Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೂನ್ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳು, ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ
ಜೂನ್ ತಿಂಗಳಿನಲ್ಲಿ ಪಿತೃದೋಷ ನಿವಾರಣೆಗಾಗಿ ಅಪರಾ ಏಕಾದಶಿ, ವಟ ಸಾವಿತ್ರಿ ವ್ರತ, ಅಪ್ಪಂದಿರ ದಿನ ಹೀಗೆ ಅನೇಕ ಕಾರಣಗಳಿಂದ ಈ ಮಾಸ ವಿಶೇಷವಾಗಿದೆ. ಜೂನ್ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು ವಿಶೇಷ ದಿನಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ:

ಜೂನ್ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು
ಜೂನ್ 2, ಭಾನುವಾರ
ಅಪರಾ ಏಕಾದಶಿ
ವೈಷ್ಣವ ಅಪರಾ ಏಕಾದಶಿ
ಜೂನ್ 3, 2024 ಸೋಮವಾರ
ಮಾಸಿಕ ಶಿವರಾತ್ರಿ, ಪ್ರದೋಷ ವ್ರತ
ಜೂನ್ 4, ಮಂಗಳವಾರ
ವಿಶ್ವ ಪರಿಸರ ದಿನ
ಜೂನ್ 5, ಬುಧವಾರ
ಶನಿ ಜಯಂತಿ, ವಟ ಸಾವಿತ್ರಿ ವ್ರತ
ಜೂನ್ 6, ಗುರುವಾರ
ಜ್ಯೇಷ್ಠ ಅಮವಾಸ್ಯೆ
ಜೂನ್ 6, ಗುರುವಾರ
ಜೂನ್ 10, ಸೋಮವಾರ
ವಿನಾಯಕ ಚತುರ್ಥಿ
ಜೂನ್ 16, ಭಾನುವಾರ
ಗಂಗಾ ದಸರಾ
ಜೂನ್ 16, ಭಾನುವಾರ
ಅಪ್ಪಂದಿರ ದಿನ
ಗಾಯತ್ರಿ ಜಯಂತಿ, ಶುಕ್ಲ ಏಕಾದಶಿ
ಜೂನ್ 17, ಸೋಮವಾರ
ಜೂನ್ 21 ಶುಕ್ರವಾರ
ಪೂರ್ಣಿಮಾ ವ್ರತ, ಅಂತರರಾಷ್ಟ್ರೀಯ ಯೋಗ ದಿನ
ಕಾಲಾಷ್ಟಮಿ
ಜೂನ್ 28, ಶುಕ್ರವಾರ
ಅಪರಾ ಏಕಾದಶಿ: ಅಪರಾ ಏಕಾದಶಿಯ ಮಹತ್ವದ ಬಗ್ಗೆ ಹೇಳುವುದಾದರೆ ಈ ಏಕಾದಶಿಯನ್ನು ಆಚರಿಸುವುದರಿಂದ ಪಿತೃದೋಷದಿಂದ ಮುಕ್ತಿ ಸಿಗಲಿದೆ. ಈ ದಿನ ತರ್ಪಣ ನೀಡಿದರೆ ಮರಣವೊಂದಿದ ಪಿತೃಗಳಿಗೆ ಮೋಕ್ಷ ಸಿಗಲಿದೆ. ಈ ದಿನ ಹೋಮ, ಪೂಜಾ ಕಾರ್ಯಗಳಿಗೆ ತುಂಬಾ ಒಳ್ಳೆಯದಿದೆ.
ಅಪರಾ ಏಕಾದಶಿಯನ್ನು ಆಚರಿಸುವುದರಿಂದ ಪ್ರೇತ ದೋಷವಿರಲ್ಲ, ಶ್ರೀ ವಿಷ್ಣುವಿನ ಸಹಾಯದಿಂದ ಎಲ್ಲಾ ಕಷ್ಟಗಳು ದೂರಾಗುವುದು, ಭೂತ-ಪ್ರೇತ ಅಂತ ದುಷ್ಟ ಶಕ್ತಿಗಳ ಕಾಟವಿರಲ್ಲ. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.
ವಟ ಸಾವಿತ್ರಿ ವ್ರತ
ವಟ ಸಾವಿತ್ರಿ ವ್ರತವನ್ನು ಮಹಿಳೆಯರು ಆಚರಿಸುತ್ತಾರೆ. ಮಹಿಳೆಯರು ಗಂಡನ ಶ್ರೇಯಸ್ಸಿಗಾಗಿ ಈ ವ್ರತವನ್ನು ಆಚರಿಸಲಾಗುವುದು. ಪೌರಾಣಿಕ ನಂಬಿಕೆ ಪ್ರಕಾರ ಸಾವಿತ್ರಿ ತನ್ನ ಪತಿ ಸತ್ಯವಾನನ ಜೀವ ಉಳಿಸಲು 3 ದಿನ ಉಪವಾಸವಿದ್ದು ಈ ವ್ರತವನ್ನು ಆಚರಿಸಿದಳು, ಹಾಗಾಗಿ ಅಮವಾಸ್ಯೆಯ 3 ದಿನಗಳ ಮೊದಲು ಈ ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುವುದು. ಈ ವ್ರತ ತ್ರಯೋದಶಿ ತಿಥಿಯಿಂದ ಪ್ರಾರಂಭವಾಗಿದೆ. ಈ ದಿನ ಆಲದ ಮರದ ಸುತ್ತ ಸುತ್ತು ಹಾಕಿ ದೀಪ ಹಚ್ಚಿ ಪೂಜೆಯನ್ನು ಮಾಡಲಾಗುವುದು.
ಗಂಗಾ ದಸರಾ
ಜ್ಯೇಷ್ಠ ಮಾಸದ ಶುಕ್ಲ ಪಕ್ಷದ 10ನೇಯ ದಿನದಂದು ಗಂಗಾ ದಸರಾವನ್ನು ಉತ್ತರ ಭಾರತದ ಕಡೆಗೆ ಆಚರಿಸಲಾಗುವುದು. ಗಂಗಾ ದಸರಾ ದಿನದಂದು ಗಂಹೆ ಭುಮಿಗೆ ಬಂದಳು ಎಂದು ಹೇಳಲಾಗುವುದು. ಗಂಗಾ ದಸರಾದಂದು ಗಂಗೆಗೆ ಆರತಿ ಎತ್ತಿ ಪೂಜೆ ಮಾಡಲಾಗುವುದು.
ಅಪ್ಪಂದಿರ ದಿನ
ಜೂನ್ 16ರಂದು ಅಪ್ಪಂದಿರ ದಿನವನ್ನು ಆಚರಿಸಲಾಗುವುದು. ಅಪ್ಪ ಪ್ರತಿಯೊಬ್ಬರ ಬದುಕಿನ ಹೀರೋ ಅಪ್ಪ, ಅಪ್ಪನ ತ್ಯಾಗ ಕಾಣುತ್ತೇವೆ, ಆದರೆ ಅಪ್ಪನ ತ್ಯಾಗ ಕಾಣುವುದಿಲ್ಲ. ಅಪ್ಪ ಮನೆಗಾಗಿ ತನ್ನೆಲ್ಲಾ ಜೀವನವನ್ನು ಕಳೆಯುತ್ತಾನೆ, ತಾನು ಕಷ್ಟಪಟ್ಟು ದುಡಿದರೂ ಪರ್ವಾಗಿಲ್ಲ, ಮಕ್ಕಳು ಚೆನ್ನಾಗಿರಬೇಕು ಎಂದು ಬಯಸುವ ಜೀವವೇ ಅಪ್ಪ.



Click it and Unblock the Notifications