Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಎಲ್ಲಾ ಕಡೆ ಬರೆಕುಸಿತ, ಪ್ರವಾಹ ಭೀತಿ: ಈ ಸಮಯದಲ್ಲಿ ಪ್ರಯಾಣ ಮಾಡುವುದಾದರೆ ಈ ಮುನ್ನೆಚ್ಚರಿಕೆವಹಿಸಿ
ಈ ವಾರ ಟ್ರಾವೆಲ್ ಮಾಡುವ ಪ್ಲ್ಯಾನ್ನಲ್ಲಿದ್ದೀರಾ? ನಿಮ್ಮ ಪ್ಲ್ಯಾನ್ನ ಸ್ವಲ್ಪ ಹಿಡಿದರೆ ಒಳ್ಳೆಯದು, ಏಕೆಂದರೆ ರಾಜ್ಯದ ಬಹುತೇಕ ಕಡೆ ಬರೆ ಕುಸಿತ ಉಂಟಾಗುತ್ತಿದೆ, ಪ್ರವಾಹದ ಭೀತಿ ಉಂಟಾಗಿದೆ, ಈ ಸಮಯದಲ್ಲಿ ಪ್ರಯಾಣ ಮಾಡಿದರೆ ರಿಸ್ಕ್ (ಅಪಾಯ) ಹೆಚ್ಚು. ಇನ್ನು ಪ್ರಯಾಣ ಮಾಡಿಯೇ ಆಗಬೇಕೆಂದಿದ್ದರೆ ನಿಮ್ಮ ಸುರಕ್ಷತೆಗಾಗಿ ಈ ಪ್ಲ್ಯಾನ್ ಮಾಡಿ ಮುಂದುವರೆಯುವುದು ಒಳ್ಳೆಯದು

ಟ್ರಿಪ್ಗೆ ಮೊದಲೇ ನೀವು ಹೊಗುವ ದಾರಿಯ ಸ್ಥಿತಿಗತಿ ತಿಳಿದುಕೊಳ್ಳಿ
ಬಹುತೇಕ ಕಡೆ ಬರೆ ಕುಸಿತದಿಂದಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ, ಹೀಗಾಗಿ ರೋಡ್ಗಳನ್ನು ಬ್ಲಾಕ್ ಮಾಡಲಾಗಿದೆ, ನೀವು ಹೊರಡುವ ಸಮಯದಲ್ಲಿ ಯಾವುದೇ ಸಮಸ್ಯೆ ಇಲ್ಲದಿರಬಹುದು, ಆದರೆ ಆ ದಾರಿಯಲ್ಲಿ ಬೆಟ್ಟ-ಗುಡ್ಡಗಳಿದ್ದು ವಿಪರೀತ ಮಳೆ ಸುರಿಯುತ್ತಿದ್ದರೆ ಆ ದಾರಿಯಲ್ಲಿ ಹೋಗದಿರುವುದೇ ಈಗೀನ ಪರಿಸ್ಥಿತಿಯಲ್ಲಿ ಸುರಕ್ಷಿತ. ಬರೆ ಕುಸಿತ, ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಬ್ಲಾಕ್ ಆಗುವುದು ಈ ಬಗೆಯ ಸಾಧ್ಯತೆ ಇದೆ.
ಹವಾಮಾನ ವರದಿಯನ್ನು ಗಮನಿಸಿ
ನಿಮಗೆ ಹವಾಮಾನ ವರದಿ ಮುಂಚಿತವಾಗಿಯೇ ದೊರೆಯುವುದು. ಇನ್ನು ಎರಡು ಮೂರು ದಿನ ತುಂಬಾ ಮಳೆ ಇದೆಯೇ ಇಲ್ಲವೇ ಎಂಬುವುದೆಲ್ಲಾ ಹವಾಮಾನ ವರದಿಯಿಂದ ತಿಳಿದು ಬರುವುದು. ಅದರ ಪಕ್ಕ ಪ್ಲ್ಯಾನ್ ಮಾಡಿ.
ನೀವು ಯಾವ ಕಡೆ ಹೋಗುತ್ತಿದ್ದೀರಿ ಆ ಕಡೆಯವರ ಕೆಲವರ ಫೋನ್ ನಂಬರ್ ಪಡೆದುಕೊಳ್ಳಿ
ಅವರು ನಿಮಗೆ ಸೂಕ್ತ ಮಾಹಿತಿ ನೀಡುತ್ತಾರೆ, ಹಾಗಾಗಿ ಈ ಸಮಯದಲ್ಲಿ ಪ್ರಯಾಣ ಮಾಡುವಾಗ ಈ ರೀತಿ ಮಾಹಿತಿ ಪಡೆಯುವುದು ತುಂಬಾ ಒಳ್ಳೆಯದು, ಯಾರೂ ಪರಿಚಯವಿಲ್ಲದಿದ್ದರೆ ಸೋಷಿಯಲ್ ಮೀಡಿಯಾದ ಮೂಲಕ ನೀವು ತಿಳಿಯಬಹುದು.
ಸುರಕ್ಷಿತ ಜಾಗದಲ್ಲಿ ತಂಗಿ
ಈ ಸಮಯದಲ್ಲಿ ಗುಡ್ಡದ ಮೇಲಿನ ರೆಸಾರ್ಟ್ಗಳಲ್ಲಿ ತಂಗುವುದು ಅಷ್ಟೊಂದು ಸುರಕ್ಷಿತವಲ್ಲ. ಹಾಗಾಗಿ ಅಂಥ ಕಡೆ ತಂಗಬೇಡಿ, ನೀವು ಸುರಕ್ಷಿತವಾದ ಜಾಗದಲ್ಲಿ ಮಾತ್ರ ತಂಗಿ, ಗುಡ್ಡ, ಬೆಟ್ಟ, ರಸ್ತೆ ಬಿಡುಕು ಬಿಟ್ಟಿರುವ ಕಡೆಯಲ್ಲಾ ಹೋಗಬೇಡಿ.
ತುರ್ತು ಸಂದರ್ಭಕ್ಕೆ ಸಿದ್ಧರಾಗಿ
ಈ ಸಮಯದಲ್ಲಿ ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ರೋಡ್ ಬ್ಲಾಕ್ ಆದರೆ ಹಿಂದೆ ಹೋಗುವುದಕ್ಕೆ ಆಗುವುದಿಲ್ಲ, ಮುಂದೆ ಹೋಗುವುದಕ್ಕೆ ಸಾಧ್ಯವಿಲ್ಲ ಎಂದಾದರೆ ನೀರು, ತಿನ್ನಲು ವಸ್ತುಗಳು ನಿಮ್ಮ ಬಲಿ ಇರಲಿ.
ಬರೆಕುಸಿತದ ಅಪಾಯವಿರುವಾಗ ಯಾವ ರೀತಿಯ ಮುನ್ನೆಚ್ಚರಿಕೆವಹಿಸಬೇಕು?
ಜಾಗ್ರತೆಯಿಂದ ಇರಿ
ಒಂದು ವೇಳೆ ಅಲ್ಲಿಯ ಜಿಲ್ಲಾಡಿಳಿತ ಆ ಜಾಗ ಬಿಟ್ಟು ತೆರಳಬೇಕು ಎಂದು ಕೋರಿದಾಗ ಹಠಮಾಡಿ ಅಲ್ಲೇ ಇರುವ ಪ್ರಯತ್ನ ಮಾಡಬೇಡಿ.
ಸುರಕ್ಷಿತ ತಾಣದತ್ತ ಹೋಗಬೇಕು.
ಸ್ಥಳೀಯ ನ್ಯೂಸ್ ಗಮನಿಸುತ್ತಲೇ ಇರಿ.
ಬರೆಕುಸಿತದ ಸಮಯದಲ್ಲಿ ಏನು ಮಾಡಬಾರದು?
ಗಾಬರಿಯಾಗಿ ವರ್ತಿಸಬೇಡಿ
ಜಿಲ್ಲಾಡಳಿತದ ಸೂಚನೆ ನಿರ್ಲಕ್ಷ್ಯ ಮಾಡಬೇಡಿ
ಹೆಚ್ಚು ಅಪಾಯ ಇರುವ ಕಡೆ ಡ್ರೈ ಮಾಡಬೇಡಿ
ಸ್ಥಳೀಯ ಸುದ್ದಿಗಳು ಬರುವಾಗ ರೂಮರ್ ಅಂತ ನಿರ್ಲಕ್ಷ್ಯ ಬೇಡ.



Click it and Unblock the Notifications