Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ವಿದ್ಯುತ್ ಶಾಕ್ ತಗುಲಿದ ಬಾಲಕನ ಜೀವ ಉಳಿಸಿದ ವೈದ್ಯೆ..! ದೇವರಂತೆ ಕಂಡ ಜನ..!
ಮನುಷ್ಯರ ಜೀವನ ಈಗ ನೀರ ಮೇಲಿನ ಗುಳ್ಳೆಯಂತೆ. ಯಾವಾಗ ಅಪಾಯ ಬಂದು ಬಿಡುತ್ತೆ ಅನ್ನೋದನ್ನ ಯಾರು ಸಹ ಊಹಿಸಲು ಸಾಧ್ಯವಿಲ್ಲ. ಅದರಲ್ಲೂ ಹೃದಯಾಘಾತ, ಮೂರ್ಛೆಯಂತಹ ಕಾಯಿಲೆ ಇದ್ದವರು ಯಾವಾಗ ಕುಸಿದು ಬೀಳುತ್ತಾರೆ ಅನ್ನೋದನ್ನ ಅಂದಾಜಿಸಲು ಸಹ ಸಾಧ್ಯವಿಲ್ಲ.
ಆದ್ರೆ ಯಾರಾದರು ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ ಅವರಿಗೆ ಸಿಪಿಆರ್ ಮಾಡುವ ಮೂಲಕ ಮತ್ತೆ ಜೀವನ ನೀಡಬಹುದು. ಅದರಲ್ಲೂ ಹೃದಯ ಬಡಿತ ನಿಂತಾಗ ಈ ಸಿಪಿಆರ್ ಎಂಬ ಪ್ರಥಮ ಚಿಕಿತ್ಸೆ ಅವರ ಜೀವ ಉಳಿಸಲು ನೆರವಾಗಲಿದೆ.

ಸದ್ಯ ಈಗ ಇಲ್ಲೊಬ್ಬ ಪುಟ್ಟ ಬಾಲಕನನ್ನು ಮಹಿಳಾ ವೈದ್ಯರೊಬ್ಬರು ಈ ಸಿಪಿಆರ್ ಮಾಡಿ ಜೀವ ಉಳಿಸಿದ ಘಟನೆ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿ ವೈದ್ಯರ ಮಾನವೀಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಶಾಕ್ ತಗುಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ಬಾಲಕನ ಜೀವ ಉಳಿಸುವಲ್ಲಿ ಮಹಿಳಾ ವೈದ್ಯರು ಯಶಸ್ವಿಯಾಗಿದ್ದಾರೆ.
ಏನಿದು ಘಟನೆ?
ಆಂಧ್ರ ಪ್ರದೇಶದ ವಿಜಯವಾಡದ ಅಯ್ಯಪ್ಪ ನಗರದಲ್ಲಿ ಮನೆಯಲ್ಲಿ 6 ವರ್ಷದ ಬಾಲಕನಿಗೆ ವಿದ್ಯುತ್ ಶಾಕ್ ತಗುಲಿದೆ. ಇದರಿಂದ ಕುಸಿದು ಬಿದ್ದ ಆತ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ಹೀಗಾಗಿ ಆತನ ಹಿಡಿದು ಪೋಷಕರು ರಸ್ತೆಯಲ್ಲಿ ಓಡುತ್ತಿದ್ದರು. ಅವರು ಆಸ್ಪತ್ರೆಗೆ ಸಾಗಿಸುವ ದಾವಂತದಲ್ಲಿ ರಸ್ತೆಯುದ್ದಕ್ಕೂ ಸಹಾಯಕ್ಕೆ ಕೂಗಿದ್ದಾರೆ.
ಇದೇ ವೇಳೆ ಇಲ್ಲಿಯೇ ಇದ್ದ ಮಹಿಳಾ ವೈದ್ಯೆ ಡಾ.ರವಳಿಕಾ ಈ ಪೋಷಕರ ಗೋಳಾಟ ಕಂಡು ಸ್ಥಳಕ್ಕೆ ಓಡಿ ಬಂದು ಹುಡುಗನಿಗೆ ಪ್ರಥಮ ಚಿಕಿತ್ಸೆ ಮಾಡುವುದಾಗಿ ಹೇಳಿ ಕೂಡಲೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ಆರಂಭಿಸಿದ್ದಾರೆ. ಐದು ನಿಮಿಷಗಳ ನಿರಂತರ ಸಿಪಿಆರ್ ಮೂಲಕ ಬಾಲಕ ಪ್ರಜ್ಞಾ ಸ್ಥಿತಿಗೆ ಬಂದಿದ್ದಾನೆ. ಇದನ್ನು ಕಂಡ ಸುತ್ತಲಿನವರು ವೈದ್ಯೆ ಕಾರ್ಯಕ್ಕೆ ಮೆಚ್ಚಿ ಚಪ್ಪಾಳೆ ಹೊಡೆದು ದೇವರಂತೆ ಬಂದು ಬಾಲಕನ ಜೀವ ಉಳಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈದ್ಯರು ಒಂದು ನಿಮಿಷವೂ ಸಮಯ ಹಾಳು ಮಾಡದೆ ಬಾಲಕನಿಗೆ ರಸ್ತೆಯಲ್ಲಿಯೇ ಸಿಪಿಆರ್ಗೆ ಮುಂದಾದರು. ಈ ದೃಶ್ಯ ನೋಡಿದ ಮಂದಿ ಗುಂಪು ಗುಂಪಾಗಿ ಅಲ್ಲಿ ಸೇರಿದ್ದರೆ ಕೆಲವರು ಅಚ್ಚರಿಯಿಂದ ಇಲ್ಲೇನು ನಡೆಯುತ್ತಿದೆ ಎಂದು ಅಚ್ಚರಿಗೊಳಗಾದರು. ವೈದ್ಯೆ ಬಾಲಕನ ಎದೆ ಮೇಲೆ ಕೈ ಇಟ್ಟು ನಿರಂತರ ಸಿಪಿಆರ್ ಮಾಡಿದ್ದಾರೆ. ಬಾಲಕ ಸ್ವಲ್ಪ ಚೇತರಿಸಿಕೊಂಡಿದ್ದನ್ನು ನೋಡಿದ ಪೋಷಕರು ವೈದ್ಯೆಗೆ ಕೈಮುಗಿದು ಧನ್ಯವಾದ ಅರ್ಪಿಸಿದ್ದಾರೆ.
ಇನ್ನು ಸಿಪಿಆರ್ ಬಳಿಕ ಮತ್ತೆ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕನ ಪರೀಕ್ಷಿಸಿದ ವೈದ್ಯರು ಮೊದಲು ಸಿಪಿಆರ್ ಮಾಡಿದ್ದರಿಂದ ಬಾಲಕನ ಜೀವ ಉಳಿದಿದೆ ಎಂದಿದ್ದಾರೆ. ಜೊತೆಗೆ ಆ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ರೀತಿಯ ಸಿಪಿಆರ್ ತರಬೇತಿ ಎಲ್ಲರಿಗೂ ನೀಡಬೇಕು ತುರ್ತು ಸಂದರ್ಭದಲ್ಲಿ ನೆರವಿಗೆ ಬರಲಿದೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಜೊತೆಗೆ ಸಮಯ ಪ್ರಜ್ಞೆ ಮೆರೆದ ವೈದ್ಯೆಯ ಕಾರ್ಯಕ್ಕೆ ಜನರು ಮೆಚ್ಚಿ ಆಕೆಯ ಹಾಡಿ ಹೊಗಳಿದ್ದಾರೆ. ಇಂತಹ ವೈದ್ಯರು ಎಲ್ಲೆಡೆ ಇದ್ದರೆ ಒಂದಿಷ್ಟು ಜೀವಗಳು ಆಸ್ಪತ್ರೆಗೆ ತಲುಪುವ ಮುನ್ನವೇ ಉಳಿದುಬಿಡುತ್ತವೆ, ಅವರಿಗೊಂದು ಸಲಾಮ್ ಎಂದಿದ್ದಾರೆ. ಜೊತೆಗೆ ಆಕೆಯ ಧೈರ್ಯಕ್ಕೆ ಜನ ಹೊಗಳಿದ್ದಾರೆ. ಇಂತಹ ವೈದ್ಯರಿಂದಲೇ ಇಂದು ನೂರಾರು ಮಂದಿ ಜೀವ ಉಳಿಸಿಕೊಳ್ಳುವಂತಾಗಿದೆ. ಅವರನ್ನು ದೇವರು ಕಾಪಾಡಲಿ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications
