Latest Updates
-
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ!
ಅಗತ್ಯ ವಸ್ತುಗಳು ಸೇರಿ 50 ಸಾವಿರ ಇಟ್ಟುಕೊಳ್ಳಲು ಹೇಳಿದ್ಯಾ ಸರ್ಕಾರ: ವೈರಲ್ ಪೋಸ್ಟ್ ಸತ್ಯತೆ ಏನು?
ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ ಭಾರತ ಈಗ ಪಾಕಿಸ್ತಾನದ ವಿರುದ್ಧ ದಾಳಿ ನಡೆಸುತ್ತಿರುವುದು ಇಡೀ ವಿಶ್ವದಾದ್ಯಂತ ಸುದ್ದಿಯಾಗುತ್ತಿದೆ. ಅದರಲ್ಲೂ ಹಲವು ಕಡೆಗಳಿಂದ ಭಾರತ ದಾಳಿ ಮಾಡುತ್ತಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಭಾರತದ ಹಾಗೂ ಪಾಕ್ ನಡುವಿನ ಉದ್ವಿಗ್ನತೆ ಹೆಚ್ಚಾಗಲು ಇದು ಕಾರಣವಾಗಿದೆ. ಇದೆಲ್ಲದರ ನಡುವೆ ಈಗ ಈ ಸಮಯವನ್ನೇ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಲವು ನಕಲಿ ಸುದ್ದಿಗಳು, ವಿಡಿಯೋಗಳ ಹರಿಬಿಡಲಾಗಿದೆ. '
ಎರಡು ದೇಶದಗಳ ನಡುವಿನ ಯುದ್ಧದ ಆತಂಕದಿಂದಾಗಿ ವಿಮಾನಯಾನ, ರೈಲ್ವೆ, ಸಮಯದಲ್ಲಿ ಬದಲಾವಣೆ ಹಾಗೆ ಪ್ರವಾಸಿಗರು ಕೆಲವು ಸ್ಥಳಗಳಿಗೆ ತೆರಳದಂತೆ ಸೂಚಿಸಲಾಗಿದೆ. ಹಾಗೆ ಆನ್ಲೈನ್ನಲ್ಲಿ ಹರಡಲಾಗಿರುವ ಮಾಹಿತಿಗಳು ನಿಜವಲ್ಲ ಎನ್ನಲಾಗಿದೆ. ಸೇನೆಯ ಕುರಿತಾದ ಮಾಹಿತಿ ಹಾಗೆ ಆಪರೇಷನ್ ಸಂಬಂಧಿಸಿದಂತೆ ಅಧಿಕೃತ ಖಾತೆಗಳಲ್ಲಿ ಹಂಚಿಕೊಳ್ಳಲಾದ ಮಾಹಿತಿಯನ್ನಷ್ಟೇ ಹಂಚಿಕೊಳ್ಳಬಹುದಾಗಿದೆ.

ಆದ್ರೆ ಈಗ ಎರಡು ದೇಶಗಳ ನಡುವಿನ ಉದ್ವಿಗ್ನತೆ ಸಂಬಂಧ ದೇಶದಲ್ಲಿ ಮತ್ತೊಂದು ಸುದ್ದಿ ಹರಡುತ್ತಿದೆ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಮೊದಲೇ ಖರೀದಿಸಿಕೊಂಡು ಹಾಗೆ ಮನೆಯಲ್ಲಿ ಕನಿಷ್ಠ 50 ಸಾವಿರ ಹಣವನ್ನು ಕಷ್ಟದ ಸಮಯಕ್ಕೆ ಇಟ್ಟುಕೊಳ್ಳುವಂತೆ ಪೋಸ್ಟರ್ವೊಂದು ಹರಿದಾಡುತ್ತಿದೆ. ಯುದ್ಧ ಭೀತಿ ಹಿನ್ನೆಲೆ ದೇಶದಲ್ಲಿ ಸೂಪರ್ ಮಾರ್ಕೆಟ್ಗಳು, ಎಟಿಎಂ, ಬ್ಯಾಂಕ್ಗಳು ಮುಚ್ಚಬಹುದು ಎಂಬ ಆತಂಕಕಾರಿ ವಿಚಾರವನ್ನು ಕೂಡ ಹರಡಲಾಗಿದೆ.
ಭಾರತ ಸರ್ಕಾರ ಹೊರಡಿಸಿದೆ ಎಂದು ಈ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ. ಗಡಿ ಪ್ರದೇಶಗಳಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಸರ್ಕಾರವು ನಾಗರಿಕರು ಕನಿಷ್ಠ ₹50,000 ನಗದು, ಎರಡು ತಿಂಗಳವರೆಗೆ ಔಷಧಿಗಳು, ಆಹಾರ, ನೀರು, ಟಾರ್ಚ್ಗಳು, ಪವರ್ ಬ್ಯಾಂಕ್ಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಮನೆಯಲ್ಲಿಯೇ ಸಂಗ್ರಹಿಸಲು ಸೂಚಿಸಿದೆ ಎಂದು ಪೋಸ್ಟರ್ನಲ್ಲಿ ಹಂಚಿಕೊಳ್ಳಲಾಗಿದೆ.
ಆದ್ರೆ ಭಾರತದ ಸರ್ಕಾರದ ಹೆಸರಿನಲ್ಲಿ ಹರಡಲಾದ ಈ ಮಾಹಿತಿ ನಕಲಿಯಾಗದೆ. ಸರ್ಕಾರವು ಅಂತಹ ಯಾವುದೇ ಸಲಹೆಯನ್ನು ನೀಡಿಲ್ಲ. ಮೇ 06, 2025 ರಂದು, ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ-ಪರಿಶೀಲನಾ ಘಟಕವು ಈ ಸುದ್ದಿ ಸುಳ್ಳು ಎಂದು ದೃಢೀಕರಿಸಿದೆ. ಹಾಗೆ ಈ ರೀತಿಯ ಹೇಳಿಕೆಯನ್ನು ಸರ್ಕಾರವು ಬಿಡುಗಡೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗೆ ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ, ಸೇರಿ ಯಾವುದೇ ಅಧಿಕೃತ ಸೈಟ್ನಲ್ಲಿ ಈ ಕುರಿತಾದ ಮಾಹಿತಿ ಹಂಚಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಇದೇ ರೀಗತಿಯ ಪೋಸ್ಟ್ಗಳನ್ನು ಎಕ್ಸ್ ಖಾತೆಗಳಲ್ಲಿ ಹಂಚಕೊಳ್ಳಲಾಗಿದೆ. ಅದೆಲ್ಲವೂ ನಕಲಿಯಾಗಿವೆ ಎಂದು ತಿಳಿದುಬಂದಿದೆ. ಅದೇ ರೀತಿ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ನ ಕೆಳಗೆ ಇದು ನಕಲಿ ಎಂಬ ಟಿಪ್ಪಣಿ ಸಹ ನೋಡಬಹುದು. ಸರ್ಕಾರವು ಅಂತಹ ಯಾವುದೇ ಸಲಹೆಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಶ್ವಾಸಾರ್ಹ ಮಾಹಿತಿಗಾಗಿ ಜನರು ಅಧಿಕೃತ ಸರ್ಕಾರಿ ಮೂಲಗಳನ್ನು ಮಾತ್ರ ಅವಲಂಬಿಸಬೇಕೆಂದು ಅದು ಒತ್ತಾಯಿಸಿದೆ.
ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ನಾಗರಿಕರು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ₹50,000 ನಗದು ಇಟ್ಟುಕೊಳ್ಳುವಂತೆ ಒತ್ತಾಯಿಸುವ ಈ ವೈರಲ್ ಸಲಹೆಯು ನಕಲಿಯಾಗಿದೆ. ಸರ್ಕಾರ ಈ ರೀತಿಯಾಗಿ ಯಾವುದೇ ಸಲಹೆಯನ್ನು ನೀಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದೊಂದೆ ಅಲ್ಲ ಯುದ್ದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ನಕಲಿ ಸುದ್ದಿಗಳ ಜೆರಡಲಾಗುತ್ತಿದೆ. ಹಾಗೆ ಸೇನೆಯ ಕುರಿತಾದ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ಮನವಿ ಕೂಡ ಮಾಡಲಾಗಿದೆ. ನಿಖರ ಹಾಗೂ ಅಧಿಕೃತ ಸ್ಚಿವಾಲಯದ ಸಮಾಜಿಕ ಜಾಲತಾಣದ ಖಾತೆಗಳ ಪರಿಶೀಲಿಸುವಂತೆಯೂ ಹೇಳಲಾಗಿದೆ.



Click it and Unblock the Notifications











