Latest Updates
-
ವಾಟ್ಸಾಪ್ ಹೊಸ ಫೀಚರ್ಗೆ ಬ್ರೇಕ್: ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಫ್ಲಿಪ್ಕಾರ್ಟ್ GOAT ಸೇಲ್: ಮಳೆಗಾಲಕ್ಕೆ ಬೇಕಾದ ಹೋಮ್ ಸ್ಟೋರೇಜ್ ಐಟಂಗಳು ಈಗ ₹1,499 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! ನಿಮ್ಮ ಆರೋಗ್ಯಕ್ಕೆ ಕಂಟಕವಾಗುತ್ತಿದೆಯೇ ಈ ಪಾನೀಯಗಳು? -
'ಆಲ್ಫಾ' ಸಿನಿಮಾದ ಸ್ಪೈ-ಕೋರ್ ಫ್ಯಾಷನ್ ಟ್ರೆಂಡ್: 1,499 ರೂ. ಒಳಗೇ ನೀವು ಹೀಗೆ ಸ್ಟೈಲಿಶ್ ಆಗಿ ಕಾಣಬಹುದು! -
ಅಮರನಾಥ ಯಾತ್ರೆ: ಸುರಕ್ಷಿತ ಪ್ರಯಾಣಕ್ಕಾಗಿ 12 ನಿಮಿಷದ ಈ ವ್ಯಾಯಾಮ ಮರೆಯದಿರಿ! -
ಅಸ್ಸಾಂ ಪ್ರವಾಹದ ಆತಂಕ: ನಿಮ್ಮ ಕುಟುಂಬದ ಸುರಕ್ಷತೆಗಾಗಿ ಇಂದೇ ಸಿದ್ಧಪಡಿಸಿಕೊಳ್ಳಿ ಈ ತುರ್ತು 'ಗೋ-ಬ್ಯಾಗ್' -
ಕರಾವಳಿ ಕರ್ನಾಟಕದಲ್ಲಿ ರೆಡ್ ಅಲರ್ಟ್: ಮಳೆಯಿಂದ ಮನೆ ಮತ್ತು ಬಾಲ್ಕನಿ ರಕ್ಷಿಸಲು ತಕ್ಷಣವೇ ಈ ಕೆಲಸ ಮಾಡಿ! -
ಮುಂಬೈ ರೆಡ್ ಅಲರ್ಟ್: ಪವರ್ ಕಟ್ ಆದಾಗ ನಿಮ್ಮ ಆಹಾರ ಸುರಕ್ಷಿತವಾಗಿಡಲು ಈ ಟಿಪ್ಸ್ ಪಾಲಿಸಿ -
ಅಮೆಜಾನ್ ಪ್ರೈಮ್ ಡೇ 2026: ಈ ಟಿಪ್ಸ್ ಫಾಲೋ ಮಾಡಿದ್ರೆ ಮಾತ್ರ ಸಿಗುತ್ತೆ ಭಾರಿ ಡಿಸ್ಕೌಂಟ್! -
ದಕ್ಷಿಣ ಗುಜರಾತ್ನಲ್ಲಿ ರೆಡ್ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ವರ್ಕೌಟ್!
ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಆನೆ ಯಾವುದು ಗೊತ್ತಾ? ಇದು ರಾಜರ ಮೆಚ್ಚಿನ ಆನೆ
ದಸರಾ ಅಂದಕ್ಷಣ ಮೈಸೂರು ನೆನಪಾಗುತ್ತೆ. ಮೈಸೂರು ಅರಮನೆಯ ಅಲಂಕಾರ ಹಾಗೆ ವಿಜಯದಶಮಿಯಂದು ನಡೆಯುವ ಜಂಬೂಸವಾರಿಯಂತು ಎಲ್ಲರ ಗಮನ ಸೆಳೆಯಲಿದೆ. ಜಂಬೂಸವಾರಿಯಲ್ಲಿ ಚಾಮುಂಡಿ ತಾಯಿಯ ಮೂರ್ತಿಯು ಚಿನ್ನದ ಅಂಬಾರಿಯಲ್ಲಿ ಮೆರವಣಿಗೆ ಹೊರಡಲಿದೆ. ಈ ಜಂಬೂಸವಾರಿಗೆ ಅಂಬಾರಿ ಎಷ್ಟು ಆಕರ್ಷಣೆಯೋ ಅದರಂತೆ ಆನೆಗಳು ಕೂಡ ಅಷ್ಟೇ ಮುಖ್ಯ ಅಂಶ.
ದಸರಾ ಆನೆಗಳ ನೋಡಲೆಂದೇ ಲಕ್ಷಾಂತರ ಮಂದಿ ಮೈಸೂರಿನಲ್ಲಿ ಸೇರುವುದು ನೋಡಬಹುದು. ಇನ್ನು ಈ ಬಾರಿ ಅಭಿಮನ್ಯೂ ಅಂಬಾರಿ ಹೊರುವ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಈಗಾಗಲೆ ಸಿದ್ದತೆಗಳು ನಡೆದಿದ್ದು, ಅದರೊಂದಿಗೆ ಪಟ್ಟದ ಆನೆಗಳು ಕೂಡ ಹೆಜ್ಜೆ ಹಾಕಲಿವೆ. ಅಂಬಾರಿ ಹೊರುವ ಆನೆಗೆ ಬಹಳ ಪ್ರಾಮುಖ್ಯತೆ ಇದೆ.

ಅಂಬಾರಿ ಹೊರುವ ಆನೆ ಯಾವ ರೀತಿಯಲ್ಲಿ ತಯಾರಿಯಲ್ಲಿ ತೊಡಗಬೇಕು, ಅದಕ್ಕೆ ನಿರ್ದಿಷ್ಟ ಮಾನದಂಡಗಳು ಕೂಡ ಇವೆ. ಇನ್ನು ಅರ್ಜುನನ ಮರಣದ ನಂತರ ಅಭಿಮನ್ಯೂ ಅಂಬಾರಿ ಹೊರುತ್ತಿದ್ದಾನೆ. ಆದ್ರೆ ಮೊಟ್ಟ ಮೊದಲ ಬಾರಿಗೆ ಅಂಬಾರಿಯನ್ನು ಹೊತ್ತಿರುವ ಆನೆ ಯಾವುದು? ಅದರ ಹಿಂದಿರುವ ಕಥೆ ನಿಮಗೆ ಗೊತ್ತಾ?
ಈಗ ಆನೆಯ ಮೇಲೆ ಅಂಬಾರಿ ಹಾಗೆ ಚಾಮುಂಡೇಶ್ವರಿ ತಾಯಿಯ ವಿಗ್ರಹ ಇರಲಿದೆ. ಆದ್ರೆ ಹಿಂದೆ ಮೈಸೂರು ಮಹಾರಾಜರು ಅಂಬಾರಿಯಲ್ಲಿ ಕುಳಿತು ಮೆರವಣಿಗೆ ಸಾಗುತ್ತಿದ್ದರು. ಹಾಗಾದ್ರೆ ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಅಂಬಾರಿ ಹೊತ್ತ ಆನೆ ಯಾವುದು?
ಅಂಬಾರಿ ಹೊತ್ತು ರೆಕಾರ್ಡ್ ಬರೆದ ಜಯಮಾರ್ತಾಂಡ
ಜಯಮಾರ್ತಾಂಡ ಎಂಬ ಆನೆ ಮೊಟ್ಟ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆ ಆಗಿದೆ. ಮೈಸೂರು ರಾಜರ ಅಚ್ಚು ಮೆಚ್ಚಿನ ಆನೆಯೂ ಇದಾಗಿತ್ತಂತೆ. ಪಿರಿಯಪಟ್ಟಣದ ಬೆಟ್ಟದ ಪುರ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಆನೆಗಳ ಗುಂಪಿನಿಂದ ಬೇರ್ಪಟ್ಟಿದ್ದ ಆನೆಯ ಮರಿ ಈ ಜಯಮಾರ್ತಾಂಡ ಆನೆ. ಆಗಿನ ಕಾಲದಲ್ಲಿ ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಈ ಆನೆಯ ಮರಿಯನ್ನು ಸಾಕಲು ಉದ್ದೇಶಿಸಿ ಮೈಸೂರಿನಲ್ಲಿಯೇ ಅದನ್ನು ಪಾಲನೆ ಪೋಷಣೆ ಮಾಡಿದ್ದರು.
ಇದಾದ ಬಳಿಕ 1860ರ ವೇಳೆಗೆ ಮೊದಲ ಬಾರಿಗೆ ಈ ಆನೆ ದಸರಾದಲ್ಲಿ ಭಾಗಿಯಾಗಿತ್ತು. ಅಂದಿನಿಂದ ಬರೋಬ್ಬರಿ 45 ವರ್ಷಗಳ ಕಾಲ ಜಯಮಾರ್ತಾಂಡ ಅಂಬಾರಿ ಹೊತ್ತು ದಸರಾದಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ರಾಜರಿಗೆ ಅತ್ಯಂತ ಮುದ್ದಿನ ಆನೆ ಆಗಿತ್ತು. ಈಗಲೂ ಈ ದಾಖಲೆ ಜಯಮಾರ್ತಾಂಡ ಆನೆಯ ಹೆಸರಿನಲ್ಲಿದೆ.
ರಾಜರಿಗೆ ಈ ಆನೆ ಅಚ್ಚು ಮೆಚ್ಚು ಹಾಗೆ ದೀರ್ಘಕಾಲ ಅಂಬಾರಿ ಹೊತ್ತು ಸಾಗಿದ್ದರಿಂದ ಮೈಸೂರು ಅರಮನೆಯ ವಸ್ತು ಸಂಗ್ರಹಾಲಯ ಎದುರಿನ ಅರಮನೆಯ ಮಹಾದ್ವಾರವೊಂದಕ್ಕೆ ಜಯಮಾರ್ತಾಂಡ ದ್ವಾರ ಎಂದು ಹೆಸರಿಡಲಾಗಿದೆ.
ಮಹಾರಾಜರ ಹೊತ್ತು ಸಾಗಿದ ಕೊನೆಯ ಆನೆ ಬಿಳಿಗಿರಿ
ಹೀಗೆ ಮೈಸೂರು ದಸರಾದಲ್ಲಿ ಹಲವು ಆನೆಗಳು ಅಂಬಾರಿ ಹೊತ್ತು ಸಾಗಿವೆ. ಆದ್ರೆ ಕೊನೆಯದಾಗಿ ರಾಜರನ್ನು ಅಂಬಾರಿಯಲ್ಲಿ ಕುಳ್ಳಿರಿಸಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಬಿಳಿಗಿರಿ ಆನೆ. ಇದಾದ ಬಳಿಕ ರಾಜರ ಬದಲಾಗಿ ಚಾಮುಂಡೇಶ್ವರಿ ದೇವಿಯ ವಿಗ್ರಹ ಇಟ್ಟು ಸಾಗುವುದು ನಡೆದು ಬಂದಿದೆ.
ರಾಜ್ಕುಮಾರ್ ಜೊತೆ ನಟಿಸಿದ ಆನೆ ರಾಜೇಂದ್ರ
ಬಿಳಿಗಿರಿಯ ಬಳಿಕ ಅಂಬಾರಿ ಹೊರುತ್ತಿದ್ದ ರಾಜೇಂದ್ರ ಆನೆ ಡಾ.ರಾಜ್ಕುಮಾರ್ ಅವರು ನಟಿಸಿದ್ದ ಗಂಧದಗುಡಿ ಸಿನಿಮಾದಲ್ಲಿ ಕಾಣಿಸಿಕೊಂಡಿತು. ಇಡೀ ಚಿತ್ರದಲ್ಲಿ ಈ ಆನೆ ಕಾಣಿಸಿಕೊಂಡಿತ್ತು. ರಾಜೇಂದ್ರನ ಬಳಿಕ 18 ಬಾರಿ ಅಂಬಾರಿ ಹೊತ್ತ ಕೀರ್ತಿ ದ್ರೋಣನಿಗೆ ಸಲ್ಲುತ್ತದೆ. ಆದರೆ ಅತೀ ಹೆಚ್ಚು ಬಾರಿ ಅಂಬಾರಿ ಹೊತ್ತು ಸಾಗಿದ್ದು ಜಯಮಾರ್ತಾಂಡ ಎಂಬ ಆನೆಯಾಗಿದೆ.



Click it and Unblock the Notifications