Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಯೇಸುವನ್ನು ಶಿಲುಬೆಗೆ ಏರಿಸಿದ್ದು ಏಕೆ ಗೊತ್ತಾ? ಯಹೂದಿಗಳು ಹಾಗೂ ಇಸಾ ನಡುವಿನ ಕಲಹವೇನು?
ಡಿಸೆಂಬರ್ ತಿಂಗಳು ಅಂದ್ರೆ ಕ್ರಿಸ್ಮಸ್ ಹಬ್ಬದ ಆಚರಣೆ ಎಲ್ಲರಿಗೂ ವಿಶೇಷ ತಿಂಗಳಿನ ನೆನಪು ತರುತ್ತದೆ. ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಈ ಕ್ರಿಸ್ಮಸ್ ಆಚರಣೆ ನೋಡಬಹುದು. ಹಾಗೆ ಈ ಸಮಯದಲ್ಲಿ ಕ್ರೈಸ್ತ ಧರ್ಮದ ಕುರಿತಾದ ವಿಚಾರಗಳನ್ನು ಅರಿತುಕೊಳ್ಳುವುದು ಸಹ ನೋಡಬಹುದು. ಈ ಸಮಯದಲ್ಲಿ ಕ್ರಿಸ್ತನ ಹುಟ್ಟು, ಕ್ರೈಸ್ತ ಧರ್ಮದ ಉದಯ, ಬೈಬಲ್ ಗ್ರಂಥ ಕುರಿತಾದ ವಿಚಾರಗಳನ್ನು ಚರ್ಚ್ ಗಳಲ್ಲಿ ಭೋದಿಸುವುದು ನೋಡಬಹುದು.
ಹಾಗೆ ಕ್ರಿಸ್ಮಸ್ ಆರಂಭವಾಗಿದ್ದು ಹೇಗೆ? ಕ್ರಿಸ್ತನ ಹುಟ್ಟು ಮತ್ತು ಸಾವು ಏಕಾಯಿತು. ಕ್ರೈಸ್ತ ಧರ್ಮದ ಉದಯ ಕುರಿತಾಗಿ ನೀವು ಕೂಡ ತಿಳಿದುಕೊಳ್ಳುವ ಉತ್ಸಾಹಿಗಳಾಗಿದ್ದರೆ ಆ ಕುರಿತಾಗಿ ಇಲ್ಲಿ ಹೇಳಲಿದ್ದೇವೆ. ಯೇಸು ಕ್ರಿಸ್ತವನ್ನು ಶಿಲುಬೆಗೆ ಏರಿಸಿದ್ದು ಏಕೆ? ಆತನ ಮರಣದ ನಂತರ ಅಲ್ಲಿ ಏನಾಯಿತು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಕ್ರಿಸ್ತನ ಹಾಗೆ ಕ್ರೈಸ್ತ ಧರ್ಮದ ಹುಟ್ಟಿನ ಕುರಿತಾಗಿ ಒಂದಕ್ಕಿಂತ ಹೆಚ್ಚು ಸಿದ್ದಾಂತಗಳಿವೆ. ಒಂದೊಂದು ಸಿದ್ದಾಂತವು ಒಂದೊಂದು ರೀತಿಯ ಅರ್ಥ ವಿವರಣೆ ನೀಡುತ್ತವೆ. ಹಾಗೆ ಅವು ಒಂದೊಂದು ಕಾಲಘಟ್ಟದಲ್ಲಿ ನಡೆಯುವ ಸನ್ನಿವೇಶಗಳ ವಿವರಿಸಿವೆ. ಯಹೂದಿ ಧರ್ಮದ ಅಡಿಯಲ್ಲಿ ಹುಟ್ಟಿಕೊಂಡ ಧರ್ಮವೇ ಕ್ರೈಸ್ತ ಧರ್ಮ ಎಂದು ಕರೆಯಲಾಗುತ್ತದೆ. ಹಾಗಾದ್ರೆ ಈ ಧರ್ಮ ಹುಟ್ಟಿದ್ದು ಹೇಗೆ? ಯೇಸುವಿಗೂ ಕ್ರೈಸ್ತ ಧರ್ಮಕ್ಕೂ ಇರುವ ನಂಟೇನು ತಿಳಿದುಕೊಳ್ಳಿ.
ಯೇಸು ಹುಟ್ಟಿದಾಗ ಯಹೂದಿಯಾಗಿದ್ದ, ಹಾಗೆ ಆತ ಹುಟ್ಟಿದಾಗಿನಿಂದಲೇ ದೇವತಾ ಮನುಷ್ಯ ಎಂದು ನಂಬಲಾಗಿತ್ತು. ಆತ ಸಹ ಯಹೂದಿಗಳ ಸಿದ್ದಾಂತವನ್ನೇ ಆರಂಭದಲ್ಲಿ ಒಪ್ಪಿಕೊಂಡಿದ್ದ. ಆದ್ರೆ ಬರು ಬರುತ್ತಾ ಯುಹೂದಿ ಧರ್ಮದಲ್ಲಿನ ಮತ ಬೇಧ ದೊಡ್ಡದಾಗುತ್ತಾ ಬಂದಿತ್ತು. ಯೇಸು ಯಹೂದಿಗಳ ಹಲವು ಆಚರಗಳು, ಸಂಪ್ರದಾಯಗಳ ವಿರೋಧಿಸಿದ.
ಇದು ಕ್ರಿ.ಪೂ 30 ರಿಂದ 33ರ ಸಮಯ ಜೆರುಸಲೇಮ್ನಲ್ಲಿ ಯೇಸು ಜನನವಾಗಿತ್ತು. ಯೇಸು ತನ್ನ ಮಾತುಗಳಿಂದ ಒಂದಿಷ್ಟು ಜನ ಬೆಂಬಲ ಪಡೆದುಕೊಂಡಿದ್ದ. ಆತ ಯಹೂದಿಗಳ ವಿರುದ್ಧ ಅಥವಾ ಅವರ ಆಚರಣೆಗಳ ವಿರುದ್ಧ, ಹಿಂಸೆ, ಬೇಧಗಳ ವಿರುದ್ಧ ತಿರುಗಿ ಬಿದ್ದಿದ್ದ. ಇದು ಹಲವರಿಗೆ ಧರ್ಮ ದ್ರೋಹದ ಕೆಲಸವಾಗಿ ಕಂಡಿತ್ತು. ಹಾಗೆ ಮತ್ತೆ ಕೆಲವರು ಯೇಸುವಿನ ಪರವಾಗಿ ನಿಂತಿದ್ದರು.
ಮೊದಲ ಬಾರಿಗೆ ಯೇಸು ಯಹೂದಿಗಳ ವೈರತ್ವ ಕಟ್ಟಿಕೊಂಡಿದ್ದ ಒಂದು ದೇವಾಲಯದ ವಿಚಾರದಲ್ಲಿ. ಯಹೂದಿಗಳು ಅದನ್ನು ಫಸ್ಟ್ ಟೆಂಪಲ್ ಎಂದು ಕರೆಯುತ್ತಿದ್ದರು, ಈ ದೇವಾಲಯದಲ್ಲಿ ಮಾರಾಟಗಾರರು, ಜಾನುವಾರುಗಳ ಇಟ್ಟುಕೊಂಡಿದ್ದರು ಅವರನ್ನು ಅಲ್ಲಿಂದ ಖಾಲಿ ಮಾಡಿಸಿದ ಇದು ಮೊದಲ ಬಾರಿಗೆ ಆತನ ಮೇಲೆ ಜನರು ಕೋಪಗೊಳ್ಳುವ ಸಮಯ ಆಗಿತ್ತು.
ಈ ಘಟನೆಯಿಂದ ಅಲ್ಲಿನ ಯಹೂದಿ ಧರ್ಮಗುರುಗಳು ಸಿಟ್ಟುಗೊಂಡು ಯೇಸುವಿನ ಮೇಲೆ ಕ್ರಮಕ್ಕೆ ಮುಂದಾದರು. 21 ಜನರ ಧರ್ಮ ಮಂಡಳಿಯೊಂದು ಯೇಸುವಿನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ವಾದಿಸಿದರು. ಈ ಸಮಯದಲ್ಲಿ ಯೇಸು ಧರ್ಮ ವಿರೋಧಿ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿತ್ತು. ಹಾಗೆ ಆತನಿಗೆ ಸಾರ್ವಜನಿಕವಾಗಿ ಮರಣ ದಂಡನೆ ನೀಡಬೇಕು ಎಂದು ವಾದಿಸಲಾಯಿತು. ಆದ್ರೆ ಈ ಪ್ರಕರಣ ಆ ಸಮಯದಲ್ಲಿ ಆಳ್ವಿಕೆಯಲ್ಲಿ ರೋಮನ್ನರ ರಾಜರ ಬಳಿ ತೆರಳಿತು.
ರೋಮ್ ರಾಜ ಹೆರೋಡ್ ಎಂಟಿಪಸ್ ಈ ಘಟನೆಯನ್ನು ವಿಚಾರಣೆ ನಡೆಸಿದರು ಯೇಸು ಯಾವುದಕ್ಕೂ ಉತ್ತರ ನೀಡಲಿಲ್ಲ. ಹೀಗಾಗಿ ಈ ಪ್ರಕರಣವನ್ನು ಪೈಲಟ್ ಒಬ್ಬರು ವಿಚಾರಣೆ ನಡೆಸಿದರು. ಆತ ನೀನು ಯಹೂದಿಗಳ ರಾಜನಾ ಎಂದು ಪ್ರಶ್ನಿಸಿದಾಗ ಯೇಸು ನಾನು ನಾಯಕನೆಂದು ಸತ್ಯದ ಪರವೆಂದು ವಾದಿಸಿದ. ಇದೇ ರೀತಿ ವಿಚಾರಣೆ ಹಲವು ದಿನಗಳ ಕಾಲ ನಡೆದಿತ್ತು.
ಈ ವಿಚಾರಣೆಯಲ್ಲಿ ಯೇಸುವಿಗೆ ಮರಣ ದಂಡನೆಯಿಂದ ಪಾರು ಮಾಡಲಾಯಿತು. ಆದ್ರೆ ಯೇಸುವಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಯಹೂದಿಗಳ ಗುಂಪು ನೆರೆದಿತ್ತು. ಹಾಗೆ ಪೈಲಟ್ ಮೇಲೆ ಒತ್ತಡ ತಂದು ಆತನಿಗೆ ಮರಣದಂಡನೆ ನೀಡುವಂತೆ ಮಾಡಿದರು. ಈ ಸಮಯದಲ್ಲಿ ಯೇಸುವನ್ನು ಹಾಗೆ ಆತನ ಕೆಲ ಸಹಚರರನ್ನ ಶಿಲುಬೆಯಲ್ಲಿ ಕಟ್ಟಿ ಮೊಳೆ ಹೊಡೆದು ನೇತುಹಾಕಲಾಗಿತ್ತು. ಯಹೂದಿಗಳ ಈ ಕ್ರಮವನ್ನು ಹಲವರು ಖಂಡಿಸಿದರು. ಆದ್ರೆ ಯೇಸುವನ್ನು ಕೊಲೆ ಮಾಡಲಾಗಿತ್ತು ಎಂದು ಗಂಭೀರ ಆರೋಪ ಮಾಡಿದರು.
ಈ ಕಾರಣದಿಂದ ಯೇಸುವನ್ನು ಯಹೂದಿಗಳು ಕೊಂದರು ಎಂದು ಹೇಳಲಾಗುತ್ತದೆ. ಇದಾದ ಬಳಿಕ ಇಸಾಯಿ ಧರ್ಮ ಹಾಗೆ ರೋಮನ್ನರು ಯಹೂದಿಗಳ ವಿರುದ್ಧ ತಿರುಗಿ ಬಿದ್ದರು. ಹಾಗೆ ಜೆರುಸಲೇಂನಲ್ಲಿ ಯಹೂದಿಗಳು ಮರೆಯಾದರು. ಇಂದಿಗೂ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಬಿಕ್ಕಟ್ಟಿಗೆ ಈ ಸ್ಥಳ ಕಾರಣವಾಗಿದೆ. ಇದು ಮುಂದುವರೆಯುತ್ತಲೇ ಇದೆ.



Click it and Unblock the Notifications











