Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ!
Ganesh Chaturthi 2025: ಗಣೇಶ ಚತುರ್ಥಿಗೆ ಶೇರ್ ಮಾಡಲು ಇಲ್ಲವೆ ಅದ್ಭುತ ಫೋಟೋಗಳು..!
ಗಣೇಶ ಚತುರ್ಥಿಯು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ದೇವರು ಎಂದು ಪರಿಗಣಿಸಲಾದ ಗಣೇಶನ ಕುರಿತ ಹಬ್ಬವಾಗಿದೆ. ಈ ಹಬ್ಬವು ಹಿಂದೂ ಚಾಂದ್ರಮಾನ ಮಾಸವಾದ ಭಾದ್ರಪದದ ನಾಲ್ಕನೇ ದಿನದಂದು ಪ್ರಾರಂಭವಾಗಿ ಹತ್ತು ದಿನಗಳವರೆಗೆ ನೆರವೆರಲಿದೆ. ಇದು ಅಪಾರ ಭಕ್ತಿ, ವರ್ಣರಂಜಿತ ಮೆರವಣಿಗೆಗಳು ಸೇರಿದಂತೆ ಸಾಂಸ್ಕೃತಿಕ ಹಬ್ಬವಾಗಿ ಪರಿಗಣಿಸಲಾಗಿದೆ.
ಪಾರ್ವತಿ ದೇವಿಯ ಸೃಷ್ಟಿಯಿಂದ ಜನಿಸಿದ ಗಣೇಶನು ತಂದೆ ಶಿವನಿಂದ ಆನೆಯ ಮುಖವನ್ನು ಪಡೆಯುತ್ತಾನೆ. ಶಿವ-ಪಾರ್ವತಿಯ ಪ್ರಿಯ ಪುತ್ರ ಹಾಗೂ ಜನರ ಕಷ್ಟಗಳ ನಿವಾರಣೆಗೆ ನಿಲ್ಲುವ ಶಕ್ತಿಶಾಲಿ ದೇವ ಗಣೇಶ. ಇವನ ಹುಟ್ಟಿದ ಹಬ್ಬದ ಸಂಭ್ರದ ಆಚರಣೆಯೇ ಗಣೇಶ ಚತುರ್ಥಿ. ಭಗವಾನ್ ಗಣೇಶನು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದ್ದಾನೆ.

ವಿಘ್ನಗಳ ನಿವಾರಕ ಗಣೇಶನ ಹಬ್ಬವನ್ನು ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಚೌತಿಯ ದಿನದಂದು ಆಚರಿಸಲಾಗುವುದು. ಈ ವರ್ಷ ಅಂದರೆ ಆಗಸ್ಟ್ 26 ಹಾಗೂ 27ರಂದು ಆಚರಿಸಲಾಗುವುದು. ಗಣೇಶನ ಹಬ್ಬವನ್ನು ಮೂರು ದಿನ, ಏಳು ದಿನ ಹಾಗೂ ಹನ್ನೊಂದು ದಿನಗಳ ಕಾಲ ಆಚರಿಸಲಾಗುವುದು.

ದೊಡ್ಡ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯ ದಿನ ಬಂಧು-ಬಾಂಧವರಿಗೆ, ಸ್ನೇಹಿತರಿಗೆ ಹಾಗೂ ನೆರೆಹೊರೆಯವರಿಗೆ ಮನೆಗೆ ಕರೆಯುವುದು ಹಾಗೂ ಶುಭಾಶಯ ಕೋರುವುದು ಒಂದು ಪದ್ಧತಿ.
ಗಣೇಶನು ಎಲ್ಲರಿಗೂ ಉತ್ತಮ ಮಾರ್ಗದರ್ಶಕ ಹಾಗೂ ರಕ್ಷಕ. ಅವನು ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಆರಂಭವನ್ನು ನೀಡಲಿ. ನಿಮ್ಮ ಮುಂದಿನ ಜೀವನದಲ್ಲಿ ಯಾವುದೇ ಅಡೆತಡೆ ಬರದಂತೆ ಕಾಯುವುದರ ಮೂಲಕ ಉತ್ಕೃಷ್ಟ ಜೀವನವನ್ನು ದಯ ಪಾಲಿಸಲಿ. ಗಣೇಶ ಹಬ್ಬದ ಶುಭಾಶಯಗಳು.
ಗಣೇಶನ ಹಬ್ಬ ಆರಂಭಗೊಂಡು 10ನೇ ದಿನವಾದ ಅನಂತ ಚತುರ್ದಶಿಯಂದು ಹಬ್ಬಗಳು ಮುಕ್ತಾಯಗೊಳ್ಳುತ್ತವೆ, ವಿಗ್ರಹಗಳನ್ನು ನದಿ, ಕೆರೆ ಸಮುದ್ರದಂತಹ ನೀರಿನ ಮೂಲಕ್ಕೆ ಭವ್ಯ ಮೆರವಣಿಗೆಗಳಲ್ಲಿ ಕೊಂಡೊಯ್ಯಲಾಗುತ್ತದೆ. ನಂತರ ನಿಮಜ್ಜನ ನಡೆಸಲಾಗುತ್ತದೆ.
ಗಣೇಶನಿಗೆ ಹಲವು ಉಪನಾಮಗಳಿರುವುದು ನಿಮಗೆಲ್ಲಾ ತಿಳಿದಿದೆ. ಹಾಗೆ ಗಣೇಶನ ನಾಮಸ್ಮರಣೆಯ ಸಮಯದಲ್ಲಿ ಗಣಪತಿ ಬಪ್ಪಾ ಮೋರಯಾ ಎಂಬ ಘೋಷಣೆಗಳ ಕೂಗುವುದು ನೀವು ಕೇಳಿರಬಹುದು.

ಆದ್ರೆ ಈ ರೀತಿ ಘೋಷಣೆಗಳ ಕೂಗುವುದು ಏಕೆ ಎಂಬ ಕಥೆ ನಿಮಗೆ ಗೊತ್ತಾ?, ಇದರ ಹಿಂದೆ ಒಂದು ಪುರಾತನ ಕಥೆ ಇದೆ. ಮೊರಯಾದ ಮೂಲ ಕಥೆ 15ನೇ ಶತಮಾನದಲ್ಲಿ ನಡೆದಿರುವುದು ಎಂಬುದಾಗಿ ನಂಬಲಾಗಿದೆ.

ಇಮ್ಮೆ ಮೊರಯಾ ಗೋಸವಿ ಎಂಬ ಸಾಧು ಮಹಾನ್ ಗಣೇಶನ ಭಕ್ತರು. ಅವರು ನಿತ್ಯ ಗಣಪತಿಯ ಪೂಜೆ ನಡೆದು ಹೋಗುತ್ತಿದ್ದರು. ಒಂದು ದಿನ ಮೊರಯಾ ಮಲಗಿದ್ದಾಗ ಕನಸಿನಲ್ಲಿ ಗಣೇಶ ಪ್ರತ್ಯಕ್ಷನಾದನಂತೆ.

ಈ ವೇಳೆ ಗಣಪ ನದಿಯಲ್ಲಿ ನನ್ನ ಮೂರ್ತಿ ಇದೆ ಅನ್ನು ಮೇಲೆತ್ತಿ ಪ್ರತಿಷ್ಠಾಪನೆ ಮಾಡುವಂತೆ ಹೇಳಿದನಂತೆ. ಹಾಗೆ ನದಿಯಲ್ಲಿ ಮೊರಯಾ ಹುಡುಕಾಡಿದಾಗ ದೊಡ್ಡ ಗಣಪನ ಮೂರ್ತಿ ಪತ್ತೆಯಾಗಿತ್ತಂತೆ.
ಈ ಸುದ್ದಿ ತಿಳಿದು ಊರಿನವರೆಲ್ಲಾ ಒಂದು ಕಡೆ ಸೇರಿದರಂತೆ. ಹಾಗೆ ಗಣೇಶ ಕನಸಿನಲ್ಲಿ ಬಂದ ವಿಷಯ ತಿಳಿಸಿದಾಗ ಜನರು ಮೊರಯಾನನ್ನೇ ದೇವರ ಸ್ವರೂಪಿ ಎಂದು ನಂಬಿದರಂತೆ.
ಮುಂದೆ ಮೊರಯಾ ಆ ಊರಿನಲ್ಲಿ ಪವಾಡ ಪುರುಷರಂತೆ ಬದುಕಿದರಂತೆ. ಬರು ಬರುತ್ತಾ ಜನರು ಮೋರಯ ಗೋಸಾನಿಯ ಜ್ಞಾಪಕಾರ್ತವಾಗಿ, ಗಣಪತಿ ಬಪ್ಪಾ ಮೋರಯಾ ಎಂಬ ಘೋಷಣೆ ಕೂಗಲಾಗುತ್ತಿದೆ.



Click it and Unblock the Notifications


