Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
Govardhan Puja 2025: ಗೋಪೂಜೆ ಮುಹೂರ್ತ, ಪೂಜಾ ಸಮಯ, ಪೂಜೆ ಹಿಂದಿನ ಕಥೆ ಏನು? ಇಲ್ಲಿದೆ ಮಾಹಿತಿ!!
Govardhan Puja 2025: ದೀಪಾವಳಿಯ ಸಂದರ್ಭದಲ್ಲಿ ದೀಪಗಳೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ. ಅದ್ರಲ್ಲೂ ದೀಪಾವಳಿ ವಿವಿಧ ಭಾಗದಲ್ಲಿ ಹಲವು ದಿನಗಳ ಕಾಲ ಆಚರಿಸುವುದು ನೋಡಬಹುದು. ಅದ್ರಲ್ಲೂ ದೀಪಾವಳಿಯಲ್ಲಿ ಹಲವು ರೀತಿಯ ಆಚರಣೆಗಳು ಗಮನ ಸೆಳೆಯುತ್ತವೆ. ದೀಪಾವಳಿ ಲಕ್ಷ್ಮಿ ಪೂಜೆ, ಗೋವರ್ಧನ ಪೂಜೆ ಪ್ರತಿ ವರ್ಷ ನಡೆಯಲಿದೆ.
ಹಾಗೆ ಹಲವು ಭಾಗದಲ್ಲಿ ತುಳಸಿ ಪೂಜೆ ನಡೆಯುವುದು, ದೀಪೋತ್ಸವ, ರಥೋತ್ಸವಗಳು ನಡೆಯುವುದು ಕೂಡ ನಾವು ನೋಡಬಹುದು. ಹಾಗೆ ದೀಪಾವಳಯ ಕೊನೆಯ ಆಚರಣೆಯಾಗಿ ಗೋವರ್ಧನ ಪೂಜೆ ಅಥವಾ ಗೋಪೂಜೆಯಾಗಿದೆ. ಈ ದಿನ ಗೋವುಗಳಿಗೆ ಸ್ನಾನ ಮಾಡಿಸಿ ಪೂಜೆ ಮಾಡುವುದು ಹಾಗೆ ಸಂಜೆ ಜಮೀನು ಪೂಜೆ ಮಾಡುವುದು ನೋಡಬಹುದು.

ಗ್ರಾಮೀಣ ಭಾಗದಲ್ಲಿ ಈ ಪೂಜೆ ಅಥವಾ ಹಬ್ಬ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ ಗೋವುಗಳಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಹಾಗಾದ್ರೆ ಗೋಪೂಜೆ ಹಿಂದಿರುವ ಕಥೆ ಏನು? ಈ ಪೂಜೆ ಮಾಡುವುದೇಕೆ? ಶುಭ ಮುಹೂರ್ತ ಯಾವುದು ಎಂಬುದನ್ನು ತಿಳಿದುಕೊಳ್ಳೋಣ.
ಗೋಪೂಜೆ ಮುಹೂರ್ತ
ಗೋಪೂಜೆಯನ್ನು ಅಕ್ಟೋಬರ್ 22ರಂದು ಆಚರಿಸಲಾಗುತ್ತಿದೆ. ಗೋಪೂಜೆಯ ಪ್ರತಿಪಾದ ತಿಥಿಯು ಅಕ್ಟೋಬರ್ 21 ರಂದು ಅಂದರೆ ಇಂದು ಸಂಜೆ 05:54ಕ್ಕೆ ಆರಂಭಗೊಳ್ಳಲಿದೆ. ಹಾಗೆ ಇದು ಅಕ್ಟೋಬರ್ 22ರ ರಾತ್ರಿ 08:16ಕ್ಕೆ ಮುಗಿಯಲಿದೆ. ಈ ಶುಭ ಪೂಜೆಯ ಪ್ರಾತಃಕಾಲ ಅಕ್ಟೋಬರ್ 22ರ ಬೆಳಗ್ಗೆ 06:39ರಿಂದ 8:57ರ ರ ವರೆಗೆ ಇರಲಿದೆ.
ಗೋಪೂಜೆಯ ವಿಧಾನ
ಮೊದಲು ಗೋವುಗಳಿಗೆ ಸ್ನಾನ ಮಾಡಿಸುವುದು. ಹಾಗೆ ಅವುಗಳಿಗೆ ಅಲಂಕಾರ ಮಾಡುವುದು. ನಂತರ ಗೋವುಗಳ ಕಾಲು ತೊಳೆದು ಅರಶಿಣ ಕುಂಕುಮ ಹಚ್ಚಿ ಪೂಜೆ ಮಾಡುವುದು. ಹೂವುಗಳಿಂದ ಅಲಂಕಾರ ಮಾಡಿ ಅವುಗಳಿಗೆ ಆಹಾರ ನೀಡುವುದು.
ಗೋರ್ವಧನ ಪೂಜೆ ಮಾಡುವುದೇಕೆ?
ಈ ಪೂಜೆಯ ಹಿನ್ನಲೆ ಪುರಾಣಗಳಲ್ಲಿಯೇ ಸಿಗುತ್ತದೆ. ಗೋವುಗಳು ಹಾಗೆ ಶ್ರೀಕೃಷ್ಣನ ನೆನೆಯುವ ಸಲುವಾಗಿ ಈ ಪೂಜೆ ಮಾಡಲಾಗುತ್ತದೆ. ಹಿಂದೂ ಪುರಾಣಗಳಲ್ಲಿ ಗೋವುಗಳನ್ನು ಗೋಮಾತೆಯಾಗು ಪೂಜ್ಯನೀಯ ಭಾವದಿಂದ ನೋಡಲಾಗಿದೆ. ಮುಕ್ಕೋಟಿ ದೇವರು ಗೋವಿನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗಿದೆ. ಹಾಗೆ ಈ ಪೂಜೆ ಮಾಡುವುದು ಮುಕ್ಕೋಟಿ ದೇವರ ಆಶಿರ್ವಾದ ಪಡೆದಂತೆ ಎಂದು ನಂಬಲಾಗುತ್ತದೆ.
ಗೋಪೂಜೆಯ ಹಿಂದಿನ ಕಥೆ ಏನು?
ಪುರಾಣಗಳ ಪ್ರಕಾರ ಈ ಗೋಪೂಜೆಗೆ ಬಹಳ ಪ್ರಮುಖ ಮಹತ್ವ ನೀಡಲಾಗಿದೆ. ಇದು ಶ್ರೀಕೃಷ್ಣನ ನೆನೆಯುವ ದಿನ. ಅದ್ರಲ್ಲೂ ಉತ್ತರ ಭಾರತದಲ್ಲಿ ಗೋಪೂಜೆಯ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಅಲ್ಲಿನ ಮಥುರಾದ ಬ್ರಜ್ ಪ್ರದೇಶದಲ್ಲಿ ಇಂದ್ರನನ್ನು ಪೂಜಿಸಲಾಗುತ್ತಿತ್ತು. ಆದ್ರೆ ಒಂದು ದಿನ ಶ್ರೀಕೃಷ್ಣನು ಅಲ್ಲಿಗೆ ಬಂದು ಇಂದ್ರನ ಬದಲಾಗಿ ನಮಗೆ ಆಸರೆಯಾದ ಹಸುಗಳಿಗೆ ಆಹಾರ ನೀಡುವಂತಹ ಗೋವರ್ಧನ ಗಿರಿಯನ್ನು ಪೂಜಿಸೋಣ ಎಂದು ಹೇಳಿದನಂತೆ. ಆಗ ಕೃಷ್ಣನು ಹಸುಗಳ ಮೇಯಿಸುವ ಕೆಲಸ ಮಾಡುತ್ತಿದ್ದ. ಜನರೆಲ್ಲ ಇದಕ್ಕೆ ಒಪ್ಪಿಗೆ ನೀಡಿದರಂತೆ. ಆದ್ರೆ ಇದರಿಂದ ಕೋಪಗೊಂಡ ಇಂದ್ರನು ವರುಣ ದೇವನನ್ನು ಕರೆದು ಗೋವರ್ಧನ ಬೆಟ್ಟದ ಮೇಲೆ ಮಳೆ ಸುರಿಸುವಂತೆ ಹೇಳಿದನಂತೆ.
ವರುಣ ಮಳೆ ಸುರಿಸಿದ ಪರಿಣಾಮ ಗೋವರ್ಧನ ಬೆಟ್ಟ ಕುಸಿಯುವಂತಹ ನೀರು ಊರಿನೊಳಗೆ ನುಗ್ಗಿತ್ತಂತೆ. ಈ ಸಮಯದಲ್ಲಿ ಊರಿನವರು ತಮ್ಮ ಹಸುಗಳನ್ನು ರಕ್ಷಿಸಲು ಕೃಷ್ಣನ ಬಳಿ ಬಂದರಂತೆ. ಕೃಷ್ಣ ತನ್ನ ಜನರನ್ನು ರಕ್ಷಿಸಲು ಕಿರು ಬೆರಳಿನಿಂದ ಗೋವರ್ಧನ ಗಿರಿಯನ್ನು ಎತ್ತಿ ವೃಂದಾವನದ ಎಲ್ಲಾ ಜನರನ್ನು ಅದರ ಕೆಳಗೆ ಆಶ್ರಯ ನೀಡಿ ಕಾಪಾಡಿದದನು.
ಅನಂತರ ಎಂದ್ರನು ಕೃಷ್ಣ ಶಕ್ತಿ ಏನೆಂಬುದನ್ನು ಅರಿತನಂತೆ, ಬಳಿಕ ಆತನ ಬಳಿ ಕ್ಷಮೆಯಾಚಿಸಿದನು. ಹಾಗೆ ಅಲ್ಲಿನ ಜನರು ಕೃಷ್ಣನನ್ನು ಪೂಜಿಸಲು ಆರಂಭಿಸಿದರು. ಹಾಗೆ ಗೋವುಗಳಿಗೂ ವಿಶೇಷ ಪೂಜೆ ಅಂದಿನಿಂದ ಆರಂಭಗೊಂಡಿತ್ತು ಎಂದು ಹೇಳಲಾಗಿದೆ.



Click it and Unblock the Notifications











