Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಣಪನಿಗೆ ಏಕದಂತ ಹೆಸರು ಏಕೆ ಬಂತು.? ಒಂದು ದಂತ ಮಾತ್ರ ಏಕಿದೆ ಗೊತ್ತಾ?
ಹಿಂದೂ ಧರ್ಮದಲ್ಲಿ ಗಣೇಶನಿಗೆ ಪ್ರಮುಖ ಸ್ಥಾನವಿದೆ. ಆತನಿಗೆ ಮೊದಲ ಪೂಜೆ ಸಲ್ಲಬೇಕು ಎಂಬ ನಿಯಮವೂ ಇದೆ. ಗಣೇಶನ ಹಿಂದೆ ಹತ್ತಾರು ಪುರಾಣ ಪ್ರಸಿದ್ಧ ಕಥೆಗಳಿವ. ಹೀಗಾಗಿ ಗಣಪತಿ ಮಕ್ಕಳಿಗೆ ಅಚ್ಚುಮೆಚ್ಚಿನ ದೇವರು. ಗಣೇಶನಿಗೆ ಏಕೆ ಆನೆ ತಲೆ ಜೋಡಿಸಲಾಯತು ಎಂಬುದಕ್ಕೆ ಒಂದು ಕಥೆ ಇದೆ. ಹಾಗೆ ಆತನಿಗೆ ಹತ್ತಾರು ಬಿರುದುಗಳು, ಹೆಸರುಗಳ ಹಿಂದೆ ಒಂದೊಂದು ಕಥೆ ಇದೆ.
ಗಣೇಶನಿಗೆ ಹಲವು ಹೆಸರ ಸಾಲಿನಲ್ಲಿ ಏಕದಂತ ಸಹ ಒಂದು. ನೀವು ಯಾವುದೇ ಗಣೇಶನ ಮೂರ್ತಿಯಲ್ಲಿ ನೋಡಿರಬಹುದು. ಒಂದೇ ಬಾಲ ಗಣಪನಿಗೆ ಒಂದೂ ಕೋರೆ ಇರುವುದಿಲ್ಲ, ಇಲ್ಲವೆ ಅರ್ಧ ಮುರಿದು ಹೋದ ಕೋರೆ ಇರುತ್ತದೆ. ಹೀಗಾಗಿಯೇ ಆತನಿಗೆ ಏಕದಂತ ಎಂಬ ಹೆಸರು ಸಹ ಬಂದಿದೆ. ಆದ್ರೆ ಒಂದು ಕೋರೆ ಅರ್ಧ ತುಂಡಾಗಿರುವುದು ಏಕೆ?

ಈ ಏಕದಂತ ಹೆಸರಿನ ಹಿಂದೆ ಒಂದು ಕಥೆ ಇದೆ. ಪದ್ಮ ಪುರಾಣದ ಪ್ರಕಾರ, ಒಮ್ಮೆ ಪರಶುರಾಮ ಶಿವನ ಮಹಾನ್ ಭಕ್ತ, ಶಿವನನ್ನು ಭೇಟಿಯಾಗಲು ಕೈಲಾಸಕ್ಕೆ ಬಂದನು. ಆ ಸಮಯದಲ್ಲಿ ಶಿವನು ಧ್ಯಾನ ಮಾಡುತ್ತಿದ್ದನು, ಆದ್ದರಿಂದ ಪರಶುರಾಮನನ್ನು ಒಳಬರುವುದನ್ನು ಗಣೇಶ ತಡೆದನು. ಇದು ಪರಶುರಾಮನ ಕೋಪಕ್ಕೆ ಕಾರಣವಾಯಿತು. ಆತ ತನ್ನ ಕೈನಲ್ಲಿದ್ದ ಮಂತ್ರದಂಡದಿಂದ ಒಂದು ಏಟು ಹೊಡೆದ ಈ ವೇಳೆ ಗಣೇಶನ ಒಂದು ಕೋರೆ ಅರ್ಧಕ್ಕೆ ಮುರಿದು ಬಿಟ್ಟಿತು ಎಂದು ಹೇಳಲಾಗುತ್ತೆ.
ಬಳಿಕ ಪರಶುರಾಮನಿಗೆ ತನ್ನ ತಪ್ಪಿನ ಅರಿವಾಗಿ ಶಿವ-ಪಾರ್ವತಿ ಬಳಿ ಕ್ಷಮೆಯಾಚಿಸಿದನು. ಇನ್ನೆಂದು ಈ ಮಂತ್ರದಂಡವನ್ನು ಪ್ರಯೋಗಿಸುವುದಿಲ್ಲ ಎಂದು ಶಪಥ ಮಾಡಿದ ಎಂದು ಹೇಳಲಾಗಿದೆ. ಹಾಗೆ ಆತನಿಗೆ ಒಂದು ದಂತ ಇರಲು ಮತ್ತೊಂದು ಕಥೆ ಸಹ ಇದೆ. ಅದೇನು ಎಂಬುದನ್ನು ನೋಡಿ.
ಒಮ್ಮೆ ಕೈಲಾಸದಲ್ಲಿದ್ದ ಗಣಪನಿಗೆ ಔತಣಕೂಟದ ಆಹ್ವಾನ ಬಂದಿತ್ತು. ಆತ ದೇವಾನುದೇವತೆಗಳ ಮನೆಗೆ ತೆರಳಿ ಹೊಟ್ಟೆ ತುಂಬ ಲಾಡು ಮತ್ತು ಸಿಹಿ ಕಡಬನ್ನು ಸವಿದನು. ಹೀಗೆ ದಾರಿಯಲ್ಲಿ ನಡೆದು ಬರುವಾಗ ಹಾವೊಂದು ಇಲಿಯನ್ನ ಓಡಿಸಿಕೊಂಡು ಬರುವಾಗ ಗಣೇಶನ ಕಾಲಿನ ಬಳಿಕ ಇಲಿ ಬಂದಾಗ ಆತ ಹೆದರಿ ಎಡವಿ ಬಿದ್ದನಂತೆ, ಈವೇಳೆ ಹೊಟ್ಟೆಯೊಳಗಿದ್ದ ಎಲ್ಲಾ ಲಾಡುಗಳು ಹೊರಬಂದವು. ಈ ವೇಳೆ ಆತ ಇಲಿಯನ್ನು ಹಿಡಿದು ನಿಲ್ಲಿಸಿ ತನ್ನ ವಾಹನ ಮಾಡಿಕೊಂಡ ಹಾಗೆ ಹೊಟ್ಟೆಗೆ ನಾಗರಹಾವನ್ನು ಕಟ್ಟಿಕೊಂಡನು.
ಈ ಪ್ರಸಂಗ ನೋಡಿದ ಚಂದ್ರನ ಮುಗುಳು ನಕ್ಕಿದ್ದನಂತೆ, ಹೀಗಾಗಿ ಕೋಪಗೊಂಡ ಗಣೇಶ ತನ್ನ ಒಂದು ದಂತವನ್ನು ಮುರಿದು ಚಂದ್ರನತ್ತ ಎಸೆದನಂತೆ. ಅಲ್ಲದೆ ಈ ದಿನ ನಿನ್ನನ್ನು ಯಾರು ನೋಡುತ್ತಾರೋ ಅವರು ಕೆಟ್ಟ ದಿನಗಳ ಕಳೆಯುವಂತಾಗಲಿ, ನಿನ್ನನ್ನು ಜೀವನದ ಉದ್ದಕ್ಕೂ ಶಪಿಸುವಂತಾಗಲಿ ಎಂದನಂತೆ. ಹೀಗಾಗಿ ಗಣಪನಲ್ಲಿ ಒಂದೇ ದಂತ ಇರುವುದು ನಾವು ನೋಡಬಹುದು.
ಇನ್ನು ಗಣೇಶನಿಗೆ ಮೋದಕ ಏಕೆ ಇಷ್ಟ ಎಂಬುದಕ್ಕೆ ಕೂಡ ಒಂದು ಕತೆ ಇದೆ. ಇನ್ನೊಂದು ಕಥೆಯ ಪ್ರಕಾರ ದೇವಾನುದೇವತೆಗಳು ಶಿವ ಪಾರ್ವತಿ ಮನೆಗೆ ಭೇಟಿ ನೀಡುತ್ತಾರೆ. ಆಗ ಒಂದು ಮೋದಕವನ್ನು ಪಾರ್ವತಿಗೆ ಕೊಡುತ್ತಾರೆ. ಗಣೇಶ, ಕಾರ್ತಿಕ ಇಬ್ಬರಲ್ಲಿ ಯಾರಿಗೆ ಕೊಡುವುದು ಎಂಬ ಗೊಂದಲ ಪಾರ್ವತಿಗೆ ಮೂಡುತ್ತದೆ. ಈ ವೇಳೆ ಇಬ್ಬರಿಗೂ ಭೂಮಿಯನ್ನು ಮೊದಲು ಸುತ್ತಿ ಬರುವವರಿಗೆ ಈ ಮೋದಕ ಸಿಗುತ್ತದೆ ಎನ್ನುತ್ತಾಳೆ. ಇದಾದ ಬಳಿಕ ಏನಾಯಿತು ಎಂಬುದು ನಿಮಗೂ ಗೊತ್ತಿದೆ. ಶಿವ-ಪಾರ್ವತಿಯನ್ನೇ ಸುತ್ತಿ ಮೋದಕವನ್ನ ಗಣೇಶ ಸವಿದು ಬಿಟ್ಟಿದ್ದ ಎಂಬ ಕಥೆ ಇದೆ.



Click it and Unblock the Notifications











