Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಭಾರತದ ಈ ನದಿಯಲ್ಲಿ ಚಿನ್ನವೇ ಸಿಗುತ್ತೆ..! ಇಂದಿಗೂ ಜನ ಹುಡುಕಾಡುತ್ತಾರೆ..!
ಭಾರತದಲ್ಲಿ ನದಿಗಳಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಎಲ್ಲಾ ನದಿಗಳನ್ನು ಸ್ತ್ರೀ ಹೆಸರಿನಿಂದ ಕರೆಯಲಾಗುತ್ತದೆ. ಹಾಗೆ ಪ್ರತಿಯೊಂದು ನದಿಯ ಹಿಂದೆಯೂ ಒಂದೊಂದು ಕಥೆಗಳಿರುವುದು ಕೇಳಿರಬಹುದು. ಭಾರತದಲ್ಲಿ ಹರಿಯುವ ಪ್ರತಿಯೊಂದು ನದಿಯೂ ಒಂದೊಂದು ಪವಿತ್ರ ಸ್ಥಳಗಳ ಕುರಿತು ಹೇಳುತ್ತವೆ. ಹಾಗೆ ತಮ್ಮದೇ ವೈಶಿಷ್ಟ್ಯತೆ ಹೊಂದಿವೆ.
ಅನೇಕ ನದಿಗಳು ಅವುಗಳ ಪಾವಿತ್ರ್ಯ, ಜಲ ಸಂಪನ್ಮೂಲಗಳು ಮತ್ತು ಚೈತನ್ಯಕ್ಕಾಗಿ ಪೂಜಿಸಲ್ಪಡುತ್ತವೆ. ಅದರಲ್ಲೂ ಗಂಗಾ, ತುಂಗಾ, ಯಮುನಾ, ಕೃಷ್ಣಾ, ಗೋಧಾವರಿ ನದಿಯನ್ನು ಪವಿತ್ರ ನದಿಗಳಾಗಿ ನೋಡಲಾಗಿದೆ. ಹಾಗೆ ಕೋಟಿ ಕೋಟಿ ಜನರಿಗೆ ಲಕ್ಷಾಂತರ ರೈತರಿಗೂ ಇವು ಜೀವ ಜಲವಾಗಿ ಪರಿಣಮಿಸಿವೆ. ಹಾಗೆ ಉಪನದಿಗಳು ಉಪ ಕಥೆಗಳು ಇನ್ನೂ ಹತ್ತಾರು ವಿಶೇಷವನ್ನು ಈ ನದಿಗಳು ಒಳಗೊಂಡಿವೆ.

ಇಷ್ಟೆಲ್ಲಾ ವಿಶೇಷತೆಗಳ ನಡುವೆ ಭಾರತದಲ್ಲಿ ಹರಿಯುವ ಒಂದು ನದಿಯಲ್ಲಿ ಇಂದಿಗೂ ಚಿನ್ನಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂಬ ವಿಚಾರ ನಿಮಗೆ ಗೊತ್ತಿದ್ಯಾ? ಹೌದು ಚಿನ್ನದ ಕಣಗಳನ್ನು ತನ್ನಲ್ಲಿಟ್ಟುಕೊಂಡು ಹರಿಯುವ ಈ ನದಿ ಭಾರತದಲ್ಲಿ ಕುತೂಹಲಕ್ಕೆ ಕಾರಣವಾಗಿದೆ, ಶತಮಾನದಿಂದಲೂ ಈ ನದಿ ಹರಿಯುತ್ತಿದ್ದು, ಇಂದಿಗೂ ಈ ನದಿಯಲ್ಲಿ ಚಿನ್ನ ಸಿಗುತ್ತಿದೆ ಎಂದು ಬೆಳಗ್ಗೆಯಿಂದ ಕತ್ತಲಾಗುವವರೆಗೂ ಜನರು ಹುಡುಕಾಡುತ್ತಾರೆ.
ಈ ನದಿ ಜಾರ್ಖಂಡ್ನಿಂದ ಸುಮಾರು 474 ಕಿ.ಲೋ ದೂರ ಹರಿಯುತ್ತದೆ. ಈ ನದಿಯ ವಿಶೇಷತೆಯ ಕಾರಣದಿಂದಾಗಿಯೇ ಇದನ್ನು ಸುವರ್ಣರೇಖಾ ನದಿ ಎಂದು ಕರೆಯಲಾಗಿದೆ. ಈ ನದಿಯಲ್ಲಿ ಶತಮಾನದಿಂದಲೂ ಚಿನ್ನದ ಕಣಗಳು ಸಿಗುತ್ತಿವೆ ಎಂಬ ನಂಬಿಕೆ ಇದೆ. ಹೀಗಾಗಿ ಈ ನದಿ ಹರಿಯುವ ಸ್ಥಳದಲ್ಲೆಲ್ಲ ಜನರು ಚಿನ್ನದ ಕಣ ಆರಿಸಲೆಂದು ತುಂಬಿರುವುದು ಸಾಮಾನ್ಯ.
ಸುವರ್ಣರೇಖಾ ಅಂದರೆ ಚಿನ್ನದ ರೇಖೆ. ಈ ವಿಶಿಷ್ಟ ಲಕ್ಷಣವನ್ನು ವೀಕ್ಷಿಸಲು ದೂರದೂರದ ಜನರು ಭೇಟಿ ನೀಡುತ್ತಾರೆ. ಜಾರ್ಖಂಡ್ ಜೊತೆಗೆ ಈ ನದಿಯು ಉತ್ತರಾಖಂಡ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳನ್ನು ಸಹ ಹಾದು ಹೋಗುತ್ತದೆ. ಈ ನದಿಯ ವಿಶೇಷ ಏನೆಂದರೆ ಅದು ನದಿಯಲ್ಲಿ ಚಿನ್ನ ಸಿಗುವುದು ಮಾತ್ರವಲ್ಲ. ಈ ನದಿಯ ಹಲವು ವಿಶೇಷಗಳಿವೆ.
ಸುವರ್ಣರೇಖಾ ನದಿಯು ಖನಿಜ ಸಮೃದ್ಧಿ ಕಲ್ಲುಗಳಿಂದ ಕೂಡಿದೆ. ಏಕೆಂದರೆ ಈ ನದಿ ಹರಿಯುವ ಸ್ಥಳವು ಬಹಳ ಖನಿಜಾಂಶ ಪ್ರದೇಶದಲ್ಲಿದೆ ಎಂದು ವಿಜ್ಞಾನಿಗಳು ಸಹ ಹೇಳಿದ್ದಾರೆ. ಈ ಖನಿಜ ತುಂಬಿದ ಬಂಡೆಗಳು ನದಿಯ ಸೆಳೆತಕ್ಕೆ ಸಿಲುಕಿದ ಬಳಿಕ ಸಣ್ಣಕಣಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ನದಿಯಲ್ಲಿ ಹರಿಯುತ್ತದೆ. ಇದು ಸಂಪೂರ್ಣ ನೈಸರ್ಗಿಕ ವಿಧಾನವಾಗಿದ್ದರೂ ಇದರ ಹೊಂದೆ ಪುರಾತನ ಕಥೆ ಸಹ ಇದೆ.
ಮಹಾಭಾರತ ಅವಧಿಯಲ್ಲಿ ಪಾಂಡವರು ಕಾಡಿನಲ್ಲಿ ವಾಸಿಸುತ್ತಿದ್ದಾಗ ಈ ಪ್ರದೇಶಕ್ಕೆ ಭೇಟಿ ನೀಡಿದರು. ಒಂದು ದಿನ ಪಾಂಡವರ ತಾಯಿ ಕುಂತಿಗೆ ಬಾಯಾರಿಕೆಯಾಗಿತ್ತು. ಆಕೆ ನೀರಿಗಾಗಿ ಇಡಿ ಕಾಡಿನಲ್ಲಿ ಹುಡುಕಾಡಿದ್ದಳಂತೆ ಆದರೆ ಆಕೆಗೆ ನೀರು ಸಿಗದೆ ಪರದಾಡಿದಳು. ಹೀಗಾಗಿ ಆಕೆ ಮಕ್ಕಳ ಕರೆದು ಎಲ್ಲಿಂದಾದರು ನೀರು ತರುವಂತೆ ಹೇಳಿದಳು, ಆದರೆ ನೀರು ಹುಡುಕಿ ಹೊರಟ ಮಕ್ಕಳು ಬರಿಗೈಯಲ್ಲಿ ವಾಪಾಸು ಬಂದರು.
ಆದರೆ ನೀರು ಬೇಕೆಂದು ಹಠ ಹಿಡಿದು ಕುಳಿತಿದ್ದ ಕುಂತಿ ಅರ್ಜುನನಿಗೆ ನೀರಿನ ವ್ಯವಸ್ಥೆ ಮಾಡಲು ಹೇಳಿದಳು. ಅರ್ಜುನ ತನ್ನ ಬಿಲ್ಲುಗಾರಿಗೆಯ ತಂತ್ರಗಾರಿಯಂತೆ ನೆಲಕ್ಕೆ ಬಾಣ ಹೊಡೆದನಂತೆ, ಇದರಿಂದ ಸುವರ್ಣರೇಖಾ ನದಿ ಹುಟ್ಟಿತು ಎಂದು ಹೇಳಲಾಗಿದೆ. ನೀರು ಭೂಮಿ ಒಳಗಿಂದ ಹರಿಯಲು ಆರಂಭಿಸಿದಾಗ ಚಿನ್ನದ ಕಣಗಳು ಅದರೊಂದಿಗೆ ಬೆರೆತುನೀರು ಶುದ್ಧವಾಯಿತು ಈ ನೀರನ್ನು ಕುಂತಿ ಬಳಸಿದಳು ಎಂದು ಹೇಳಲಾಗಿದೆ. ಅಂದಿನಿಂದ ಇಂದಿನ ವರೆಗೂ ಇದು ಚಿನ್ನದ ನದಿಯಾಗಿ ಪ್ರಸಿದ್ಧಿ ಪಡೆದಿದೆ.



Click it and Unblock the Notifications