Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ?
ಕಲಿಯುಗದ ಅಂತ್ಯ ಹತ್ತಿರ..! ಭವಿಷ್ಯ ನುಡಿಯುತ್ತಿದೆ ಈ ದೇವಾಲಯದ ಶಿವಲಿಂಗ..!
ಪ್ರಪಂಚ ಅಂತ್ಯ ಆಗುತ್ತಂತೆ ಅಂದ್ರೆ ಯಾರು ಸಹ ನಂಬಲು ಸಿದ್ಧರಿಲ್ಲ. ಯಾಕಂದ್ರೆ ಈ ರೀತಿ ಹಲವು ಬಾರಿ ಹೇಳಿದ್ದರೂ ಒಂದಿಷ್ಟು ಭೂಮಿ ಅಲುಗಾಡಿಲ್ಲ. ಆದ್ರೆ ಪ್ರಪಂಚ ಅಂತ್ಯವಾಗುತ್ತೆ, ಕಲಿಗಾಲ ಅಂತ್ಯವಾಗುತ್ತೆ ಅನ್ನೋ ಹತ್ತು ಹಲವು ಭವಿಷ್ಯವಾಣಿಗಳು ಈಗಲೂ ಕೇಳಿಬರುತ್ತವೆ. ಅದರಲ್ಲಿ ಕೆಲವು ಸಾವಿರಾರು ವರ್ಷದ ಮುಂದಿನ ಭವಿಷ್ಯವಾಣಿಯಾಗಿವೆ. ಇನ್ನೂ ಕೆಲವು ನಮ್ಮ ಜೀವಿತಾವಧಿಯಲ್ಲೂ ಸಂಭವಿಸಬಹುದಾದ ಭವಿಷ್ಯವಾಗಿದೆ.
ಆದ್ರೆ ನಾವಿಂದು ಹೇಳುತ್ತಿರೋದು ನಮ್ಮ ದೇಶದೊಳಗೆ ಪ್ರಪಂಚ ಅಂತ್ಯವಾಗುತ್ತೆ ಎಂದಿರುವ ಭವಿಷ್ಯವಾಣಿಯ ಬಗ್ಗೆ. ಹೌದು ಅದರಲ್ಲೂ ದೇವಾಲಯವೊಂದರಲ್ಲಿ ಪ್ರಪಂಚದ ಅಂತ್ಯದ ಬಗ್ಗೆ ಭವಿಷ್ಯವಿದೆ. ಅಲ್ಲಿನ ಸ್ಥಳೀಯರು ಇದನ್ನು ಗಂಭೀರವಾಗಿ ನಂಬಿಕೊಂಡಿದ್ದಾರೆ.

ಹಾಗಾದರೆ ಯಾವುದದು ದೇವಾಲಯ, ಅಲ್ಲಿರುವ ಭವಿಷ್ಯವಾಣಿ ಏನು? ಯಾವಾಗ ಪ್ರಪಂಚದ ಅಂತ್ಯ? ಹೀಗೆ ಈ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿ ಉತ್ತರ ನೀಡಲಾಗಿದೆ.
ಬೆಳೆಯುತಲಿದೆ ಶಿವಲಿಂಗ..!
ಪ್ರಪಂಚ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿರುವ ದೇವಾಲಯ ಇರುವುದು ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯ ಗಂಗೊಳ್ಳಿಹತ್ ಪಟ್ಟಣದ ಸಮೀಪದಲ್ಲಿ. ಈ ದೇವಾಲಯ ಭೂಗತ ಗುಹೆ ವ್ಯವಸ್ಥೆಯಲ್ಲಿ ರೂಪುಗೊಂಡಿದೆ. ನಿತ್ಯವು ನೂರಾರು ಭಕ್ತರು ಮತ್ತು ಸಾಹಸ ಪ್ರಿಯರು ಈ ಗುಹೆಯನ್ನು ಹುಡುಕಿಕೊಂಡು ಬರುತ್ತಾರೆ. ಇದಕ್ಕೆ ಪಾತಾಳ ಭುವನೇಶ್ವರ ದೇವಾಲಯ ಎಂಬ ಹೆಸರಿದೆ.
ಇದೊಂದು ಭೂಗತ ಗುಹೆ ದೇವಾಲಯವಾಗಿದ್ದು, ಭಗವಾನ್ ಶಿವನಿಗೆ ಸಮರ್ಪಿತವಾಗಿದೆ ಮತ್ತು ಆಧ್ಯಾತ್ಮಿಕತೆ ಮತ್ತು ಹಿಂದೂ ಪುರಾಣಗಳಿಗೆ ನಂಬಲಾಗದ ಸಂಬಂಧವನ್ನು ಹೊಂದಿದೆ. ಆದಾಗ್ಯೂ, ಅತ್ಯಂತ ಆಸಕ್ತಿದಾಯಕ ನಂಬಿಕೆಯೆಂದರೆ ಈ ದೇವಾಲಯವು ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಎಂಬ ಕುರಿತು ಊಹಿಸಿದೆ.
ಸ್ಥಳೀಯ ದಂತಕಥೆಗಳ ಪ್ರಕಾರ, ಪಾತಾಳ ಭುವನೇಶ್ವರ ದೇವಾಲಯವನ್ನು ಮೊದಲು ಸೂರ್ಯ ರಾಜವಂಶದ ರಾಜ ಋತುಪರ್ಣನು ಪತ್ತೆ ಮಾಡಿದನಂತೆ. ದ್ವಾಪರ ಯುಗದಲ್ಲಿ ಈ ಗುಹೆಯನ್ನು ಪಾಂಡವರು ಪರ್ವತಗಳಿಗೆ ಹೋಗುವ ಮೊದಲು ಇಲ್ಲಿ ಶಿವನನ್ನು ಪೂಜಿಸಿದರು.
ಕಿರಿದಾದ ಅಂಕುಡೊಂಕಾದ ಭೂಗತ ಮಾರ್ಗವು ಗುಹೆಯೊಳಗೆ ಕರೆದೊಯ್ಯುತ್ತದೆ, ಇದರ ಪ್ರಮುಖ ಅಂಶವೆಂದರೆ ಶಿವಲಿಂಗ. ಪ್ರತಿ ವರ್ಷ ಶಿವಲಿಂಗದ ಎತ್ತರ ಹೆಚ್ಚುತ್ತಿದೆ ಎಂದು ಸ್ಥಳೀಯರು ನಂಬುತ್ತಾರೆ. ಅದಕ್ಕಿಂತ ಹೆಚ್ಚಾಗಿ, ಶಿವಲಿಂಗವು ಗುಹೆಯ ಮೇಲ್ಛಾವಣಿಯನ್ನು ಮುಟ್ಟಿದಾಗ, ಪ್ರಪಂಚವು ಕೊನೆಗೊಳ್ಳುತ್ತದೆ ಎಂದು ಇಂದಿಗೂ ನಂಬಲಾಗಿದೆ.
ಶಿವಲಿಂಗದ ಬೆಳೆಯುತ್ತಿರುವ ಎತ್ತರವು ನಾವು 'ಕಲಿಯುಗ' ಎಂದು ನಂಬುವ ಕೆಟ್ಟ ಕೆಲಸಗಳ ಬೆಳವಣಿಗೆಯ ಸಂಕೇತವಾಗಿದೆ ಎನ್ನಲಾಗಿದೆ. ಜನರು ಎಷ್ಟು ಕೆಟ್ಟ ಕೆಲಸಗಳನ್ನು ಮಾಡುತ್ತಾರೋ ಅಷ್ಟು ವೇಗವಾಗಿ ಈ ಶಿವಲಿಂಗ ಬೆಳೆಯುತ್ತಿದೆ ಎಂದು ನಂಬಲಾಗಿದೆ. ಕೆಲವು ಸ್ಥಳೀಯರು ಗುಹೆಯನ್ನು ಶಿವನ ವಾಸಸ್ಥಾನವೆಂದು ನಂಬುತ್ತಾರೆ, ಅವನು ತನ್ನ ಭಕ್ತರ ಇಚ್ಛೆಯನ್ನು ಪೂರೈಸುತ್ತಾನೆ. ದೇವಾಲಯದ ಛಾವಣಿಯ ಮೇಲೆ, ಶೇಷನಾಗನ ಆಕಾರದಲ್ಲಿದೆ ಎಂದು ನಂಬಲಾದ ಕಲ್ಲಿನ ರಚನೆಯು ಅಸ್ತಿತ್ವದಲ್ಲಿದೆ. ಲೋಕದ ಭಾರವನ್ನು ಬೆನ್ನ ಮೇಲೆ ಹಿಡಿದಿರುವವರು ಶೇಷನಾಗರ ಎಂದು ನಂಬಲಾಗಿದೆ.
ಈ ದೇವಾಲಯದ ಮತ್ತೊಂದು ಕುತೂಹಲಕಾರಿ ಅಂಶವೆಂದರೆ 'ರಣ್ ದ್ವಾರ (ಯುದ್ಧದ ಬಾಗಿಲು)' 'ಪಾಪ್ ದ್ವಾರ (ಪಾಪದ ಬಾಗಿಲು)', 'ಧರ್ಮ ದ್ವಾರ (ಧರ್ಮದ ಬಾಗಿಲು)' ಮತ್ತು 'ಮೋಕ್ಷ ದ್ವಾರ (ಮೋಕ್ಷದ ಬಾಗಿಲು) ಎಂಬ ಹೆಸರಿನ ನಾಲ್ಕು ಪ್ರವೇಶ ದ್ವಾರಗಳ ಅಸ್ತಿತ್ವವಿದೆ. ಲಂಕಾ ಯುದ್ಧದಲ್ಲಿ ರಾವಣನ ಮರಣದ ನಂತರ ಪಾಪ ದ್ವಾರವನ್ನು ಮುಚ್ಚಲಾಯಿತು ಮತ್ತು ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತದ ಯುದ್ಧದ ನಂತರ ಯುದ್ಧದ ಬಾಗಿಲು ಮುಚ್ಚಲಾಯಿತು. ಪ್ರಸ್ತುತ ಕೇವಲ ಎರಡು ದ್ವಾರಗಳು ಮಾತ್ರ ತೆರೆದಿವೆ. ಧರ್ಮ ದ್ವಾರ ಮತ್ತು ಮೋಕ್ಷ ದ್ವಾರ ದ್ವಾರಗಳು.
ಆದರೆ ಗುಹೆಯಲ್ಲಿರುವ ಶಿವಲಿಂಗ ಬೆಳೆಯುತ್ತಲೇ ಇದ್ದು, ವರ್ಷದಿಂದ ವರ್ಷಕ್ಕೆ ಅದು ಮೇಲಿನ ಕಲ್ಲಿಗೆ ತಾಗುವಷ್ಟು ಹತ್ತಿರವಾಗುತ್ತಿದೆ. ಒಮ್ಮೆ ಇದು ಮೇಲಿನ ಕಲ್ಲಿಗೆ ತಾಕಿದರೆ ಕಲಿಯುವ ಅಂತ್ಯವಾಗಲಿದೆ ಎಂದು ನಂಬಲಾಗಿದೆ. ಅಲ್ಲಿನ ಸ್ಥಳೀಯರು ಇದನ್ನು ಗಂಭಿರವಾಗಿ ನಂಬುತ್ತಾರೆ ಜೊತೆಗೆ ಶಿವನಿಗೆ ನಿತ್ಯವು ಪೂಜೆ ಸಲ್ಲಿಸುತ್ತಾರೆ.



Click it and Unblock the Notifications













