Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುಣ್ಯ ಕ್ಷೇತ್ರದಲ್ಲಿ ಪಾಪದ ಕೆಲಸ..! ಕುಂಭ ಮೇಳದಲ್ಲಿ ಪೋಷಕರ ಬಿಟ್ಟು ಹೋದ ಮಗ-ಸೊಸೆ!!
ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಅವರನ್ನು ಬೆಳೆಸುವ ದಾರಿಯಲ್ಲಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದರಿರುತ್ತಾರೆ. ಮಕ್ಕಳು ಬಯಸಿದ್ದಂತಹ ಜೀವನ ಅವರಿಗೆ ಕೈ ಸೇರಲು ಪೋಷಕರು ನಿದ್ರೆ ಬಿಟ್ಟು ಕೆಲಸ ಮಾಡಿ ಅವರನ್ನು ಸಾಕಿರುತ್ತಾರೆ. ತಮ್ಮ ಕಷ್ಟ ಮಕ್ಕಳಿಗೆ ಬರಬಾರದು ಅನ್ನೋದು ಎಲ್ಲಾ ಪೋಷಕರ ಮನದಾಳದ ಮಾತಾಗಿರುತ್ತೆ. ಆದ್ರೆ ಕೆಲವೊಂದು ಮಕ್ಕಳ ಕಥೆ ಕೇಳಿದರೆ ಪೋಷಕರು ಇಷ್ಟೇಲ್ಲಾ ಕಷ್ಟಪಟ್ಟು ಮಕ್ಕಳನ್ನು ಸಾಕಿದ್ದು ಏಕೆ ಎನ್ನುವಂತಹ ಪ್ರಶ್ನೆ ನಿಮ್ಮ ಮುಂದೆ ಬರುತ್ತೆ.
ಪೋಷಕರು ತಮ್ಮ ಮಕ್ಕಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ, ಕೊರತೆಗಳು ಬಾರದಂತೆ ಸಾಕುತ್ತಾರೆ. ಆದ್ರೆ ಇತ್ತೀಚಿಗೆ ಮಕ್ಕಳು ದೊಡ್ಡವರಾದ ಬಳಿಕ ಪೋಷಕರನ್ನು ವೃದ್ಧಾಶ್ರಮದಲ್ಲಿ ಬಿಡುವುದು, ಇಲ್ಲವೆ ಬೇರೆಯವರ ಆಶ್ರಯದಲ್ಲಿ ಬಿಟ್ಟು ಬರುವುದು ನೋಡುತ್ತಿದ್ದೇವೆ. ಮತ್ತೊಂದಿಷ್ಟು ಪ್ರಕರಣದಲ್ಲಿ ಮಕ್ಕಳು ತಂದೆ ತಾಯಿಯನ್ನು ಮನೆಯಿಂದಲೇ ಹೊರಹಾಕುವ ಘೋರ ಘಟನೆಗಳನ್ನು ಕೂಡ ನಾವು ನೋಡುತ್ತಿರುತ್ತೇವೆ.

ಹಾಗೆ ಇಲ್ಲೊಬ್ಬ ಮಗ ಕೂಡ ತಂದೆ ತಾಯಿಗೆ ಇದೇ ರೀತಿ ದ್ರೋಹ ಬಗೆದಿದ್ದಾರೆ. ಆದ್ರೆ ಈ ಪಾಪ ಕಾರ್ಯಕ್ಕೆ ಆತ ಬಳಸಿಕೊಂಡಿದ್ದು ಮಾತ್ರ ಪುಣ್ಯ ಕ್ಷೇತ್ರವನ್ನು. ಆತ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ತನ್ನ ಪೋಷಕರನ್ನು ಬಿಟ್ಟು ಮನೆಗೆ ವಾಪಾಸಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಇದನ್ನು ತಿಳಿಯದ ತಂದೆ ತಾಯಿ ಕಣ್ಣೀರು ಹಾಕಿದ್ದಾರೆ.
ಪುತ್ರ ಹಾಗೂ ಸೊಸೆಯ ಜೊತೆಗೆ ಮಹಾ ಕುಂಭ ವೀಕ್ಷಿಸಲು ಬಂದಿದ್ದ ಪೋಷಕರು ಈಗ ಮನೆಯ ದಾರಿ ಸಿಗದೆ, ಪುತ್ರನ ಕಾರ್ಯ ಕಂಡು ಕಣ್ಣೀರಿಟ್ಟಿದ್ದಾರೆ. ಆತ ಜನಸ್ತೋಮದ ನಡುವೆ ಇಬ್ಬರನ್ನು ಕೂರಿಸಿ ಮನೆಗೆ ವಾಪಾಸಾಗಿದ್ದಾನೆ. ಮಗನ ಬರುವಿಕೆಯನ್ನು ಕಾಯುತ್ತಾ ಕುಳಿತಿದ್ದ ತಂದೆ ತಾಯಿ ಕಣ್ಣೀರಿಟ್ಟಿದ್ದಾರೆ.
ಪ್ರಯಾಗ್ರಾಜ್ನಲ್ಲಿ ತಂದೆ ತಾಯಿ ಇಬ್ಬರು ದಿಕ್ಕು ಕಾಣದೆ ಕಣ್ಣೀರು ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಂತಹ ಮಗನಿಗೆ ಜನ್ಮ ಕೊಟ್ಟ ತಂದೆ ತಾಯಿ ನಡುಬೀದಿಗೆ ಬಂದಿರುವುದನ್ನು ಕಂಡ ಜನರು ಅವರ ಸಹಾಯಕ್ಕೆ ಮುಂದಾಗಿರುವುದು ವಿಡಿಯೋದಲ್ಲಿ ನಾವು ನೋಡಬಹುದಾಗಿದೆ.
ವಿಡಿಯೋದಲ್ಲಿ ಪೋಷಕರಿಬ್ಬರು ಕೊರೆಯುವ ಚಳಿಯಲ್ಲಿ ಕಂಬಳಿಯ ಹೊದ್ದು ಅಳುತ್ತಿದ್ದಾರೆ. ಏನೆಲ್ಲಾ ನಡೆಯಿತು ಅನ್ನೋದನ್ನು ಕಣ್ಣೀರ ನಡುವೆ ಹೇಳುತ್ತಿದ್ದಾರೆ. ನನಗೆ ಮೂವರು ಗಂಡು ಮಕ್ಕಳಿದ್ದಾರೆ. ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಮೂವರು ಸೊಸೆಯಂದಿರು, ಆ ಮೂವರು ದುಷ್ಟರು ಎಂದು ಆತ ಹೇಳುತ್ತಿದ್ದಾನೆ. ಹಾಗೆ ಸಹಾಯಕ್ಕೆ ಬಂದಾತ ನಿಮ್ಮ ಮನೆಯ ವಿಳಾಸ ಹೇಳುವಂತೆ ಕೇಳುತ್ತಿದ್ದಾನೆ. ಇಲ್ಲವೇ ಬೆಳಗ್ಗೆ ಆಶ್ರಮಕ್ಕೆ ಬಿಟ್ಟು ಬರುತ್ತೇವೆ, ಚಿಂತಿಸಬೇಡಿ ಎಂದು ಹೇಳುತ್ತಿರುವುದು ನೋಡಬಹುದು.
ಈ ವಿಡಿಯೊವನ್ನು @shantanu_media ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೃದ್ಧ ಪೋಷಕರನ್ನು ಕುಂಭದಲ್ಲಿ ತೀವ್ರ ಚಳಿಯಲ್ಲಿ ಬಿಟ್ಟು ಹೋದೆ' ಎಂಬ ಶೀರ್ಷಿಕೆ ಬರೆಯಲಾಗಿದೆ. ಎರಡು ದಿನಗಳ ಹಿಂದೆ ಹಂಚಿಕೊಂಡಿದ್ದ ಈ ವಿಡಿಯೋಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಜನರು ತಪ್ಪ ಪಾಪಗಳನ್ನು ತೊಳೆದುಕೊಳ್ಳಲು ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲು ಬರುತ್ತಾರೆ. ಆದ್ರೆ ಈ ಪುತ್ರ ಪಾಪ ಕಾರ್ಯಗಳ ಮಾಡಲೆಂದೇ ಪುಣ್ಯ ಕ್ಷೇತ್ರಕ್ಕೆ ಬಂದಿದ್ದ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಜಗತ್ತಿನಲ್ಲಿ ಎಂತಹ ಗಂಡು ಮಕ್ಕಳಿದ್ದಾರೆ, ಯಾಕೆ ಇಂತಹ ವೃದ್ಧ ಪೋಷಕರಿಗೆ ತೊಂದರೆ ಕೊಡುತ್ತಾರೆ. ಅವನು ಮಗನಲ್ಲ ಆದರೆ ಕೆಟ್ಟ ಮಗ, ನೀನು ಒಳ್ಳೆಯ ಕೆಲಸ ಮಾಡಿದ್ದೀರಿ. ಮಕ್ಕಳು ತಮ್ಮ ಹೆತ್ತವರ ಬಗ್ಗೆ ಇಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸಬಾರದು ಎಂದು ಹೇಳಿದ್ದಾರೆ. ಹಾಗೆ ಇಂತಹ ಮಕ್ಕಳು ಯಾವ ತಂದೆ ತಾಯಿಗೂ ಜನಿಸಬಾರದು ಎಂದು ಮತ್ತೊಬ್ಬರು ಹೇಳಿದ್ದಾರೆ.



Click it and Unblock the Notifications