Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ವಿನೇಶ್ ಫೋಗಟ್ಗೆ 4 ಕೋಟಿ ಹಣ ಸಮ್ಮಾನವಾಗಿ ನೀಡುವುದಾಗಿ ಘೋಷಿಸಿದ ಮುಖ್ಯಮಂತ್ರಿ ನಯಾಬ್ ಸೈನಿ
ವಿನೇಶ್ ಫೋಗೆಟ್ಗೆ ಪದಕ ಸಿಗದಿದ್ದರೆ ಏನಂತೆ ಅವರು ನಮಗೆ ಒಲಿಂಪಿಕ್ಸ್ ಪದಕ ತಂದು ಕೊಡಲಿಲ್ಲ ಎಂಬ ಯಾವ ಬೇಸರವೂ ನಮಗಿಲ್ಲ, ಬದಲಿಗೆ ಆ ಪ್ರತಿಭೆ ಮೇಲಿನ ಗೌರವ 10 ಪಟ್ಟು ಹೆಚ್ಚಾಗಿದೆ, ಪದಕ ತಂದರೆ ಅವರನ್ನು ಹೇಗೆ ಕೊಂಡಾಡುತ್ತಿದ್ದೆವೋ ಅಷ್ಟೇ ಅದ್ಧೂರಿಯಾಗಿ ಕೊಂಡಾಡುತ್ತೇವೆ.... ವಿನೇಶ್ ಫೋಗಟ್ ಆದ ಆಘಾತ ಬರಿ ಅವರಿಗಾದ್ದಲ್ಲ, ಆ ಆಘಾತ ಪ್ರತಿಯೊಬ್ಬ ಭಾರತೀಯನಿಗೆ ಉಂಟಾಗಿದೆ.

ಚಿನ್ನ ಗೆದ್ದ ಸ್ಪರ್ಧಿಗೆ ಸಿಗುವ ಸ್ವಾಗತ ವಿನೇಶ್ ಪೋಗೆಟ್ಗೆ ಸಿಗಲಿದೆ ಎಂದು ಮುಖ್ಯಮಂತ್ರ ಘೋಷಣೆ
ಚಿನ್ನ ಅಥವಾ ಬೆಳ್ಳಿ ಖಂಡಿತ ಸಿಕ್ಕೇ ಸಿಗುತ್ತದೆ, ಬೆಳ್ಳಿಯೇಕೆ, ಚಿನ್ನ ಪಕ್ಕಾ ಎಂದು ನಾವೆಲ್ಲಾ ಸಂತೋಷದಿಂದ ಬೀಗಿದ್ದೆವು, ಏಕೆಂದರೆ ವಿನೆಶ್ ಫೋಗಟ್ ನಮ್ಮೆಲ್ಲರ ಮನಸ್ಸಿನಲ್ಲಿ ಅಂಥದ್ದೊಂದು ಭರವಸೆ ಮೂಡಿಸಿದ್ದರು. ಆದರೆ ಯಾರೂ ಊಹಿಸಿರದ ಆಘಾತ ಎದುರಾಯ್ತು, ಈ ಆಘಾತದಿಂದ ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲಾದರು. ಆದರೆ ವಿನೇಶ್ ಫೋಗಟ್ ಅವರಿಗೆ ಹೆದರಬೇಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಇಡೀ ದೇಶದ ಜನತೆ ಹೇಳುತ್ತಿದ್ದಾರೆ.ಹರಿಯಾಣದ ಮುಖ್ಯಮಂತ್ರಿ ನಯಾಬ್ ಸೈನಿ ಟ್ವೀಟ್ ಮಾಡಿ ಬೆಳ್ಳಿ ಪದಕ ಗೆದ್ದ ಕ್ರೀಡಾಪಟುವಿಗೆ ಸಿಗುವ ಎಲ್ಲಾ ಸೌಲಭ್ಯ, ಸಮ್ಮಾನಗಳನ್ನು ಫೋಗಟ್ ನೀಡಲಾಗುವುದು ಎಂದು ಘೋಷಿಸಿದ್ದಾರೆ.
4 ಕೋಟಿ ಹಣ ನೀಡಲಿದೆ ಸರಕಾರ
ಹರಿಯಾಣದ ಬಿಜೆಪಿ ಸರ್ಕಾರ ವಿನೇಶ್ ಫೋಗಟ್ ಅವರಿಗೆ ಅದ್ಧೂರಿ ಸನ್ಮಾನದ ಜೊತೆಗೆ 4 ಕೋಟಿ ಹಣವನ್ನು ಕೂಡ ನೀಡಿ ಗೌರವಿಸಲಿದೆ.
ಕುಸ್ತಿಗೆ ವಿದಾಯ ಹೇಳಿರುವ ಫೋಗಟ್
ವಿನೇಶ್ ಫೋಗಟ್ಗೆ ಅಗಿರಬಹುದಾದ ಆಘಾತ ಎಂಥದ್ದು ಎಂಬುವುದು ಊಹಿಸಲೂ ಸಾಧ್ಯ. ಯಾವುದೇ ಕ್ರೀಡಾಪಟುವಾಗಿರಲಿ ವಿಜಯಶಾಲಿಯಾಗಬೇಕೆಂಬ ಗುರಿಯನ್ನು ಹೊಂದಿರುತ್ತಾರೆ, ಅದಕ್ಕಾಗಿ ಅಷ್ಟೊಂದು ಕಷ್ಟ ಕೂಡ ಪಡುತ್ತಾರೆ. ಅದರಲ್ಲಿ ವಿನೇಶ್ ಫೋಗತ್ ಸ್ಪರ್ಧೆಯ ಹಿಂದಿನ ರಾತ್ರಿ ಪೂರ್ತಿ ತೂಕ ಇಳಿಸಲು ಅಷ್ಟೊಂದು ವರ್ಕೌಟ್ ಮಾಡಿದರು ಎಂದು ಪಿಟಿ ಉಷಾ ಅವರು ಹೇಳಿರುವುದನ್ನು ಕೇಳಿದಾಗ ಆ ಕ್ರೀಡಾಪಟು ಪಟ್ಟ ಕಷ್ಟ ಏನೆಂಬುವುದು ತಿಳಿಯುತ್ತದೆ.
ಅವರ ಕೂದಲನ್ನು ಕತ್ತರಿಸಲಾಯ್ತು, ಉಗುರು ಟ್ರಿಮ್ ಮಾಡಲಾಯ್ತು, ಬಟ್ಟೆಯಲ್ಲಿ ಆಲ್ಟ್ರಾರೇಷನ್ ಮಾಡಲಾಯಿತು ಆದರೂ 500 ಕೆಜಿಗಿಂತ ನೂರು ಗ್ರಾಂ ಹೆಚ್ಚಿದ್ದರು ಅಷ್ಟೇ ಒಲಿಂಪಿಕ್ಸ್ನಿಂದ ಅನರ್ಹಗೊಳಿಸಿದರು.
ಇಂಥ ಘಟನೆ ಭಾರತಕ್ಕೆ ಇದೇ ಮೊದಲು
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆಯಂತೆ ನಡೆದಿದೆ. ಚಿನ್ನ ತಪ್ಪಿದರೆ ಬೆಳ್ಳಿ ಪದಕ ಪಕ್ಕ ಎಂದೇ ಭಾವಿಸಿದ್ದೆವು, ಆದರೆ ಬಯಸಿದ್ದು ಒಂದು ಆಗಿದ್ದು ಮತ್ತೊಂದು.
ಎಲ್ಲಾ ಕಹಿ ಘಟನೆಗಳಿಂದ ಕಲಿಯುವ ಪಾಠವಿದೆ
ಇದು ಒಂದು ರೀತಿಯಲ್ಲಿ ಬದುಕಿನ ಪಾಠವೂ ಹೌದು, ನಾವು ಚಿಕ್ಕ ಪುಟ್ಟ ವಿಷಯವನ್ನು ನಿರ್ಲಕ್ಷ್ಯ ಮಾಡುತ್ತೇವೆ, ಆದರೆ ಇಂಥ ನಿರ್ಲಕ್ಷ್ಯಕ್ಕೆ ತುಂಬಾನೇ ಬೆಲೆತೆರಬೇಕಾಗುತ್ತದೆ ಎಂಬುವುದಕ್ಕೆ ದೊಡ್ಡ ಉದಾಹರಣೆ ಈ ಘಟನೆ.
ಒಲಿಂಪಿಕ್ಸ್ ಆಡಲಿತ ಮಂಡಳಿ ಈ ಬಗ್ಗೆ ಏಕೆ ನಿರ್ಲಕ್ಷ್ಯ ವಹಿಸಿತು?
ವಿನೇಶ್ ಫೋಗಟ್ ತೂಕವನ್ನು ಏಕೆ ಅವರು ಪ್ರತಿದಿನ ಪರೀಕ್ಷೆ ಮಾಡಲಿಲ್ಲ, ಹಾಗೆ ಮಾಡಿದ್ದರೆ ಈ ರೀತಿ ನಡೆಯುತ್ತಿರಲಿಲ್ಲ ಏನೋ, ಸ್ಪರ್ಧೆಯ ಹಿಂದಿನ ದಿನ ಪರೀಕ್ಷೆ ಮಾಡಿರಬಹುದು ಆದರೆ 100ಗ್ರಾಂ ತೂಕದಿಂದಾಗಿ ಆ ಕ್ರೀಡಾಪಟುವಿನ ಕನಸು ಭಗ್ನವಾಗಿದೆ, ದೇಶಕ್ಕೂ ದೊಡ್ಡ ನಷ್ಟವಾಗಿದೆ. ಎಲ್ಲಾ ಘಟನೆಗಳು ಪಾಠ ಕಲಿಸುತ್ತದೆ, ಇನ್ಮುಂದೆ ಇಂಥ ವಿಷಯಗಳಲ್ಲಿ ಜಾಗ್ರತೆವಹಿಸಬೇಕು.
ವಿನೇಶ್ ಫೋಗಟ್ ಅವರ ಬಗ್ಗೆ ಹೆಮ್ಮೆಯಿದೆ, ಅವರ ಶ್ರಮಕ್ಕೆ ಗೌರವಿದೆ, ಅವರಿಗಾದ ಆಘಾತ ನಮಗೂ ನೋವು ತಂದಿದೆ, ನಿಮ್ಮ ಜೊತೆ ನಾವಿದ್ದೇವೆ ಎಂದು ಪ್ರತಿಯೊಬ್ಬ ಭಾರತೀಯರು ವಿನೇಶ್ ಫೋಗಟ್ ಜೊತೆ ನಿಂತಿದ್ದಾರೆ. ವಿನೇಶ್ ಫೋಗಟ್ ನೀವು ಗೆದ್ದಿಲ್ಲ ಅಂತ ಬೆಸರ ಪಡಬೆಡಿ, ನಿಮ್ಮ ಜೊತೆ ನಾವಿದ್ದೇವೆ.



Click it and Unblock the Notifications