Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಪಂದಳ ರಾಜನ ಜನ್ಮ ರಹಸ್ಯವೇನು ಗೊತ್ತಾ? ಇಲ್ಲಿದೆ ಪೂರ್ಣ ಕಥೆ..!
ಶಬರಿಮಲೆ...ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳ. ಜನವರಿ ತಿಂಗಳಲ್ಲಿ ಲಕ್ಷ ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆಯಲು ಬರುತ್ತಾರೆ. ಆದರೆ ಇಲ್ಲಿಗೆ ಬರುವ ಮುನ್ನ ಅವರು ಅತ್ಯಂತ ಕಠಿಣ ವ್ರತ ಪಾಲಿಸಿರುತ್ತಾರೆ. ಅಯ್ಯಪ್ಪನ ಸನ್ನಿದಾನದಲ್ಲಿರುವ 18 ಮೆಟ್ಟಿಲುಗಳ ಏರಬೇಕೆಂಬುದು ಭಕ್ತಾಧಿಗಳ ಮಹದಾಸೆಯಾಗಿರುತ್ತೆ. ಇದಕ್ಕಾಗಿ ವರ್ಷವೆಲ್ಲಾ ಭಕ್ತರು ಕಾಯುತ್ತಾರೆ.
ಇಂತಹ ಲಕ್ಷಾಂತರ ಭಕ್ತಾಧಿಗಳ ಸಂಪಾದಿಸಿರುವ ಈ ಅಯ್ಯಪ್ಪಸ್ವಾಮಿ ಯಾರು? ಹೇಗೆ ಈ ದೇವಾಲಯ ಹುಟ್ಟಿಕೊಂಡಿತು. ಏನಿದು ಅಯ್ಯಪ್ಪನ ಸ್ವಾಮಿಯ ಕಥೆ? ಈ ಎಲ್ಲಾ ಪ್ರಶ್ನೆಗಳಿಗೂ ನಾವಿಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದೇವೆ.
ಶಬರಿಮಲೆಯಲ್ಲಿರುವ ಪ್ರಧಾನ ದೇವರಾದ ಅಯ್ಯಪ್ಪನ ಕಥೆಯು ಪಾಂಡ್ಯ ರಾಜವಂಶದಿಂದ ಬೇರ್ಪಟ್ಟ ನಂತರ ಪತ್ತನಂತಿಟ್ಟದ ಇಂದಿನ ಭಾಗಗಳಲ್ಲಿ ನೆಲೆಸಿದ್ದ ಪಂದಳಂ ರಾಜವಂಶಕ್ಕೆ ಸಂಬಂಧಿಸಿದೆ. ಪಂದಳಂನ ರಾಜ ಮತ್ತು ರಾಣಿಗೆ ಮಕ್ಕಳಿರಲಿಲ್ಲವಂತೆ. ರಾಜನು ಒಂದು ದಿನ ಬೇಟೆಯಾಡಲು ಹೋದಾಗ, ಕಾಡಿನಲ್ಲಿ ನದಿಯ ಪಕ್ಕದಲ್ಲಿ ಅಳುತ್ತಿರುವ ಮಗುವನ್ನು ಕಂಡು ಅದನ್ನು ಎತ್ತಿಕೊಳ್ಳುತ್ತಾನೆ.

ಬಳಿಕ ನದಿ ಸುತ್ತಲೂ ಮಗುವಿನ ಪೋಷಕರಿಗಾಗಿ ಅಲೆದಾಡುತ್ತಾನೆ. ಈ ಅಲೆದಾಟದ ವೇಳೆ ರಾಜನ ಕಣ್ಣಿಗೆ ಓರ್ವ ಮುನಿ ಸಿಗುತ್ತಾನೆ. ಆತ ಈ ಮಗುವನ್ನೂ ನೀನೇ ಸಾಕಿ ಸಲಹುವಂತೆ ಸೂಚಿಸುತ್ತಾನೆ. ಋಷಿ ಮುನಿಯ ಮಾತಿನಂತೆ ರಾಜ ಸಿಕ್ಕ ಮಗುವನ್ನು ಅರಮನೆಗೆ ತಂದು ಸಾಕುತ್ತಾನೆ. ಬಳಿಕ ಆ ಮಗು ಮಣಿಕಂಠ ಆಗಿ ಪಂದಳಂನ ರಾಜಕುಮಾರನಾಗುತ್ತಾನೆ.
ಮಣಿಕಂಠ 12 ವರ್ಷದವನಾಗಿದ್ದಾಗ, ಪಂದಳಂನ ರಾಣಿ ಹಠಾತ್ ಅನಾರೋಗ್ಯಕ್ಕೆ ಒಳಗಾದಳು. ಆದರೆ ಆಕೆಯ ಚಿಕಿತ್ಸೆಗೆ ಹುಲಿ ಹಾಲಿನ ಅಗತ್ಯವಿದೆ ಎಂದು ವೈದ್ಯರು ತಿಳಿಸಿದಾಗ ಒಂದು ಕ್ಷಣವೂ ಯೋಚಿಸದೆ ಮಠಿಕಂಠ ಹುಲಿ ಹಾಲು ತರಲೆಂದು ಕಾಡಿಗೆ ತೆರಳುತ್ತಾನೆ. ಆದರೆ ವಾಪಾಸು ಬರುವಾಗ ಹುಲಿ ಮೇಲೆ ಸವಾರಿ ಮಾಡುವುದು ಮಾತ್ರವಲ್ಲ ಹತ್ತಾರು ಹುಲಿ ಮರಿಗಳನ್ನು ತನ್ನೊಡನೆ ಕರೆತರುತ್ತಾನೆ.
ಇದನ್ನು ಕಂಡ ರಾಜ ದಂಗಾಗುತ್ತಾನೆ. ಆತ ಸಮಾನ್ಯ ವ್ಯಕ್ತಿಯಲ್ಲ ಎಂದು ಭಾವಿಸುತ್ತಾನೆ. ಹೀಗಾಗಿ ರಾಜ ತನ್ನೆಲ್ಲಾ ಸಂಪತ್ತನ್ನು ಆತನಿಗೆ ಅರ್ಪಿಸಲು ಮುಂದಾಗುತ್ತಾನೆ. ಅಲ್ಲದೆ ಅರಮನೆಯಿಂದ 30 ಕಿ.ಮೀ ದೂರದಲ್ಲಿರುವ ಕಾಡಿನ ಬೆಟ್ಟದಲ್ಲಿ ಮಣಿಕಂಠನಿಗಾಗಿ ದೇವಾಲಯ ನಿರ್ಮಿಸುತ್ತಾನೆ. ಈ ದೇವಾಲಯ ಶಬರಿಮಲೆಯಾಗಿ ಕರೆಯಲ್ಪಟ್ಟಿತ್ತು. ಮಣಿಕಂಠ ದೈವಿ ಸ್ವರೂಪನಾಗಿ ಅಯ್ಯಪ್ಪ ಎಂಬ ಹೆಸರಿನಿಂದ ಕರೆಯಲ್ಪಡುತ್ತಾನೆ.
ಶಬರಿಮಲೆ ಹುಟ್ಟಿನ ಮತ್ತೊಂದು ಕಥೆ
ರಾಣಿಗೆ ಮಣಿಕಂಠ ಮುಂದಿನ ರಾಜನಾಗುವುದನ್ನು ನೋಡಲು ಇಷ್ಟವಿರಲಿಲ್ಲವಂತೆ ಹೀಗಾಗಿ ಆಕೆ ಸುಳ್ಳು ಕಾಯಿಲೆಯ ನೆಪ ಹೇಳಿ ಅಯ್ಯಪ್ಪನನ್ನು ಕಾಡಿಗೆ ಹುಲಿಯ ಹಾಲು ತರಲು ಕಳುಹಿಸಿಲು ಮುಂದಾಗುತ್ತಾಳೆ. ಆತ ಕಾಡಿಗೆ ಹೋದರೆ ಹುಲಿ ಆತನ ಸಾಯಿಸಲಿದೆ ಎಂದು ಆಕೆ ಭಾವಿಸಿದ್ದಳಂತೆ. ಆದರೆ ಅಯ್ಯಪ್ಪನು ಹುಲಿಯ ಹಾಲಿನೊಂದಿಗೆ ರಾಜ್ಯಕ್ಕೆ ಮರಳುವಾಗ ಹುಲಿಯ ಮೇಲೆ ಕೂತು ಒಂದಿಷ್ಟು ಹುಲಿಗಳ ಗುಂಪಿನೊಂದಿಗೆ ಬರುತ್ತಾನೆ.
ಬಳಿಕ ಈ ಪಟ್ಟದ ಆಸೆ ಬೇಡವೆಂದು ಅಯ್ಯಪ್ಪನೇ ತಿರಸ್ಕರಿಸುತ್ತಾನೆ. ಆದರೆ ಆತನ ಕೋರಿಕೆಯಂತೆ ತಾನು ಬಿಟ್ಟ ಬಾಣ ಎಲ್ಲಿಗೆ ತಲುಪುತ್ತದೆಯೋ ಅಲ್ಲಿ ನೆಲೆಸುವುದಾಗಿ ಆತ ಹೇಳುತ್ತಾನೆ. ಹೀಗೆ ಮಣಿಕಂಠ ಬಿಟ್ಟ ಬಾಣ ಬೆಟ್ಟದಲ್ಲಿ ನೆಲೆಗೊಂಡು ಮುಂದೆ ಅದು ಶಬರಿಮಲೆಯಾಗುತ್ತದೆ ಎಂಬ ಪುರಾಣ ಕಥೆಯೂ ಇದೆ.
ಶಬರಿಮಲೆ ಇರುವುದೆಲ್ಲಿ?
ಕೇರಳದ ಇಂದಿನ ಪಥನಂತಿಟ್ಟ ಜಿಲ್ಲೆಯಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲವಿದೆ. ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದ ಬೆಟ್ಟದಲ್ಲಿ ಅಯ್ಯಪ್ಪ ಸ್ವಾಮಿಯ ದೇವಾಲಯವಿದೆ. ದೇವಸ್ಥಾನ ತಲುಪಲು ಬೆಟ್ಟದ ಕಳೆಭಾಗವಾದ ಪಂಬಾದಿಂದ ಚಾರಣ ಮಾಡಬೇಕಿದೆ. ಈ ದಾರಿ ಅತ್ಯಂತ ಕಠಿಣ ಸವಾಲಾಗಿದ್ದು, ಕಲ್ಲು, ಮುಳ್ಳು ದಾಟಿ ಬೆಟ್ಟವನ್ನು ಹತ್ತಬೇಕಾಗುತ್ತದೆ.



Click it and Unblock the Notifications











