೂರು ಸಮೀಪದ ಮೂಡುಬಿದ್ರೆ ಬಳಿಯ ಬೆಟಗೇರಿ ಎಂಬಲ್ಲಿ ಇಂದಿಗೂ ಹತ್ತಾರು ನಾಗನ ಗೋರಿಗಳು ಕಾಣಸಿಗುತ್ತವೆ. ಇವು ಹತ್ತಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಗೋರಿಗಳಾಗಿವೆ. ನಾಗರ ಹಾವು ಮೃತಪಟ್ಟ ಬಳಿಕ ಅವುಗಳ ಅಂತಿಮ ಸಂಸ್ಕಾರ ನೆರವೇರಿಸಿ ಮಾಡಲಾಗಿರುವ ಗೋರಿಗಳು ಎನ್ನಲಾಗುತ್ತದೆ.
ಇಲ್ಲಿರುವ ನಾಗಬನದಲ್ಲಿ ಇಲ್ಲಿನ ಆದಿವಾಸಿಗಳಿಂದ ಪಾದೆಕಲ್ಲನ್ನು ಹಾಸಿ ನಾಗನನ್ನು ನಂಬಿದ್ದಾರೆ. ಇಲ್ಲಿ ಜೈನರ ನಾಗನ ಗೋರಿ ಇಲ್ಲ.ಮೂಲ ನಾಗನ ಕಲ್ಲಿಗೆ ವೈಷ್ಣವರ ಶೈಲಿಯಲ್ಲಿ ನಾಗನ ಪ್ರತಿಮೆಯನ್ನು ಪ್ರತಿಷ್ಟೆ ಮಾಡಲಾಗಿದೆ. ಈ ರೀತಿಯ ರಚನೆಗಳು ಬೇರೆ ಎಲ್ಲಿಯೂ ನೋಡಲು ಸಾಧ್ಯವಾಗುವುದಿಲ್ಲ. ಇನ್ನು ಹಳ್ಳಿ ಹಳ್ಳಿಗಳಲ್ಲು ನಾಗರ ಬನಗಳು ಕಾಣಸಿಗೋದು ಸಹ ನಮ್ಮ ಪೂರ್ವಜರ ಕೊಡುಗೆಯಾಗಿದೆ.



Click it and Unblock the Notifications

