ಗಣೇಶನ ಮೂರ್ತಿ ತರುತ್ತೀರಾ? ಈ ತಪ್ಪು ಮಾಡ್ಬೇಡಿ.. ಇಲ್ಲದಿದ್ದರೆ ದರಿದ್ರ ಬರುತ್ತೆ!

ಗಣಪತಿ ಮೂರ್ತಿ ತರುವಾಗ ಈ ತಪ್ಪುಗಳನ್ನು ಮಾಡಬೇಡಿ! ಇಲ್ಲದಿದ್ದರೆ ದುರದೃಷ್ಟ ಬರುತ್ತೆ. ಹೌದು, ಗಣೇಶ ಚತುರ್ಥಿಯನ್ನು (Ganesh Chaturthi 2025) ದೇಶದಾದ್ಯಂತ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣಪತಿಯ ಜನನವಾಯಿತು ಎಂದು ನಂಬಿಕೆ. ಈ ದಿನದಂದು ಭಕ್ತರು ಗಣಪತಿ ವಿಗ್ರಹವನ್ನು ಮನೆಗೆ ತಂದು ಪ್ರತಿಷ್ಠಾಪಿಸಿ, ಹತ್ತು ದಿನಗಳ ಕಾಲ ಪೂಜಿಸುತ್ತಾರೆ. ಆದರೆ, ಗಣೇಶನ ಮೂರ್ತಿ ತರುವಾಗ ವಾಸ್ತು ಶಾಸ್ತ್ರದ (vastu tips for lord ganesha idol) ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.

ಗಣೇಶ ಮೂರ್ತಿಯನ್ನು (ganesh murti) ಮನೆಗೆ ತರುವಾಗ, ಅದರ ಗಾತ್ರದ ಬಗ್ಗೆ ಗಮನ ಹರಿಸಬೇಕು. ಅದು ತುಂಬಾ ಚಿಕ್ಕದಾಗಿರಬಾರದು ಅಥವಾ ತುಂಬಾ ದೊಡ್ಡದಾಗಿರಬಾರದು. ಮನೆಯಲ್ಲಿ ಪೂಜಿಸಲು ಮಧ್ಯಮ ಗಾತ್ರದ ಗಣಪತಿ ಮೂರ್ತಿಯನ್ನು ಇಡುವುದು ಅತ್ಯಂತ ಶುಭ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ಕಾಪಾಡಲು ಸಹಾಯ ಮಾಡುತ್ತದೆ. ದೊಡ್ಡ ಗಾತ್ರದ ಮೂರ್ತಿಗಳನ್ನು ಸಾಮಾನ್ಯವಾಗಿ ಸಾರ್ವಜನಿಕ ಪೆಂಡಾಲ್‌ಗಳಲ್ಲಿ ಇಡಲಾಗುತ್ತದೆ.

Vastu Tips For Ganesha Idol

ಸೊಂಡಿಲಿನ ದಿಕ್ಕು

ಗಣಪತಿ ಮೂರ್ತಿ ತರುವಾಗ ಅವರ ಸೊಂಡಿಲಿನ ದಿಕ್ಕನ್ನು ಗಮನಿಸುವುದು ಅತ್ಯಂತ ಮುಖ್ಯ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇದು ಮನೆಯಲ್ಲಿ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗಿದೆ. ಮನೆಯಲ್ಲಿ ಪೂಜಿಸಲು ವಾಮಾವರ್ತಿ ಅಥವಾ ಎಡಕ್ಕೆ ಬಾಗಿದ ಸೊಂಡಿಲಿನ ಮೂರ್ತಿಯನ್ನು ತರುವುದು ಅತ್ಯಂತ ಶುಭಕರ. ಈ ದಿಕ್ಕನ್ನು ಯಶಸ್ಸು ಮತ್ತು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಈ ಮೂರ್ತಿಯನ್ನು ಪೂಜಿಸುವುದು ಸುಲಭ. ದಕ್ಷಿಣಮುಖಿ ಅಥವಾ ಬಲಕ್ಕೆ ಬಾಗಿದ ಸೊಂಡಿಲಿನ ಮೂರ್ತಿಯ ಪೂಜಾ ನಿಯಮಗಳು ಕಠಿಣವಾಗಿರುತ್ತವೆ. ನೀವು ಗಣೇಶನನ್ನು ಒಲಿಸಿಕೊಳ್ಳುವುದು ಕಷ್ಟ ಎಂದು ಹೇಳಲಾಗುತ್ತದೆ. ಇಂತಹ ಮೂರ್ತಿಗಳನ್ನು ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಇಡಲಾಗುತ್ತದೆ.

Take a Poll

ಮೂರ್ತಿಯ ಭಂಗಿ

ಗಣೇಶ ಚತುರ್ಥಿಯ ಸಮಯದಲ್ಲಿ ನಿಂತಿರುವ, ಕುಳಿತಿರುವ ಮತ್ತು ನೃತ್ಯ ಮಾಡುವ ವಿವಿಧ ಭಂಗಿಯ ಮೂರ್ತಿಗಳು ಸಿಗುತ್ತವೆ. ಪ್ರತಿಯೊಂದು ಭಂಗಿಯು ತನ್ನದೇ ಆದ ಮಹತ್ವವನ್ನು ಹೊಂದಿದೆ. ಆದರೆ, ಮನೆಯಲ್ಲಿ ಪೂಜಿಸಲು ಕುಳಿತಿರುವ ಭಂಗಿಯಲ್ಲಿರುವ ಗಣೇಶ ಮೂರ್ತಿಯನ್ನು ತರುವುದು ಅತ್ಯಂತ ಶ್ರೇಷ್ಠ. ಇದು ಮಂಗಳಕರ ಫಲಿತಾಂಶಗಳನ್ನು ತರುತ್ತದೆ. ಕುಟುಂಬದ ಸದಸ್ಯರ ಜೀವನದಲ್ಲಿ ಸುಖ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಕುಳಿತಿರುವ ಗಣಪತಿಯು ಶಾಂತಿ ಮತ್ತು ಸ್ಥಿರತೆಯ ಸಂಕೇತವಾಗಿದೆ. ಹಾಗೆಯೇ, ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ನೃತ್ಯ ಮಾಡುವ ಅಥವಾ ನಿಂತಿರುವ ಭಂಗಿಯ ಮೂರ್ತಿಗಳು ಶಕ್ತಿಯನ್ನು ಪ್ರತಿನಿಧಿಸುತ್ತವೆ. ಇಂತಹ ಮೂರ್ತಿಗಳನ್ನು ಸಾಮಾನ್ಯವಾಗಿ ಪೆಂಡಾಲ್‌ಗಳಲ್ಲಿ ಇಡಲು ಬಳಸಬಹುದು.

ಮೋದಕ ಮತ್ತು ಮೂಷಕ ಇರಲೇಬೇಕು

ಗಣೇಶನಿಗೆ ಅತ್ಯಂತ ಪ್ರಿಯವಾದ ತಿನಿಸು ಮೋದಕ. ಇಲಿ (ಮೂಷಕ) ಗಣೇಶನ ವಾಹನ. ಈ ಇಬ್ಬರೂ ಗಣಪತಿಯ ಅವಿಭಾಜ್ಯ ಅಂಗಗಳಾಗಿದ್ದಾರೆ. ಆದ್ದರಿಂದ ಗಣಪತಿಯ ಮೂರ್ತಿ ತರುವಾಗ, ಮೂರ್ತಿಯಲ್ಲಿ ಮೋದಕ ಮತ್ತು ಮೂಷಕ ಎರಡೂ ಇವೆಯೇ ಎಂದು ಖಚಿತಪಡಿಸಿಕೊಳ್ಳಿ. ಇಂತಹ ಮೂರ್ತಿಯು ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಮೂರ್ತಿಯ ಬಣ್ಣ

ಮನೆಯಲ್ಲಿ ಬಿಳಿ ಬಣ್ಣದ ಗಣೇಶ ಮೂರ್ತಿಯನ್ನು ಇಡುವುದು ಅತ್ಯಂತ ಶುಭಕರ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಬಿಳಿ ಬಣ್ಣವು ಶುದ್ಧತೆ, ಶಾಂತಿ ಮತ್ತು ಸಕಾರಾತ್ಮಕತೆಯನ್ನು ಪ್ರತಿನಿಧಿಸುತ್ತದೆ. ಇದು ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಸಿಂಧೂರಿ ಅಥವಾ ಕೇಸರಿ ಬಣ್ಣದ ಮೂರ್ತಿಯನ್ನು ಸಹ ತರಬಹುದು. ಇದು ಆಂತರಿಕ ಬೆಳವಣಿಗೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಸೂಚಿಸುತ್ತದೆ.

ಮೂರ್ತಿ ತರಬೇಕಾದ ಸಮಯ

ಇದರ ಜೊತೆಗೆ, ಗಣೇಶ ಚತುರ್ಥಿ ಹಬ್ಬದ ಮುನ್ನವೇ ಶುಭ ಮುಹೂರ್ತದಲ್ಲಿ ಮೂರ್ತಿಯನ್ನು ಮನೆಗೆ ತರಬೇಕು. ಇದು ಮಂಗಳಕರ ಮತ್ತು ಮನೆಗೆ ಸಕಾರಾತ್ಮಕ ಶಕ್ತಿ ಹಾಗೂ ಶುಭಫಲಗಳನ್ನು ತರುತ್ತದೆ ಎಂದು ಹೇಳಲಾಗಿದೆ.

ಗಣೇಶ ಪೂಜೆಗೆ ಶುಭ ಸಮಯ

ಆಗಸ್ಟ್ 27 ರಂದು ಗಣೇಶ ಪೂಜೆಗೆ ಶುಭ ಮುಹೂರ್ತವು ಬೆಳಗ್ಗೆ 11.05 ಗಂಟೆಯಿಂದ ಮಧ್ಯಾಹ್ನ 1.40 ಗಂಟೆ ವರೆಗೆ ಇರುತ್ತದೆ. ಈ ಸಮಯದಲ್ಲಿ ವಿಧಿ-ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ, ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿ, ಪೂಜೆ ಮಾಡುವುದು ಮಂಗಳಕರವಾಗಿರುತ್ತದೆ. ಈ ದಿನ ಭಕ್ತರು ಗಣಪತಿಯ ಮೂರ್ತಿಯನ್ನು ಮನೆ, ಕಚೇರಿ ಅಥವಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುತ್ತಾರೆ. ಗಣೇಶ ಚತುರ್ಥಿಯಂದು ಚಂದ್ರ ದರ್ಶನ ಮಾಡುವುದನ್ನು ಕೆಲ ಸಮಯಗಳವರೆಗೆ ತಪ್ಪಿಸಬೇಕು.

ಈ ನಿಯಮಗಳನ್ನು ಅನುಸರಿಸುವ ಮೂಲಕ, ಬಪ್ಪನ ಆಶೀರ್ವಾದ ಪಡೆಯಬಹುದು. ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹಾಗೂ ಸಮೃದ್ಧಿಯನ್ನು ಆಹ್ವಾನಿಸಬಹುದು. ಈ ಹಬ್ಬವು ನಿಮ್ಮ ಮತ್ತು ನಿಮ್ಮ ಕುಟುಂಬದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತರಲಿ ಎಂಬುದು ನಮ್ಮ ಆಶಯ.

English summary

Ganesh Chaturthi 2025: Vastu Tips For bringing ganesha idol home

Ganesh Chaturthi 2025: Vastu Tips For bringing ganesha idol home
Story first published: Friday, August 22, 2025, 13:50 [IST]
X
Desktop Bottom Promotion