Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಎಲ್ಲಾ ಕಡೆ ಬರೆಕುಸಿತ, ಪ್ರವಾಹ ಭೀತಿ: ಈ ಸಮಯದಲ್ಲಿ ಪ್ರಯಾಣ ಮಾಡುವುದಾದರೆ ಈ ಮುನ್ನೆಚ್ಚರಿಕೆವಹಿಸಿ
ಈ ವಾರ ಟ್ರಾವೆಲ್ ಮಾಡುವ ಪ್ಲ್ಯಾನ್ನಲ್ಲಿದ್ದೀರಾ? ನಿಮ್ಮ ಪ್ಲ್ಯಾನ್ನ ಸ್ವಲ್ಪ ಹಿಡಿದರೆ ಒಳ್ಳೆಯದು, ಏಕೆಂದರೆ ರಾಜ್ಯದ ಬಹುತೇಕ ಕಡೆ ಬರೆ ಕುಸಿತ ಉಂಟಾಗುತ್ತಿದೆ, ಪ್ರವಾಹದ ಭೀತಿ ಉಂಟಾಗಿದೆ, ಈ ಸಮಯದಲ್ಲಿ ಪ್ರಯಾಣ ಮಾಡಿದರೆ ರಿಸ್ಕ್ (ಅಪಾಯ) ಹೆಚ್ಚು. ಇನ್ನು ಪ್ರಯಾಣ ಮಾಡಿಯೇ ಆಗಬೇಕೆಂದಿದ್ದರೆ ನಿಮ್ಮ ಸುರಕ್ಷತೆಗಾಗಿ ಈ ಪ್ಲ್ಯಾನ್ ಮಾಡಿ ಮುಂದುವರೆಯುವುದು ಒಳ್ಳೆಯದು

ಟ್ರಿಪ್ಗೆ ಮೊದಲೇ ನೀವು ಹೊಗುವ ದಾರಿಯ ಸ್ಥಿತಿಗತಿ ತಿಳಿದುಕೊಳ್ಳಿ
ಬಹುತೇಕ ಕಡೆ ಬರೆ ಕುಸಿತದಿಂದಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ, ಹೀಗಾಗಿ ರೋಡ್ಗಳನ್ನು ಬ್ಲಾಕ್ ಮಾಡಲಾಗಿದೆ, ನೀವು ಹೊರಡುವ ಸಮಯದಲ್ಲಿ ಯಾವುದೇ ಸಮಸ್ಯೆ ಇಲ್ಲದಿರಬಹುದು, ಆದರೆ ಆ ದಾರಿಯಲ್ಲಿ ಬೆಟ್ಟ-ಗುಡ್ಡಗಳಿದ್ದು ವಿಪರೀತ ಮಳೆ ಸುರಿಯುತ್ತಿದ್ದರೆ ಆ ದಾರಿಯಲ್ಲಿ ಹೋಗದಿರುವುದೇ ಈಗೀನ ಪರಿಸ್ಥಿತಿಯಲ್ಲಿ ಸುರಕ್ಷಿತ. ಬರೆ ಕುಸಿತ, ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಬ್ಲಾಕ್ ಆಗುವುದು ಈ ಬಗೆಯ ಸಾಧ್ಯತೆ ಇದೆ.
ಹವಾಮಾನ ವರದಿಯನ್ನು ಗಮನಿಸಿ
ನಿಮಗೆ ಹವಾಮಾನ ವರದಿ ಮುಂಚಿತವಾಗಿಯೇ ದೊರೆಯುವುದು. ಇನ್ನು ಎರಡು ಮೂರು ದಿನ ತುಂಬಾ ಮಳೆ ಇದೆಯೇ ಇಲ್ಲವೇ ಎಂಬುವುದೆಲ್ಲಾ ಹವಾಮಾನ ವರದಿಯಿಂದ ತಿಳಿದು ಬರುವುದು. ಅದರ ಪಕ್ಕ ಪ್ಲ್ಯಾನ್ ಮಾಡಿ.
ನೀವು ಯಾವ ಕಡೆ ಹೋಗುತ್ತಿದ್ದೀರಿ ಆ ಕಡೆಯವರ ಕೆಲವರ ಫೋನ್ ನಂಬರ್ ಪಡೆದುಕೊಳ್ಳಿ
ಅವರು ನಿಮಗೆ ಸೂಕ್ತ ಮಾಹಿತಿ ನೀಡುತ್ತಾರೆ, ಹಾಗಾಗಿ ಈ ಸಮಯದಲ್ಲಿ ಪ್ರಯಾಣ ಮಾಡುವಾಗ ಈ ರೀತಿ ಮಾಹಿತಿ ಪಡೆಯುವುದು ತುಂಬಾ ಒಳ್ಳೆಯದು, ಯಾರೂ ಪರಿಚಯವಿಲ್ಲದಿದ್ದರೆ ಸೋಷಿಯಲ್ ಮೀಡಿಯಾದ ಮೂಲಕ ನೀವು ತಿಳಿಯಬಹುದು.
ಸುರಕ್ಷಿತ ಜಾಗದಲ್ಲಿ ತಂಗಿ
ಈ ಸಮಯದಲ್ಲಿ ಗುಡ್ಡದ ಮೇಲಿನ ರೆಸಾರ್ಟ್ಗಳಲ್ಲಿ ತಂಗುವುದು ಅಷ್ಟೊಂದು ಸುರಕ್ಷಿತವಲ್ಲ. ಹಾಗಾಗಿ ಅಂಥ ಕಡೆ ತಂಗಬೇಡಿ, ನೀವು ಸುರಕ್ಷಿತವಾದ ಜಾಗದಲ್ಲಿ ಮಾತ್ರ ತಂಗಿ, ಗುಡ್ಡ, ಬೆಟ್ಟ, ರಸ್ತೆ ಬಿಡುಕು ಬಿಟ್ಟಿರುವ ಕಡೆಯಲ್ಲಾ ಹೋಗಬೇಡಿ.
ತುರ್ತು ಸಂದರ್ಭಕ್ಕೆ ಸಿದ್ಧರಾಗಿ
ಈ ಸಮಯದಲ್ಲಿ ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ರೋಡ್ ಬ್ಲಾಕ್ ಆದರೆ ಹಿಂದೆ ಹೋಗುವುದಕ್ಕೆ ಆಗುವುದಿಲ್ಲ, ಮುಂದೆ ಹೋಗುವುದಕ್ಕೆ ಸಾಧ್ಯವಿಲ್ಲ ಎಂದಾದರೆ ನೀರು, ತಿನ್ನಲು ವಸ್ತುಗಳು ನಿಮ್ಮ ಬಲಿ ಇರಲಿ.
ಬರೆಕುಸಿತದ ಅಪಾಯವಿರುವಾಗ ಯಾವ ರೀತಿಯ ಮುನ್ನೆಚ್ಚರಿಕೆವಹಿಸಬೇಕು?
ಜಾಗ್ರತೆಯಿಂದ ಇರಿ
ಒಂದು ವೇಳೆ ಅಲ್ಲಿಯ ಜಿಲ್ಲಾಡಿಳಿತ ಆ ಜಾಗ ಬಿಟ್ಟು ತೆರಳಬೇಕು ಎಂದು ಕೋರಿದಾಗ ಹಠಮಾಡಿ ಅಲ್ಲೇ ಇರುವ ಪ್ರಯತ್ನ ಮಾಡಬೇಡಿ.
ಸುರಕ್ಷಿತ ತಾಣದತ್ತ ಹೋಗಬೇಕು.
ಸ್ಥಳೀಯ ನ್ಯೂಸ್ ಗಮನಿಸುತ್ತಲೇ ಇರಿ.
ಬರೆಕುಸಿತದ ಸಮಯದಲ್ಲಿ ಏನು ಮಾಡಬಾರದು?
ಗಾಬರಿಯಾಗಿ ವರ್ತಿಸಬೇಡಿ
ಜಿಲ್ಲಾಡಳಿತದ ಸೂಚನೆ ನಿರ್ಲಕ್ಷ್ಯ ಮಾಡಬೇಡಿ
ಹೆಚ್ಚು ಅಪಾಯ ಇರುವ ಕಡೆ ಡ್ರೈ ಮಾಡಬೇಡಿ
ಸ್ಥಳೀಯ ಸುದ್ದಿಗಳು ಬರುವಾಗ ರೂಮರ್ ಅಂತ ನಿರ್ಲಕ್ಷ್ಯ ಬೇಡ.



Click it and Unblock the Notifications
