Latest Updates
-
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ!
ಲಾಲಾಬಾಗ್ ಗಣಪನಿಗೆ ಮೊದಲ ದಿನವೇ ₹50 ಲಕ್ಷ ದೇಣಿಗೆ..!
ದೇಶದಾದ್ಯಂತ ಈಗ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಹಲವು ಕಡೆಗಳಲ್ಲಿ ದೈತ್ಯ ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಹಾಗೆ ವಿಶೇಷ ಪೂಜೆ, ಕಾರ್ಯಕ್ರಮಗಳು ನಡೆಯುತ್ತಿದೆ. ಬಹುತೇಕ ಸಾರ್ವಜನಿಕ ಗಣೇಶೋತ್ಸವಗಳು ಮೂರು ದಿನಗಳಿಂದ ಹಿಡಿದು ಒಂದು ತಿಂಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ.
ಇನ್ನು ಮುಂಬೈನ ಕಿಂಗ್ ಆಫ್ ಲಾಲಾಭಾಗ್ ಎಂದು ಕರೆಯಲ್ಪಡುವ 'ಲಾಲ್ಬಾಗ್ಚಾ ರಾಜಾ' ಗಣಪತಿ ಇಡೀ ದೇಶದಲ್ಲೇ ಖ್ಯಾತಿ ಪಡೆದಿರುವ ಗಣೇಶ ಆಗಿದೆ. ಮುಂಬೈನ ಅತೀ ದೊಡ್ಡ ಹಾಗೂ ಅತೀ ಹೆಚ್ಚು ಮಂದಿ ಸೇರುವ ಗಣೇಶ ಇದಾಗಿದೆ. ಹೀಗಾಗಿ ಲಾಲ್ಬಾಗ್ ಗಣೇಶ ಹೆಸರು ಪಡೆದುಕೊಂಡಿದೆ.

ಈಗ ಲಾಲ್ಬಾಗ್ನ ಈ ಗಣಪ ಮೊದಲ ದಿವನೇ ದಾಖಲೆಯ ದೇಣಿಗೆ ಸಂಗ್ರಹಿಸುವ ಮೂಲಕ ಮತ್ತೆ ಸುದ್ದಿಯಾಗಿದೆ. 7 ತಾರೀಖಿನಂದು ಈ ಗಣೇಶನ ಪ್ರತಿಷ್ಠಾಪಿಸಲಾಗಿತ್ತು. ಪ್ರತಿಷ್ಠಾಪನೆಯ ದಿನವೇ ಲಕ್ಷ ಲಕ್ಷ ಮಂದಿ ಗಣೇಶನ ದರ್ಶನ ಪಡೆದಿದ್ದಾರೆ. ಅದೇ ದಿನ ದೇಣಿಗೆಯಾಗಿ 48,30,000 ರೂ ಸಂಗ್ರಹಿಸಲಾಗಿದೆ.
ಮುಂಬೈನ ಹಲವು ಪ್ರಸಿದ್ಧ ಗಣಪನ ಮೂರ್ತಿಗಳಲ್ಲಿ ಇದು ಸಹ ಒಂದಾಗಿದೆ. ಮೊದಲ ದಿನವೇ ಭಕ್ತರ ಕಾಣಿಗೆ ಹಾಗೂ ದೇಣಿಗೆಯ ಹಣ 50 ಲಕ್ಷ ರೂಪಾಯಿ ಸನಿಹಕ್ಕೆ ತಲುಪಿದೆ. ಗಣೇಶೋತ್ಸವ ಮುಗಿಯು ವೇಳೆಗೆ 1 ಕೋಟಿ ರೂಪಾಯಿಗೂ ಅಧಿಕ ದೇಣಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ.
ಮಧ್ಯ ಮುಂಬೈನಲ್ಲಿರುವ 'ಲಾಲ್ಬಾಗ್ಚಾ ರಾಜಾ' ಮತ್ತು 'ಚಿಂಚಪೋಕ್ಲಿ ಚಾ ಚಿಂತಾಮಣಿ' ಸೇರಿದಂತೆ ದೊಡ್ಡ ಮತ್ತು ಪ್ರಸಿದ್ಧ ಗಣಪತಿ ಮಂಡಲಗಳಿಗೆ ದೇವರ ದರ್ಶನ ಪಡೆಯಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ಗಣೇಶ ಚತುರ್ಥಿಯ ನಿಮಿತ್ತ ಶನಿವಾರ ಹಲವು ಮಂಡಲಗಳು ತಮ್ಮ ಗಣಪತಿ ಮೂರ್ತಿಗಳನ್ನು ಭವ್ಯ ಮೆರವಣಿಗೆಯೊಂದಿಗೆ ತಂದಿದ್ದಾರೆ.
ಮಹಾರಾಷ್ಟ್ರದ ಜಲ್ನಾದಲ್ಲಿ ಭಕ್ತಾದಿಗಳು ಗಣೇಶನ ಪ್ರತಿಷ್ಠಾಪನೆ ಮಾಡಿದ ಬಳಿಕ ಆರತಿ ಮಾಡಿ ಸಂವಿಧಾನದ ಪೀಠಿಕೆಯನ್ನು ಓದಿ ಗಮನ ಸೆಳೆದಿದ್ದಾರೆ. ಮುಂಬೈನ ಬಹುತೇಕ ಗಣಪತಿಯು ಸುಮಾರು 10 ದಿನಗಳ ಕಾಲ ನಡೆಯುತ್ತದೆ.
ಚಿನ್ನದ ಕಿರೀಟ ನೀಡಿದ ಅನಂತ್ ಅಂಬಾನಿ
ಇತ್ತೀಚಿಗೆ ಭವ್ಯ ರೀತಿಯಲ್ಲಿ ವಿವಾಹವಾದ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಇದೇ ಗಣಪನಿಗೆ ಚಿನ್ನದ ಕಿರೀಟ ಉಡುಗೊರೆಯಾಗಿ ನೀಡಿದ್ದಾರೆ. ಸುಮಾರು 20 ಕೆ.ಜಿ ತೂಕದ ಚಿನ್ನದ ಕಿರೀಟ ಇದಾಗಿದೆ. ಈ ಸೇವಾ ಸಮಿತಿಯ ಸದಸ್ಯರು ಆಗಿರುವ ಅನಂತ್ ಅಂಬಾನಿ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಕಿರೀಟವು ಸುಮಾರು 15 ಕೋಟಿ ರೂಪಾಯಿ ಮೌಲ್ಯದ್ದು ಎನ್ನಲಾಗಿದೆ. ಇದಕ್ಕೂ ಮೊದಲು ಸಹ ಈ ಗಣೇಶನಿಗೆ ಹಲವಾರು ಮಂದಿ ಬೆಳ್ಳಿ, ಚಿನ್ನ ಸೇರಿ ವಿವಿಧ ರೀತಿಯ ವಸ್ತುಗಳ ದೇಣಿಗೆಯಾಗಿ ನೀಡಿದ್ದರು. ಈ ಸಾಲಿಗೆ ಚಿನ್ನದ ಕಿರೀಟವೊಂದು ಸೇರಿಕೊಂಡಿದೆ. ಅಲ್ಲದೆ ಅನಂತ್ ಅಂಬಾನಿ ಹಾಗೂ ಈ ಲಾಲಾಬಾಗ್ ಗಣಪನ ನಡುವೆ ಹಲವು ವರ್ಷಗಳ ನಂಟಿದೆ.
ಕೋವಿಡ್ ಕಾಲದಲ್ಲಿ ಅಗತ್ಯವಿರುವ ಮಂದಿಗೆ ಕಿಟ್ಗಳ ನೀಡುವುದು ಸೇರಿ ನೆರವು ನೀಡಲು ಈ ಗಣೇಶನ ಸಮಿತಿ ಮುಂದಾಗಿತ್ತು. ಲಕ್ಷಕ್ಕೂ ಅಧಿಕ ಮಂದಿಗೆ ನೆರವು ನೀಡಿತ್ತು. ಇದೇ ವೇಳೆ ಅನಂತ್ ಅಂಬಾನಿ ತಮ್ಮ ರಿಲಾಯನ್ಸ್ ಫೌಂಡೇಶನ್ ವತಿಯಿಂದ 24 ಡಯಾಲಿಸಿಸ್ ಯಂತ್ರವನ್ನು ದೇಣಿಗೆಯಾಗಿ ನೀಡಿದ್ದರು.
ಸೆಪ್ಟೆಂಬರ್ 7 ರಿಂದ ಪ್ರಾರಂಭವಾಗುವ ಗಣಪತಿ ಹಬ್ಬವು ಮಹಾರಾಷ್ಟ್ರದಲ್ಲಿ ಪ್ರಮುಖ ಆಚರಣೆಯಾಗಿದೆ. 11ನೇ ದಿನ ಮುಂಬೈನ ಪ್ರಮುಖ ಬೀದಿಯಲ್ಲಿ ಲಾಲಾಬಾಗ್ ಗಣೇಶನ ಮೆರವಣಿಗೆ ಸಾಗುತ್ತದೆ. ಈ ವೇಳೆ ಲಕ್ಷ ಲಕ್ಷ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ಸೇರುತ್ತಾರೆ.



Click it and Unblock the Notifications