Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕರಾವಳಿ ಭಾಗದಲ್ಲಿ ಹೆಚ್ಚಾಯ್ತು ಬಿಸಿಗಾಳಿ ಅಬ್ಬರ..! ಹೀಗೆ ಆಗೋದ್ಯಾಕೆ ಗೊತ್ತಾ?
ಫೆಬ್ರವರಿಯಲ್ಲಿ ಮಂಜು ಕವಿದು ಚಳಿಯ ವಾತಾವರಣ ಇರಬೇಕಿತ್ತು. ಆದ್ರೆ ರಾಜ್ಯದಲ್ಲಿ ಹಾಗೆ ದೇಶದ ಹಲವು ಭಾಗದಲ್ಲಿ ಚಳಿಯ ವಾತಾವರಣದ ಬದಲಿಗೆ ಬೇಸಿಗೆಯ ಬಿಸಿಲು ಸುಡುತ್ತಿದೆ. ಹಾಗೆ ಹಲವು ಕಡೆ ಹೀಟ್ ವೇವ್ (ಬಿಸಿಗಾಳಿ) ಜನರಿಗೆ ಸಂಕಷ್ಟ ತರುತ್ತಿದೆ. ಅದರಲ್ಲೂ ಮಹಾನಗರಗಳಲ್ಲಿ ಈ ತಾಪಮಾನ ಏರಿಕೆಯಿಂದ ಜನರು ಹೊರಬರಲಾಗದ ಸ್ಥಿತಿ ಇದೆ. ಈಗಿನ್ನು ಚಳಿಗಾಲ ಮುಗಿಯುತ್ತಿದ್ದಂತೆ ಇಷ್ಟೊಂದು ಪ್ರಮಾಣದ ಬಿಸಿಲು ಕಾಡುತ್ತಿರುವುದು ಮುಂದೆ ತಾಪಮಾನ ಗರಿಷ್ಠ ಮಟ್ಟ ತಲುಪುವ ಭೀತಿ ಎದುರಾಗುವಂತೆ ಮಾಡಿದೆ.
ಸಾಮಾನ್ಯವಾಗಿ ಫೆಬ್ರವರಿಯನ್ನು ಚಳಿಗಾಲದ ಸಮಯ ಎಂದೇ ಪರಿಗಣಿಸಲಾಗಿದೆ. ಮಾರ್ಚ್ ಅಂತ್ಯದವರೆಗೂ ಚಳಿ ಕಾಡುತ್ತಿರಬೇಕಿತ್ತು, ಹಾಗೆ ಸೂರ್ಯನ ಕಿರಣಗಳು ಪ್ರಖಾಶಮಾನವಾಗಿ ಬೀಳಲು ಈಗಷ್ಟೇ ಆರಂಭವಾಗುತ್ತಿರುತ್ತದೆ. ಆದ್ರೆ ಇದರ ಉರಿ ಇನ್ನು ಜನರಿಗೆ ತಟ್ಟಿರುವುದಿಲ್ಲ. ಆದ್ರೆ ಈ ವರ್ಷ ಫೆಬ್ರವರಿಯಲ್ಲಿಯೇ ತಾಪಮಾನ ಏರಿಕೆ ನಿದ್ದೆ ಗೆಡಿಸಿದೆ.

ಮುಂಬೈ, ಬೆಂಗಳೂರು, ಹೈದರಾಬಾದ್ ನಂತರ ದೊಡ್ಡ ನಗರದಲ್ಲಿ ತಾಪಮಾನ ಏರಿಕೆ ನೋಡುತ್ತಿದ್ದೇವೆ. ಹಾಗೆ ಕರಾವಳಿ ಪ್ರದೇಶದಲ್ಲೂ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ. ದಕ್ಷಣ ಕನ್ನಡ, ಉಡುಪಿಯಲ್ಲಿ ಹೀಟ್ವೇವ್ ಎಚ್ಚರಿಕೆ ನೀಡಿ ಎಲ್ಲೋ ಅಲರ್ಟ್ ಘೋಷಿಸಿರುವುದು ಇಲ್ಲಿ ಗಮನಿಸಬಹುದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಹಾಗೆ ಅಸಹಜ ಬೆಳವಣಿಗೆಯ ಕಾರಣದಿಂದ ಕಳವಳ ಹುಟ್ಟುಹಾಕಿದೆ.
ಮುಂಬೈನಲ್ಲಿ ದಿಢೀರ್ ತಾಪಮಾನ ಏರಿಕೆಗೆ ಜನ ಜೀವನದ ಮೇಲೆ ಪರಿಣಾಮ ಬೀರುವುದು ನೋಡಬಹುದು. ಸಾಮಾನ್ಯವಾಗಿ ಅಲ್ಲಿ ಈಗ 38 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಈ ರೀತಿಯ ತಾಪಮಾನ ಏರಿಕೆಯ ಹಿಂದೆ ಒಂದು ಕಾರಣ ಕೂಡ ಇದೆ. ಅದೇ ಬಿಸಿ ಅಲೆ.
ಮುಂಬೈ ಮಹಾನಗರಕ್ಕೆ ಬಿಸಿ ಅಲೆಯ ತೀವ್ರತೆ ಹೆಚ್ಚಾಗಿದೆ. ಶಾಖದ ಅಲೆಯು ಅಸಹಜವಾಗಿ ಬಿಸಿಯಾದ ಹವಾಮಾನದ ದೀರ್ಘಾವಧಿಯಾಗಿದ್ದು, ಸಾಮಾನ್ಯವಾಗಿ ಗರಿಷ್ಠ ತಾಪಮಾನವು 37°C ದಾಟಿದಾಗ ಮತ್ತು ಆ ಪ್ರದೇಶದ ಸರಾಸರಿ ತಾಪಮಾನಕ್ಕಿಂತ 4 ಡಿಗ್ರಿ ಹೆಚ್ಚಳವಾದಾಗ ಇಂತಹ ಹೀಟ್ ವೇವ್ ಅಥವಾ ಬಿಸಿ ಶಾಖದ ಅಲೆಯನ್ನು ನಾವು ನೋಡಬಹುದು.
ಕರಾವಳಿ ನಗರಗಳು ಹೆಚ್ಚಿನ ತಾಪಮಾನ ಎದುರಿಸುವುದೇಕೆ?
ಸಮುದ್ರದ ಗಾಳಿಯು ನಗರದಲ್ಲಿ ತಂಪನೆಯ ಮೇಲ್ಮೈ ಸೃಷ್ಟಿಗೆ ಪ್ರಮುಖ ಕಾರಣವಾಗಿರುತ್ತದೆ. ಆದರೆ ಪೂರ್ವದ ಭಾಗದಿಂದ ಬಿಸಿ ಗಾಳಿ ಬೀಸುವುದು, ಹಾಗೆ ಗಾಳಿಯ ಮಾರುತವು ಆಕಾಶದ ಮೇಲೆ ಹೋದಾಗ ಮತ್ತಷ್ಟು ಬಿಸಿಯಾದಾಗ ಅಲ್ಲಿ ಆಂಟಿಸೈಕ್ಲೋನ್ ಮಟ್ಟ ಸಂಯೋಜನೆಯಾಗಿ ತಾಪಮಾನ ಹೆಚ್ಚಳವಾಗುತ್ತದೆ. ಈ ಬಿಸಿಗಾಳಿ ನಗರದ ಕಡೆಗೆ ಬೀಸುತ್ತದೆ. ಮೊದಲೇ ತಾಪಮಾನ ಏರಿರುವುದು ಹಾಗೆ ಈ ಬಿಸಿಗಾಳಿಯು ಸೇರಿ ಶಾಖದ ಅಲೆಗಳು ಜನರ ನಿದ್ದೆಗೆಡಿಸುತ್ತವೆ.
ಭಾರತ ಮಧ್ಯಪ್ರಾಚ್ಯ ಮತ್ತು ಮೆಡಿಟರೇನಿಯನ್ ಪ್ರದೇಶದಿಂದ ಬೀಸುತ್ತಿರುವ ಗಾಳಿಯನ್ನು ಪಡೆಯುತ್ತಿದೆ, ಇವು ಹೆಚ್ಚಾಗಿ ಮರುಭೂಮಿ ಪ್ರದೇಶಗಳಾಗಿವೆ, ಈ ಗಾಳಿಯನ್ನು ಮತ್ತಷ್ಟು ಬಿಸಿಯಾಗಿ ಮಾಡುತ್ತದೆ. ಇದರಿಂದ ಬಿಸಿಗಾಳಿಯ ಅನುಭವ ಕರಾವಳಿ ಭಾಗದಲ್ಲಿ ಹೆಚ್ಚಾಗಿರುತ್ತದೆ.
ಮುಂದಿನ 4-5 ದಿನಗಳಲ್ಲಿ ಕೊಂಕಣದ ಒಳಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಕ್ರಮೇಣ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಬಹುದು. ಅಂದರೆ ಮುಂಬೈ, ಗೋವಾ, ಕರ್ನಾಟಕ ಭಾಗದಲ್ಲಿ ತಾಪಮಾನ ಏರಿಕೆಯಾಗಬಹುದು ಎಂದು ಐಎಂಡಿ ತಿಳಿಸಿದೆ. ಹಾಗೆ ಜನರಿಗೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಹೇಳಲಾಗಿದೆ. ಬಿಸಿಲಿನ ಧಗೆ ಹೆಚ್ಚಾಗಿರುವ ಸಮಯದಲ್ಲಿ ಮನೆಯಿಂದ ಹೊರಬಾರದಂತೆ. ಹಾಗೆ ಬಿಸಿಲಿನಲ್ಲಿ ಮಾಡುವ ಕೆಲಸವನ್ನು ಮುಂದೂಡುವುದು ಉತ್ತಮವಾಗಿದೆ. ಹಾಗೆ ಹೆಚ್ಚು ನೀರು ಕುಡಿಯುವುದು ದೇಹಕ್ಕೆ ಬಿಸಿಗಾಳಿಯ ಪರಿಣಾಮ ತಡೆಯಲು ಸಹಕಾರಿಯಾಗಲಿದೆ.



Click it and Unblock the Notifications











