Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹತ್ತಿ ಮೂಲಕವೇ ಅರಳಿವೆ ದೇವರ ಮೂರ್ತಿ: ಈಕೆ 86ರ ವಯಸ್ಸಿನ ಸಾಧಕಿ!
ಜೀವನದಲ್ಲಿ ಏನನ್ನಾದರು ಸಾಧಿಸಬೇಕು ಎಂಬ ಹಠ, ಛಲ ಇದ್ದರೆ ವಯಸ್ಸು ಅದಕ್ಕೆ ಅಡ್ಡಿಯಾಗುವುದಿಲ್ಲ. ಅದಕ್ಕೆ ಸಾವಿರಾರು ಉದಾಹರಣೆಗಳು ನಮ್ಮ ನಡುವೆ ಇದೆ. ಅದ್ರಲ್ಲೂ ಮಹಿಳೆಯರು ತಮ್ಮ ಇಳಿ ವಯಸ್ಸಿನಲ್ಲಿ ಸಾಧನೆ ಮಾಡಿದವರು ಸಹ ನಮ್ಮ ನಡುವೆಯೇ ಇದ್ದಾರೆ. ಹೊಸದನ್ನು ಹುಡುಕುವ, ಹೊಸ ಜೀವನ ಕಟ್ಟಿಕೊಳ್ಳುವ ಬಯಕೆ ಇಳಿ ವಯಸ್ಸಿನಲ್ಲೂ ನನಸಾಗಿಸಿಕೊಂಡಿದ್ದು ಈ ಲಲಿತಮ್ಮ.
ಹೌದು ತಮ್ಮ 86ನೇ ವಯಸ್ಸಿನಲ್ಲೂ ಲಲಿತಮ್ಮ ಯಾರು ಊಹಿಸಲಾಗದ ರೀತಿಯಲ್ಲಿ ನೈಪುಣ್ಯ ತಮ್ಮಲ್ಲಿಟ್ಟುಕೊಂಡಿದ್ದಾರೆ. ಶಿವಮೊಗ್ಗದ ಸಣ್ಣ ಹಳ್ಳಿಯೊಂದರಲ್ಲಿ ನೆಲೆಸಿರುವ ಅವರು ಹತ್ತಿ ಬಳಸಿ ದೇವರ ಕಲಾಕೃತಿಗಳ ಮಾಡುತ್ತಾರೆ. ಅಚ್ಚರಿ ಏನೆಂದರೆ ಈ ಕಲಾಕೃತಿಗಳ ರಚಿಸಲು ಅವರು ಒಂದಿಂಚು ಬೇರೆ ವಸ್ತು ಬಳಸುವುದಿಲ್ಲ ಬರಿ ಹತ್ತಿಯಿಂದ ಎಂತಹ ಮೂರ್ತಿಯನ್ನಾದರು ಅವರು ರಚಿಸುತ್ತಾರೆ.

80 ವರ್ಷ ದಾಟಿದ ಮಂದಿ ಬೆನ್ನು ಆಗಿ ನಡೆಯಲು ಕೂರಲು ಆಗದೆ ಜೀವನ ನಡೆಸಲು ಮತ್ತೊಬ್ಬರ ಸಹಾಯ ಪಡೆಯುವ ಕಾಲದಲ್ಲಿ ಇವರು ಪರಿಸರ ಪ್ರೇಮಿ ಕಲಾಕೃತಿಗಳ ರಚಿಸುವಲ್ಲಿ ಗಮನ ಸೆಳೆಯುತ್ತಾರೆ. ಅವರು ವೀಣೆ ನುಡಿಸುತ್ತಿರುವ ಸರಸ್ವತಿ, ಗಣಪತಿ, ಶಿವ, ಪಾರ್ವತಿ, ಇಲಿ, ರಾಮ-ಸೀತೆ-ಕೌಸಲ್ಯ, ಕೃಷ್ಣನ ವಿವಿಧ ಭಂಗಿಗಳು ಸೇರಿ ನೂರಾರು ಕಲಾಕೃತಿಗಳನ್ನು ಮನೆಯಲ್ಲಿ ಮಾಡಿಟ್ಟಿದ್ದಾರೆ.
ಆದ್ರೆ ಮೂರ್ತಿಗಳಿಗೆ ಅವರೇ ಬಣ್ಣಗಳ ಹಚ್ಚುತ್ತಾರೆ. ರಂಗೊಲಿಗೆ ಬಳಸುವಂತೆ ಬಣ್ಣಗಳನ್ನು ನೀರಿನಲ್ಲಿ ಕರಡಿಕೊಂಡು ಈ ಮೂರ್ತಿಗಳನ್ನು ಮತ್ತಷ್ಟು ಸುಂದರವಾಗಿದಲು ಹಚ್ಚುತ್ತಾರೆ.
ಈ ಮೂರ್ತಿ ಮಾಡುವುದು ಹೇಗೆ?
ಮೊದಲು ಹತ್ತಿಯನ್ನು ತೆಗೆದುಕೊಂಡು ಚೆನ್ನಾಗಿ ನೀರಿನಲ್ಲಿ ಅದ್ದಿರುತ್ತಾರೆ. ಬಳಿಕ ಅದನ್ನು ಬಿಸಿಲಿನಲ್ಲಿ ಒಣಗಿಸಿ ಗಡಸಾಗಿಸುತ್ತಾರೆ. ಹೀಗೆ ಹತ್ತಿ ಬಿಸಿಲಿನಲ್ಲಿ ಒಣಗಿಸುವುದರಿಂದ ಅದು ಗಡಸಾಗಿತ್ತದೆ. ಜೊತೆಗೆ ಯಾವ ರೀತಿ ಬೇಕಾದರು ತಿರುಗಿಸಬಹುದು.
ಅವರು ಈ ಮೂರ್ತಿ ರಚಿಸಲು ಎಲ್ಲಿಯೂ ತರಬೇತಿ ಪಡೆದಿಲ್ಲ. ಹಾಗೆ ಯಾರಿಂದಲೂ ನೋಡಿಯೂ ಕಲಿತಿಲ್ಲ. ಮನೆಯಲ್ಲಿ ಅವರೆ ಮಾಡಿ ಸ್ವಯಂ ಪ್ರಯತ್ನದ ಮೂಲಕ ಈ ರೀತಿಯ ಕಲಾಕೃತಿಗಳ ಮಾಡಿ ಅಚ್ಚರಿ ಮೂಡಿಸುತ್ತಾರೆ. ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದ ಅವರು, ಮನೆಯಲ್ಲಿ ಫ್ರೀ ಆಗಿದ್ದಾಗ ಈ ಕಲಾಕೃತಿಗಳ ರಚಿಸುವ ಕೆಲಸ ಮಾಡಿದ್ದರು. ಆರಂಭದಲ್ಲಿ ಸಣ್ಣ ಸಣ್ಣ ಕಲಾಕೃತಿಗಳ ರಚಿಸುವ ಕಾರ್ಯ ಮಾಡುತ್ತಿದ್ದರು.
ಬಳಿಕ ದೊಡ್ಡ ಮೂರ್ತಿಗಳನ್ನೂ ಸಹ ಮಾಡಿ ಸೈ ಎನಿಸಿಕೊಂಡರು. ಆದರೆ ಈ ಮೂರ್ತಿಗಳನ್ನು ಅವರು ಎಲ್ಲಿಯೂ ಮಾರಾಟ ಮಾಡಿಲ್ಲ. ಬದಲಿಗೆ ಮನೆಯಲ್ಲೇ ಸಂಗ್ರಹ ಮಾಡಿಟ್ಟಿದ್ದಾರೆ. ನಿತ್ಯ ಮನೆಯಲ್ಲಿ ಕೆಲಸಗಳ ಮಾಡುತ್ತಾರೆ. ಯಾವುದೇ ಸಮಯ ವ್ಯರ್ಥಮಾಡದೆ ಸಣ್ಣ ಪುಟ್ಟ ಕೆಲಸ ಮಾಡುತ್ತಾರೆ.
ಈ ಕಲಾಕೃತಿ ರಚನೆ ಮಾತ್ರವಲ್ಲ ಅವರು ಸಂಗೀತ ಸಹ ಕಲಿಯಲು ಮುಂದಾಗಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲಿ ಸಂಗೀತ ಕಲಿಕೆಯತ್ತ ಮನಸ್ಸು ಮಾಡಿದ್ದರಂತೆ. ಕರ್ನಾಟಕ ಸಂಗೀತ ಜೂನಿಯರ್ ಪರೀಕ್ಷೆ ಸಹ ಎದುರಿಸಿದ್ದಾರೆ. ಈ ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅಚ್ಚರಿಗೂ ಕಾರಣರಾಗಿದ್ದಾರೆ.
ಅವರ ಇಳಿವಯಸ್ಸಿನ ಸಾಧನೆ ಇಷ್ಟಕ್ಕೆ ನಿಲ್ಲುವುದಿಲ್ಲ. ಅವರು ಅಡುಗೆಯಲ್ಲಿ ಆಸಕ್ತಿ ಇದ್ದರು ಅವರು ಮಲೆನಾಡ ಅಡುಗೆ ಎಂಬ ಪುಸ್ತಕ ಸಹ ಬರೆದಿದ್ದಾರೆ. ಹೀಗೆ ತಮ್ಮ ಇಳಿ ವಯಸ್ಸಿನಲ್ಲೂ ಅವರು ಇಂತಹ ಸಾಧನೆಗಳ ಮೂಲಕ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದಾರೆ.



Click it and Unblock the Notifications










