Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಕೋಟಿಗಳ ಒಡೆಯ ಹಾರ್ದಿಕ್ ಪಾಂಡ್ಯ ಒಂದು ಸಮಯದಲ್ಲಿ 5-10 ರುಪಾಯಿಗೂ ಕಷ್ಟ ಪಡುತ್ತಿದ್ದರು
ಹಾರ್ದಿಕ್ ಪಾಂಡ್ಯ ಈಗ ಹೆಚ್ಚು ಚರ್ಚೆಯಲ್ಲಿರುವ ಕ್ರಿಕೆಟಿಗ, ಅವರ ವಿವಾಹ ವಿಚ್ಛೇದನದಲ್ಲಿ ಅಂತ್ಯವಾಗುತ್ತಿದೆ ಎಂಬ ರೂಮರ್ ಹರಿದಾಡುತ್ತಿದೆ. ವಿಚ್ಛೇದನ ರೂಮರ್ ಜೊತೆಗೆ ಅವರ ಸಂಪಾದನೆಯಿಂದ ಜೀವನಾಂಶವಾಗಿ ಸುಮಾರು 70 ಕೋಟಿ ಹೋಗಬಹುದು ಎಂಬುವುದಾಗಿದೆ. ಅವರ ಒಟ್ಟು ಆಸ್ತಿ 91 ಕೋಟಿ ಅದರಲ್ಲಿ ಮುಕ್ಕಾಲು ಭಾಗ ಜೀವನಾಂಶವಾಗಿ ಕೊಡಬೇಕಾಗುತ್ತೆ ಎಂದೆಲ್ಲಾ ಸುದ್ದಿ ಹರಿದಾಡುತ್ತಿದೆ.
ಇದೇ ಸಮಯದಲ್ಲಿ ಹಾರ್ದಿಕ್ ಹಿಂದೆ ಇಂಟರ್ವ್ಯೂನ್ಲ ಹೇಳಿದ ಮಾತುಗಳು ಕೂಡ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ತನ್ನೆಲ್ಲಾ ಆಸ್ತಿ, ಕಾರುಗಳು ಅಮ್ಮನ ಹೆಸರಿನಲ್ಲಿ ಇರುವುದಾಗಿಯೂ, ತಾನು ದುಡಿದ ಹಣವನ್ನು ಯಾರಿಗೋ 50% ಕೊಡುವುದು ಇಷ್ಟವಿಲ್ಲ ಎಂಬುವುದಾಗಿ ಹೇಳಿದ್ದರು.

ಅವರು ಈ ಜೀವನಾಂಶದ ಕುರಿತಂತೆಯೇ ಆ ರೀತಿ ಹೇಳಿದ್ದು ಮದುವೆಯಾದ ಮೇಲೆ ವಿಚ್ಛೇದನವಾದರೆ ಆಸ್ತಿಯಿಂದ ದುಬಾರಿ ಹಣವನ್ನೇ ಜೀವನಾಂಶವಾಗಿ ನೀಡಬೇಕಾಗುತ್ತದೆ, ಇವರು ಕ್ರಿಕೆಟಿಗ ಹತ್ರ ಹತ್ರ ನೂರು ಕೋಟಿಗಳ ಒಡೆಯ. ಹಾಗಾಗಿ ವಿಚ್ಛೇದನ ಅಂತ ಬಂದರೆ ಕೋಟಿ ಕೋಟಿ ಹಣ ನೀಡಬೇಕಾಗುತ್ತೆ ಈ ಕಾರಣಕ್ಕಾಗಿ ಹಾರ್ದಿಕ್ ಪಾಂಡ್ಯ ತನ್ನ ಹೆಸರಿನಲ್ಲಿ ಯಾವುದೇ ಆಸ್ತಿ ಇಟ್ಟಿಲ್ಲ.
ಒಂದು ರುಪಾಯಿ ಬೆಲೆ ಕೂಡ ಹಾರ್ದಿಕ್ ಪಾಂಡ್ಯ ಅವರಿಗೆ ಚೆನ್ನಾಗಿಯೇ ಗೊತ್ತಿದೆ, ಏಕೆಂದರೆ ಹದಿಹರೆಯದ ಪ್ರಾಯದಲ್ಲಿ ಅಂಥ ಕಡು ಬಡತನ ಕಂಡು ಬೆಳೆದವರು, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಹುಡುಗ, ಹಾಗಾಗಿಯೇ ತಾನು ದುಡಿದ ಹಣ ಅಷ್ಟು ಸುಲಭವಾಗಿ ಬೇರೆಯವರಿಗೆ ಕೊಟ್ಟು ಬಿಡುತ್ತಾರಾ? ಅದಕ್ಕೆ ಮುಂದೆ ಏನಾಗುತ್ತೋ ಗೊತ್ತಿಲ್ಲ, ಆದರೆ ತಾಯಿ ಎಂದೆಂದಿಗೂ ಮಗನ ಜೊತೆ ಇರುತ್ತಾಳೆ, ಹಾಗಾಗಿ ತಾನು ದುಡಿದ ಅಷ್ಟೂ ಹಣವನ್ನು ಅಮ್ಮನ ಹೆಸರಿನಲ್ಲಿ ಇಟ್ಟಿದ್ದಾರೆ.
ಅನುಕೂಲಸ್ಥ ಕುಟುಂಬದಲ್ಲಿ ಜನನ, ಹದಿಹರೆಯದ ಪ್ರಾಯದಲ್ಲಿದ್ದಾಗ ಬೀದಿಗೆ ಬಿದ್ದರು
ಹಾರ್ದಿಕ್ ಪಾಂಡ್ಯ ಅನುಕೂಲಸ್ಥ ಕುಟುಂಬದಲ್ಲಿ ಜನಿಸಿದವರು, ಅವರ ತಂದೆ ಕಾರ್ ಫೈನಾನ್ಸ್ ಬ್ಯುಸ್ನೆಸ್ ಮಾಡುತ್ತಿದ್ದರು, ಮಕ್ಕಳಿಗೆ ಕ್ರಿಕೆಟ್ ಕೋಚಿಂಗ್ಗೆ ಕಳುಹಿಸುತ್ತಿದ್ದರು. ಮಕ್ಕಳ ಕ್ರಿಕೆಟ್ ಭವಿಷ್ಯಕ್ಕಾಗಿ ತಮ್ಮ ಬ್ಯುಸ್ನೆಸ್ ಮುಚ್ಚಿ ವಡೋದರಾಗೆ ಹೋಗುತ್ತಾರೆ.
ಎಲ್ಲವೂ ಚೆನ್ನಾಗಿತ್ತು, ಆದರೆ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗುತ್ತೆ. ಅವರ ತಂದೆ ಮಕ್ಕಳಿಗಾಗಿ ಏನು ಸಿಗುತ್ತೋ ಆ ಕೆಲಸವನ್ನು ಮಾಡುತ್ತಾರೆ, ಆದರೂ ಮಕ್ಕಳು ಕ್ರಿಕೆಟ್ ಟ್ರೈನಿಂಗ್ ಮಾಡಲಿ ಎಂದು ಬಯಸಿದರು, ಹೀಗಿರುವಾಗ ಅವರ ತಂದೆ ಒಂದೇ ದಿನ ಎರಡು ಬಾರಿ ಹೃದಯಾಘಾತ ಉಂಟಾಗುತ್ತೆ, ಅವರ ಕುಟುಂಬ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಅದಾಗಿ 6 ತಿಂಗಳಿಗೆ ಮತ್ತೆ ಅವರ ತಂದೆಗೆ ಹೃದಯಾಘಾತವಾಯ್ತು, ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ದರಿಮದ ಬದುಕಿಳಿದರು. ಆವಾಗ ಹಾರ್ದಿಕ್ ಪಾಂಡ್ಯ ಮತ್ತು ಅಣ್ಣ ಕುಟುಂಬ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡು ದುಡಿಯಲಾರಂಭಿಸುತ್ತಾರೆ. ಮೂರು ವರ್ಷ ಒಂದೊಂದು ರುಪಾಯಿಗೂ ಅಣ್ಣ-ತಮ್ಮ ತುಂಬಾನೇ ಕಷ್ಟ ಪಡುತ್ತಾರೆ. ಹಣಕ್ಕಾಗಿ ಬೇರೆ-ಬೇರೆ ಟೂರ್ನಿಮೆಂಟ್ನಲ್ಲಿ ಆಡುತ್ತಿದ್ದರು.
2015ರಲ್ಲಿ ಹಾರ್ದಿಕ್ ಪಾಂಡ್ಯ ಅದೃಷ್ಟ ಬದಲಾಯ್ತು
ಹಾರ್ದಿಕ್ ಪಾಂಡ್ಯ ಪ್ರತಿಭೆಯನ್ನು ಕ್ರಿಕೆಟ್ ಜಗತ್ತು ಗುರುತಿಸಿತು. 2015ರಲ್ಲಿ ಮುಂಬೈ ಇಂಡಿಯನ್ಸ್ 50 ಲಕ್ಷ ಕೊಟ್ಟು ಖರೀದಿಸಿತು. 5-10 ರುಪಾಯಿಗೆ ಕಷ್ಟ ಪಡುತ್ತಿದ್ದ ಹಾರ್ದಿಕ್ ಕುಟುಂಬ ಅಲ್ಲಿಂದ ಚೇತರಿಸಿಕೊಂಡಿತು.
ಆ ಹಣದಿಂದ ಕಾರಿನ ಸಾಲ ತೀರಿಸುತ್ತಾರೆ, ಕೈ ಸಾಲಗಳನ್ನು ತೀರಿಸುತ್ತಾರೆ. ನಂತರ ಹಾರ್ದಿಕ್ ಪಾಂಡ್ಯರ ವೃತ್ತಿ ಜೀವನದಲ್ಲಿ ಗ್ರಾಫ್ ಹೆಚ್ಚಾಗುತ್ತಲೇ ಹೋಗುತ್ತದೆ, ಈ ಬಾರಿ ಐಪಿಎಲ್ ಮ್ಯಾಚ್ಗೆ ಮುಂ ಬೈ ಇಂಡಿಯನ್ಸ್ 15 ಕೋಟಿಗೆ ಖರೀದಿಸಿತು. ಜಾಹೀತಾತುಗಳನ್ನು ಮಾಡುತ್ತಾರೆ ಈಗ ಸುಮಾರು 100 ಕೋಟಿಗಳ ಒಡೆಯ ತುಂಬಾನೇ ಲಕ್ಷುರಿ ಬದುಕು ಸಾಗಿಸುತ್ತಿದ್ದಾರೆ.
ಮಗು ಮಾಡಿ ಮದುವೆಯಾದರು
ಇನ್ನು ಇವರ ಮದುವೆ ಕೂಡ ತುಂಬಾನೇ ಚರ್ಚೆಗೆ ಕಾರಣವಾಯ್ತು, ಇವರು ಮದುವೆಯಾಗುವ ಮುನ್ನವೇ ಗಂಡು ಮಗುವಿಗೆ ತಂದೆಯಾದರು. ನಟಾಶಾ ಗರ್ಭಿಣಿಯಾಗಿದ್ದರು, ಈ ಮದುವೆಗೆ ಮೊದಲು ಅನೇಕ ಲವ್ ಅಫೇರ್ಸ್ ಮೂಲಕ ಇಬ್ಬರೂ ಗಮನ ಸೆಳೆದಿದ್ದರು.



Click it and Unblock the Notifications