Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿದ್ಯುತ್ ಶಾಕ್ ತಗುಲಿದ ಬಾಲಕನ ಜೀವ ಉಳಿಸಿದ ವೈದ್ಯೆ..! ದೇವರಂತೆ ಕಂಡ ಜನ..!
ಮನುಷ್ಯರ ಜೀವನ ಈಗ ನೀರ ಮೇಲಿನ ಗುಳ್ಳೆಯಂತೆ. ಯಾವಾಗ ಅಪಾಯ ಬಂದು ಬಿಡುತ್ತೆ ಅನ್ನೋದನ್ನ ಯಾರು ಸಹ ಊಹಿಸಲು ಸಾಧ್ಯವಿಲ್ಲ. ಅದರಲ್ಲೂ ಹೃದಯಾಘಾತ, ಮೂರ್ಛೆಯಂತಹ ಕಾಯಿಲೆ ಇದ್ದವರು ಯಾವಾಗ ಕುಸಿದು ಬೀಳುತ್ತಾರೆ ಅನ್ನೋದನ್ನ ಅಂದಾಜಿಸಲು ಸಹ ಸಾಧ್ಯವಿಲ್ಲ.
ಆದ್ರೆ ಯಾರಾದರು ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ ಅವರಿಗೆ ಸಿಪಿಆರ್ ಮಾಡುವ ಮೂಲಕ ಮತ್ತೆ ಜೀವನ ನೀಡಬಹುದು. ಅದರಲ್ಲೂ ಹೃದಯ ಬಡಿತ ನಿಂತಾಗ ಈ ಸಿಪಿಆರ್ ಎಂಬ ಪ್ರಥಮ ಚಿಕಿತ್ಸೆ ಅವರ ಜೀವ ಉಳಿಸಲು ನೆರವಾಗಲಿದೆ.

ಸದ್ಯ ಈಗ ಇಲ್ಲೊಬ್ಬ ಪುಟ್ಟ ಬಾಲಕನನ್ನು ಮಹಿಳಾ ವೈದ್ಯರೊಬ್ಬರು ಈ ಸಿಪಿಆರ್ ಮಾಡಿ ಜೀವ ಉಳಿಸಿದ ಘಟನೆ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿ ವೈದ್ಯರ ಮಾನವೀಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಶಾಕ್ ತಗುಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ಬಾಲಕನ ಜೀವ ಉಳಿಸುವಲ್ಲಿ ಮಹಿಳಾ ವೈದ್ಯರು ಯಶಸ್ವಿಯಾಗಿದ್ದಾರೆ.
ಏನಿದು ಘಟನೆ?
ಆಂಧ್ರ ಪ್ರದೇಶದ ವಿಜಯವಾಡದ ಅಯ್ಯಪ್ಪ ನಗರದಲ್ಲಿ ಮನೆಯಲ್ಲಿ 6 ವರ್ಷದ ಬಾಲಕನಿಗೆ ವಿದ್ಯುತ್ ಶಾಕ್ ತಗುಲಿದೆ. ಇದರಿಂದ ಕುಸಿದು ಬಿದ್ದ ಆತ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ಹೀಗಾಗಿ ಆತನ ಹಿಡಿದು ಪೋಷಕರು ರಸ್ತೆಯಲ್ಲಿ ಓಡುತ್ತಿದ್ದರು. ಅವರು ಆಸ್ಪತ್ರೆಗೆ ಸಾಗಿಸುವ ದಾವಂತದಲ್ಲಿ ರಸ್ತೆಯುದ್ದಕ್ಕೂ ಸಹಾಯಕ್ಕೆ ಕೂಗಿದ್ದಾರೆ.
ಇದೇ ವೇಳೆ ಇಲ್ಲಿಯೇ ಇದ್ದ ಮಹಿಳಾ ವೈದ್ಯೆ ಡಾ.ರವಳಿಕಾ ಈ ಪೋಷಕರ ಗೋಳಾಟ ಕಂಡು ಸ್ಥಳಕ್ಕೆ ಓಡಿ ಬಂದು ಹುಡುಗನಿಗೆ ಪ್ರಥಮ ಚಿಕಿತ್ಸೆ ಮಾಡುವುದಾಗಿ ಹೇಳಿ ಕೂಡಲೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ಆರಂಭಿಸಿದ್ದಾರೆ. ಐದು ನಿಮಿಷಗಳ ನಿರಂತರ ಸಿಪಿಆರ್ ಮೂಲಕ ಬಾಲಕ ಪ್ರಜ್ಞಾ ಸ್ಥಿತಿಗೆ ಬಂದಿದ್ದಾನೆ. ಇದನ್ನು ಕಂಡ ಸುತ್ತಲಿನವರು ವೈದ್ಯೆ ಕಾರ್ಯಕ್ಕೆ ಮೆಚ್ಚಿ ಚಪ್ಪಾಳೆ ಹೊಡೆದು ದೇವರಂತೆ ಬಂದು ಬಾಲಕನ ಜೀವ ಉಳಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈದ್ಯರು ಒಂದು ನಿಮಿಷವೂ ಸಮಯ ಹಾಳು ಮಾಡದೆ ಬಾಲಕನಿಗೆ ರಸ್ತೆಯಲ್ಲಿಯೇ ಸಿಪಿಆರ್ಗೆ ಮುಂದಾದರು. ಈ ದೃಶ್ಯ ನೋಡಿದ ಮಂದಿ ಗುಂಪು ಗುಂಪಾಗಿ ಅಲ್ಲಿ ಸೇರಿದ್ದರೆ ಕೆಲವರು ಅಚ್ಚರಿಯಿಂದ ಇಲ್ಲೇನು ನಡೆಯುತ್ತಿದೆ ಎಂದು ಅಚ್ಚರಿಗೊಳಗಾದರು. ವೈದ್ಯೆ ಬಾಲಕನ ಎದೆ ಮೇಲೆ ಕೈ ಇಟ್ಟು ನಿರಂತರ ಸಿಪಿಆರ್ ಮಾಡಿದ್ದಾರೆ. ಬಾಲಕ ಸ್ವಲ್ಪ ಚೇತರಿಸಿಕೊಂಡಿದ್ದನ್ನು ನೋಡಿದ ಪೋಷಕರು ವೈದ್ಯೆಗೆ ಕೈಮುಗಿದು ಧನ್ಯವಾದ ಅರ್ಪಿಸಿದ್ದಾರೆ.
ಇನ್ನು ಸಿಪಿಆರ್ ಬಳಿಕ ಮತ್ತೆ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕನ ಪರೀಕ್ಷಿಸಿದ ವೈದ್ಯರು ಮೊದಲು ಸಿಪಿಆರ್ ಮಾಡಿದ್ದರಿಂದ ಬಾಲಕನ ಜೀವ ಉಳಿದಿದೆ ಎಂದಿದ್ದಾರೆ. ಜೊತೆಗೆ ಆ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ರೀತಿಯ ಸಿಪಿಆರ್ ತರಬೇತಿ ಎಲ್ಲರಿಗೂ ನೀಡಬೇಕು ತುರ್ತು ಸಂದರ್ಭದಲ್ಲಿ ನೆರವಿಗೆ ಬರಲಿದೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಜೊತೆಗೆ ಸಮಯ ಪ್ರಜ್ಞೆ ಮೆರೆದ ವೈದ್ಯೆಯ ಕಾರ್ಯಕ್ಕೆ ಜನರು ಮೆಚ್ಚಿ ಆಕೆಯ ಹಾಡಿ ಹೊಗಳಿದ್ದಾರೆ. ಇಂತಹ ವೈದ್ಯರು ಎಲ್ಲೆಡೆ ಇದ್ದರೆ ಒಂದಿಷ್ಟು ಜೀವಗಳು ಆಸ್ಪತ್ರೆಗೆ ತಲುಪುವ ಮುನ್ನವೇ ಉಳಿದುಬಿಡುತ್ತವೆ, ಅವರಿಗೊಂದು ಸಲಾಮ್ ಎಂದಿದ್ದಾರೆ. ಜೊತೆಗೆ ಆಕೆಯ ಧೈರ್ಯಕ್ಕೆ ಜನ ಹೊಗಳಿದ್ದಾರೆ. ಇಂತಹ ವೈದ್ಯರಿಂದಲೇ ಇಂದು ನೂರಾರು ಮಂದಿ ಜೀವ ಉಳಿಸಿಕೊಳ್ಳುವಂತಾಗಿದೆ. ಅವರನ್ನು ದೇವರು ಕಾಪಾಡಲಿ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications