Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮಣಿಕಟ್ಟಿಗೆ ದಾರ ಕಟ್ಟುವುದೇಕೆ ಗೊತ್ತಾ? ಅವಿವಾಹಿತರು ಯಾವ ದಾರ ಕಟ್ಟಬೇಕು ನೋಡಿ.!
ಹಿಂದೂ ಧರ್ಮ ಪಾಲಿಸುವ ಹಲವರು ತಮ್ಮ ಕೈಗೆ ದಾರಗಳ ಕಟ್ಟಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಮಣಿಕಟ್ಟಿನ ಮೇಲೆ ಕೆಂಪು, ಹಳದಿ, ಕಪ್ಪು ಮತ್ತು ಕಿತ್ತಳೆ ಬಣ್ಣದ ದಾರವನ್ನು ಕಟ್ಟಿಕೊಂಡಿರುವುದನ್ನು ಕಂಡಿರುತ್ತೇವೆ. ಈ ಪವಿತ್ರ ದಾರವನ್ನು ಕಲಾವ ಅಥವಾ ಮೌಲಿ ಎಂದು ಕರೆಯುತ್ತಾರೆ. ಮಣಿಕಟ್ಟಿನ ಸುತ್ತ ದಾರವನ್ನು ಕಟ್ಟುವುದನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಪೂಜೆ, ವ್ರತ, ನಾಮ ಅಥವಾ ಇತರ ಧಾರ್ಮಿಕ ಸಮಾರಂಭಗಳ ಆರಂಭಕ್ಕೂ ಮೊದಲು ಮಣಿಕಟ್ಟಿನ ಸುತ್ತಲೂ ದಾರವನ್ನು ಕಟ್ಟಲಾಗುತ್ತದೆ.
ಇದರ ಮಹತ್ವ ಅಪಾರವಾದದ್ದು. ಇವುಗಳನ್ನು ಕಟ್ಟಿಕೊಳ್ಳುವುದರಿಂದ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಲಕ್ಷ್ಮಿ, ಪಾರ್ವತಿ, ಸರಸ್ವತಿಯರ ಆಶೀರ್ವಾದಗಳು ಆಕರ್ಷಿತವಾಗುತ್ತವೆ ಎನ್ನಲಾಗುತ್ತದೆ. ಇದನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಉಂಟಾಗುವ ಉಪಯೋಗವೇನು? ಇದರಿಂದ ಲಾಭವಿದ್ಯಾ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ.

ಪುರಾಣಗಳು ಏನು ಹೇಳುತ್ತವೆ
ವಿಷ್ಣುವಿನ ಅವತಾರ ಎನಿಸಿಕೊಂಡ ವಾಮನನು ಬಲಿ ರಾಜನ ಕೈಗೆ (ಮಣಿಕಟ್ಟಿನ ಮೇಲೆ) ಈ ದಾರವನ್ನು ಕಟ್ಟಿದ್ದನು ಎನ್ನಲಾಗುತ್ತದೆ. ಇದರಿಂದ ಆತ ಸಾವನ್ನೇ ಗೆಲ್ಲುವ ಶಕ್ತಿ ಪಡೆದಿದ್ದ ಎಂದು ನಂಬಲಾಗಿದೆ. ಹೀಗಾಗಿ ಮಣಿಕಟ್ಟಿಗೆ ದಾರ ಕಟ್ಟುವುದರಿಂದ ಆತ ಶಕ್ತಿಯುತನಾಗುತ್ತಾನೆ ಎಂದು ನಂಬಲಾಗಿದೆ.
ಯಾವ ಬಣ್ಣದ ದಾರ ಶ್ರೇಷ್ಠ
ಮಣಿಕಟ್ಟಿಗೆ ಯಾವ ಬಣ್ಣದ ದಾರವನ್ನು ಕಟ್ಟಬೇಕು ಎಂಬುದು ಹಲವರಿಗೆ ಗೊಂದಲವಾಗಿರುತ್ತದೆ. ಕಪ್ಪು ದಾರಕ್ಕಿಂತಲೂ ಹಳದಿ ಮತ್ತು ಕೆಂಪು ದಾರಗಳನ್ನು ಮಣಿಕಟ್ಟಿಗೆ ಕಟ್ಟಬೇಕಂತೆ. ಕಪ್ಪು ದಾರಗಳನ್ನು ಕೈ ಬದಲು ಬಲಗಾಲಿಗೆ ಕಟ್ಟುವುದು ಉತ್ತಮ ಎಂದು ತಿಳಿಸಲಾಗಿದೆ.
ಕೆಟ್ಟ ದೃಷ್ಟಿಯಿಂದ ರಕ್ಷಣೆ
ಕೈಗೆ ದಾರ ಕಟ್ಟುವುದರಿಂದಾಗಿ ಕೆಟ್ಟದೃಷ್ಟಿ ದೇಹದ ಮೇಲೆ ಬೀಳುವುದಿಲ್ಲ ಎಂದು ನಂಬಲಾಗಿದೆ. ನಮ್ಮಲ್ಲಿರುವ ನಕಾರಾತ್ಮಕತೆ ದೂರಾಗಿ ಉತ್ತಮ ಭಾವನೆ ಬೆಳೆಯುತ್ತದೆ ಎಂದು ನಂಬಲಾಗಿದೆ. ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ದುಷ್ಟ ಕಣ್ಣುಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.ಇದು ನಿಮ್ಮ ದಾರಿಯಲ್ಲಿ ಬರುವ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ.ಇದು ಮಾಟಮಂತ್ರದ ದುಷ್ಪರಿಣಾಮಗಳಿಂದಲೂ ನಿಮ್ಮನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ.
ಜ್ಯೋತಿಷ್ಯದಲ್ಲಿ ಇದರ ಮಹತ್ವ ಏನಿದೆ
ಕೈಗೆ ದಾರ ಕಟ್ಟುವ ಕುರಿತು ಜ್ಯೋತಿಷ್ಯಶಾಸ್ತ್ರವು ವಿವರವಾಗಿ ತಿಳಿಸಿದೆ. ಇದರಲ್ಲಿ ಮಣಿಕಟ್ಟಿಗೆ ದಾರ ಕಟ್ಟುವುದು ನಮ್ಮಲ್ಲಿ ಆಧ್ಯಾತ್ಮದೆಡೆಗೆ ಸೆಳೆಯುತ್ತದೆ. ಅಲ್ಲದೆ ನಮ್ಮ ರಾಶಿ ಫಲದಲ್ಲಿರುವ ಕೆಡುಕುಗಳು ನಮ್ಮ ಮೇಲೆ ಪ್ರಭಾವ ಬೀರದಂತೆ ತಡೆಯುತ್ತವೆ. ಅಲ್ಲದೆ ನೀವು ಕಾಲಿನ ಗಾಯದಿಂದ ಬಳಲುತ್ತಿದ್ದರೆ, ಕಪ್ಪು ದಾರವನ್ನು ಧರಿಸುವುದು ಗುಣಪಡಿಸುವ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ.
ಯಾವ ಕೈಗೆ ದಾರ ಕಟ್ಟಬೇಕು?
ಮಣಿಕಟ್ಟಿಗೆ ದಾರ ಕಟ್ಟುವುದರಲ್ಲೂ ನಿಯಮಗಳಿವೆ. ಯಾರು ಬೇಕಾದರೂ ಯಾವ ದಾರವನ್ನಾದರೂ ಕಟ್ಟುವಂತಿಲ್ಲ. ಪುರಾಣಗಳ ಪ್ರಕಾರ, ಪುರುಷರು ಅದರಲ್ಲೂ ಅವಿವಾಹಿತರು ಬಲಗೈಗೆ ದಾರವನ್ನು ಕಟ್ಟಬೇಕು, ವಿವಾಹಿತ ಮಹಿಳೆಯರು ತಮ್ಮ ಎಡಗೈಗೆ ದಾರವನ್ನು ಕಟ್ಟಬೇಕು ಎಂದು ತಿಳಿಸಲಾಗಿದೆ. ಇನ್ನು ದೇವರ ಪೂರ್ತಿ ಬಳಿ ಈ ದಾರವನ್ನು ಇಟ್ಟು ಪೂಜೆ ಮಾಡಿದ ಬಳಿಕ ಕಟ್ಟಿಕೊಂಡರೆ ಒಳಿತಾಗಲಿದೆ ಎಂಬ ಮಾತೂ ಸಹ ಇದೆ. ಅಲ್ಲದೆ ಕೈಗೆ ಒಮ್ಮೆ ದಾರವನ್ನು ಕಟ್ಟಿದ ಬಳಿಕ ಮಂಗಳವಾರ ಹಾಗೂ ಶನಿವಾರದಂದು ಮಾತ್ರ ಅದನ್ನು ತೆಗೆಯುವ ಅಥವಾ ಬದಲಾಯಿಸಬೇಕು ಎಂದು ಹೇಳಲಾಗಿದೆ.
ಧಾರ್ಮಿಕ ಗ್ರಂಥಗಳ ಪ್ರಕಾರ, ಕೈಯಲ್ಲಿ ದಾರ ಕಟ್ಟುವುದರಿಂದ ಮೂರು ಮಹಾದೇವಿಗಳ ಆಶೀರ್ವಾದವನ್ನು ಪಡೆಯುತ್ತಾರೆ. ಸಂಪತ್ತು, ಜ್ಞಾನ, ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಮೂರು ದೇವತೆಗಳಾದ ಲಕ್ಷ್ಮಿ, ಸರಸ್ವತಿ ಮತ್ತು ಮಹಾಕಾಳಿಯಿಂದ ಪಡೆಯುತ್ತಾರೆ. ಈ ದಾರಗಳು ಅವರಿಗೆ ಅದೃಷ್ಟ ಒಲಿದು ತರಲಿವೆ. ಅಲ್ಲದೆ ಯಾವ ಕೆಲಸ ಮಾಡುವಾಗಲೂ ಈ ದಾರವು ಯಶಸ್ಸಿನತ್ತ ಕೊಂಡೊಯ್ಯಲಿದೆ ಎಂದು ನಂಬಲಾಗಿದೆ.



Click it and Unblock the Notifications