Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ನಾನು ಸತ್ತಿಲ್ಲ, ಬದುಕಿದ್ದೇನೆ ಎಂದು ಸರ್ಕಾರಕ್ಕೆ ಸಾಬೀತು ಮಾಡಲು ಕ್ರಿಮಿನಲ್ ಕೃತ್ಯ ಮಾಡಿದ ವ್ಯಕ್ತಿಯ ಕತೆ
ಸರ್ಕಾರದ ಕಡೆಯಿಂದ ಆದ ತಪ್ಪಿಗೆ ಆದ ಕ್ರಿಮಿನಲ್ ಆಗಿದ್ದಾನೆ, ಅದರಲ್ಲಿಯೂ ತಾನು ಬದುಕಿದ್ದೇನೆ ಎಂಬುವುದನ್ನು ಸಾಬೀತು ಮಾಡಲು ಆತ ಕ್ರಿಮಿನಲ್ ಆಗಬೆಕಾಯಿತು, ಕೇಳಿದಾಗ ಎಷ್ಟೊಂದು ವಿಚಿತ್ರ ಎಂದನಿಸುವುದು ಅಲ್ವಾ? ಆದರೆ ಇದು ನಿಜವಾಗಿ ನಡೆದ ಘಟನೆ. ಏನಿದು ಪ್ರಕರಣ, ಅಷ್ಟಕ್ಕೂ ಆತನಿಗೆ ತಾನು ಬದುಕಿದ್ದೇನೆ ಎಂದು ತೋರಿಸಬೇಕಾದ ಅನಿವಾರ್ಯ ಏಕಾಯ್ತು , ಏನಿದು ಘಟನೆ ನೋಡೋಣ ಬನ್ನಿ:

ಈತನ ಹೆಸರು ಬಾಬೂರಾಮ್ ಬಿಹಿಲ್, ರಾಜಾಸ್ಥಾನದ ಬಲ್ಹೋತ್ರ ಜಿಲ್ಲೆಯವನು. ಈತ ಬದುಕಿರುವಾಗಲೇ ಆತ ಸತ್ತಿದ್ದಾನೆ ಎಂದು ಡೆತ್ ಸರ್ಟಿಫಿಕೇಟ್ ನೀಡಲಾಯ್ತು, ಆದರೆ ಆತ ಇಲ್ಲ ನಾನು ಬದುಕಿದ್ದೇನೆ ನಿಮ್ಮಿಂದ ಆದ ತಪ್ಪು ಸರಿಪಡಿಸಿ ಎಂದು ಅಧಿಕಾರಿಗಳಿಗೆ ಹೇಳಿದರೆ ಯಾರೂ ತಮ್ಮ ತಪ್ಪನ್ನು ಸರಿಪಡಿಸಲು ಮನಸ್ಸು ಮಾಡದೆ ಬೇಜಾವ್ದಾರಿಯಿಂದ ನಡೆದುಕೊಳ್ಳುತ್ತಾರೆ. ಆತ 70 ವರ್ಷದ ಬಡ ಮುದುಕ, ನಾನು ಬದುಕಿರುವಾಗಲೇ ಸತ್ತಿದೆ ಎಂದು ಸರ್ಟಿಫಿಕೇಟ್ ಮಾಡಿ ನನ್ನ ಆಸ್ತಿ ಹೊಡೆಯಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಆ ಬಡಪಾಯಿಗೆ ಆತಂಕ ಉಂಟಾಗುತ್ತದೆ.
ನಾನು ಬದುಕಿದ್ದೇನೆ ಎಂದು ಸಾಬೀತು ಮಾಡಬೇಕು, ಆದರೆ ಹೇಗೆ ... ಹೇಗೆ? ಎಂದು ಚಿಂತೆ ಮಾಡಲಾರಂಭಿಸುತ್ತಾನೆ. ಹೇಗಾದರು ಸರಿ ಸರ್ಕಾರದ ಗಮನ ನನ್ನ ಕಡೆಗೆ ಸೆಳೆಯಬೇಕೆಂದು ಯೋಚಿಸುತ್ತಿದ್ದಾಗ ಆತ ಒಂದು ಆಲೋಚನೆ ಮಾಡುತ್ತಾನೆ, ಅದು ಮಾತ್ರ ಕಾನೂನು ಬಾಹಿರ ದಾರಿಯಾಗಿರುತ್ತದೆ.
ಜುಲೈ 19ಕ್ಕೆ ಒಂದು ಚಾಕು ಹಾಗೂ ಪೆಟ್ರೋಲ್ ಬಾಟಲಿಗೆ ತುಂಬಿ ಅಲ್ಲಿಯ ಶಾಲೆಗೆ ಹೋಗುತ್ತಾನೆ, ಇಬ್ಬರು ಟೀಚರ್ಗಳಿಗೆ ಗಾಯ ಮಾಡುತ್ತಾನೆ, ಅಲ್ಲಿದ್ದ ಪೋಷಕರಿಗೆ ಗಾಯ ಮಾಡುತ್ತಾನೆ, ಆವಾಗ ಅಲ್ಲಿಗೆ ಬಂದ ಪೊಲೀಸರು ಆತನನ್ನು ಅರೆಸ್ಟ್ ಮಾಡುತ್ತಾರೆ. ನಂತರ ಏಕೆ ಈ ಕೃತ್ಯ ಮಾಡಿದೆ ಎಂದು ಕೇಳಿದಾಗ ಆತ ಹೇಳಿದ ಉತ್ತರ ಕೇಳಿ ಪೊಲೀಸರು ತಬ್ಬಿಬ್ಬಾಗುತ್ತಾರೆ.
ನಾನು ಬದುಕಿದ್ದೇನೆ ಎಂದು ತೋರಿಸಲು ಹೀಗೆ ಮಾಡಿದೆ ಎಂದು ಹೇಳುತ್ತಾನೆ
ಆತ ಪೊಲೀಸರಿಗೆ ನಾನು ಬದುಕಿದ್ದೇನೆ ಎಂದು ಸರ್ಕಾರಕ್ಕೆ ಸಾಬೀತು ಮಾಡಲು ಹೀಗೆ ಮಾಡಿದೆ ಎಂದು ಹೇಳಿದ್ದಾನೆ, ಈತನ ಪರಿಸ್ಥಿತಿಗೆ ಯಾರನ್ನು ದೂರಬೇಕು, ವ್ಯವಸ್ಥೆಯನ್ನಾ ಅಥವಾ ಆತನನ್ನಾ? ಈತ ಮಾಡಿದ ತಪ್ಪಿನ ಬಗ್ಗೆ ಸರಿಯೋ? ತಪ್ಪೋ ಎಂಬ ಪ್ರಶ್ನೆ ಮಾಡುವಂತಿದೆ ಈತ ಮಾಡಿದ ಕ್ರೈಮ್.
ಈತನಿಗೆ ತಾನು ಬದುಕಿರುವುದು ಸಾಬೀತು ಪಡಿಸುವುದು ಹೇಗೆ ಎಂಬುವುದೇ ದೊಡ್ಡ ಸಮಸ್ಯೆಯಾಗಿತ್ತು?
ಈತನಿಗೆ ತಾನು ಬದುಕಿದ್ದೇನೆ ಎಂದು ಸಾಬೀತು ಮಾಡುವುದೇ ಸಮಸ್ಯೆಯಾಗಿತ್ತು, ಅಯ್ಯೋ ಏಕಪ್ಪಾ ಡೆತ್ ಸರ್ಟಿಫಿಕೇಟ್ ನೀಡಿದ್ದೀರಿ, ನಾನು ಬದುಕಿದ್ದೇನೆ ಎಂದು ಹೇಳಿದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ, ಆವಾಗ ಪೊಲೀಸರು ಅರೆಸ್ಟ್ ಮಾಡಿದರೆ ನನ್ನ ಹೆಸರಿನಲ್ಲಿ ಕೇಸ್ ದಾಖಲಾಗುತ್ತದೆ, ಆವಾಗ ಅದೇ ಸರ್ಕಾರದ ದಾಖಲೆಯಲ್ಲಿ ನಾನು ಬದುಕಿರುವುದು ದಾಖಲಾಗುತ್ತೆ ಅಲ್ವಾ ಅದೇ ಸಾಕು ಎಂದು ಮನಸ್ಸಿಗೆ ಬಂದಿದ್ದೇ ಸಮೀಪದ ಶಾಲೆಯತ್ತ ನುಗಿದ್ದಾನೆ. ಆತನನ್ನು ಅರೆಸ್ಟ್ ಮಾಡಿರುವ ಪೊಲೀಸರು ಈಗ ಆತನನ್ನು ಕೋರ್ಟ್ ಮುಂದೆ ಹಾಜರು ಪಡಿಸಿದಾಗ ಅವನು ತನ್ನ ಗೋಳು ಹೆಳಿಕೊಂಡಿದ್ದಾನೆ.
ತಾನು ಬದುಕಿರುವುದು ಸಾಬೀತು ಪಡಿಸಲು ಬೇರೆಯವರನ್ನು ಸಾಯಿಸಲು ನೋಡಿದ್ದು ತಪ್ಪು
ಈತ ಬೇರೆಯವರಿಗೆ ತೊಂದರೆ ಮಾಡಿದಿರುವ ಮಾರ್ಗ ಹುಡುಕ ಬಹುದಿತ್ತು, ಆದರೆ ತಾನು ಬದುಕಿದ್ದೇನೆ ಎಂದು ಸಾಬೀತು ಮಾಡಲು ಬೇರೆಯವರಿಗೆ ತೊಂದರೆ ಮಾಡಿದ್ದಾನೆ.
ಕಳೆದ ವರ್ಷ ನವೆಂಬರ್ನಲ್ಲಿ ನಾನು ಬದುಕಿದ್ದೇನೆ ಎಂದು ಬೋರ್ಡ್ ಹಿಡಿದು ಓಡಾಡಿದ್ದ
ಈತ ಸತ್ತಿದ್ದಾನೆ ಎಂದು ಡೆತ್ ಸರ್ಟಿಫಿಕೇಟ್ ಬಂದಾಗ ಇಲ್ಲಾ ಬದುಕಿದ್ದೇನೆ ಎಂದು ಬೋರ್ಡ್ ಹಿಡಿದು ಓಡಾಡಿದ್ದ, ಆದರೂ ಆತನ ಕಡೆಗೆ ಗಮನ ನೀಡಿರಲಿಲ್ಲ, ಆವಾಗ ಅಧಿಕಾರಿಗಳು ಎಚ್ಚೆತ್ತುಕೊಂಡು ತಪ್ಪು ಸರಿಪಡಿಸಿದ್ದರೆ ಆತನಿಂದ ಕ್ರೈಮ್ ನೀಡುತ್ತಿರಲಿಲ್ಲ, ಈಗ ಆತನ ಅಪರಾಧಕ್ಕೆ ಅಧಿಕಾರಿಗಳೂ ಕಾರಣ, ಆತನಿಗೆ ಮಾತ್ರ ಶಿಕ್ಷೆ ಆದರೆ ಸಾಕೇ? ಆತನಿಗೆ ಡೆತ್ ಸರ್ಟಿಫಿಕೇಟ್ ನೀಡಿರುವ ಅಧಿಕಾರಿಗಳೇ ಶಿಕ್ಷೆ ಆಗಬೇಕಲ್ಲವೇ?



Click it and Unblock the Notifications