Latest Updates
-
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ!
ನಾಗರ ಹಾವಿಗೂ ಇವೆ ಗೋರಿಗಳು..! ಬನಗಳು ಹುಟ್ಟಿಕೊಂಡಿದ್ದು ಏಕೆ ಗೊತ್ತಾ?
ಹಿಂದುಗಳ ಹಬ್ಬವಾಗಿರುವ ನಾಗರ ಪಂಚಮಿಯಂದು ಶ್ರದ್ಧಾ ಭಕ್ತಿಯಿಂದ ನಾಗರ ಶಿಲೆಗಳಿಗೆ ಪೂಜೆ ಮಾಡಲಾಗುತ್ತದೆ. ನಾಗರ ಬನದಲ್ಲಿ ವಿಶೇಷ ಪೂಜೆ ಹಾಗೂ ಕಲ್ಲಿಗೆ ಹಾಲೆರೆದು ಜನ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ನಾಗರ ಪಂಚಮಿ ಹಿಂದೂಗಳಿಗೆ ಪ್ರಮುಖ ಹಬ್ಬವಾಗಿದೆ. ಈ ನಾಗ ದೇವತೆಯ ಆಚರಣೆಯ, ಪೂಜೆಯ ಮತ್ತು ನೈವೇಧ್ಯಗಳ ಹಿಂದೆ ಕೆಲವೊಂದು ಪುರಾಣ ಕತೆಗಳು ಮತ್ತು ಸತ್ಯಾಂಶಗಳು ಇವೆ.
ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ. ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣನು ಕಾಳಿಯ ಎಂಬ ಹಾವಿನ ಉಪಟಳದಿಂದ ಜನರನ್ನು ರಕ್ಷಿಸಿದ ದಿನವೆಂದು ಈ ದಿನವನ್ನು ಕರೆಯಲಾಗುತ್ತದೆ. ಆದರೆ ನಿಮಗೆ ಗೊತ್ತಾ ನಾಗರಬನಗಳು ಹುಟ್ಟಿಕೊಂಡಿದ್ದು ಹೇಗೆ? ಈ ಹಬ್ಬ ಹುಟ್ಟಿದ್ದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಪ್ರತಿ ಊರಲ್ಲೂ ಒಂದೊಂದು ನಾಗರ ಬನ ಇರುವುದು ನಾವು ನೋಡುತ್ತೇವೆ. ನಿಮಗೆ ಅಚ್ಚರಿಯಾಗಬಹುದು. ಕಾಡುಗಳಲ್ಲಿಯೂ ನಾಗರ ಕಲ್ಲುಗಳು ಪತ್ತೆಯಾಗುತ್ತೆ. ಗ್ರಾಮದಲ್ಲೊಂದು ನಾಗರ ಬನ ಇರುವುದನ್ನು ನಾವು ನೋಡಿರುತ್ತೇವೆ. ಹಾಗಾದ್ರೆ ಈ ನಾಗರ ಬನಗಳು ಹುಟ್ಟಿಕೊಂಡಿದ್ದು ಹೇಗೆ ಎಂಬುದೇ ಅಚ್ಚರಿಯ ಮಾಹಿತಿಯಾಗಿದೆ.
ಪ್ರತಿ ಊರಿನಲ್ಲಿ ನಾಗರ ಹಾವುಗಳನ್ನು ದೇವರ ಸ್ವರೂಪ ಎಂದು ಪೂಜಿಸಲಾಗಿತ್ತು. ಊರಿನಲ್ಲಿ ಯಾವುದಾದರು ನಾಗರ ಹಾವು ಸತ್ತಿದ್ದರೆ ಅಂತಹ ಹಾವುಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದರು. ನಮ್ಮ ಪೂರ್ವಜರು ಈ ರೀತಿ ಸತ್ತ ಹಾವುಗಳಿಗೆ ಕಾರ್ಯ ಮಾಡಲು ಮಾಡಿಟ್ಟ ಸ್ಥಳ ಇದಾಗಿದ್ದವಂತೆ. ಬಳಿಕ ಅದೇ ಜಾಗದಲ್ಲಿ ಕಲ್ಲುಗಳ ಇಟ್ಟು ಪೂಜಿಸಲು ಮುಂದಾದರು, ಬರು ಬರುತ್ತಾ ಈ ಜಾಗಗಳು ನಾಗರ ಬನಗಳಾದವು. ನೀವು ಕಾಡಿನಲ್ಲಿ ಕೆಲವೊಮ್ಮೆ ಒಂದೇ ಒಂದು ನಾಗರ ಕಲ್ಲು ಸಿಕ್ಕುವುದು ಸಮಾನ್ಯ, ಈ ರೀತಿ ಪೂರ್ವಜರು ಹಾವಿನ ಅಂತ್ಯ ಸಂಸ್ಕಾರದ ಬಳಿಕ ಅಲ್ಲಿ ಕಲ್ಲುಗಳನ್ನು ಗುರುತುಗಳಿಗಾಗಿ ಇಡುತ್ತಿದ್ದರು ಎಂದು ಹೇಳಲಾಗಿದೆ.
ಹೀಗಾಗಿ ನಾಗರ ಪಂಚಮಿ ಎಂದು ಈ ದಿನ ಜನರು ಭೂಮಿಯನ್ನು ಅಗೆಯಲು ಹೋಗುವುದಿಲ್ಲ. ಅದರ ಬದಲಿಗೆ ನಾಗರ ಕಲ್ಲು, ಮಣ್ಣಿನ ನಾಗ ಅಥವಾ ಚಿತ್ರ ಪಟದ ಮುಂದೆ ಉರಿದ ಭತ್ತ, ಧೂರ್ವವನ್ನು ಇಟ್ಟು ಪೂಜಿಸಲಾಗುತ್ತದೆ. ಇನ್ನು ಹಿಂದೆ ಇದು ಮಳೆಗಾಲದ ಸಮಯದಲ್ಲಿ ಹೆಚ್ಚಾಗಿ ಹಾವುಗಳು ಹೊರಗೆ ಕಾಣಿಸಿಕೊಳ್ಳುತ್ತಿದ್ದ ಕಾರಣದಿಂದ ಪೂರ್ವಜರು ಭಯಗೊಂಡು ಅವುಗಳಿಗೆ ಪೂಜೆ ಮಾಡಲು ಮುಂದಾದರಂತೆ. ಇದರಿಂದ ನಾಗರ ಪಂಚಮಿ ಆರಂಭಗೊಂಡಿತು ಎಂದು ಹೇಳಲಾಗಿದೆ.
ನಾಗನಿಗೆ ಇದೆ ಗೋರಿಗಳು
ಮನುಷ್ಯರಿಗೆ ಮಾತ್ರವಲ್ಲ ನಾಗರ ಹಾವಿಗೂ ಗೋರಿ ಕಟ್ಟಿರುವುದನ್ನು ನಾವು ನೋಡಬಹುದು. ಮಂಗಳೂರು ಸಮೀಪದ ಮೂಡುಬಿದ್ರೆ ಬಳಿಯ ಬೆಟಗೇರಿ ಎಂಬಲ್ಲಿ ಇಂದಿಗೂ ಹತ್ತಾರು ನಾಗನ ಗೋರಿಗಳು ಕಾಣಸಿಗುತ್ತವೆ. ಇವು ಹತ್ತಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಗೋರಿಗಳಾಗಿವೆ. ನಾಗರ ಹಾವು ಮೃತಪಟ್ಟ ಬಳಿಕ ಅವುಗಳ ಅಂತಿಮ ಸಂಸ್ಕಾರ ನೆರವೇರಿಸಿ ಮಾಡಲಾಗಿರುವ ಗೋರಿಗಳು ಎನ್ನಲಾಗುತ್ತದೆ.
ಇಲ್ಲಿರುವ ನಾಗಬನದಲ್ಲಿ ಇಲ್ಲಿನ ಆದಿವಾಸಿಗಳಿಂದ ಪಾದೆಕಲ್ಲನ್ನು ಹಾಸಿ ನಾಗನನ್ನು ನಂಬಿದ್ದಾರೆ. ಇಲ್ಲಿ ಜೈನರ ನಾಗನ ಗೋರಿ ಇಲ್ಲ.ಮೂಲ ನಾಗನ ಕಲ್ಲಿಗೆ ವೈಷ್ಣವರ ಶೈಲಿಯಲ್ಲಿ ನಾಗನ ಪ್ರತಿಮೆಯನ್ನು ಪ್ರತಿಷ್ಟೆ ಮಾಡಲಾಗಿದೆ. ಈ ರೀತಿಯ ರಚನೆಗಳು ಬೇರೆ ಎಲ್ಲಿಯೂ ನೋಡಲು ಸಾಧ್ಯವಾಗುವುದಿಲ್ಲ. ಇನ್ನು ಹಳ್ಳಿ ಹಳ್ಳಿಗಳಲ್ಲು ನಾಗರ ಬನಗಳು ಕಾಣಸಿಗೋದು ಸಹ ನಮ್ಮ ಪೂರ್ವಜರ ಕೊಡುಗೆಯಾಗಿದೆ.



Click it and Unblock the Notifications
