Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಈ 4 ರಾಶಿಯವರನ್ನು ಆಂಜನೇಯ ಯಾವತ್ತೂ ಕೈ ಬಿಡೋದಿಲ್ಲ!
ರಾಮಭಕ್ತ ಆಂಜನೇಯನ ಮಹಿಮೆ ಅಪಾರ. ಆಂಜನೇಯನನ್ನು ನೆನೆದರೆ ಸಾಕು ಬೆಟ್ಟದಂತೆ ಬಂದಂತಹ ಕಷ್ಟಗಳೆಲ್ಲಾ ಮಂಜಿನ ಹಾಗೆ ಕರಗಿ ಹೋಗುತ್ತದೆ. ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಯಾರು ನಿತ್ಯ ಹನುಮಂತನನ್ನು ಆರಾಧನೆ ಮಾಡುತ್ತಾರೆ ಅವರ ಜೀವನದಲ್ಲಿ ಯಾವತ್ತೂ ಸುಖ, ಶಾಂತಿ ತುಂಬಿರುತ್ತಂತೆ. ಅದ್ರಲ್ಲಿ ಆ ನಾಲ್ಕು ರಾಶಿಯವರ ಮೇಲೆ ಆಂಜನೇಯನ ಆಶೀರ್ವಾದ ಸದಾ ಇರುತ್ತಂತೆ. ಹಾಗಾದ್ರೆ ಆ ನಾಲ್ಕು ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಅಧಿಪತಿ ಮಂಗಳ. ಅಷ್ಟೇ ಅಲ್ಲದೇ ಮೇಷರಾಶಿಯು ಆಂಜನೇಯನಿಗೆ ಪ್ರಿಯವಾದ ರಾಶಿಗಳಲ್ಲಿ ಒಂದಾಗಿದೆ. ಹೀಗಾಗಿ ಮೇಷ ರಾಶಿಯವರು ಮಂಗಳವಾರದ ದಿನ ಆಂಜನೇಯನನ್ನು ಭಕ್ತಿಯಿಂದ ಪೂಜಿಸಿದರೆ ಅವರ ಸಂಕಷ್ಟಗೆಳೆಲ್ಲಾ ಪರಿಹಾರವಾಗುತ್ತೆ ಅನ್ನೋ ನಂಬಿಕೆಯಿದೆ.

ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ. ಜೊತೆಗೆ ಸೂರ್ಯ ದೇವನು ಆಂಜನೇಯನ ಗುರುವಾಗಿದ್ದಾನೆ. ಹೀಗಾಗಿ ಸಿಂಹ ರಾಶಿಯೂ ಕೂಡ ಆಂಜನೇಯನಿಗೆ ಪ್ರಿಯವಾದ ಗ್ರಹವಾಗಿದೆ. ನಂಬಿಕೆಗಳ ಪ್ರಕಾರ ಸಿಂಹ ರಾಶಿಯವರು ಹನುಮಂತನನ್ನು ಆರಾಧನೆ ಮಾಡಿದರೆ ಸಂಕಷ್ಟಗಳೆಲ್ಲಾ ದೂರವಾಗಿ ಖುಷಿ ಹಾಗೂ ಸಮೃದ್ಧಿ ತುಂಬಿರುತ್ತಂತೆ.
ವೃಶ್ಚಿಕ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಹೀಗಾಗಿ ವೃಶ್ಚಿಕ ರಾಶಿಯವರ ಮೇಲೆ ಹನುಮಂತನ ಆಶೀರ್ವಾದ ಸದಾ ಇರುತ್ತಂತೆ. ನಂಬಿಕೆಗಳ ಪ್ರಕಾರ ವೃಶ್ಚಿಕ ರಾಶಿಯವರು ಮಂಗಳವಾರದ ದಿನ ಹನುಮಂತನನ್ನು ಪೂಜೆ ಮಾಡೋದ್ರಿಂದ ಆರ್ಥಿಕ ಸಮಸ್ಯೆಗಳೆಲ್ಲಾ ಬಗೆ ಹರಿಯುತ್ತಂತೆ ಜೊತೆಗೆ ಅವರ ಸಾಮರ್ಥ್ಯ ಹಾಗೂ ಬುದ್ಧಿಶಕ್ತಿ ಹೆಚ್ಚಾಗುತ್ತಂತೆ.
ಕುಂಭ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯೂ ಕೂಡ ಆಂಜನೇಯನಿಗೆ ಪ್ರಿಯವಾದ ರಾಶಿಯಾಗಿದೆ. ಶನಿದೇವನು ಕುಂಭ ರಾಶಿಯ ಅಧಿಪತಿಯಾಗಿದ್ದಾನೆ. ನಂಬಿಕೆಗಳ ಪ್ರಕಾರ ಕುಂಭ ರಾಶಿಯವರು ಆಂಜನೇಯನನ್ನೂ ಭಕ್ತಿಯಿಂದ ಪೂಜೆ ಮಾಡಿದ್ರೆ ಅವರ ಮೇಲೆ ಸದಾ ಆಂಜನೇಯನ ಅನುಗ್ರಹ ಇದ್ದೇ ಇರುತ್ತಂತೆ. ಹೀಗಾಗಿ ಶನಿವಾರದ ದಿನ ಆಂಜನೇಯನ್ನು ಪೂಜೆ ಮಾಡೋದ್ರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತಂತೆ.
ಆಂಜನೇಯನನ್ನು ಒಲಿಸಿಕೊಳ್ಳಲು ಈ ಮಂತ್ರಗಳನ್ನು ನಿತ್ಯ ಪಠಿಸಿ :
ಓಂ ಹ್ರಾನ್ ಹ್ರೀಂ ಹ್ರಾನ್ ಹ್ರಾನ್ ಹ್ರಾನ್ ಹ್ರಃ ॥ ಹಾಂ ಹನುಮತೇ ರುದ್ರಾತ್ಮಕಾಯ ಹೂಂ ಫಟ್ । ಓಂ ಹನುಮಂತಾಯ ನಮಃ ।
ಓಂ ನಮೋ ಹನುಮತೇ ರುದ್ರಾವತಾರಾಯ ಸರ್ವಶತ್ರುಸಹರಣಾಯ ಹರಾಯ ಸರ್ವವಶೀಕರಣಾಯ ರಾಮದೂತಾಯ ಸ್ವಾಹಾ ।
ಓಂ ಹನುಮಂತೇ ನಮಃ
ಓಂ ಹನುಮತೇ ರುದ್ರಾತ್ಮಕಾಯ ಹೂಂ ಫಟ್ ।
ಮಹಾಬಲಯ ವೀರೈ ಚಿರಂಜೀವಿನ್ ಉದ್ದತೇ. ಹರಿಣೇ ವಜ್ರ ದೇಹೇ ಚೋಲಂಘಿತ್ ಮಹಾವ್ಯಯೇ ।
ಓಂ ನಮೋ ಹನುಮತೇ ರುದ್ರಾವತಾರೈ, ಸರ್ವ ಶತ್ರುನಾಶಕ, ಸರ್ವ ರೋಗಗಳ ನಾಶಕ, ಸರ್ವ ಶತ್ರುನಾಶಕ.
ಶತ್ರುನಾಶಕನೇ ಓಂ ನಮೋ ಹನುಮತೇ ರುದ್ರಾವತಾರಾಯ!
ಓಂ ನಮೋ ಹನುಮತೇ ಆವೇಶಯ ಆವೇಶ ಸ್ವಾಹಾ ।
ನಿತ್ಯವು ಆಂಜನೇಯನ ಈ ಮಂತ್ರಗಳ ಜೊತೆಗೆ ಹನುಮಾನ್ ಚಾಲೀಸ ಪಠಿಸೋದ್ರಿಂದ ಸಂಕಷ್ಟಗಳೆಲ್ಲಾ ದೂರವಾಗುತ್ತಂತೆ.



Click it and Unblock the Notifications
