Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶ್ರೀಕೃಷ್ಣ ಜನ್ಮಾಷ್ಟಮಿಯಂದು ಈ ತಪ್ಪುಗಳ ಮಾಡಲೇಬೇಡಿ..!
ನಾಳೆ ನಾಡಿನಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ, ಶ್ರದ್ಧಾ ಭಕ್ತಿಯಿಂದ ಶ್ರೀಕೃಷ್ಣನ ಆರಾಧಿಸಲಾಗುತ್ತದೆ. ಶ್ರೀ ಕೃಷ್ಣ ಹುಟ್ಟಿದ ದಿನ ಎಂದು ಈ ದಿನವನ್ನ ಆಚರಿಲಾಗುತ್ತದೆ. ಬೆಣ್ಣೆ ಕಳ್ಳ ಎಂದು ಕರೆಯಲ್ಪಡುವ ಶ್ರೀಕೃಷ್ಣ ಹುಟ್ಟಿದ ಕಥೆಯೇ ರೋಚಕ. ಹೋರಾಟ ಮಾಡಿಕೊಂಡೇ ಜನಿಸಿದಾತ ಶ್ರೀ ಕೃಷ್ಣ. ವಿಷ್ಣುವಿನ ಎಂಟನೇ ಅವತಾರ ಎಂದು ನಂಬಲಾಗಿದೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ಪ್ರಮುಖ ಘಟನೆಯು ಶ್ರೀಕೃಷ್ಣನ ಜನ್ಮಕ್ಕೆ ಸ್ಫೂರ್ತಿ ನೀಡಿತು.ಕೃಷ್ಣ ಪಕ್ಷದ ಅಷ್ಟಮಿಯ ದಿನ ದೇವಕಿಯ ಎಂಟನೇ ಮಗ ಹುಟ್ಟಿದ, ಆತನೇ ಭಗವಾನ್ ಕೃಷ್ಣ.ವಾಸುದೇವ ತನ್ನ ಕಂದ ಕೃಷ್ಣನನ್ನು ಯಮುನಾ ನದಿಯ ಸಹಾಯದಿಂದ ಗೋಕುಲದಲ್ಲಿನ ತನ್ನ ಸ್ನೇಹಿತ ನಂದಗೋಪ ಇರುವಲ್ಲಿಗೆ ಕರೆತರುತ್ತಾನೆ. ಅದೇ ಸಮಯದಲ್ಲಿ ನಂದಾ ಅವರ ಪತ್ನಿ ಯಶೋದಾ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಎಂಬ ಕಥೆ ಇದೆ.

ಈ ದಿನ ಉಪವಾಸವಿದ್ದು ನೀವು ಕೃಷ್ಣನ ಪೂಜೆ ಮಾಡಿದರೆ ಎಲ್ಲಾ ಪಾಪಗಳಿಂದ ಮುಕ್ತಿ ದೊರೆಯಲಿದೆ. ಈ ದಿನ ಶ್ರೀಕೃಷ್ಣನ ಪೂಜೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರಲಿದೆ, ಸಂಪತ್ತು ವೃದ್ಧಿಸಲಿದೆ ಎಂದು ನಂಬಲಾಗಿದೆ. ಆದರೆ ಅಪ್ಪಿ ತಪ್ಪಿಯೂ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಈ ತಪ್ಪನ್ನು ಮಾಡಬಾರದಂತೆ. ಹಾಗಾದ್ರೆ ಆ ದಿನ ಯಾವ ತಪ್ಪು ಮಾಡಬಾರದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾಂಸ ಮತ್ತು ಮೊಟ್ಟೆಗಳನ್ನು ಸೇವಿಸಬೇಡಿ
ಕೃಷ್ಣ ಜನ್ಮಾಷ್ಟಮಿಯ ಆಚರಣೆಗೂ ಮುನ್ನ ಅಂದರೆ ನೀವು ಈ ದಿನ ಮನೆಯಲ್ಲಿ ಪೂಜೆ ಮಾಡುವವರಿದ್ದರೆ ಮೂರು ದಿನಗಳ ಕಾಲ ವ್ರತ ಮಾಡಬೇಕಾಗುತ್ತದೆ. ಇಲ್ಲವೆ ಒಂದು ದಿನವಾದರು ಮಾಂಸಹಾರ ಬಿಡಬೇಕಾಗುತ್ತದೆ. ಈ ಹಬ್ಬದ ಉಪವಾಸವು ಪವಿತ್ರ ಮತ್ತು ಮಂಗಳಕರ ಆಚರಣೆಗಳನ್ನು ಒಳಗೊಂಡಿರುವುದರಿಂದ ಮಾಂಸಾಹಾರಿ ಆಹಾರವನ್ನು ಕಟ್ಟುನಿಟ್ಟಾಗಿ ಬಿಡಬೇಕು. ಇದರ ಜೊತೆಗೆ ಬೆಳ್ಳುಳ್ಳಿ ಸೇವನೆಯನ್ನೂ ಸಹ ಬಿಡುವುದು ಉತ್ತಮ.
ಉಪಾಹಾರದ ನಂತರ ಚಹಾವನ್ನು ಕುಡಿಯಬಾರದು
ಉಪಹಾರದ ಬಳಿಕ ಬೆಳಗ್ಗೆ ಚಹಾ ಸೇವಿಸಬಾರದಂತೆ. ಕೃಷ್ಣ ಜನ್ಮಾಷ್ಟಮಿಯಲ್ಲಿ ಉಪವಾಸ ಮಾಡುತ್ತಾರೆ. ಆದ್ರೆ ಕೆಲವರು ಈ ದಿನ ಚಹಾ ಹೆಚ್ಚೆಚ್ಚು ಕುಡಿಯುತ್ತಾರೆ. ಇದನ್ನು ಸಹ ಮಾಡಬಾರದು.
ಎಣ್ಣೆಯಲ್ಲಿ ಕರಿದ ತಿಂಡಿ ಸೇವಿಸಬಾರದು
ಹೆಚ್ಚು ಎಣ್ಣೆ ಹಾಕಿ ಕರಿದ ತಿಂಡಿಯನ್ನು ಸವಿಯಬಾರದಂತೆ. ಇದರ ಬದಲಿಗೆ ಹಾಲು, ಮೊಸರು, ತುಪ್ಪ ಹೀಗೆ ಸಾತ್ವಿಕ ಆಹಾರ ಸೇವಿಸಬೇಕಂತೆ.
ನೆಲದ ಮೇಲೆ ಕುಳಿತು ಪೂಜೆ ಮಾಡಬೇಡಿ
ಮನೆಯಲ್ಲಿ ಶ್ರೀಕೃಷ್ಟನ ಮೂರ್ತಿಗೆ ಪೂಜೆ ಮಾಡುವಾಗ ನೆಲದ ಮೇಲೆ ಕುಳಿತು ಪೂಜೆ ಮಾಡಬಾರದಂತೆ. ಕೃಷ್ಣದ ಎದುರು ಮಣೆ ಅಥವಾ ಚಾಪೆ ಹಾಕಿ ಕುಳಿತು ಪೂಜೆ ಮಾಡಬೇಕು.
ಏನು ಮಾಡಬೇಕು?
ಮನೆಯ ಸ್ವಚ್ಛೆತೆಗೆ ಮೊದಲ ಆಧ್ಯತೆ
ಈ ದಿನ ನೀವು ಸ್ವಚ್ಛತೆಗೆ ಮೊದಲ ಆಧ್ಯತೆ ನೀಡಬೇಕು. ಮನೆಯಲ್ಲಿ ಕಸ, ಕೊಲೆ ಇಲ್ಲದಂತೆ ಸ್ವಚ್ಛ ಮಾಡಿದ ಬಳಿಕ ಪೂಜೆಗೆ ಸಿದ್ಧತೆ ನಡೆಸಬೇಕು. ಶುಭ್ರವಾದ ಬಟ್ಟೆ ಧರಿಸಿ. ಮನೆಯನ್ನು ಸ್ವಚ್ಛ ಮಾಡಿದ ಬಳಿಕ ಪೂಜೆ ನೆರವೇರಿಸಬೇಕು.
ಸಂಕಲ್ಪ ಮಾಡಿ
ನೀವು ಉಪವಾಸವನ್ನು ಮುರಿಯದೆ ಅಥವಾ ಯಾವುದೇ ತಪ್ಪುಗಳನ್ನು ಮಾಡದೆ ಶ್ರೀಕೃಷ್ಣನಿಗೆ ಎಲ್ಲಾ ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ಉಪವಾಸವನ್ನು ಮಾಡುತ್ತೀರಿ. ಇದರ ಮಧ್ಯೆ ಶ್ರೀಕೃಷ್ಣನ ನಾಮಸ್ಮರಣೆ ಮಾಡುತ್ತಾ ಇರಿ.
ಉಪವಾಸ
ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಉಪವಾಸ ಮಾಡಿದರೆ ಬಹಳ ಉತ್ತಮವಂತೆ. ಈ ದಿನ ಉಪಹಾರವನ್ನು ಮಾತ್ರ ಸೇವಿಸಿ ಶ್ರೀಕೃಷ್ಣ ನಾಮಸ್ಮರಣೆ ಮಾಡುತ್ತಾರೆ.
ಅನ್ನದಾನ ಮಾಡಿ
ಮನೆಯಲ್ಲಿ ಪೂಜೆ ನೆರವೇರಿದ ಬಳಿಕ ಅನ್ನದಾನ ಮಾಡಬೇಕಂತೆ. ಇದರಿಂದ ಕೃಷ್ಣನಿಗೆ ಮಾಡಿದ ವ್ರತ ಹಾಗೂ ಪೂಜೆ ಫಲ ನೀಡಲಿದೆ ಎಂದು ಹಿರಿಯರು ಹೇಳುತ್ತಾರೆ.



Click it and Unblock the Notifications