Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಒಂದು ಎಪಿಸೋಡ್ ನಟನೆಗೆ ಸ್ಮೃತಿ ಇರಾನಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಕೇಂದ್ರ ಸಚಿವೆಯಾಗಿ ಯಶಸ್ವಿ ಆಡಳಿತ ನಡೆಸಿದ ಮಹಿಳಾ ರಾಜಕಾರಣಿ ಸ್ಮೃತಿ ಇರಾನಿ ಈಗ ಮತ್ತೆ ನಟನೆ ಕಡೆಗೆ ಒಲವು ತೋರಿದ್ದಾರೆ. ಮಾಡೆಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಅವರು ಧಾರಾವಾಹಿ ಮೂಲಕ ಮನೆ ಮಾತಾಗಿದ್ದರು. ಈಗ ಮತ್ತೆ ಧಾರಾವಾಹಿಯಲ್ಲಿ ನಟಿಸಲು ಮುಂದಾಗುತ್ತಿದ್ದಾರೆ. ಹಿಂದಿ ಧಾರಾವಾಹಿಗಳಲ್ಲಿ ನಟನೆ ಆರಂಭಿಸಿದ್ದ ಅವರು ಮನೆ ಮಾತಾದರು. ಈಗ ಮತ್ತೆ ಭಾಗ 2ರಲ್ಲಿ ನಟಿಸಲು ಮುಂದಾಗಿದ್ದಾರೆ.
'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಧಾರಾವಾಹಿಯು ಮತ್ತೆ ಆರಂಭವಾಗುತ್ತಿದ್ದು, ಇದರಲ್ಲಿ ನಟಿಸಲು ಸ್ಮೃತಿ ಇರಾನಿ ಒಪ್ಪಿಕೊಂಡಿದ್ದಾರೆ. ಈಗ ಅವರ ಫಸ್ಟ್ ಲುಕ್ ಕೂಡ ಹೊರಬಿದ್ದಿದ್ದು ಭಾರೀ ವೈರಲ್ ಆಗಿದೆ. ಆ ಧಾರವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಸ್ಮೃತಿ ಇರಾನಿ ಅವರು ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರನ್ನು ತುಳಸಿ ಅಂತಲೇ ಹಲವು ಕರೆಯುತ್ತಿದ್ದರು.

ಬಳಿಕ ಅವರು ಚುನಾವಣೆ ಕಣಕ್ಕೆ ಎಂಟ್ರಿಕೊಟ್ಟು ವಿಧಾನ ಸಭೆಗೆ ಆಯ್ಕೆಯಾದ ಪರಿಣಾಮ ಧಾರಾವಾಹಿಯಿಂದ ಹೊರಬಂದರು. ಆದ್ರೆ ಹಲಗವು ವರ್ಷಗಳ ಬಳಿಕ ಈಗ ಅದೇ ಧಾರಾವಾಹಿಯು ಪುನರ್ ಆರಂಭವಾಗುತ್ತಿದೆ. ಹಾಗೆ ತುಳಸಿ ಪಾತ್ರದಾರಿಯಾಗಿ ಮತ್ತೆ ಸ್ಮೃತಿ ಇರಾನಿ ಬಣ್ಣ ಹಚ್ಚಲಿದ್ದಾರೆ.
ಸ್ಮೃತಿ ಇರಾನಿ ವೇತನ ಎಷ್ಟು ಲಕ್ಷ ಗೊತ್ತಾ?
ಪ್ರಸ್ತುತ ಸಕ್ರೀಯ ರಾಜಕಾರಣದಲ್ಲಿದ್ದು ಧಾರಾವಾಹಿಯಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದಾರೆ. ಕಿರುತೆರೆ ಕ್ವೀನ್ ಎಂದು ಹೆಸರಾಗಿರುವ ಏಕ್ತಾ ಕಪೂರ್ ಈ ಧಾರಾವಾಹಿಯ ನಿರ್ಮಾಪಕಿಯಾಗಿದ್ದಾರೆ. ಇನ್ನು 2000ನೇ ಇಸವಿಯಲ್ಲಿ ಆರಂಭಗೊಂಡಿದ್ದ ಈ ಸೀರಿಯಲ್ನಲ್ಲಿ ನಟಿಸಲು ಒಂದು ಎಪಿಸೋಡ್ಗೆ ಸ್ಮೃತಿ ಇರಾನಿಯು ಸುಮಾರು 1,800 ರೂಪಾಯಿ ಸಂಭಾವನೆ ಪಡೆಯುತ್ತದ್ದರಂತೆ.
ಆ ಸೀರಿಯಲ್ನಲ್ಲಿ ನಟಿಯಾಗಿ ಅವರು ಕಾಣಿಸಿಕೊಂಡಿದ್ದರು, ಹಾಗೆ ಆ ಕಾಲಕ್ಕೆ 1,800 ರೂಪಾಯಿ ಕೂಡ ಹೆಚ್ಚಿನ ಸಂಭಾವನೆ ಆಗಿತ್ತು. ಆದರೆ ಈಗ ಹೊಸದಾಗಿ ಆರಂಭವಾಗುತ್ತಿರುವ ಸೀರಿಯಲ್ನ ಪ್ರತಿ ಸಂಚಿಕೆಗೆ ಅವರು ಬರೋಬ್ಬರಿ 14 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಸೀರಿಯಲ್ ಸ್ಟಾರ್ ಪ್ಲಾಸ್ ವಾಹಿನಿಯಲ್ಲಿ ಇದೇ ಜುಲೈ 29 ರಂದು ರಾತ್ರಿ 10:30 ಕ್ಕೆ ಸ್ಟಾರ್ ಪ್ಲಸ್ನಲ್ಲಿ ಪ್ರಸಾರವಾಗುತ್ತಿದೆ. ಈ ಸೀರಿಯಲ್ಗೆ ವರ್ಷಗಳಿಂದಕೂ ಅಭಿಮಾನಿಗಳು ಇದ್ದಾರೆ. ಹಾಗೆ ಹಲವರು ಈ ಸೀರಿಯಲ್ಗಾಗಿ ಕಾಯುತ್ತಿದ್ದಾರೆ. ಅಲ್ಲದೆ ಆ ಕಾಲದಲ್ಲಿ ನಂಬರ್ ಒನ್ ಸೀರಿಯಲ್ ಎಂಬ ಖ್ಯಾತಿಗೆ ಇದು ಕಾರಣವಾಗಿತ್ತು.
ಮಿಸ್ ಇಂಡಿಯಾ ಸ್ಪರ್ಧೆಯಿಂದ ಸೀರಿಯಲ್ ಜರ್ನಿ!
ಸ್ಮೃತಿ ಇರಾನಿ ಆರಂಭದಲ್ಲೇ ಸೀರಿಯಲ್ ನಟಿಯಾಗಿ ಗುರುತಿಸಿಕೊಂಡವರಲ್ಲ. ತಮ್ಮ ಚಿಕ್ಕ ವಯಸ್ಸಿನಲ್ಲಿ ಅವರು ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಲು ಮುಂಬೈಗೆ ಬಂದಿದ್ದರು. ಈ ನಡುವೆ 1998ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದರು. ಇದಾದ ಬಳಿಕ ಅವರು ಪರಿಚಿತರಾದರು. ನಂತರ ಧಾರಾವಾಯಿಯ ಕಡೆ ಒಲವು ಹುಟ್ಟಿತು. ಬಳಿಕ ಏಕ್ತಾ ಕಪೂರ್ ನಿರ್ಮಾಣದ ಈ ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ ಸೀರಿಯಲ್ ಆಡಿಷನ್ಗೆ ಆಗಮಿಸಿದ್ದರು. ಅಲ್ಲಿ ಆಯ್ಕೆಯಾದ ಬಳಿಕ ನಟಿಯಾಗಿ ತುಳಸಿ ಪಾತ್ರದಲ್ಲಿ ಮಿಂಚಿದ್ದರು. ಇದಾದ ಬಳಿಕ ವರ್ಷಗಳ ಕಾಲ ಈ ಸೀರಿಯಲ್ ಜನಮನ್ನಣೆ ಗಳಿಸಿತ್ತು. ಆದ್ರೆ ಚುನಾವಣೆಗೆ ಧುಮುಕಿದ ಅವರು ಜಯಗಳಿಸಿದ ಕಾರಣ ಸೀರಿಯಲ್ ನಟನೆ ಕೈಬಿಟ್ಟಿದ್ದರು. ಇದಾದ ಬಳಿಕ ಅವರು ಸೀರಿಯಲ್ ನಟನೆಗೆ ಮತ್ತೆ ಮರಳಿದ್ದಾರೆ. ದಶಕದ ಬಳಿಕ ಮತ್ತೆ ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.



Click it and Unblock the Notifications