Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಪಿಒಪಿ ಗಣೇಶ ಬೇಡ! ಮನೆಯಲ್ಲೇ ಪರಿಸರ ಸ್ನೇಹಿ ಗಣಪತಿ ಈ ರೀತಿ ಮಾಡಿ.. ಇಲ್ಲಿದೆ ಸರಳ ವಿಧಾನ
ಈ ಗಣೇಶ ಚತುರ್ಥಿಗೆ ಪ್ಲಾಸ್ಟರ್ ಗಣಪತಿ ಬೇಡ! ಮನೆಯಲ್ಲಿ ಸುಲಭವಾಗಿ ಇಕೊ-ಫ್ರೆಂಡ್ಲಿ ಗಣೇಶನು ಮಾಡೋದು ಹೇಗೆ? ಈ ವರ್ಷ ಗಣೇಶ ಚತುರ್ಥಿಯನ್ನು (Ganesh Chaturthi 2025) ಆಗಸ್ಟ್ 27 ರಂದು ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬದ ಪ್ರಮುಖ ಭಾಗವೆಂದರೆ, ಭಕ್ತರು ತಮ್ಮ ಮನೆಗಳಿಗೆ ಗಣಪತಿಯ ಮೂರ್ತಿಯನ್ನು ತಂದು ಪೂಜಿಸುವುದು. ಮಾರುಕಟ್ಟೆಯಲ್ಲಿ ವಿವಿಧ ಗಾತ್ರದ ಮತ್ತು ವಿನ್ಯಾಸದ ಸುಂದರ ಮೂರ್ತಿಗಳು ದೊರೆಯುತ್ತವೆ. ಆದರೆ, ಅವುಗಳಲ್ಲಿ ಹೆಚ್ಚಿನವು ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮತ್ತು ರಾಸಾಯನಿಕ ಬಣ್ಣಗಳಿಂದ ತಯಾರಾಗಿರುತ್ತವೆ. ಇದು ಪರಿಸರಕ್ಕೆ ಹಾನಿಕರ. ಇದೇ ಕಾರಣಕ್ಕೆ ಪರಿಸರ ಸ್ನೇಹಿ ಮೂರ್ತಿಗಳ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ನೀವು ಮನೆಯಲ್ಲಿಯೇ ಸುಲಭವಾಗಿ ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸಬಹುದು.
ಗಣೇಶನನ್ನು ವಿಘ್ನ ನಿವಾರಕ, ಲಂಬೋದರ, ವಿನಾಯಕ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಭಕ್ತರು 5, 7, 9 ಅಥವಾ 10 ದಿನಗಳ ಕಾಲ ಗಣೇಶ ವಿಗ್ರಹವನ್ನು ಮನೆಯಲ್ಲಿಟ್ಟು ಪೂಜಿಸುತ್ತಾರೆ. ವಿವಿಧ ಬಗೆಯ ರುಚಿಕರ ಭಕ್ಷ್ಯಗಳು ಮತ್ತು ಸಿಹಿ ತಿನಿಸುಗಳನ್ನು ನೈವೇದ್ಯವಾಗಿ ಅರ್ಪಿಸಿ, ವಿಧಿ ವಿಧಾನಗಳೊಂದಿಗೆ ಪೂಜೆ ಮತ್ತು ಆರತಿ ಮಾಡುತ್ತಾರೆ. ಸಾರ್ವಜನಿಕ ಸ್ಥಳಗಳು ಮತ್ತು ಪೆಂಡಾಲ್ಗಳಲ್ಲಿ ಗಣೇಶ ವಿಗ್ರಹಗಳನ್ನು ಭವ್ಯವಾಗಿ ಪ್ರತಿಷ್ಠಾಪಿಸಲಾಗುತ್ತದೆ. ನಾವು ಈ ಲೇಖನದಲ್ಲಿ ಮನೆಯಲ್ಲಿಯೇ ಪರಿಸರ ಸ್ನೇಹಿ ಗಣೇಶ (Eco Friendly Lord Ganesha Idol) ಮೂರ್ತಿಯನ್ನು ತಯಾರಿಸುವುದು ಹೇಗೆ ಎಂಬುವುದನ್ನು ತಿಳಿಸಲಾಗಿದೆ.

ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಯ ವಿಧಾನಗಳು
ಮಣ್ಣಿನ (ಕ್ಲೇ) ಗಣಪತಿ ಮೂರ್ತಿ
ಮಣ್ಣನ್ನು ಬಳಸಿ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ತಯಾರಿಸಬಹುದು. ಮೊದಲಿಗೆ ಒಂದು ಎತ್ತರದ ಅಂಚುಗಳಿರುವ ತಟ್ಟೆಗೆ ತೆಂಗಿನ ಎಣ್ಣೆ ಹಚ್ಚಿ. ಮಣ್ಣಿಗೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ನಾದಿ. ಮೃದುವಾದ ನಂತರ ಸಣ್ಣ ಭಾಗಗಳಾಗಿ ವಿಂಗಡಿಸಿ ಗಣೇಶನ ದೇಹದ ಭಾಗಗಳನ್ನು ರಚಿಸಿ. ಈ ಭಾಗಗಳನ್ನು ನಿಧಾನವಾಗಿ ಜೋಡಿಸಿ ಸಂಪೂರ್ಣ ಆಕಾರ ನೀಡಿ. ಬಳಿಕ ಅದನ್ನು ಹೊರತೆಗೆದು ಟೂತ್ಪಿಕ್ ಬಳಸಿ ಪಕ್ಕದಲ್ಲಿ ಕಮಲದ ಹೂವನ್ನು ರಚಿಸಿ. ಮೂರ್ತಿಯನ್ನು ಒಣಗಲು ನೆರಳಿನಲ್ಲಿ ಇಡಿ, ಬಿಸಿಲಿನಲ್ಲಿ ಅಲ್ಲ. ಒಣಗಿದ ನಂತರ ಅರಿಶಿನ, ಕುಂಕುಮ ಅಥವಾ ನೈಸರ್ಗಿಕ ಬಣ್ಣಗಳಿಂದ ಬಣ್ಣ ತುಂಬಿ.
ಹಿಟ್ಟಿನಿಂದ ಗಣಪತಿ ಮೂರ್ತಿ ಮಾಡಿ
ಹಿಟ್ಟನ್ನು ಬಳಸಿ ಗಣಪತಿ ಮೂರ್ತಿಯನ್ನು ಸುಲಭವಾಗಿ ತಯಾರಿಸಬಹುದು. ಗಣಪತಿ ಮೂರ್ತಿ ತಯಾರಿಸಲು ಅಡುಗೆಯಲ್ಲಿ ಬಳಸುವ ಹಿಟ್ಟನ್ನು ನೀರಿನೊಂದಿಗೆ ಬೆರೆಸಿ ಮಣ್ಣಿನಂತೆ ಮೃದುವಾಗಿ ನಾದಿಕೊಳ್ಳಿ. ನಂತರ ಇದರಿಂದ ಗಣಪತಿಯ (ಬಪ್ಪನ ಮೂರ್ತಿ) ಆಕಾರವನ್ನು ಮಾಡಿ. ಇದನ್ನು ಸಹ ಒಣಗಿಸಿದ ನಂತರ ನೈಸರ್ಗಿಕ ಬಣ್ಣಗಳಿಂದ ಅಲಂಕರಿಸಬಹುದು. ಈ ಮೂರ್ತಿ ವಿಸರ್ಜನೆಯ ಸಮಯದಲ್ಲಿ ನೀರಿನಲ್ಲಿ ಬಹಳ ಬೇಗ ಕರಗಿ ಹೋಗುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ಅರಿಶಿನದಿಂದ ಬಪ್ಪನ ಮೂರ್ತಿ ಮಾಡಿ
ಅರಿಶಿನವನ್ನು ಬಳಸಿ ಮೂರ್ತಿ ತಯಾರಿಸಬಹುದು. ಅರಿಶಿನ, ಮೈದಾ ಅಥವಾ ಗೋಧಿ ಹಿಟ್ಟು ಮತ್ತು ನೀರನ್ನು ಬೆರೆಸಿ ಹಿಟ್ಟಿನಂತೆ ನಾದಿಕೊಳ್ಳಿ. ಈ ಹಿಟ್ಟನ್ನು ಗಣಪತಿಯ ಮೂರ್ತಿಯ ಆಕಾರಕ್ಕೆ ರೂಪಿಸಿ. ಅಲಂಕಾರಕ್ಕೆ ಗುಂಡಿಗಳು ಅಥವಾ ನೈಸರ್ಗಿಕ ಬಣ್ಣಗಳನ್ನು ಕಣ್ಣುಗಳಿಗಾಗಿ ಬಳಸಬಹುದು. ಈ ಮೂರ್ತಿ ಬಹಳ ಸುಂದರವಾಗಿ ಕಾಣುತ್ತದೆ. ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿರುತ್ತದೆ.
ಹಳೆಯ ಪೇಪರ್ನಿಂದ ಮೂರ್ತಿ ಮಾಡಿ
ಮನೆಯಲ್ಲಿನ ಹಳೆಯ ಪೇಪರ್ ಅಥವಾ ಪತ್ರಿಕೆಗಳನ್ನು ಬಳಸಿ ಮೂರ್ತಿ ತಯಾರಿಸಬಹುದು. ಮೊದಲಿಗೆ ಪೇಪರ್ ಅನ್ನು ಸಣ್ಣದಾಗಿ ಹರಿದು ನೀರಿನಲ್ಲಿ ನೆನೆಸಿ, ಮೆತ್ತಗಿನ ಪೇಸ್ಟ್ ತಯಾರಿಸಿಕೊಳ್ಳಿ. ಆ ಪೇಸ್ಟ್ಗೆ ಸ್ವಲ್ಪ ಮೈದಾ ಸೇರಿಸಿ ಗಟ್ಟಿಯಾದ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣದಿಂದ ಗಣಪತಿಯ ಮೂರ್ತಿಯನ್ನು ಮಾಡಿ ಒಣಗಲು ಬಿಡಿ. ಇದು ಸಂಪೂರ್ಣವಾಗಿ ಒಣಗಿದ ನಂತರ ನೈಸರ್ಗಿಕ ಬಣ್ಣಗಳಿಂದ ಬಣ್ಣ ಹಚ್ಚಿ ಅಲಂಕರಿಸಬಹುದು. ಇದು ಕಸದಿಂದ ರಸದಂತಹ ಪರಿಸರ ಸ್ನೇಹಿ ವಿಧಾನವಾಗಿದೆ.



Click it and Unblock the Notifications













