Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್..! ಸ್ಫೂರ್ತಿಯಾಗಿದ್ದು ವಿರಾಟ್..!
2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಲಕ್ಷ ಲಕ್ಷ ಮಂದಿಯ ನಡುವೆ ಒಂದಿಷ್ಟು ಜನರ ಕನಸತ್ತು ಈ ವರ್ಷ ನೆರವೇರಿದೆ. ಇನ್ನು ಕೆಲವರ ಉತ್ಸಾಹ ಮುಂದಿನ ಬಾರಿ ಮತ್ತೆ ಪರೀಕ್ಷೆ ಬರೆಯುವತ್ತ ಸಾಗಿದೆ. ಯುಪಿಎಸ್ಸಿ ಪರೀಕ್ಷೆ ಬರೆದು ನಾಡಿಗೆ ಕೀರ್ತಿ ತರಬೇಕು, ದೇಶದಕ್ಕಾಗಿ ಸೇವೆ ಸಲ್ಲಿಸಬೇಕು ಎಂಬ ಕನಸು ಹಲವರದ್ದಾಗಿರುತ್ತೆ. ಆದ್ರೆ ಕಠಿಣ ಅಭ್ಯಾಸ, ಶ್ರಮದಿಂದ ಮಾತ್ರ ಅದರಲ್ಲಿ ಯಶಸ್ಸು ಸಾಧಿಸಬಹುದಾಗಿದೆ.
ಈ ಬಾರಿಯ ಯುಪಿಎಸ್ಸಿ ಪರೀಕ್ಷೆ ಹಲವು ಹೊಸತುಗಳಿಂದ ಸುದ್ದಿಯಾಗುತ್ತಿದೆ. ಇದೀಗ ದೇಶಕ್ಕೆ ಮೂರನೇ ರ್ಯಾಂಕ್ ಬಂದಿರುವ ಯುವತಿ ತನ್ನ ಕನಸು ಈಡೇರಿದ ಕ್ಷಣದಿಂದಾಗಿ ಸಂತಸ ಹಂಚಿಕೊಂಡಿದ್ದಾಳೆ. ಡೋಣೂರು ಅನನ್ಯಾ ರೆಡ್ಡಿ ದೇಶಕ್ಕೆ 3ನೇ ರ್ಯಾಂಕ್ ಪಡೆದು ಎಲ್ಲರ ಗಮನಸೆಳೆದಿದ್ದಾಳೆ. ಜೊತೆಗೆ ಆಕೆ ಈ ಕ್ಷಣಗಳನ್ನು ಹಂಚಿಕೊಳ್ಳುವಾಗ ಆಕೆಯ ಯಶಸ್ಸಿಗೆ ಕಾರಣ ಯಾರು ಎಂಬುದನ್ನು ವಿವರಿಸಿದ್ದಾಳೆ.

ಆಕೆಯ ಯುಪಿಎಸ್ಸಿ ಯಶಸ್ಸಿನ ಹಿಂದಿರುವುದು ಕಠಿಣ ಶ್ರಮ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯಂತೆ. ಹೌದು ಆಕೆಗೆ ವಿರಾಟ್ ಕೊಹ್ಲಿಯಲ್ಲಿರುವ ಶಿಸ್ತು, ಯಾವಾಗಲೂ ಸೋಲಬಾರದು ಎಂಬ ಮನೋಭಾವವೇ ಆಕೆಗೆ ಸ್ಪೂರ್ತಿ ನೀಡಿದ್ದಂತೆ. ಈ ಕುರಿತು ಆಕೆ ಮಾತನಾಡುತ್ತಾ, "ವಿರಾಟ್ ಕೊಹ್ಲಿ, ಅವರು ನನ್ನ ಅಚ್ಚುಮೆಚ್ಚಿನ ಆಟಗಾರ ಮತ್ತು ಒಂದು ರೀತಿಯ ಸ್ಫೂರ್ತಿ ಇದೆ ಎಂದು ನಾನು ಭಾವಿಸುತ್ತೇನೆ ಮತ್ತು ಅವರು ಎಂದಿಗೂ ಬಿಟ್ಟುಕೊಡಬಾರದು ಎಂಬ ಮನೋಬಾವದಲ್ಲಿರುತ್ತಾರೆ. ಶಿಸ್ತು ಮತ್ತು ಅವರ ಕೆಲಸವು ವಿರಾಟ್ ಕೊಹ್ಲಿಯಿಂದ ಪ್ರಮುಖ ಟೇಕ್ಅವೇ ಆಗಿದೆ, ಅದಕ್ಕಾಗಿಯೇ ಅವರು ಸ್ಫೂರ್ತಿದಾಯಕವಾಗಿದ್ದಾರೆ" ಎಂದು ಅನನ್ಯಾ ಹೇಳಿದ್ದಾರೆ.
ನೀವು ಕ್ರಿಕೆಟ್ ಪ್ರೇಮಿಗಳಾಗಿದ್ದರೆ ವಿರಾಟ್ ಕೊಹ್ಲಿಯ ವ್ಯಕ್ತಿತ್ವ ಎಂತದ್ದು ಎಂಬ ವಿವರಣೆಯ ಅಗತ್ಯವಿರುವುದಿಲ್ಲ. ವಿರಾಟ್ ಕ್ರಿಕೆಟ್ ಕಂಡ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಹಲವು ಮೈಲಿಗಲ್ಲು ತಲುಪಿದ್ದು ಕೊಹ್ಲಿ ನಾಯಕತ್ವದಲ್ಲಿ. ವಿದೇಶಿ ನೆಲದಲ್ಲಿ ಭಾರತದ ಕ್ರಿಕೆಟ್ ತಂಡ ಬಲವಾಗಿ ಎದುರಾಳಿಗಳ ಸೋಲಿಸಿದ್ದು ಸಹ ವಿರಾಟ್ ನಾಯಕತ್ವದಲ್ಲಿ.
ಜೊತೆಗೆ ವಿರಾಟ್ ಕೊಹ್ಲಿ ಯುವ ಕ್ರಿಕೆಟರಿಗೆ ಸ್ಪೂರ್ತಿಯಾಗಿದ್ದಾರೆ. ಸಾವಿರಾರು ಕ್ರಿಕೆಟರ್ಗಳ ಬಾಯಲ್ಲಿ ವಿರಾಟ್ ಕೊಹ್ಲಿಯ ಗುಣಗಾನ ಕೇಳಬಹುದು. ಇನ್ನು ವಿಶ್ವದಾದ್ಯಂತ ಅಭಿಮಾನಿಗಳ ಸಂಪಾದಿಸಿರುವ ವಿರಾಟ್ ಏಷ್ಯಾದಲ್ಲಿ ಅತ್ಯಂತ ಫೇಮಸ್ ಕ್ರೀಡಾಪಟು ಸಹ ಹೌದು. ಈಗ ಯುಪಿಎಸ್ಸಿಯಲ್ಲಿ ಉತ್ತಮ ಸಾಧನೆ ಮಾಡಿರುವ ಯುವತಿಯ ಯಶಸ್ಸಿಗೂ ವಿರಾಟ್ ಸ್ಪೂರ್ತಿಯಾಗಿದ್ದಾರೆ.
ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್ ಮಾಡಿದ ಅನನ್ಯಾ
ತೆಲಂಗಾಣದ ಮಹಾಬೂಬ್ನಗರದ ಅನನ್ಯಾ ಪಾಂಡೆ ತಮ್ಮ ಮೊದಲ ಯತ್ನದಲ್ಲಿ ಯುಪಿಎಸ್ಸಿ ಪಾಸ್ ಮಾಡಿದ್ದಾರೆ. ಅನನ್ಯಾ ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ಕಾಲೇಜಿನಿಂದ ಭೂವಿಜ್ಞಾನದಲ್ಲಿ ಬಿಎ (ಆನರ್ಸ್) ಪದವಿ ಪಡೆದರು. 2021 ರಲ್ಲಿ ಪದವಿ ಪಡೆದ ನಂತರ, ಅವರು ಹೈದರಾಬಾದ್ನಲ್ಲಿ UPSC ಪರೀಕ್ಷೆಗಳಿಗೆ ತಯಾರಿ ಆರಂಭಿಸಿದರು. ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ತೇರ್ಗಡೆಯಾದಳು.
"ನನ್ನ ಬಾಲ್ಯದಿಂದಲೂ, ನನ್ನ ಮನಸ್ಸಿನಲ್ಲಿ ಈ ಕಲ್ಪನೆ ಇತ್ತು. ನನ್ನ ಅಜ್ಜನಿಂದ UPSC ಗೆ ಪರಿಚಯವಾಯಿತು. ಹಾಗಾಗಿ ನನ್ನಲ್ಲಿ ಯಾವಾಗಲೂ ಆ ಬೀಜವಿತ್ತು. ನನ್ನ ಪದವಿಯನ್ನು ಪೂರ್ಣಗೊಳಿಸಿದ ನಂತರ ನಾನು ವೃತ್ತಿಜೀವನದ ಅವಕಾಶಗಳನ್ನು ಹುಡುಕಲು ಪ್ರಾರಂಭಿಸಿದಾಗ, ನಾಗರಿಕ ಸೇವೆಗಳು ನನಗೆ ಒಂದು ವಿಶಿಷ್ಟವಾದ ಮಿಶ್ರಣವನ್ನು ಒದಗಿಸುತ್ತವೆ ಎಂದು ನಾನು ಅರಿತುಕೊಂಡೆ-ನಾನು ನನ್ನ ದೇಶಕ್ಕೆ ಸೇವೆ ಸಲ್ಲಿಸಬಲ್ಲೆ ಮತ್ತು ಆಡಳಿತಾತ್ಮಕ ಕರ್ತವ್ಯಗಳನ್ನು ಹೊಂದುವ ಅವಕಾಶವನ್ನು ಸಹ ಹೊಂದಿದ್ದೇನೆ ಎಂದು ಆಕೆ ವಿವರಿಸಿದ್ದಾಳೆ.



Click it and Unblock the Notifications