Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮನೆಯಲ್ಲೇ ಮಾಡಿ ಪರಿಸರ ಸ್ನೇಹಿ ಬಾವುಟ..! ಮಕ್ಕಳ ಕೈಗಿಟ್ಟರೆ ಆ ಖುಷಿಯೇ ಬೇರೆ..!
ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗಿತ್ತಿದೆ, ಭಾರತದಲ್ಲಿ ರಾಷ್ಟ್ರೀಯ ಹಬ್ಬವಾಗಿ ಈ ದಿನವನ್ನ ಆಚರಿಸಲಾಗುತ್ತದೆ. ಇಂದು ಸ್ವಾತಂತ್ರ್ಯಕ್ಕಾಗಿ ಮಡಿದ ಮಹಾನ್ ನಾಯಕರ ತ್ಯಾಗ, ಬಲಿದಾನವನ್ನು ನೆನೆದು ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ನಾವಿಂದು ಅನುಭವಿಸುತ್ತಿರುವ ಈ ಸ್ವಾತಂತ್ರ್ಯದ ಹಿಂದೆ ಎಷ್ಟು ಮಂದಿಯ ಶ್ರಮದ ಬೆವರ ಹನಿ ಇದೆ ಎಂಬುದನ್ನು ನಾವು ನೆನಪು ಮಾಡಿಕೊಳ್ಳುವ ದಿನವಾಗಿರಲಿದೆ.
ಹೀಗೆ ಸ್ವಾತಂತ್ರ್ಯೋತ್ಸವದ ಅರ್ಥಪೂರ್ಣ ಆಚರಣೆ ಆರಂಭವಾಗುವುದು ಶಾಲೆಗಳಿಂದ. ಶಾಲೆಯಲ್ಲಿ ಇದೊಂದು ಹಬ್ಬವೇ. ಅಂದು ಮಕ್ಕಳು ಕೇಸರಿ ಬಿಳಿ ಹಸಿರು ಬಣ್ಣದ ಬಟ್ಟೆ ಧರಿಸಿ ಧ್ವಜಾರೋಹಣ ಸೆರವೇರಿಸಿ ರಾಷ್ಟ್ರಗೀತೆ ಹಾಡಿ ಸ್ವಾತಂತ್ರ್ಯ ಹೋರಾಟಗಾರರ ನೆನೆಯುತ್ತಾರೆ. ಅವರಲ್ಲೂ ಸ್ವಾತಂತ್ರ್ಯದ ಕುರಿತಾದ ಅರಿವು ಮೂಡಿಸುವ ಪ್ರಯತ್ನ ಇದಾಗಿರಲಿದೆ.

ಇನ್ನು ಈ ಸ್ವಾತಂತ್ರ್ಯೋತ್ಸವ ವೇಳೆ ಪ್ಲಾಸ್ಟಿಕ್ ಬಾವುಟಗಳ ಬಳಸುವುದು ನಾವು ನೋಡಿದ್ದೇವೆ. ಆದರೆ ಈ ಪ್ಲಾಸ್ಟಿಕ್ ಧ್ವಜ ಪರಿಸರಕ್ಕೂ ಒಳ್ಳೆಯದಲ್ಲ ಜೊತೆಗೆ ನಾವು ಎಲ್ಲೆಂದರಲ್ಲಿ ಎಸೆಯುತ್ತೇವೆ, ಇದು ರಾಷ್ಟ್ರ ಧ್ವಜಕ್ಕೆ ಅಗೌರವ ಸೂಚಿಸಿದಂತೆ. ಹೀಗಾಗಿ ಎಲ್ಲರೂ ಪ್ಲಾಸ್ಟಿಕ್ ಮುಕ್ತ ಭಾವುಟ ಬಳಸುವುದು ಉತ್ತಮ. ಹಾಗಾದ್ರೆ ನೈಸರ್ಗಿಕವಾಗಿ ಭಾವುಟ ತಯಾರಿಸುವುದು ಹೇಗೆ? ಮನೆಯಲ್ಲೇ ಭಾವುಟ ತಯಾರಿಸಿ ನಿಮ್ಮ ಮಕ್ಕಳ ಕೈಗೆ ನೀಡಿದರೆ ಅವರಿಗೂ ಪರಿಸರದ ಬಗ್ಗೆ ಕಾಳಜಿ ಮೂಡುತ್ತೆ ಜೊತೆಗೆ ಎಲ್ಲರಲ್ಲೂ ಇದು ಜಾಗೃತಿ ಮೂಡಿಸುತ್ತದೆ.
ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಈ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಮನೆಯಲ್ಲೇ ಬಾಳೆ ಎಲೆ ಬಳಸಿ ಹೇಗೆ ತ್ರಿವರ್ಣ ಧ್ವಜ ತಯಾರಿಸಬಹುದು ಎಂಬುದನ್ನು ವಿಡಿಯೋದಲ್ಲಿ ವಿವರಿಸಲಾಗಿದ್ದು, ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪರಿಸರಕ್ಕೂ ಹಾನಿಯಿಲ್ಲದೆ ನೋಡಲು ಸುಂದರವಾಗಿ ಹಾಗೂ ಮಣ್ಣಿನಲ್ಲಿ ಕರಗುವಂತಹ ಈ ಭಾವುಟ ಎಲ್ಲರ ಗಮನ ಸೆಳೆಯುತ್ತಿದೆ.
@priyas.artwork ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋ ಈಗ ಬರೋಬ್ಬರಿ 7 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಎಲ್ಲರೂ ಈ ರೀತಿ ಪರಿಸರ ಸ್ನೇಹಿ ಭಾವುಟ ಮಾಡಿ ತಮ್ಮ ಮಕ್ಕಳಿಗೆ ನೀಡುವಂತೆ ಸಲಹೆ ನೀಡಿದ್ದಾರೆ.
ವಿಡಿಯೋದಲ್ಲಿ ವಿವರಿಸಿದ್ದಂತೆ ಮೊದಲು ಒಂದು ದೊಡ್ಡ ಬಾಳೆ ಎಲೆ ತೆಗೆದುಕೊಂಡು ಅದರ ಮಧ್ಯದಿಂದ ಅರ್ಧ ದಂಟು ಇರುವಂತೆ ನೋಡಿಕೊಂಡು ಕತ್ತರಿಸಿಕೊಳ್ಳಬೇಕು. ಬಳಿಕ ಅದರ ದಂಟಿಗೆ ನೀಲಿ ಬಣ್ಣ ಬಳಿಯಬೇಕು. ಬಾವುಟದ ಆಕಾರವಾಗಿ ಕೇಸರಿ, ಬಿಳಿ, ಹಸಿರು ಬಣ್ಣ ಬಳಿದು ಮಧ್ಯದಲ್ಲಿ ಸಣ್ಣದಾಗಿ ಅಶೋಕ ಚಕ್ರವನ್ನು ಬಿಡಿಸಬೇಕು. ಇಷ್ಟಾದರೆ ನಿಮ್ಮ ಮುಂದೆ ನೈಸರ್ಗಿಕ ಭಾವುಟ ರೆಡಿಯಾಗುತ್ತದೆ.
ಇಂತಹ ಭಾವುಟಗಳು ಈಗ ಮಾರುಕಟ್ಟೆಗೂ ಲಗ್ಗೆ ಇಟ್ಟಿವೆ, ಪರಿಸರ ಸ್ನೇಹಿ ವಸ್ತುಗಳ ಮೇಲೆ ಹೆಚ್ಚು ಜನರು ಒಲವು ತೋರಿಸಲು ಮುಂದಾದ ಪರಿಣಾಮ ಈಗ ಹೆಚ್ಚಿನವರು ಇಂತಹ ವಸ್ತುಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಈ ಸಾಲಿಗೆ ಬಾಳೆ ಎಲೆಯ ಭಾವುಟ ಸಹ ಸೇರಿಕೊಂಡಿದೆ. ಈ ವಿಡಿಯೋ ನೋಡಿದ ಮಂದಿ ಈ ಬಾರಿಯ ಸ್ವಾತಂತ್ರ್ಯೋತ್ಸವದಂದು ಈ ಪರಿಸರ ಸ್ನೇಹಿ ಭಾವುಟ ನಾವು ಸಹ ಮಾಡಿ ಕೈ ಜೋಡಿಸೋಣ ಎನ್ನುತ್ತಿದ್ದಾರೆ.
ಮಕ್ಕಳು ಸಹ ಇಂತಹ ಭಾವುಟ ಕೈಯಲ್ಲಿ ಹಿಡಿದು ಪರಿಸರ ಸ್ನೇಹಿಯಾಗಿರುವ ಕುರಿತು ಜಾಗೃತಿ ಮೂಡಿಸುವ ವ್ಯಕ್ತಿಗಳಾಗುತ್ತಾರೆ. ಇತ್ತ ಬೆಲೆಯಲ್ಲೂ ತುಂಬಾನೆ ಕಡಿಮೆಯಾಗುತ್ತದೆ. ನೀವು ಮಾರುಕಟ್ಟೆಯಲ್ಲಿ 10 ರೂಪಾಯಿಯಿಂದ ಸಾವಿರ ರೂಪಾಯಿಯ ಭಾವುಟವನ್ನೂ ಸಹ ನೋಡಬಹುದು. ಆದ್ರೆ ಇದು ಕಡಿಮೆ ಖರ್ಚಿನಲ್ಲಿ ಸುಂದರವಾದ ಭಾವುಟ ಮಾಡುವ ದಾರಿಯಾಗಿದೆ.



Click it and Unblock the Notifications