Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ರಸ್ತೆ ಬದಿ ಕಸ ಆರಿಸುತ್ತಿದ್ದವ ಇಂಜಿನಿಯರ್..! ಮಾತನಾಡಿಸಿದ ಯುವಕರಿಗೆ ಕಾದಿತ್ತು ಅಚ್ಚರಿ..!!
ಇತ್ತೀಚಿಗೆ ಯುವ ಜನೆಯ ದೊಡ್ಡ ಸಮಸ್ಯೆ ಓದು. ಏಕೆಂದರೆ ಓದು ಈಗ ದೊಡ್ಡ ಉದ್ಯಮ, ಹಾಗೆ ದೇಶದ ಬಹುದೊಡ್ಡ ಸಮಸ್ಯೆ ನಿರುದ್ಯೋಗ. ಡಿಗ್ರಿ ಕೈಯಲ್ಲಿ ಹಿಡಿದು ಹೊರಬರುವ ಮಂದಿಗೆಲ್ಲ ಉದ್ಯೋಗ ನೀಡುವುದು ಕನಸಿನ ಮಾತು. ಹೀಗಾಗಿ ಅದೆಷ್ಟೋ ಮಂದಿ ಕೆಲಸ ಸಿಗದೆ ನಿರುದ್ಯೋಗಿಗಳಾಗುತ್ತಾರೆ. ಮತ್ತೆ ಕೆಲವರು ಕೆಲಸ ಸಿಗದ ನೋವಿನಲ್ಲಿ ಜೀವನವನ್ನೇ ಅಂತ್ಯಗೊಳಿಸಿಕೊಳ್ಳುವಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ.
ಆದ್ರೆ ಇತ್ತೀಚಿಗೆ ತಾವು ಓದಿದ್ದು ಒಂದು ಕ್ಷೇತ್ರವಾದರೆ ಯುವಕ ಯುವತಿಯರು ಕೆಲಸ ಮಾಡುವುದೇ ಮತ್ತೊಂದು ಕ್ಷೇತ್ರದಲ್ಲಿ ಎನ್ನುವಂತಾಗಿದೆ. ಅದರಲ್ಲೂ ಕೆಲವರು ಕಡಿಮೆ ಸಂಬಳಕ್ಕೆ ತಮಗೆ ಸಂಬಂಧಿಸದ ಇನ್ಯಾವುದೋ ಕ್ಷೇತ್ರದಲ್ಲಿ ದುಡಿಯುತ್ತಾರೆ. ಹೀಗಾಗಿ ಅವರ ಓದಿಗೆ ಈಗ ಬೆಲೆ ಇಲ್ಲದಂತಾಗಿದೆ.

ಅದರಲ್ಲೂ ಭಾರತ ಇಂಜಿನಿಯರ್ಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡುತ್ತಿರುವ ದೇಶ. ಒಂದು ವರ್ಷಕ್ಕೆ ಲಕ್ಷಾಂತರ ಮಂದಿ ಇಂಜಿನಿಯರಿಂಗ್ ಪದವಿ ಪಡೆದು ಹೊರಬರುತ್ತಾರೆ. ಅವರೆಲ್ಲು ಕಂಪನಿಗಳಿಗೆ ತಮ್ಮ ಫೈಲ್ ಹಿಡಿದು ಅಲೆಯುತ್ತಾರೆ. 100 ಮಂದಿ ಇಂಜಿನಿಯರ್ಗಳಲ್ಲಿ ಒಂದಿಷ್ಟು ಮಂದಿ ಮಾತ್ರ ಕೆಲಸ ಗಿಟ್ಟಿಸುತ್ತಾರೆ. ಉಳಿದವರು ಮತ್ತೆ ಬೇರೆ ಕಂಪನಿಗಳತ್ತ ಮುಖ ಮಾಡುತ್ತಾರೆ.
ಈ ರೀತಿ ಭಾರತದಲ್ಲಿ ನಡೆಯುತ್ತಲೇ ಇದೆ. ಆದ್ರೆ ಇಲ್ಲೊಬ್ಬ ಇಂಜಿನಿಯರಿಂಗ್ ಮುಗಿಸಿರುವ ಭಿಕ್ಷುಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಆತ ಕೊಳಕು ಬಟ್ಟೆ ಹಾಕಿಕೊಂಡು ರಸ್ತೆಯಲ್ಲಿ, ಬೀದಿಯಲ್ಲಿರುವುದನ್ನು ಕಂಡು ಮಾತನಾಡಿಸಿದಾಗ ಆತ ಇಂಜಿನಿಯರಿಂಗ್ ಮಾಡಿರುವುದು ತಿಳಿದುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರು ಶಾಕ್ ಆಗಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾನೆ. ಕೆಲವ ಯುವಕರು ಊಟ ಮಾಡಿದ್ದೀರಾ ಎಂದು ಆತನನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಆತ ಇಲ್ಲ ಎನ್ನುತ್ತಾನೆ, ನಂತರ ಯುವಕರು ಆತನಿಗೆ ಊಟದ ಪ್ಯಾಕೆಟ್ ಕೈಗಿಟ್ಟು ಊಟ ಮಾಡುವಂತೆ ಹೇಳುತ್ತಾರೆ.
ಹೀಗೆ ಆತನ ಜೊತೆ ಮಾತಿಗಿಳಿದ ಯುವಕರು ಏನು ಓದಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಆತ ಇಂಜಿನಿಯರಿಂಗ್ ಎಂದು ಉತ್ತರಿಸುತ್ತಾನೆ. ಈ ಉತ್ತರ ಕೇಳಿದ ಯುವಕರು ಶಾಕ್ ಆಗಿದ್ದಾರೆ. ಹೀಗಾಗಿ ಇಂಜಿನಿಯರ್ ಆದರೂ ಈ ಪರಿಸ್ಥಿತಿಗೆ ಕಾರಣವೇನು ಎಂದು ಕೇಳುತ್ತಾರೆ. ಕುಟುಂಬದ ಕಾರಣಗಳು ನನ್ನ ಇಂದಿನ ಸ್ಥಿತಿಗೆ ಕಾರಣ ಎಂದು ಆತ ಹೇಳುತ್ತಾನೆ.
ಕುಟುಂಬದ ಆರ್ಥಿಕ ಪರಿಸ್ಥಿತಿ ಮನೆ ತೊರೆಯುವಂತೆ ಮಾಡಿದೆ ಎಂದು ಆತ ಹೇಳುತ್ತಾನೆ. ಇಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ರದ್ದಿ ಪೇಪರ್ ಆಯ್ದು ಗುಜರಿಗೆ ಹಾಕುತ್ತಾನೆ. ಇದರಿಂದ ಒಂದಿಷ್ಟು ಹಣ ಸಂಪಾದಿಸುತ್ತಾನೆ. ಹಾಗೆ ರಾತ್ರಿ ಎಲ್ಲಿಯಾದರು ಮಲಗಿ ದಿನ ಕಳೆಯುತ್ತಾನೆ.
ಆತ ಇಷ್ಟೆಲ್ಲಾ ಹೇಳಿ ಮುಗಿಸುವಾಗ ಆತನ ಕಣ್ಣಲ್ಲಿ ನೀರು ಸುರಿಯುತ್ತಿದೆ. ಹೀಗಾಗಿ ಯುಕವರು ಅಳಬೇಡಿ ಎಂದು ಕಣ್ಣೀರು ಒರೆಸುವುದನ್ನು ನಾವು ನೋಡಬಹುದು. ಈ ವೀಡಿಯೊವನ್ನು @being_Jigar_rawal ಖಾತೆಯಿಂದ ಪೋಸ್ಟ್ ಮಾಡಲಾಗಿದೆ, "ನಾನು ಇಂಜಿನಿಯರ್" ಎಂಬ ಶೀರ್ಷಿಕೆಯೊಂದಿಗೆ. ಅಂದಿನಿಂದ ಇದು 20 ಮಿಲಿಯನ್ ವೀಕ್ಷಣೆ ಪಡೆದಿದೆ.
ಈ ಘಟನೆ ಕುರಿತಂತೆ ವಿಡಿಯೋ ನೋಡಿದ ಮಂದಿ ಅಚ್ಚರಿಯ ಕಮೆಂಟ್ಗಳ ಮಾಡಿದ್ದಾರೆ. ಆತ 20 ಅಥವಾ 25 ವರ್ಷದ ಹಿಂದೆ ತನ್ನ ಇಂಜಿನಿಯರಿಂಗ್ ಮುಗಿಸಿರಬಹುದು. ಅದ್ರೆ ಆತನಿಗೆ ಕೆಲಸ ಸಿಕ್ಕಿರಲಿಲ್ಲವೇ? ಇಂಜಿನಿಯರಿಂಗ್ ಎಂಬುದು ಕೂಡ ಬರಿ ಡಿಗ್ರಿ ಅಷ್ಟೆ ಉಳಿದಂತೆ ಎಲ್ಲಾ ಟ್ಯಾಲೆಂಟ್ ನಾವೇ ಬೆಳಸಿಕೊಳ್ಳಬೇಕು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications
