Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಎಲ್ಲಾ ಕಡೆ ಬರೆಕುಸಿತ, ಪ್ರವಾಹ ಭೀತಿ: ಈ ಸಮಯದಲ್ಲಿ ಪ್ರಯಾಣ ಮಾಡುವುದಾದರೆ ಈ ಮುನ್ನೆಚ್ಚರಿಕೆವಹಿಸಿ
ಈ ವಾರ ಟ್ರಾವೆಲ್ ಮಾಡುವ ಪ್ಲ್ಯಾನ್ನಲ್ಲಿದ್ದೀರಾ? ನಿಮ್ಮ ಪ್ಲ್ಯಾನ್ನ ಸ್ವಲ್ಪ ಹಿಡಿದರೆ ಒಳ್ಳೆಯದು, ಏಕೆಂದರೆ ರಾಜ್ಯದ ಬಹುತೇಕ ಕಡೆ ಬರೆ ಕುಸಿತ ಉಂಟಾಗುತ್ತಿದೆ, ಪ್ರವಾಹದ ಭೀತಿ ಉಂಟಾಗಿದೆ, ಈ ಸಮಯದಲ್ಲಿ ಪ್ರಯಾಣ ಮಾಡಿದರೆ ರಿಸ್ಕ್ (ಅಪಾಯ) ಹೆಚ್ಚು. ಇನ್ನು ಪ್ರಯಾಣ ಮಾಡಿಯೇ ಆಗಬೇಕೆಂದಿದ್ದರೆ ನಿಮ್ಮ ಸುರಕ್ಷತೆಗಾಗಿ ಈ ಪ್ಲ್ಯಾನ್ ಮಾಡಿ ಮುಂದುವರೆಯುವುದು ಒಳ್ಳೆಯದು

ಟ್ರಿಪ್ಗೆ ಮೊದಲೇ ನೀವು ಹೊಗುವ ದಾರಿಯ ಸ್ಥಿತಿಗತಿ ತಿಳಿದುಕೊಳ್ಳಿ
ಬಹುತೇಕ ಕಡೆ ಬರೆ ಕುಸಿತದಿಂದಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ, ಹೀಗಾಗಿ ರೋಡ್ಗಳನ್ನು ಬ್ಲಾಕ್ ಮಾಡಲಾಗಿದೆ, ನೀವು ಹೊರಡುವ ಸಮಯದಲ್ಲಿ ಯಾವುದೇ ಸಮಸ್ಯೆ ಇಲ್ಲದಿರಬಹುದು, ಆದರೆ ಆ ದಾರಿಯಲ್ಲಿ ಬೆಟ್ಟ-ಗುಡ್ಡಗಳಿದ್ದು ವಿಪರೀತ ಮಳೆ ಸುರಿಯುತ್ತಿದ್ದರೆ ಆ ದಾರಿಯಲ್ಲಿ ಹೋಗದಿರುವುದೇ ಈಗೀನ ಪರಿಸ್ಥಿತಿಯಲ್ಲಿ ಸುರಕ್ಷಿತ. ಬರೆ ಕುಸಿತ, ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಬ್ಲಾಕ್ ಆಗುವುದು ಈ ಬಗೆಯ ಸಾಧ್ಯತೆ ಇದೆ.
ಹವಾಮಾನ ವರದಿಯನ್ನು ಗಮನಿಸಿ
ನಿಮಗೆ ಹವಾಮಾನ ವರದಿ ಮುಂಚಿತವಾಗಿಯೇ ದೊರೆಯುವುದು. ಇನ್ನು ಎರಡು ಮೂರು ದಿನ ತುಂಬಾ ಮಳೆ ಇದೆಯೇ ಇಲ್ಲವೇ ಎಂಬುವುದೆಲ್ಲಾ ಹವಾಮಾನ ವರದಿಯಿಂದ ತಿಳಿದು ಬರುವುದು. ಅದರ ಪಕ್ಕ ಪ್ಲ್ಯಾನ್ ಮಾಡಿ.
ನೀವು ಯಾವ ಕಡೆ ಹೋಗುತ್ತಿದ್ದೀರಿ ಆ ಕಡೆಯವರ ಕೆಲವರ ಫೋನ್ ನಂಬರ್ ಪಡೆದುಕೊಳ್ಳಿ
ಅವರು ನಿಮಗೆ ಸೂಕ್ತ ಮಾಹಿತಿ ನೀಡುತ್ತಾರೆ, ಹಾಗಾಗಿ ಈ ಸಮಯದಲ್ಲಿ ಪ್ರಯಾಣ ಮಾಡುವಾಗ ಈ ರೀತಿ ಮಾಹಿತಿ ಪಡೆಯುವುದು ತುಂಬಾ ಒಳ್ಳೆಯದು, ಯಾರೂ ಪರಿಚಯವಿಲ್ಲದಿದ್ದರೆ ಸೋಷಿಯಲ್ ಮೀಡಿಯಾದ ಮೂಲಕ ನೀವು ತಿಳಿಯಬಹುದು.
ಸುರಕ್ಷಿತ ಜಾಗದಲ್ಲಿ ತಂಗಿ
ಈ ಸಮಯದಲ್ಲಿ ಗುಡ್ಡದ ಮೇಲಿನ ರೆಸಾರ್ಟ್ಗಳಲ್ಲಿ ತಂಗುವುದು ಅಷ್ಟೊಂದು ಸುರಕ್ಷಿತವಲ್ಲ. ಹಾಗಾಗಿ ಅಂಥ ಕಡೆ ತಂಗಬೇಡಿ, ನೀವು ಸುರಕ್ಷಿತವಾದ ಜಾಗದಲ್ಲಿ ಮಾತ್ರ ತಂಗಿ, ಗುಡ್ಡ, ಬೆಟ್ಟ, ರಸ್ತೆ ಬಿಡುಕು ಬಿಟ್ಟಿರುವ ಕಡೆಯಲ್ಲಾ ಹೋಗಬೇಡಿ.
ತುರ್ತು ಸಂದರ್ಭಕ್ಕೆ ಸಿದ್ಧರಾಗಿ
ಈ ಸಮಯದಲ್ಲಿ ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ರೋಡ್ ಬ್ಲಾಕ್ ಆದರೆ ಹಿಂದೆ ಹೋಗುವುದಕ್ಕೆ ಆಗುವುದಿಲ್ಲ, ಮುಂದೆ ಹೋಗುವುದಕ್ಕೆ ಸಾಧ್ಯವಿಲ್ಲ ಎಂದಾದರೆ ನೀರು, ತಿನ್ನಲು ವಸ್ತುಗಳು ನಿಮ್ಮ ಬಲಿ ಇರಲಿ.
ಬರೆಕುಸಿತದ ಅಪಾಯವಿರುವಾಗ ಯಾವ ರೀತಿಯ ಮುನ್ನೆಚ್ಚರಿಕೆವಹಿಸಬೇಕು?
ಜಾಗ್ರತೆಯಿಂದ ಇರಿ
ಒಂದು ವೇಳೆ ಅಲ್ಲಿಯ ಜಿಲ್ಲಾಡಿಳಿತ ಆ ಜಾಗ ಬಿಟ್ಟು ತೆರಳಬೇಕು ಎಂದು ಕೋರಿದಾಗ ಹಠಮಾಡಿ ಅಲ್ಲೇ ಇರುವ ಪ್ರಯತ್ನ ಮಾಡಬೇಡಿ.
ಸುರಕ್ಷಿತ ತಾಣದತ್ತ ಹೋಗಬೇಕು.
ಸ್ಥಳೀಯ ನ್ಯೂಸ್ ಗಮನಿಸುತ್ತಲೇ ಇರಿ.
ಬರೆಕುಸಿತದ ಸಮಯದಲ್ಲಿ ಏನು ಮಾಡಬಾರದು?
ಗಾಬರಿಯಾಗಿ ವರ್ತಿಸಬೇಡಿ
ಜಿಲ್ಲಾಡಳಿತದ ಸೂಚನೆ ನಿರ್ಲಕ್ಷ್ಯ ಮಾಡಬೇಡಿ
ಹೆಚ್ಚು ಅಪಾಯ ಇರುವ ಕಡೆ ಡ್ರೈ ಮಾಡಬೇಡಿ
ಸ್ಥಳೀಯ ಸುದ್ದಿಗಳು ಬರುವಾಗ ರೂಮರ್ ಅಂತ ನಿರ್ಲಕ್ಷ್ಯ ಬೇಡ.



Click it and Unblock the Notifications