Latest Updates
-
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ!
ಸೈಫ್ ಅಲಿ ಖಾನ್ ಆಸ್ಪತ್ರೆಗೆ ಸೇರಿಸಿದ ಆಟೋ ಡ್ರೈವರ್ ಯಾರು? ಆತ ಎಷ್ಟು ಹಣ ಪಡೆದ ಗೊತ್ತಾ?
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದರೋಡೆಕೋರ ಚಾಕುವಿನಿಂದ ಹಲ್ಲೆ ನಡೆಸಿದ್ದ ಘಟನೆ ನಡೆದು ವಾರ ಕಳೆದಿದೆ. ಹಾಗೆ ಹಲ್ಲೆ ಮಾಡಿದಾತ ಈಗ ಪೊಲೀಸ್ ತನಿಖೆ ಎದುರಿಸುತ್ತಿದ್ದಾನೆ. ಭದ್ರತೆಯ ನಡುವೆ ಆತ ಮನೆಗೆ ನುಗ್ಗಿದ್ದು ಹೇಗೆ? ಹಲ್ಲೆಗೆ ಕಾರಣವೇನು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಹಾಗೆ ಸೈಫ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ನಟ ಸೈಫ್ಗೆ ಹಲವು ಬಾರಿ ಆತ ಚಾಕು ಇರಿದಿದ್ದ ಹಾಗೆ ಶಸ್ತ್ರ ಚಿಕಿತ್ಸೆ ನೆರವೇರಿಸಿ ದೇಹದೊಳಗಿದ್ದ ಚಾಕುವನ್ನು ವೈದ್ಯರು ಹೊರತೆಗೆದಿದ್ದಾರೆ. ಆಧ್ರೆ ಹಲ್ಲೆ ನಡೆದಿದ್ದು ರಾತ್ರಿ ಆಗಿತ್ತು. ಹೀಗಾಗಿ ಸೈಫ್ ಕಾರು ಚಾಲನೆ ಮಾಡದೆ ಆಟೋದಲ್ಲಿ ಆಸ್ಪತ್ರೆಗೆ ಧಾವಿಸಿದ್ದರು, ಖುದ್ದು ಪತ್ನಿ ಕರೀನಾ ಕಪೂರ್ ಆಟೋವನ್ನು ಕೂಗಿ ಕರೆದಿದ್ದರಂತೆ. ಈಗ ಆಟೋ ಡ್ರೈವರ್ ಆ ದಿನ ಏನೆಲ್ಲಾ ನಡೆದಿತ್ತು ಎಂಬುದನ್ನು ವಿವರಿಸಿದ್ದಾನೆ.

ಸ್ಥಳೀಯ ಆಟೋ ಚಾಲಕ ಭಜನ್ ಸಿಂಗ್ ಆ ದಿನ ಸುಮಾರು 2 ಗಂಟೆ ಸುಮಾರಿಗೆ ಏನೆಲ್ಲಾ ನಡೆಯಿತು, ಕರೀನಾ ಕಪೂರ್ ಕರೆದು ಏನು ಹೇಳಿದರು, ಎಷ್ಟು ಹಣ ನೀಡಿದರು ಎಂಬೆಲ್ಲಾ ಮಾಹಿತಿಯನ್ನು ಹೇಳಿದ್ದಾನೆ. ತನಿಖೆಯ ಹಿನ್ನೆಲೆ ಆತ ಕೂಡ ಪೊಲೀಸ್ ಠಾಣೆಯಲ್ಲಿ ತನ್ನ ಹೇಳಿಕೆ ನೀಡಿದ್ದಾನೆ. ಆತ ತನ್ನ ಆಟೋದಲ್ಲಿ ಸೈಫ್ ಅಲಿ ಖಾನ್ ಅವರನ್ನು ಕೂರಿಸಿದ್ದನಂತೆ. ಹಾಗೆ ಸೈಫ್ ಅವರೇ ಲೀಲಾವತಿ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದರಂತೆ.
ನನ್ನನ್ನು ವಿಚಾರಣೆಗಾಗಿ ಬಾಂದ್ರಾ ಪೊಲೀಸ್ ಠಾಣೆಗೆ ಕರೆಯಲಾಯಿತು. ಆ ರಾತ್ರಿ ನಾನು ಹಣದ ಬಗ್ಗೆ ಯೋಚಿಸಲಿಲ್ಲ. ಇಲ್ಲಿಯವರೆಗೆ ಕರೀನಾ ಕಪೂರ್ ಅಥವಾ ಬೇರೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಅವರೊಂದಿಗೆ ಯಾವುದೇ ಸಂಭಾಷಣೆ ನಡೆಸಿಲ್ಲ ಎಂದು ಆಟೋ ಚಾಲಕ ಹೇಳಿಕೊಂಡಿದ್ದಾರೆ.
ಅವರ ಬೆನ್ನಿನ ಭಾಗದಿಂದ ರಕ್ತ ಸುರಿಯುತ್ತಿರುವುದು ನನಗೆ ಕಾಣಿಸಿತು, ಇದು ನನಗೂ ನೋವುಂಟು ಮಾಡಿತ್ತು. ಆರಂಭದಲ್ಲಿ ಸೈಫ್ ಅಲಿ ಖಾನ್ ನನ್ನ ರಿಕ್ಷಾದಲ್ಲಿ ಕುಳಿತಿದ್ದಾರೆಂದು ನನಗೆ ತಿಳಿದಿರಲಿಲ್ಲ. ಯಾರೋ ಗಾಯಗೊಂಡ ವ್ಯಕ್ತಿ ನನ್ನ ಆಟೋ ಹತ್ತಿದ್ದಾರೆ ಅಂತಲೇ ನಾನು ಭಾವಿಸಿದ್ದೆ. ಆದ್ರೆ ಲೀಲಾವತಿ ಆಸ್ಪತ್ರೆಯಲ್ಲಿ ಅವರನ್ನು ಇಳಿಸಿದಾಗ ಅವರ ಮಗ ಹಾಗೂ ಸೈಫ್ ಮುಖ ನನಗೆ ಕಂಡಿತು. ಆಗ ನಟನಿಗೆ ಏನೋ ಆಗಿದೆ ಎಂಬುದನ್ನು ನನಗೆ ತಿಳಿಯಿತು ಎಂದು ಆಟೋ ಚಾಲಕ ಹೇಳಿದ್ದಾರೆ.
ಆಸ್ಪತ್ರೆಯ ಗೇಟ್ ಮುಂದೆ ನಾನು ಆಟೋ ನಿಲ್ಲಿಸಿದಾಗ ಆಂಬ್ಯುಲೆನ್ಸ್ ಶಬ್ದ ಸಿಬ್ಬಂದಿ ಬರುವುದು ಎಲ್ಲಾ ಕಾಣಿಸಿತು. ಅಷ್ಟರಾಗಲೇ ಆಸ್ಪತ್ರೆ ಸಿಬ್ಬಂದಿಗೂ ಇದು ನಟ ಸೈಫ್ ಅಲಿ ಖಾಬ್ ಎಂದು ತಿಳಿದುಬಂದಿತ್ತು. ಹೀಗಾಗಿ ವೇಗವಾಗಿ ಧಾವಿಸಿದರು. ಅವರ ಬೆನ್ನಿನಿಂದ ರಕ್ತ ವಿಪರೀತವಾಗಿ ಬರುತ್ತಿತ್ತು. ಆದ್ರೆ ಆಟೋದಲ್ಲಿದ್ದಾಗ ನನಗೆ ಅವರು ಎಂದು ತಿಳಿದಿರಲಿಲ್ಲ. ಎಷ್ಟು ಬೇಗ ಸಾಧ್ಯವೋ ಅಷ್ಟು ವೇಗವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವುದು ನನ್ನ ಗಮನದಲ್ಲಿತ್ತು. ಆಸ್ಪತ್ರೆ ಗೇಟ್ ಬಳಿ ಬಂದ ನಂತರ ಅವರನ್ನು ನೋಡಲು ಅವಕಾಶ ಸಿಗಲಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ.
ಆದ್ರೆ ಅವರ ಬಳಿ ನಾನು ಯಾವುದೇ ಹಣ ಪಡೆಯಲಿಲ್ಲ. ಹಾಗೆ ಅಲ್ಲಿಂದ ಮರಳಿದೆ. ಇದಾದ ಬಳಿಕ ಯಾರು ಕೂಡ ನನ್ನ ಸಂಪರ್ಕಿಸಿರಲಿಲ್ಲ, ಪೊಲೀಸರ ಮುಂದೆ ನನಗೆ ತಿಳಿದ ವಿಚಾರ ಹೇಳಿದ್ದೇನೆ ಎಂದು ಆಟೋ ಚಾಲಕ ಅಂದು ನಡೆದ ಘಟನೆಯನ್ನು ವಿವರಿಸಿದ್ದಾನೆ.



Click it and Unblock the Notifications