Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಆನೆ ಯಾವುದು ಗೊತ್ತಾ? ಇದು ರಾಜರ ಮೆಚ್ಚಿನ ಆನೆ
ದಸರಾ ಅಂದಕ್ಷಣ ಮೈಸೂರು ನೆನಪಾಗುತ್ತೆ. ಮೈಸೂರು ಅರಮನೆಯ ಅಲಂಕಾರ ಹಾಗೆ ವಿಜಯದಶಮಿಯಂದು ನಡೆಯುವ ಜಂಬೂಸವಾರಿಯಂತು ಎಲ್ಲರ ಗಮನ ಸೆಳೆಯಲಿದೆ. ಜಂಬೂಸವಾರಿಯಲ್ಲಿ ಚಾಮುಂಡಿ ತಾಯಿಯ ಮೂರ್ತಿಯು ಚಿನ್ನದ ಅಂಬಾರಿಯಲ್ಲಿ ಮೆರವಣಿಗೆ ಹೊರಡಲಿದೆ. ಈ ಜಂಬೂಸವಾರಿಗೆ ಅಂಬಾರಿ ಎಷ್ಟು ಆಕರ್ಷಣೆಯೋ ಅದರಂತೆ ಆನೆಗಳು ಕೂಡ ಅಷ್ಟೇ ಮುಖ್ಯ ಅಂಶ.
ದಸರಾ ಆನೆಗಳ ನೋಡಲೆಂದೇ ಲಕ್ಷಾಂತರ ಮಂದಿ ಮೈಸೂರಿನಲ್ಲಿ ಸೇರುವುದು ನೋಡಬಹುದು. ಇನ್ನು ಈ ಬಾರಿ ಅಭಿಮನ್ಯೂ ಅಂಬಾರಿ ಹೊರುವ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಈಗಾಗಲೆ ಸಿದ್ದತೆಗಳು ನಡೆದಿದ್ದು, ಅದರೊಂದಿಗೆ ಪಟ್ಟದ ಆನೆಗಳು ಕೂಡ ಹೆಜ್ಜೆ ಹಾಕಲಿವೆ. ಅಂಬಾರಿ ಹೊರುವ ಆನೆಗೆ ಬಹಳ ಪ್ರಾಮುಖ್ಯತೆ ಇದೆ.

ಅಂಬಾರಿ ಹೊರುವ ಆನೆ ಯಾವ ರೀತಿಯಲ್ಲಿ ತಯಾರಿಯಲ್ಲಿ ತೊಡಗಬೇಕು, ಅದಕ್ಕೆ ನಿರ್ದಿಷ್ಟ ಮಾನದಂಡಗಳು ಕೂಡ ಇವೆ. ಇನ್ನು ಅರ್ಜುನನ ಮರಣದ ನಂತರ ಅಭಿಮನ್ಯೂ ಅಂಬಾರಿ ಹೊರುತ್ತಿದ್ದಾನೆ. ಆದ್ರೆ ಮೊಟ್ಟ ಮೊದಲ ಬಾರಿಗೆ ಅಂಬಾರಿಯನ್ನು ಹೊತ್ತಿರುವ ಆನೆ ಯಾವುದು? ಅದರ ಹಿಂದಿರುವ ಕಥೆ ನಿಮಗೆ ಗೊತ್ತಾ?
ಈಗ ಆನೆಯ ಮೇಲೆ ಅಂಬಾರಿ ಹಾಗೆ ಚಾಮುಂಡೇಶ್ವರಿ ತಾಯಿಯ ವಿಗ್ರಹ ಇರಲಿದೆ. ಆದ್ರೆ ಹಿಂದೆ ಮೈಸೂರು ಮಹಾರಾಜರು ಅಂಬಾರಿಯಲ್ಲಿ ಕುಳಿತು ಮೆರವಣಿಗೆ ಸಾಗುತ್ತಿದ್ದರು. ಹಾಗಾದ್ರೆ ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಅಂಬಾರಿ ಹೊತ್ತ ಆನೆ ಯಾವುದು?
ಅಂಬಾರಿ ಹೊತ್ತು ರೆಕಾರ್ಡ್ ಬರೆದ ಜಯಮಾರ್ತಾಂಡ
ಜಯಮಾರ್ತಾಂಡ ಎಂಬ ಆನೆ ಮೊಟ್ಟ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆ ಆಗಿದೆ. ಮೈಸೂರು ರಾಜರ ಅಚ್ಚು ಮೆಚ್ಚಿನ ಆನೆಯೂ ಇದಾಗಿತ್ತಂತೆ. ಪಿರಿಯಪಟ್ಟಣದ ಬೆಟ್ಟದ ಪುರ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಆನೆಗಳ ಗುಂಪಿನಿಂದ ಬೇರ್ಪಟ್ಟಿದ್ದ ಆನೆಯ ಮರಿ ಈ ಜಯಮಾರ್ತಾಂಡ ಆನೆ. ಆಗಿನ ಕಾಲದಲ್ಲಿ ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಈ ಆನೆಯ ಮರಿಯನ್ನು ಸಾಕಲು ಉದ್ದೇಶಿಸಿ ಮೈಸೂರಿನಲ್ಲಿಯೇ ಅದನ್ನು ಪಾಲನೆ ಪೋಷಣೆ ಮಾಡಿದ್ದರು.
ಇದಾದ ಬಳಿಕ 1860ರ ವೇಳೆಗೆ ಮೊದಲ ಬಾರಿಗೆ ಈ ಆನೆ ದಸರಾದಲ್ಲಿ ಭಾಗಿಯಾಗಿತ್ತು. ಅಂದಿನಿಂದ ಬರೋಬ್ಬರಿ 45 ವರ್ಷಗಳ ಕಾಲ ಜಯಮಾರ್ತಾಂಡ ಅಂಬಾರಿ ಹೊತ್ತು ದಸರಾದಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ರಾಜರಿಗೆ ಅತ್ಯಂತ ಮುದ್ದಿನ ಆನೆ ಆಗಿತ್ತು. ಈಗಲೂ ಈ ದಾಖಲೆ ಜಯಮಾರ್ತಾಂಡ ಆನೆಯ ಹೆಸರಿನಲ್ಲಿದೆ.
ರಾಜರಿಗೆ ಈ ಆನೆ ಅಚ್ಚು ಮೆಚ್ಚು ಹಾಗೆ ದೀರ್ಘಕಾಲ ಅಂಬಾರಿ ಹೊತ್ತು ಸಾಗಿದ್ದರಿಂದ ಮೈಸೂರು ಅರಮನೆಯ ವಸ್ತು ಸಂಗ್ರಹಾಲಯ ಎದುರಿನ ಅರಮನೆಯ ಮಹಾದ್ವಾರವೊಂದಕ್ಕೆ ಜಯಮಾರ್ತಾಂಡ ದ್ವಾರ ಎಂದು ಹೆಸರಿಡಲಾಗಿದೆ.
ಮಹಾರಾಜರ ಹೊತ್ತು ಸಾಗಿದ ಕೊನೆಯ ಆನೆ ಬಿಳಿಗಿರಿ
ಹೀಗೆ ಮೈಸೂರು ದಸರಾದಲ್ಲಿ ಹಲವು ಆನೆಗಳು ಅಂಬಾರಿ ಹೊತ್ತು ಸಾಗಿವೆ. ಆದ್ರೆ ಕೊನೆಯದಾಗಿ ರಾಜರನ್ನು ಅಂಬಾರಿಯಲ್ಲಿ ಕುಳ್ಳಿರಿಸಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಬಿಳಿಗಿರಿ ಆನೆ. ಇದಾದ ಬಳಿಕ ರಾಜರ ಬದಲಾಗಿ ಚಾಮುಂಡೇಶ್ವರಿ ದೇವಿಯ ವಿಗ್ರಹ ಇಟ್ಟು ಸಾಗುವುದು ನಡೆದು ಬಂದಿದೆ.
ರಾಜ್ಕುಮಾರ್ ಜೊತೆ ನಟಿಸಿದ ಆನೆ ರಾಜೇಂದ್ರ
ಬಿಳಿಗಿರಿಯ ಬಳಿಕ ಅಂಬಾರಿ ಹೊರುತ್ತಿದ್ದ ರಾಜೇಂದ್ರ ಆನೆ ಡಾ.ರಾಜ್ಕುಮಾರ್ ಅವರು ನಟಿಸಿದ್ದ ಗಂಧದಗುಡಿ ಸಿನಿಮಾದಲ್ಲಿ ಕಾಣಿಸಿಕೊಂಡಿತು. ಇಡೀ ಚಿತ್ರದಲ್ಲಿ ಈ ಆನೆ ಕಾಣಿಸಿಕೊಂಡಿತ್ತು. ರಾಜೇಂದ್ರನ ಬಳಿಕ 18 ಬಾರಿ ಅಂಬಾರಿ ಹೊತ್ತ ಕೀರ್ತಿ ದ್ರೋಣನಿಗೆ ಸಲ್ಲುತ್ತದೆ. ಆದರೆ ಅತೀ ಹೆಚ್ಚು ಬಾರಿ ಅಂಬಾರಿ ಹೊತ್ತು ಸಾಗಿದ್ದು ಜಯಮಾರ್ತಾಂಡ ಎಂಬ ಆನೆಯಾಗಿದೆ.



Click it and Unblock the Notifications
