Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಭೂಮಿಗೆ ಎಷ್ಟು ವರ್ಷ ಆಯಸ್ಸು ಗೊತ್ತಾ? ಸೂರ್ಯ-ಚಂದ್ರ ಕೂಡ ನಾಶವಾಗೋದು ಖಚಿತ!!
ನಾವು ಭೂಮಿಯ ಮೇಲೆ ಬಂದು ಶತಮಾನಗಳು ಉರುಳಿವೆ. ಅದೆಷ್ಟೋ ಜೀವಿಗಳು ಈಗಾಗಲೇ ಭೂಮಿ ಮೇಲೆ ಬಂದು ಭೂಮಿಯನ್ನಾಳಿ ನಶಿಸಿ ಹೋಗಿವೆ. ಭೂಮಿ ಮೊದಲು ಈಗಿನಂತೆ ಇರಲಿಲ್ಲ, ಬೆಂಕಿಯ ಉಂಡೆಯಾಗಿ ಆರಂಭಗೊಂಡ ಭೂಮಿ ಶತಮಾನಗಳ ಬಳಿಕ ಜೀವಿಗಳು ಉದಯಿಸಬಹುದಾದ ನೆಲೆಯಾಯಿತು.
ಮೊದಲು ಸಾಗರದ ಆಳದಲ್ಲಿ ಜೀವಿಗಳ ಹುಟ್ಟು ಆರಂಭಗೊಂಡು ಈಗ ಭೂಮಿ ಈ ಮಟ್ಟಕ್ಕೆ ಬಂದು ನಿಂತಿದೆ. ಆದ್ರೆ ಈಗ ಮಾನವ ಮತ್ತೊಂದು ಭೂಮಿ ಹುಡುಕಲು ಮುಂದಾಗಿದ್ದಾನೆ. ಅಂದರೆ ಈ ಭೂಮಿಯ ಆಯಸ್ಸು ಮುಗಿಯಲಿದೆ, ಮಾನವನಿಗೆ ಮತ್ತೊಂದು ನೆಲೆ ಹುಡುಕುವುದು ಅನಿವಾರ್ಯ ಎಂಬುದು ಅರಿವಾಗಿದೆ.

ಭೂಮಿ ಇನ್ನೇನು ಕೆಲವೇ ಮಿಲಿಯನ್ ವರ್ಷಗಳಲ್ಲಿ ಮತ್ತೆ ಬೆಂಕಿಯ ಉಂಡೆಯಾಗಿ ಬದಲಾಗಬಹುದು ಎಂಬುದು ವಿಜ್ಞಾನಿಗಳ ವಾದವಾಗಿದೆ. ಆದ್ರೆ ಅದಕ್ಕೂ ಮೊದಲೆ ಸೂರ್ಯ ನಮ್ಮಿಂದ ದೂರಾಗುತ್ತಾನೆ ಎಂಬ ವಾದವೂ ಇದೆ. ಸೂರ್ಯ ಈಗಿನಂತೆ ಬೆಳಗುವುದಿಲ್ಲ ಬೆಂಕಿಯ ಉಂಡೆಯಾದ ಸೂರ್ಯ ಒಂದು ದಿನ ಸ್ಪೋಟವಾಗುತ್ತಾನೆ ಎಂದು ವಿಜ್ಞಾನಿಗಳ ವಾದ. ಹೀಗೇನಾದರು ಸಂಭವಿಸಿದರೆ ಭೂಮಿಯು ಅದರೊಂದಿಗೆ ನಾಶವಾಗುತ್ತದೆ.
ಇಂದಿನಿಂದ ಬರೋಬ್ಬರಿ 5 ಶತಕೋಟಿ ವರ್ಷಗಳಲ್ಲಿ ಇದು ಸಂಭವಿಸಬಹುದಂತೆ. ಇಡೀ ಸೌರಮಂಡಲದ ಕೇಂದ್ರ ಬಿಂದು ಸೂರ್ಯ ಒಮ್ಮೆ ನಾಶ ವಾದರೆ ಭೂಮಿಯ ಕಥೆ ಏನು? ಸೂರ್ಯ ಇಲ್ಲವೆಂದರೆ ಭೂಮಿಗೆ ಎನಾಗಲಿದೆ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಆದ್ರೆ ಸೂರ್ಯ ಇರದಿದ್ದರೆ ಭೂಮಿ ಕೂಡ ನಾಶವಾಗೋದು ಪಕ್ಕಾ.
ಆದರೆ ನಾಳೆಯೇ ಕಣ್ಣು ಮಿಟುಕಿಸುವುದರೊಳಗೆ ಚಂದ್ರ ಮರೆಯಾದರೆ ಏನಾಗುತ್ತದೆ.? ಭೂಮಿಯ ಗುರುತ್ವಾಕರ್ಷಣೆಯ ಬಲಕ್ಕೂ ಚಂದ್ರನಿಗೂ ಸಂಬಂಧವಿದೆ ಹೀಗಾಗಿ ಚಂದ್ರ ಮರೆಯಾದರೆ ಭೂಮಿಯ ಗುರುತ್ವಾಕರ್ಷಣೆ ಏರು ಪೇರಾಗಲಿದೆ. ಈಗ ಇರುವ ಕಕ್ಷೆಗಿಂತಲೂ ಭೂಮಿ ಸ್ವಲ್ಪ ಮೇಲೆ ಬರಲಿದೆ. ಅಲ್ಲದೆ ಸಾಗರಗಳು ಉಕ್ಕುತ್ತವೆ. ಅಂದರೆ ಹತ್ತಾರು ನಗರಗಳು ನೀರಿನೊಳಗೆ ಮುಳುಗುತ್ತವೆ.
ಆದಾಗ್ಯೂ, ಪ್ರಾಣಿಗಳ ಮೇಲೆ ಪರಿಣಾಮವು ತುಂಬಾ ಹೆಚ್ಚಾಗಿರುತ್ತದೆ. ಕರಾವಳಿ ಪರಿಸರ ವ್ಯವಸ್ಥೆಗಳು ಸಮುದ್ರದ ತಳದಿಂದ ವಸ್ತುಗಳನ್ನು ಹೊರಹಾಕಲು ಉಬ್ಬರವಿಳಿತಗಳನ್ನು ಅವಲಂಬಿಸಿವೆ. ಹೀಗಾಗಿ ಅವುಗಳು ಚಂದ್ರನಿಲ್ಲದೆ ರಾತ್ರಿಯಲ್ಲಿ ಹೊರಬರಲು ಸಾಧ್ಯವಾಗುವುದಿಲ್ಲ. ಅಲ್ಲದೆ ಆಹಾರವಿಲ್ಲದೆ ಅವು ಸಾಯುತ್ತವೆ.
ಚಂದ್ರನಿಲ್ಲದ ಕೇವಲ 2 ಗಂಟೆಯಲ್ಲಿ ಭೂಮಿಯ ಮೇಲೆ ವ್ಯತಿರಿಕ್ತ ಪರಿಣಾಮ ನೋಡಬಹುದು. ಅಲ್ಲದೆ ಭೂಮಿ ತಿರುಗುವ ವೇಗದಲ್ಲಿ ಏರಿಳಿತವಾಗುತ್ತದೆ. ದಿನಕ್ಕೆ 24 ಗಂಟೆಯ ಬದಲಾಗಿ 18 ಗಂಟೆಗೆ ಒಂದು ದಿನವಾಗಿ ಬದಲಾಗುತ್ತದೆ.
ಕುಗ್ಗುತ್ತಿದ್ದಾನೆ ಚಂದ್ರ..!
ಭೂಮಿಯಂತೆ ಚಂದ್ರನ ಮೇಲ್ಮೈ ಕೂಡ ಗಡಸಾಗಿದೆ. ಆದರೆ ಚಂದ್ರನ ಕುಗ್ಗುವಿಕೆಯಿಂದ ಚಂದ್ರನ ತ್ರಿಜ್ಯದಲ್ಲಿ ಕುಗ್ಗುತ್ತಿದ್ದಾನೆ. ಇದರಿಂದ ಆತ ಭೂಮಿಯಂದ ದೂರ ಸರಿಯುತ್ತಿದ್ದಾನೆ. ಕಳೆದ ನೂರಾರು ಮಿಲಿಯನ್ ವರ್ಷಗಳಿಂದ ಚಂದ್ರನು ತ್ರಿಜ್ಯದಲ್ಲಿ ಕುಗ್ಗುತ್ತಿದ್ದಾನೆ. ಪ್ರಸ್ತುತ, ಅದರ ಮಧ್ಯಭಾಗವು ಸುಮಾರು 50 ಮೀಟರ್ ನಷ್ಟು ಗಾತ್ರದಲ್ಲಿ ಕುಗ್ಗಿದೆಯಂತೆ. ಅಂದರೆ ಬರೋಬ್ಬರಿ 164 ಅಡಿಗಳಷ್ಟು ಗಾತ್ರದಲ್ಲಿ ಚಿಕ್ಕದಾಗಿದ್ದಾನೆ.
ಈ ಕುರಿತು ನಾಸಾ ಇತ್ತೀಚಿಗೆ ಬಿಡುಗಡೆ ಮಾಡಿದ್ದ ಫೋಟೋಗಳು ಸಹ ಸಾಕ್ಷಿಯಾಗಿದ್ದವು, ಚಂದ್ರನ ಮೇಲ್ಮೈಯಲ್ಲಿ ದೊಡ್ಡ ಕುಳಿಗಳು, ಬರುಕು ಮೂಡಿದ್ದ ಫೋಟೋಗಳವು. ಚಂದ್ರನ ಕ್ರಸ್ಟ್ ಪಾಯಿಂಟ್ ಅಂದರೆ ಹೊರ ಮೇಲ್ಮೈ ಸಹ ಅತ್ಯಂತ ದುರ್ಬಲವಾಗಿದೆ. ಇವು ನೂರಾರು ಬಿರುಕುಗಳಿಂದ ಕೂಡಿದೆ. ಅಲ್ಲದೆ ಆಗಾಗ ಸಂಭವಿಸುವ ಕಂಪನಗಳು ಈ ಬಿರುಕುಗಳ ಗಾತ್ರ ಹೆಚ್ಚಾಗಲು ಮತ್ತಷ್ಟು ಬಿರುಕು ಮೂಡಲು ಕಾರಣವಾಗಿದೆ. ಇದರಿಂದ ಚಂದ್ರ ಚಿಕ್ಕದಾಗುತ್ತಾ ಭೂಮಿಯಿಂದ ದೂರ ಸರಿಯುತ್ತಿದ್ದಾನೆ. ಒಂದು ವೇಳೆ ಚಂದ್ರ ಮರೆಯಾದರೆ ಭೂಮಿಯ ಆಯಸ್ಸು ಕೂಡ ಕೆಲವೇ ವರ್ಷದಲ್ಲಿ ಅಂತ್ಯವಾಗಲಿದೆ.



Click it and Unblock the Notifications