Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಈ 4 ರಾಶಿಯವರನ್ನು ಆಂಜನೇಯ ಯಾವತ್ತೂ ಕೈ ಬಿಡೋದಿಲ್ಲ!
ರಾಮಭಕ್ತ ಆಂಜನೇಯನ ಮಹಿಮೆ ಅಪಾರ. ಆಂಜನೇಯನನ್ನು ನೆನೆದರೆ ಸಾಕು ಬೆಟ್ಟದಂತೆ ಬಂದಂತಹ ಕಷ್ಟಗಳೆಲ್ಲಾ ಮಂಜಿನ ಹಾಗೆ ಕರಗಿ ಹೋಗುತ್ತದೆ. ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಯಾರು ನಿತ್ಯ ಹನುಮಂತನನ್ನು ಆರಾಧನೆ ಮಾಡುತ್ತಾರೆ ಅವರ ಜೀವನದಲ್ಲಿ ಯಾವತ್ತೂ ಸುಖ, ಶಾಂತಿ ತುಂಬಿರುತ್ತಂತೆ. ಅದ್ರಲ್ಲಿ ಆ ನಾಲ್ಕು ರಾಶಿಯವರ ಮೇಲೆ ಆಂಜನೇಯನ ಆಶೀರ್ವಾದ ಸದಾ ಇರುತ್ತಂತೆ. ಹಾಗಾದ್ರೆ ಆ ನಾಲ್ಕು ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಅಧಿಪತಿ ಮಂಗಳ. ಅಷ್ಟೇ ಅಲ್ಲದೇ ಮೇಷರಾಶಿಯು ಆಂಜನೇಯನಿಗೆ ಪ್ರಿಯವಾದ ರಾಶಿಗಳಲ್ಲಿ ಒಂದಾಗಿದೆ. ಹೀಗಾಗಿ ಮೇಷ ರಾಶಿಯವರು ಮಂಗಳವಾರದ ದಿನ ಆಂಜನೇಯನನ್ನು ಭಕ್ತಿಯಿಂದ ಪೂಜಿಸಿದರೆ ಅವರ ಸಂಕಷ್ಟಗೆಳೆಲ್ಲಾ ಪರಿಹಾರವಾಗುತ್ತೆ ಅನ್ನೋ ನಂಬಿಕೆಯಿದೆ.

ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ. ಜೊತೆಗೆ ಸೂರ್ಯ ದೇವನು ಆಂಜನೇಯನ ಗುರುವಾಗಿದ್ದಾನೆ. ಹೀಗಾಗಿ ಸಿಂಹ ರಾಶಿಯೂ ಕೂಡ ಆಂಜನೇಯನಿಗೆ ಪ್ರಿಯವಾದ ಗ್ರಹವಾಗಿದೆ. ನಂಬಿಕೆಗಳ ಪ್ರಕಾರ ಸಿಂಹ ರಾಶಿಯವರು ಹನುಮಂತನನ್ನು ಆರಾಧನೆ ಮಾಡಿದರೆ ಸಂಕಷ್ಟಗಳೆಲ್ಲಾ ದೂರವಾಗಿ ಖುಷಿ ಹಾಗೂ ಸಮೃದ್ಧಿ ತುಂಬಿರುತ್ತಂತೆ.
ವೃಶ್ಚಿಕ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಹೀಗಾಗಿ ವೃಶ್ಚಿಕ ರಾಶಿಯವರ ಮೇಲೆ ಹನುಮಂತನ ಆಶೀರ್ವಾದ ಸದಾ ಇರುತ್ತಂತೆ. ನಂಬಿಕೆಗಳ ಪ್ರಕಾರ ವೃಶ್ಚಿಕ ರಾಶಿಯವರು ಮಂಗಳವಾರದ ದಿನ ಹನುಮಂತನನ್ನು ಪೂಜೆ ಮಾಡೋದ್ರಿಂದ ಆರ್ಥಿಕ ಸಮಸ್ಯೆಗಳೆಲ್ಲಾ ಬಗೆ ಹರಿಯುತ್ತಂತೆ ಜೊತೆಗೆ ಅವರ ಸಾಮರ್ಥ್ಯ ಹಾಗೂ ಬುದ್ಧಿಶಕ್ತಿ ಹೆಚ್ಚಾಗುತ್ತಂತೆ.
ಕುಂಭ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯೂ ಕೂಡ ಆಂಜನೇಯನಿಗೆ ಪ್ರಿಯವಾದ ರಾಶಿಯಾಗಿದೆ. ಶನಿದೇವನು ಕುಂಭ ರಾಶಿಯ ಅಧಿಪತಿಯಾಗಿದ್ದಾನೆ. ನಂಬಿಕೆಗಳ ಪ್ರಕಾರ ಕುಂಭ ರಾಶಿಯವರು ಆಂಜನೇಯನನ್ನೂ ಭಕ್ತಿಯಿಂದ ಪೂಜೆ ಮಾಡಿದ್ರೆ ಅವರ ಮೇಲೆ ಸದಾ ಆಂಜನೇಯನ ಅನುಗ್ರಹ ಇದ್ದೇ ಇರುತ್ತಂತೆ. ಹೀಗಾಗಿ ಶನಿವಾರದ ದಿನ ಆಂಜನೇಯನ್ನು ಪೂಜೆ ಮಾಡೋದ್ರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತಂತೆ.
ಆಂಜನೇಯನನ್ನು ಒಲಿಸಿಕೊಳ್ಳಲು ಈ ಮಂತ್ರಗಳನ್ನು ನಿತ್ಯ ಪಠಿಸಿ :
ಓಂ ಹ್ರಾನ್ ಹ್ರೀಂ ಹ್ರಾನ್ ಹ್ರಾನ್ ಹ್ರಾನ್ ಹ್ರಃ ॥ ಹಾಂ ಹನುಮತೇ ರುದ್ರಾತ್ಮಕಾಯ ಹೂಂ ಫಟ್ । ಓಂ ಹನುಮಂತಾಯ ನಮಃ ।
ಓಂ ನಮೋ ಹನುಮತೇ ರುದ್ರಾವತಾರಾಯ ಸರ್ವಶತ್ರುಸಹರಣಾಯ ಹರಾಯ ಸರ್ವವಶೀಕರಣಾಯ ರಾಮದೂತಾಯ ಸ್ವಾಹಾ ।
ಓಂ ಹನುಮಂತೇ ನಮಃ
ಓಂ ಹನುಮತೇ ರುದ್ರಾತ್ಮಕಾಯ ಹೂಂ ಫಟ್ ।
ಮಹಾಬಲಯ ವೀರೈ ಚಿರಂಜೀವಿನ್ ಉದ್ದತೇ. ಹರಿಣೇ ವಜ್ರ ದೇಹೇ ಚೋಲಂಘಿತ್ ಮಹಾವ್ಯಯೇ ।
ಓಂ ನಮೋ ಹನುಮತೇ ರುದ್ರಾವತಾರೈ, ಸರ್ವ ಶತ್ರುನಾಶಕ, ಸರ್ವ ರೋಗಗಳ ನಾಶಕ, ಸರ್ವ ಶತ್ರುನಾಶಕ.
ಶತ್ರುನಾಶಕನೇ ಓಂ ನಮೋ ಹನುಮತೇ ರುದ್ರಾವತಾರಾಯ!
ಓಂ ನಮೋ ಹನುಮತೇ ಆವೇಶಯ ಆವೇಶ ಸ್ವಾಹಾ ।
ನಿತ್ಯವು ಆಂಜನೇಯನ ಈ ಮಂತ್ರಗಳ ಜೊತೆಗೆ ಹನುಮಾನ್ ಚಾಲೀಸ ಪಠಿಸೋದ್ರಿಂದ ಸಂಕಷ್ಟಗಳೆಲ್ಲಾ ದೂರವಾಗುತ್ತಂತೆ.



Click it and Unblock the Notifications

