Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ನಾಗರ ಹಾವಿಗೂ ಇವೆ ಗೋರಿಗಳು..! ಬನಗಳು ಹುಟ್ಟಿಕೊಂಡಿದ್ದು ಏಕೆ ಗೊತ್ತಾ?
ಹಿಂದುಗಳ ಹಬ್ಬವಾಗಿರುವ ನಾಗರ ಪಂಚಮಿಯಂದು ಶ್ರದ್ಧಾ ಭಕ್ತಿಯಿಂದ ನಾಗರ ಶಿಲೆಗಳಿಗೆ ಪೂಜೆ ಮಾಡಲಾಗುತ್ತದೆ. ನಾಗರ ಬನದಲ್ಲಿ ವಿಶೇಷ ಪೂಜೆ ಹಾಗೂ ಕಲ್ಲಿಗೆ ಹಾಲೆರೆದು ಜನ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ನಾಗರ ಪಂಚಮಿ ಹಿಂದೂಗಳಿಗೆ ಪ್ರಮುಖ ಹಬ್ಬವಾಗಿದೆ. ಈ ನಾಗ ದೇವತೆಯ ಆಚರಣೆಯ, ಪೂಜೆಯ ಮತ್ತು ನೈವೇಧ್ಯಗಳ ಹಿಂದೆ ಕೆಲವೊಂದು ಪುರಾಣ ಕತೆಗಳು ಮತ್ತು ಸತ್ಯಾಂಶಗಳು ಇವೆ.
ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ. ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣನು ಕಾಳಿಯ ಎಂಬ ಹಾವಿನ ಉಪಟಳದಿಂದ ಜನರನ್ನು ರಕ್ಷಿಸಿದ ದಿನವೆಂದು ಈ ದಿನವನ್ನು ಕರೆಯಲಾಗುತ್ತದೆ. ಆದರೆ ನಿಮಗೆ ಗೊತ್ತಾ ನಾಗರಬನಗಳು ಹುಟ್ಟಿಕೊಂಡಿದ್ದು ಹೇಗೆ? ಈ ಹಬ್ಬ ಹುಟ್ಟಿದ್ದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಪ್ರತಿ ಊರಲ್ಲೂ ಒಂದೊಂದು ನಾಗರ ಬನ ಇರುವುದು ನಾವು ನೋಡುತ್ತೇವೆ. ನಿಮಗೆ ಅಚ್ಚರಿಯಾಗಬಹುದು. ಕಾಡುಗಳಲ್ಲಿಯೂ ನಾಗರ ಕಲ್ಲುಗಳು ಪತ್ತೆಯಾಗುತ್ತೆ. ಗ್ರಾಮದಲ್ಲೊಂದು ನಾಗರ ಬನ ಇರುವುದನ್ನು ನಾವು ನೋಡಿರುತ್ತೇವೆ. ಹಾಗಾದ್ರೆ ಈ ನಾಗರ ಬನಗಳು ಹುಟ್ಟಿಕೊಂಡಿದ್ದು ಹೇಗೆ ಎಂಬುದೇ ಅಚ್ಚರಿಯ ಮಾಹಿತಿಯಾಗಿದೆ.
ಪ್ರತಿ ಊರಿನಲ್ಲಿ ನಾಗರ ಹಾವುಗಳನ್ನು ದೇವರ ಸ್ವರೂಪ ಎಂದು ಪೂಜಿಸಲಾಗಿತ್ತು. ಊರಿನಲ್ಲಿ ಯಾವುದಾದರು ನಾಗರ ಹಾವು ಸತ್ತಿದ್ದರೆ ಅಂತಹ ಹಾವುಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದರು. ನಮ್ಮ ಪೂರ್ವಜರು ಈ ರೀತಿ ಸತ್ತ ಹಾವುಗಳಿಗೆ ಕಾರ್ಯ ಮಾಡಲು ಮಾಡಿಟ್ಟ ಸ್ಥಳ ಇದಾಗಿದ್ದವಂತೆ. ಬಳಿಕ ಅದೇ ಜಾಗದಲ್ಲಿ ಕಲ್ಲುಗಳ ಇಟ್ಟು ಪೂಜಿಸಲು ಮುಂದಾದರು, ಬರು ಬರುತ್ತಾ ಈ ಜಾಗಗಳು ನಾಗರ ಬನಗಳಾದವು. ನೀವು ಕಾಡಿನಲ್ಲಿ ಕೆಲವೊಮ್ಮೆ ಒಂದೇ ಒಂದು ನಾಗರ ಕಲ್ಲು ಸಿಕ್ಕುವುದು ಸಮಾನ್ಯ, ಈ ರೀತಿ ಪೂರ್ವಜರು ಹಾವಿನ ಅಂತ್ಯ ಸಂಸ್ಕಾರದ ಬಳಿಕ ಅಲ್ಲಿ ಕಲ್ಲುಗಳನ್ನು ಗುರುತುಗಳಿಗಾಗಿ ಇಡುತ್ತಿದ್ದರು ಎಂದು ಹೇಳಲಾಗಿದೆ.
ಹೀಗಾಗಿ ನಾಗರ ಪಂಚಮಿ ಎಂದು ಈ ದಿನ ಜನರು ಭೂಮಿಯನ್ನು ಅಗೆಯಲು ಹೋಗುವುದಿಲ್ಲ. ಅದರ ಬದಲಿಗೆ ನಾಗರ ಕಲ್ಲು, ಮಣ್ಣಿನ ನಾಗ ಅಥವಾ ಚಿತ್ರ ಪಟದ ಮುಂದೆ ಉರಿದ ಭತ್ತ, ಧೂರ್ವವನ್ನು ಇಟ್ಟು ಪೂಜಿಸಲಾಗುತ್ತದೆ. ಇನ್ನು ಹಿಂದೆ ಇದು ಮಳೆಗಾಲದ ಸಮಯದಲ್ಲಿ ಹೆಚ್ಚಾಗಿ ಹಾವುಗಳು ಹೊರಗೆ ಕಾಣಿಸಿಕೊಳ್ಳುತ್ತಿದ್ದ ಕಾರಣದಿಂದ ಪೂರ್ವಜರು ಭಯಗೊಂಡು ಅವುಗಳಿಗೆ ಪೂಜೆ ಮಾಡಲು ಮುಂದಾದರಂತೆ. ಇದರಿಂದ ನಾಗರ ಪಂಚಮಿ ಆರಂಭಗೊಂಡಿತು ಎಂದು ಹೇಳಲಾಗಿದೆ.
ನಾಗನಿಗೆ ಇದೆ ಗೋರಿಗಳು
ಮನುಷ್ಯರಿಗೆ ಮಾತ್ರವಲ್ಲ ನಾಗರ ಹಾವಿಗೂ ಗೋರಿ ಕಟ್ಟಿರುವುದನ್ನು ನಾವು ನೋಡಬಹುದು. ಮಂಗಳೂರು ಸಮೀಪದ ಮೂಡುಬಿದ್ರೆ ಬಳಿಯ ಬೆಟಗೇರಿ ಎಂಬಲ್ಲಿ ಇಂದಿಗೂ ಹತ್ತಾರು ನಾಗನ ಗೋರಿಗಳು ಕಾಣಸಿಗುತ್ತವೆ. ಇವು ಹತ್ತಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಗೋರಿಗಳಾಗಿವೆ. ನಾಗರ ಹಾವು ಮೃತಪಟ್ಟ ಬಳಿಕ ಅವುಗಳ ಅಂತಿಮ ಸಂಸ್ಕಾರ ನೆರವೇರಿಸಿ ಮಾಡಲಾಗಿರುವ ಗೋರಿಗಳು ಎನ್ನಲಾಗುತ್ತದೆ.
ಇಲ್ಲಿರುವ ನಾಗಬನದಲ್ಲಿ ಇಲ್ಲಿನ ಆದಿವಾಸಿಗಳಿಂದ ಪಾದೆಕಲ್ಲನ್ನು ಹಾಸಿ ನಾಗನನ್ನು ನಂಬಿದ್ದಾರೆ. ಇಲ್ಲಿ ಜೈನರ ನಾಗನ ಗೋರಿ ಇಲ್ಲ.ಮೂಲ ನಾಗನ ಕಲ್ಲಿಗೆ ವೈಷ್ಣವರ ಶೈಲಿಯಲ್ಲಿ ನಾಗನ ಪ್ರತಿಮೆಯನ್ನು ಪ್ರತಿಷ್ಟೆ ಮಾಡಲಾಗಿದೆ. ಈ ರೀತಿಯ ರಚನೆಗಳು ಬೇರೆ ಎಲ್ಲಿಯೂ ನೋಡಲು ಸಾಧ್ಯವಾಗುವುದಿಲ್ಲ. ಇನ್ನು ಹಳ್ಳಿ ಹಳ್ಳಿಗಳಲ್ಲು ನಾಗರ ಬನಗಳು ಕಾಣಸಿಗೋದು ಸಹ ನಮ್ಮ ಪೂರ್ವಜರ ಕೊಡುಗೆಯಾಗಿದೆ.



Click it and Unblock the Notifications
