Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
'ಸಂಪೂರ್ಣ ವಿನಾಶದ ದಿನ': ಭೂಮಿ ಅಂತ್ಯದ ಕುರಿತು ವಿಜ್ಞಾನಿಗಳ ಉತ್ತರ.!
ನಮ್ಮ ಭೂಮಿ ರೂಪಗೊಂಡಿರುವ ಇತಿಹಾಸ ನಿಮಗೆಲ್ಲಾ ತಿಳಿದಿರಬಹುದು. ಕೋಟಿ ಕೋಟಿ ವರ್ಷಗಳ ಹಿಂದೆ ನಡೆದ ಬಹುದೊಡ್ಡ ವಿದ್ಯಮಾನಗಳು ಇಂದಿನ ಭೂಮಿ ಹಾಗೂ ಸೌರ ಮಂಡಲದ ಸೃಷ್ಟಿಗೆ ಕಾರಣವಾಗಿದೆ. ಇದಕ್ಕೆ ಹಲವು ಸಿದ್ದಾಂತಗಳು, ವೈಜ್ಞಾನಿಕ ಕಾರಣಗಳು ಕೂಡ ಇದೆ. ಹಾಗೆ ಈ ಭೂಮಿ ಮೇಲೆ ಸಣ್ಣ ಸಣ್ಣ ವೈರಸ್ನಿಂದ ಹಿಡಿದು ದೊಡ್ಡ ಡೈನೋಸಾರ್ವರೆಗೂ ವಿಕಾಸ ಸಿದ್ದಾಂತದ ಸಾಕ್ಷಿ ಕಾಣಬಹುದು.
ಹಾಗೆ ಭೂಮಿ ಯಾವಾಗ ಕೊನೆಯಾಗುತ್ತೆ ಅನ್ನೋದನ್ನು ನಾವು ಊಹಿಸಬಹುದಷ್ಟೇ ಹೊರತು ನಿಖರವಾಗಿ ಇದೇ ದಿನ ಭೂಮಿ ಅಂತ್ಯವಾಗಲಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇನ್ನು ಈ ಭೂಮಿ ಒಂದಲ್ಲಾ ಒಂದು ದಿನ ಅಂತ್ಯವಾಗುವುದು ಖಚಿತ ಎಂದು ವಿಜ್ಞಾನಿಗಳು ಕೂಡ ಹೇಳುತ್ತಿದ್ದಾರೆ. ಅದು 100 ಅಥವಾ 200 ವರ್ಷಗಳಲ್ಲಿ ಅಲ್ಲ. ಬದಲಿಗೆ ಸರಿ ಸುಮಾರು 250 ಮಿಲಿಯನ್ ವರ್ಷಗಳ ನಂತರ ಎಂದು ಅಂದಾಜಿಸಿದ್ದಾರೆ.

250 ಮಿಲಿಯನ್ ವರ್ಷಗಳೆಂದರೇ ಭೂಮಿಯ ಈಗಿನ ಸ್ವರೂಪವೇ ಬದಲಾಗಿರಬಹುದು. ಹಾಗೆ ಭಾರತ ಜಾರಿ ಮತ್ತೊಂದು ಖಂಡದೊಂದಿಗೆ ಸೇರಿರಬಹುದು, ಅಲ್ಲದೆ ಹೊಸದಾಗಿ ಒಂದಿಷ್ಟು ಖಂಡಗಳು ನಿರ್ಮಾಣವಾಗಿರಬಹುದು. ಆದ್ರೆ 250 ಮಿಲಿಯನ್ ವರ್ಷಗಳ ನಂತರ ಈ ಭೂಮಿ ಅಂತ್ಯವಾಗಲಿದೆ ಎಂದಿದ್ದಾರೆ. ಹಾಗೆ ಈ ಭೂಮಿ ಯಾವ ರೀತಿಯಾಗಿ ಅಂತ್ಯವಾಗಲಿದೆ ಎಂಬುದನ್ನು ಕೂಡ ವಿವರಿಸಿದ್ದಾರೆ.
ಭೂಮಿ ವಿನಾಶದತ್ತ ಸಾಗುತ್ತಿದೆ ಎನ್ನುವ ಅಂಶವನ್ನು ವಿಜ್ಞಾನಿಗಳು ಹೇಳಿದ್ದಾರೆ. ಹಾಗೆ ಭೂಮಿ ಮೇಲಿರುವ ಹಾಗೆ ನೀರಿನಲ್ಲಿರುವ ಯಾವುದೇ ಒಂದು ಜೀವಿಯೂ ಬದುಕುಳಿಯಲು ಆಗದಂತಹ ರೀತಿಯಲ್ಲಿ ಭೂಮಿನ ವಿನಾಶ ಇರಲಿದೆಯಂತೆ. ಇದನ್ನು ಸಂಪೂರ್ಣ ವಿನಾಶದ ದಿನ ಎಂದು ಕರೆಯಲಾಗಿದೆ. ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಪ್ಯೂಟರ್ ಸಿಮ್ಯುಲೇಶನ್ ಅನ್ನು ಅಭಿವೃದ್ಧಿಪಡಿಸಿ. ಆ ಮೂಲಕ ಮುಂದಿನ 250 ಮಿಲಿಯನ್ ವರ್ಷದಲ್ಲಿ ಭೂಮಿ ಮೇಲೆ ಏನೆಲ್ಲಾ ನಡೆಯಲಿದೆ ಎಂಬುದನ್ನು ಪತ್ತೆ ಮಾಡಿದ್ದಾರೆ.
ಈ ಹಿಂದೆ ಊಹಿಸಿದಕ್ಕಿಂತಲೂ ವೇಗವಾಗಿ ಭೂಮಿ ಅಂತ್ಯದ ಕಡೆಗೆ ಸಾಗುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಭೂಮಿ ಮೊದಲು ಬರಡಾಗುತ್ತದೆ, ನಂತರ ವಾಸಯೋಗ್ಯವಾಗಿ ಉಳಿಯದೆ ಅಲ್ಲಿ ಒಂದೇ ದೊಡ್ಡ ಖಂಡ ನಿರ್ಮಾಣವಾಗುತ್ತದೆ ಎಂದು ವಿವರಿಸಿದ್ದಾರೆ. ಭೂಮಿ ಮೇಲೆ ಯಾರು ಉಳಿಯಲಾಗದಷ್ಟು ಬಿಸಿಯಾಗುತ್ತದೆ. ಜ್ವಾಲಾಮುಖಿಗಳು ಕಿ.ಮೀಟರ್ ದೂರಕ್ಕೆ ಸಿಡಿಯುತ್ತವೆ. ನೀರಿನ ಮೂಲವೇ ಇಲ್ಲದಂತಾಗುತ್ತದೆ.
ಈ ಸಮಯದಲ್ಲಿ ಭೂಮಿಯ ಮೇಲೆ ಬೆಂಕಿ ಹರಿಯುತ್ತಿರುತ್ತದೆ, ಹೀಗಾಗಿ ತಾಪಮಾನ 70 ಡಿಗ್ರಿಗಿಂತ ಹೆಚ್ಚಾಗಿರುತ್ತದೆ. ಭೂಮಿ ಮೇಲೆ ಇಂಗಾಲದ ಡೈ ಆಕ್ಸೈಡ್ ಪ್ರಮಾಣವು ಈ ಹಿಂದೆ ಅಂದಾಜಿಸಿರುವುದಕ್ಕಿಂತಲು ಹೆಚ್ಚು ವೇಗವಾಗಿ ಅಂದಾಜಿಸಿದ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಶೇಖರಣೆಯಾಗಿದೆ. ಇದು ಕೂಡ ಭೂಮಿಯ ವಿನಾಶದಲ್ಲಿ ಬಹುದೊಡ್ಡ ಕೊಡುಗೆ ನೀಡಲಿದೆ ಎಂದು ವರದಿಯಾಗಿದೆ.
ಜ್ವಾಲಾಮುಖಿಗಳು ಶಾಖವನ್ನು ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ ಸ್ಫೋಟಗೊಳ್ಳುತ್ತವೆ ಮತ್ತು ಭೂಮಿಯ ಹೆಚ್ಚಿನ ಭಾಗವು ಜ್ವಾಲಾಮುಖಿಗಳಿಂದ ಆವೃತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಜ್ವಾಲಾಮುಖಿಗಳು ಸ್ಪೋಟಗೊಂಡಾಗ ಅತೀ ಹೆಚ್ಚು ಪ್ರಮಾನದ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಹೀಗಾಗಿ ಜನರ ಸಾವಿಗೆ ಈ ಜ್ವಾಲಾಮುಖಿಗಳ ಕಾರಣ ನೀಡಲಾಗಿದೆ. ಭೂಮಿಯ ನಾಶವೂ ಈ ಜ್ವಾಲಾಮುಖಿಗಳ ಸ್ಪೋಟದಿಂದ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ.



Click it and Unblock the Notifications











