Latest Updates
-
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು
Happy Friendship Day: ಸ್ನೇಹಿತರಿಗೆ ಕಳುಹಿಸಲು ಇಲ್ಲವೆ ಕೃಷ್ಣ ಸುಧಾಮರ ಅದ್ಭುತ ಫೋಟೋಗಳು!!
ಗೆಳೆತನ ಎನ್ನುವುದು ಪದಗಳಿಗೆ ಅಥವಾ ಯಾವುದೇ ಕಟ್ಟುಪಾಡುಗಳಿಗೆ ಸಿಗುವ ಬಂಧವಲ್ಲ. ರಕ್ತ ಸಂಬಂಧವನ್ನೇ ಮೀರಿರುವ ಏಕೈಕ ಸಂಬಂಧ ಎಂದು ಸ್ನೇಹವನ್ನು ಕರೆಯಲಾಗಿದೆ. ಸುಖದಲ್ಲಿ ಜೊತೆಗಿದ್ದು, ದುಖಃದಲ್ಲಿ ಕಣ್ಣೊರೆಸುವ ಸ್ನೇಹಿತ ಮಾನವನಿಗೆ ಇರಬೇಕಾದ ಬಹುಮುಖ್ಯ ಅಂಶ. ಸ್ನೇಹಿತರಿಲ್ಲದ ಬದುಕು ಮರುಳುಗಾಡಿನಲ್ಲಿ ಅಲೆದಾಡಿದಂತೆ ಎಂದು ಹೇಳುವ ಮಾತು ನೀವು ಕೇಳಿರಬಹುದು.
ಹಾಗೆ ಈ ಸ್ನೇಹಿತರ ದಿನವನ್ನು ಆಚರಿಸಲೆಂದೇ ಒಂದು ದಿನ ಮೀಸಲಿಡಲಾಗಿದೆ. ಭಾರತದಲ್ಲಿ ಆಗಸ್ಟ್ನ ಮೊದಲ ಭಾನುವಾರ ಸ್ನೇಹಿತರ ದಿನ ಆಗಿರಲಿದೆ. ನೀವು ಕೂಡ ನಿಮ್ಮ ಸ್ನೇಹಿತರಿಗೆ ಶುಭಾಶಯ ಕೋರಲು ಇಲ್ಲಿ ಕೆಲವು ಸಂದೇಶಗಳ ನೀಡಲಾಗಿದೆ.

ಅದ್ರಲ್ಲೂ ಸ್ನೇಹ ಎಂದಾಗ ನಮಗೆ ಕೃಷ್ಣ ಹಾಗೂ ಸುಧಾಮನ ನೆನಪು ಬರಬಹುದು, ಇಬ್ಬರು ಬಾಲ್ಯ ಸ್ನೇಹಿತರು ಎಷ್ಟರ ಮಟ್ಟಿಗೆ ಸ್ನೇಹಿತರಾಗಿದ್ರು, ಅವರ ಬಾಲ್ಯ, ಸ್ನೇಹಿತನಿಗಾಗಿ ಕೃಷ್ಣ ಏನು ಮಾಡಿದ ಎಂಬುದೆಲ್ಲಾ ನೀವು ಕೇಳಿರಬಹುದು. ಹೀಗಾಗಿ ಸ್ನೇಹಿತರೆಂದರೆ ಕೃಷ್ಣ ಹಾಗೂ ಸುಧಾಮನಂತಿರಬೇಕು ಎಂಬ ಉದಾಹರಣೆ ನೀಡುತ್ತಾರೆ.

ಹೀಗಾಗಿ ನೀವು ಶುಭಾಶಯ ಹಂಚಿಕೊಳ್ಳಲು ಕೃಷ್ಣ ಸುಧಾಮರ ಸುಂದರ ಫೋಟೋಗಳು ಇಲ್ಲಿವೆ.

ನಾವು ಏನು ಎಂದು ನಮಗಿಂತ ಚೆನ್ನಾಗಿ ಗೊತ್ತಿರುವುದು ನಮ್ಮ ಫ್ರೆಂಡ್ಸ್ಗೆ ಮಾತ್ರ. ನಗುವಾಗ ಜೊತೆಗೂಡುವ, ಅಳುವಾಗ ಹೆಗಲು ಕೊಡುವ ಈ ಸಂಬಂಧ ಎಲ್ಲಾ ಬಂಧಗಳನ್ನು ಮೀರಿದ್ದು

ಎಲ್ಲಾ ಬಂಧವೂ ನಮ್ಮಿಂದ ಏನೋ ನಿರೀಕ್ಷಿಸುತ್ತದೆ, ಆದರೆ ಏನೂ ನಿರೀಕ್ಷಿಸದೆ ಬರುವುದು ಸ್ನೇಹವೊಂದೇ.
ನನಗೆ ನಿನ್ನ ಎಲ್ಲಾ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೇ ಇರಬಹುದು, ಆದರೆ ಅದನ್ನು ಎದುರಿಸಲು ನಿನ್ನೊಬ್ಬನೇ ಖಂಡಿತ ಬಿಡಲ್ಲ ಅಂತ ಬರುವವರೇ ಫ್ರೆಂಡ್ಸ್.

ಸುಖದಲ್ಲಿ ನಮ್ಮ ಜೊತೆಗೆ ಇರುವವರು ಸ್ನೇಹಿತರಲ್ಲ, ಕಷ್ಟಾ ಅಂತ ಬಂದಾಗ ಯಾರು ಜೊತೆಗಿರುತ್ತಾರೋ ಅವರೇ ನಿಜವಾದ ಸ್ನೇಹಿತರು.

ನಿಜವಾದ ಸ್ನೇಹಿತ ಎಂದರೆ ನಿಮ್ಮ ಕಣ್ಣುಗಳಲ್ಲಿನ ನೋವನ್ನು ನೋಡುವವನು, ಉಳಿದವರೆಲ್ಲರೂ ನಿಮ್ಮ ಮುಖದ ಮೇಲಿನ ನಗುವನ್ನು ನಂಬುವವನು.

ಅನೇಕ ಜನರು ನಿಮ್ಮ ಜೀವನದ ಒಳಗೆ ಮತ್ತು ಹೊರಗೆ ಹೋಗುತ್ತಾರೆ, ಆದರೆ ನಿಜವಾದ ಸ್ನೇಹಿತರು ಮಾತ್ರ ನಿಮ್ಮ ಹೃದಯದಲ್ಲಿ ಹೆಜ್ಜೆ ಗುರುತುಗಳನ್ನು ಉಳಿಸುತ್ತಾರೆ.

ಒಬ್ಬ ಸ್ನೇಹಿತ ಎಂದರೆ ನೀವು ಇರುವಂತೆಯೇ ನಿಮ್ಮನ್ನು ತಿಳಿದಿರುವ, ನೀವು ಎಲ್ಲಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳುವ, ನೀವು ಏನಾಗಿದ್ದೀರಿ ಎಂಬುದನ್ನು ಸ್ವೀಕರಿಸುವ ಮತ್ತು ಇನ್ನೂ ನಿಧಾನವಾಗಿ ನಿಮ್ಮ ಬೆಳವಣಿಗೆಯನ್ನು ಬೆಂಬಲಿಸುವವರು.
ಉತ್ತಮ ಸ್ನೇಹಕ್ಕೆ ನಿತ್ಯದ ಮಾತುಕತೆ ಅಥವಾ ಒಟ್ಟಿಗೆ ಇರುವ ಅಗತ್ಯವಿಲ್ಲ. ಸಂಬಂಧವು ಹೃದಯದಲ್ಲಿ ವಾಸಿಸುವವರೆಗೆ, ನಿಜವಾದ ಸ್ನೇಹಿತರು ಎಂದಿಗೂ ಬೇರೆಯಾಗುವುದಿಲ್ಲ.
ನನ್ನ ಜೀವನದ ಅತ್ಯಂತ ಶ್ರೇಷ್ಠ ಉಡುಗೊರೆ ಅಂದರೆ ನಿನ್ನ ಸ್ನೇಹ
ಮೂರ್ಖರ ಜೊತೆಗೂ ನೀವು ಸ್ನೇಹ ಬೆಳೆಸಬಹುದು, ಅದು ಸ್ನೇಹದ ಶಕ್ತಿ.
ಸ್ನೇಹಿತನೆಂದರೆ ನೀವು ಒಂಟಿಯಾದಾಗ ಮಾತನಾಡಲು ಸಿಗುವ ವ್ಯಕ್ತಿಯಲ್ಲ. ನಿಮ್ಮ ಒಂಟಿಯಾಗಿರಲು ಬಿಡದೆ ಇರುವವನು.



Click it and Unblock the Notifications
