Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿವಾರ ಈ ತಪ್ಪು ಮಾಡಬೇಡಿ..! ಶನಿದೇವರ ಈ ಮಂತ್ರ ಪಠಿಸಿ..!
ಶನಿದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿ ಮಹಾರಾಜನು ಸಂತೋಷವಾಗಿದ್ದರೆ ನೀವು ಬಯಸಿದ ವರವನ್ನು ನೀಡುತ್ತಾನೆ. ಶನಿಯ ಕೃಪೆಯಿಂದ ವ್ಯಕ್ತಿಯ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಮಳೆಯಾಗುತ್ತದೆ. ಶನಿದೇವನು ಕೋಪಗೊಂಡರೆ ಆತ ನಿಮ್ಮ ಹೆಗಲೇರಿದಂತೆ.
ಶನಿದೇವನ ವಕ್ರ ದೃಷ್ಟಿ ಬಿದ್ದರೆ ರಾತ್ರೋರಾತ್ರಿ ವ್ಯಕ್ತಿ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ ಎಂದು ನಂಬಲಾಗಿದೆ. ಆದುದರಿಂದ, ಶನಿ ಮಹಾರಾಜನು ನಿಮ್ಮ ಮೇಲೆ ಕೋಪಗೊಂಡು ನಿಮಗೆ ಅಶುಭ ತರಲು ದಾರಿಯಾಗುವಂತಹ ಕೆಲಸಗಳನ್ನು ಶನಿವಾರದಂದು ಮಾಡಬಾರದಂತೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಪ್ಪಾಗಿಯೂ ಸಹ, ಶನಿವಾರದಂದು ಈ ತಪ್ಪುಗಳನ್ನು ಮಾಡಬಾರದಂತೆ. ಹಾಗಾದರೆ ಶನಿವಾರ ಯಾವ ಕೆಲಸ ಬಗ್ಗೆ ನಾವು ಎಚ್ಚರವಹಿಸಬೇಕು, ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ನೋಡೋಣ.
ಮಾಂಸಹಾರ ಮಾಡಲೇಬಾರದು
ಶನಿದೇವ ಸಾತ್ವಿಕ ಆಹಾರವನ್ನು ಹೆಚ್ಚು ಇಷ್ಟಪಡುತ್ತಾನಂತೆ ಹಾಗಾಗಿ ಶನಿ ದೇವರ ನಂಬುವವರು, ಆತನ ಪೂಜೆ ಮಾಡುವವರು, ಆತನ ವ್ರತ ಕೈಗೊಂಡವರು ಈ ದಿನ ಮೊಟ್ಟೆ, ಮಾಂಸ, ಮೀನು ಅಥವಾ ಯಾವುದೇ ರೀತಿಯ ಮಾಂಸವನ್ನು ಸೇವಿಸಬೇಡಿ. ಸಾತ್ವಿಕ ಆಹಾರವನ್ನು ಸೇವಿಸಿ ಶನಿದೇವನು ಪ್ರಸನ್ನನಾಗುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ.
ಹಾಲು, ಮೊಸರು ಮತ್ತು ಹುಳಿ
ಶನಿವಾರದಂದು ಮೊಸರು, ಹಾಲನ್ನು ಕುಡಿಯಬಾರದು, ಅಂದರೆ ಹಾಲು, ಮೊಸರಿಗೆ ಏನನ್ನಾದರೂ ಬೆರೆಸಿ ಕುಡಿಯಬಹುದು, ಅರಶಿನ, ಕೇಸರಿ, ಬೆಲ್ಲ ಹೀಗೆ ಏನಾದರೂ ಸೇರಿಸಿ ಕುಡಿಯಬಹುದು. ಇದರ ಜೊತೆ ಹುಳಿಯ ಅಂಶವನ್ನು ಶನಿವಾರ ಸೇವಿಸಬಾರದಂತೆ.
ಕೂದಲು ಮತ್ತು ಉಗುರುಗಳನ್ನು ಕತ್ತರಿಸುವುದು ನಿಷೇಧ
ಶನಿವಾರ ಕೂದಲು ಕತ್ತರಿಸಿಸುವುದು ನಿಷೇಧಿಸಲಾಗಿದೆ. ಈ ದಿನ ಕೂದಲು ಕತ್ತರಿಸಿ, ಉಗುರು ತೆಗೆದರೆ ಶನಿದೇವನು ಕೋಪಗೊಳ್ಳುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ, ಈ ದಿನ ತಪ್ಪಾಗಿಯೂ ಈ ಕೆಲಸಗಳನ್ನು ಮಾಡಬೇಡಿ.
ಈ ವಸ್ತುಗಳನ್ನು ಖರೀದಿಸಬೇಡಿ
ಶನಿವಾರದಂದು ಶನಿ ದೇವರಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದನ್ನು ಸಹ ನಿಷೇಧಿಸಲಾಗಿದೆ. ಇದರಲ್ಲಿ ಕಬ್ಬಿಣದ ವಸ್ತುಗಳು, ಸಾಸಿವೆ ಎಣ್ಣೆ, ಉದ್ದಿನಬೇಳೆ, ಕಲ್ಲಿದ್ದಲು, ಉಪ್ಪು ಮತ್ತು ಕಪ್ಪು ಬಟ್ಟೆ ಇತ್ಯಾದಿ. ಶನಿವಾರದಂದು ಈ ವಸ್ತುಗಳನ್ನು ಖರೀದಿಸಬೇಡಿ. ಆದಾಗ್ಯೂ, ಈ ದಿನ ಸಾಸಿವೆ ಎಣ್ಣೆ ಮತ್ತು ಉದ್ದಿನ ಬೇಳೆಯನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಶನಿವಾರದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ.
ಶನಿವಾರ ಪಠಿಸಬೇಕಾದ ಮಂತ್ರ ಯಾವುದು?
ಶನಿವಾರದಂದು ಶನಿದೇವನ ಪೂಜೆ ಮಾಡುವಾಗ ಈ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಪಠಿಸುವ ಮೂಲಕ ಶನಿದೇವನ ಅನುಗ್ರಹವನ್ನು ಪಡೆಯುತ್ತಾನೆ. ಶನಿವಾರ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಕಪ್ಪು ಬಟ್ಟೆ ಧರಿಸಿ. ಶನಿ ದೇವಸ್ಥಾನಕ್ಕೆ ಹೋಗಿ ಎಳ್ಳು ಅಥವಾ ಸಾಸಿವೆ ಎಣ್ಣೆಯನ್ನು ದಾನ ಮಾಡಿ. ಇದರ ನಂತರ ಈ ಮಂತ್ರವನ್ನು ಜಪಿಸಿ. ಈ ಮಂತ್ರವನ್ನು ಪಠಿಸುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ.
'ಓಂ ಶನಿದೇವಾಯ ನಮಃ'
ಓಂ ಪ್ರಾಂ ಪ್ರೀಂ ಪ್ರಂ ಸಹ ಶನೈಶ್ಚರಾಯ ನಮಃ
ಓಂ ಶನಿಶ್ಚರಾಯ ನಮಃ:
ಶನಿ ಗಾಯತ್ರಿ ಮಂತ್ರ
ಔಂ ಕೃಷ್ಣಾಂಗಾಯ ವಿದ್ಯಾಮ್ಹೇ ರವಿಪುತ್ರಾಯ ಧೀಮಹಿ ತನ್ನಃ ಸೌರಿಃ ಪ್ರಚೋದಯಾತ್
ಓಂ ಕೃಷ್ಣಾಂಗಾಯ ವಿದ್ಮಹೇ ರವಿಪುತ್ರಯ ಧೀಮಹಿ ತನ್ನಃ ಸೌರಿ: ಪ್ರಚೋದಯಾತ್



Click it and Unblock the Notifications
