Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಂಕಿ ಹತ್ತಿಕೊಂಡು ಡ್ರೈವರ್ಲೆಸ್ ಆಗಿ ಚಲಿಸಿದ ಕಾರು: ದೆವ್ವ ಚಲಾಯಿಸಿದಂತಿದೆ ಎನ್ನುತ್ತಿರುವ ನೆಟ್ಟಿಗರು
ಗಾಡಿಗೆ ಬೆಂಕಿ ಹತ್ತಿಕೊಂಡು ಉರಿದಿರುವ ಅನೇಕ ಘಟನೆ ನಡೆದಿದೆ, ಚಲಿಸುತ್ತಿರುವ ಗಾಡಿಗೆ ಬೆಂಕಿ ಹತ್ತಿಕೊಂಡು ಉರಿದಿರುವುದು ಅಥವಾ ನಿಂತಿರುವ ಗಾಡಿಗೆ ಬಂಕಿ ಹತ್ತಿಕೊಂಡು ಉರಿದಿರುವ ಅನೇಕ ವೀಡಿಯೋಗಳಿವೆ, ಆದರೆ ಜೈಪುರದಲ್ಲಿ SUV ಗಾಡಿ ಬೆಂಕಿ ಹೊತ್ತಿಕೊಂಡು ಉರಿಯತ್ತಿರುವಾಗ ಡ್ರೈವರ್ಲೆಸ್ ಆಗಿ ಚಲಿಸಿರುವ ವೀಡಿಯೋ ವೈರಲ್ ಆಗಿವೆ. ಈ ವೀಡಿಯೋ ನೋಡಿದವರು ಘೋಸ್ಟ್ ಡ್ರೈವಿಂಗ್ ಕಾರ್ ಎಂದು ಕಮೆಂಟಿಸುತ್ತಿದ್ದಾರೆ.

ಸಿನಿಮೀಯ ರೀತಿಯ ಘಟನೆ ನಡೆದಿರುವುದು ಜೈಪುರದ ಸೋಡಲಾ ಸಬ್ಜಿ ಮಂಡಿಯಲ್ಲಿ. ಡ್ರೈವರ್ ಆ ಕಾರಿನಲ್ಲಿ ಇರಲಿಲ್ಲ, ಆವಾಗ ಕಾರಿಗೆ ಬೆಂಕಿ ಹತ್ತಿಕೊಂಡಿದೆ, ಅಷ್ಟು ಮಾತ್ರ ರಸ್ತೆಯಲ್ಲಿ ಒಳಗೊಬ್ಬ ಡ್ರೈವರ್ ಕೂತು ಓಡಿಸಿಕೊಂಡು ಹೋಗುವ ರೀತಿಯಲ್ಲಿ ಚಲಿಸಲಾರಂಭಿಸಿದೆ. ಬೆಂಕಿ ಉಂಡೆಯಂತೆ ಬರುತ್ತಿರುವ ಕಾರು ನೋಡಿದ ಜನರು ದಿಕ್ಕು ಪಾಲಾಗಿ ಓಡಲಾರಂಭಿಸಿದ್ದಾರೆ. ಆದರೆ ಅದೃಷ್ಟವಶಾತ್ ಏನೂ ಆಗಿಲ್ಲ.
ಏನಿದು ಘಟನೆ?
ಈ ಕಾರನ್ನು ಜಿತೇಂದ್ರ ಎಂಬುವವರು ಓಡಿಸುತ್ತಿದ್ದರು, ಅವರಿಗೆ ಶಾರ್ಟ್ಸರ್ಕ್ಯೂಟ್ ಆಗಿದೆ ಎಂಬುವುದು ತಕ್ಷಣವೇ ಗೊತ್ತಾಗುತ್ತದೆ, ಕೂಡಲೇ ಕಾರಿನಿಂದ ಹೊರಗಡೆ ಇಳಿದು ಬಿಡುತ್ತಾರೆ, ಅಷ್ಟರಲ್ಲಿಯೇ ಕಾರಿಗೆ ಬೆಂಕಿ ಪೂರ್ತಿಯಾಗಿ ಆವರಿಸಿಕೊಂಡು ಬಿಟ್ಟಿತ್ತು, ಅಲ್ಲದೆ ಆ ಕಾರು ಸ್ಟಾರ್ಟ್ನಲ್ಲಿಯೇ ಇದ್ದ ಕಾರಣ ಕಾರು ಚಲಿಸಲಾರಂಭಿಸಿದೆ. ಅಲ್ಲಿದ್ದವರಿಗೆ ಒಂದು ಕ್ಷಣ ಏನು ಮಾಡಬೇಕೆಂದೇ ಗೊತ್ತಾಗಲ್ಲ, ತಮ್ಮ ರಕ್ಷಣೆಗೆ ಓಡಲಾರಂಭಿಸುತ್ತಾರೆ. ಪುಣ್ಯಕ್ಕೆ ಕಾರು ಎಲೆವೇಟರ್ನಲ್ಲಿ ಸ್ಲೋ ಆಗಿ ಡಿವೈಡರ್ಗೆ ಗುದ್ದಿ ನಿಂತಿತ್ತು, ಆದರೆ ಕಾರು ಮಾತ್ರ ಸುಟ್ಟು ಕರಕಲಾಗಿ ಹೋಯ್ತು.
ಇತ್ತೀಚೆಗೆ ಥಾಯ್ಲೆಂಡ್ ಬಸ್ಗೆ ಶಾರ್ಟ್ ಸರ್ಕ್ಯೂಟ್ ಆಗಿ 17ಕ್ಕೂ ಹೆಚ್ಚು ಪುಟಾಣಿಗಳು ಸಾವನ್ನಪ್ಪಿದ್ದರು
ಮಕ್ಕಳು ಕುಣಿಯುತ್ತಾ , ನಲಿಯುತ್ತಾ ಫೀಲ್ಡ್ ಟ್ರಿಪ್ ಹೋಗಿದ್ದರು, ಅವರು ಪ್ರಯಾಣಿಸಿದ್ದು ಲಕ್ಷುರಿ ಬಸ್, ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ಆಗಿ ಬಸ್ಗೆ ಬೆಂಕಿ ಹತ್ತಿಕೊಂಡು ಉರಿಯಲಾರಂಭಿಸಿತು, ಆ ಬಸ್ನ ಡ್ರೈವರ್ ಇಳಿದು ಎಮರ್ಜೆನ್ಸಿ ಗ್ಯಾಸ್ ಮುಖಾಂತರ ಬೆಂಕಿ ಆರಿಸಲು ಪ್ರಯತ್ನಿಸಿದರು. ಕೆಲ ಪುಟಾಣಿಗಳನ್ನು ತೀವ್ರ ಗಾಯದಿಂದ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಯ್ತು, ಆದರೆ ಟೀಚರ್ಸ್ ಹಾಗೂ 17 ಪುಟಾಣಿಗಳು ಸಾವನ್ನಪ್ಪಿದ್ದರು, ಈ ಘಟನೆ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತು.
ಗಾಡಿಯ ವೈರ್ಗಳ ಕನೆಕ್ಷನ್ ಸರಿಯಾಗಿದೆಯೇ ಎಂದು ಮೆಕ್ಯಾನಿಕ್ ಬಳಿಪರಿಶೀಲಿಸಬೇಕು
ಗಾಡಿಗೆ ಬೆಂಕಿ ತಗುಲಿರುವ ಘಟನೆಗಳು ತುಂಬಾ ನಡೆಯುತ್ತಿವೆ, ನೀವು ನಿಮ್ಮ ಗಾಡಿಯ ಕಂಡೀಷನ್ ಸರಿಯಾಗಿ ಇದೆಯೇ ಎಂದು ತಿಳಿಯಲು ಮೆಕ್ಯಾನಿಕ್ ಬಳಿ ಪರಿಶೀಲಿಸಿ.
ಯಾವುದೇ ವೈರ್ ಒಂದಕ್ಕೊಂದು ತಗುಲಿಕೊಂಡಂತೆ ಇರಬಾರದು, ವೈರ್ಗಳನ್ನು ಕಟ್ ಮಾಡಿ ಜೋಡಿಸಿರುವುದು, ಅಲ್ಟ್ರಾರೇಷನ್ ಮಾಡಿಸಿದರೆ ಈ ರೀತಿಯಾಗುವ ಸಾಧ್ಯತೆ ಇದೆ.
ಕಾರಿನಲ್ಲಿ ಹಲವು ಗ್ಯಾಡ್ಜೆಟ್ಸ್ ಬಳಸಬೇಡಿ
ಓನರ್ ಮ್ಯಾನ್ಯೂಲ್ ಪರಿಶೀಲಿಸಿ, ಅದರಲ್ಲಿ ಕಾರಿಗೆ ಕರೆಕ್ಟ್ ಪ್ಯೂಸ್ ಬಳಸಲಾಗಿದೆಯೇ ಎಂದು ಪರಿಶೀಲಿಸಬೇಕು.



Click it and Unblock the Notifications









