Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
Bengaluru: ಅತ್ತೆ ಸಾಯಿಸಲು ವೈದ್ಯರ ಬಳಿ ಸಹಾಯ ಕೇಳಿದ ಸೊಸೆ..! ಆದ್ರೆ ಆಮೇಲೆ ಆಗಿದ್ದೇ ಬೇರೆ..!
ಅತ್ತೆ ಸೊಸೆ ಅಂದ ಮೇಲೆ ಜಗಳ, ಪ್ರೀತಿ, ಮುನಿಸು, ಗಲಾಟೆ ಇದೆಲ್ಲವು ಸಾಮಾನ್ಯ. ಇದ್ಯಾವುದೂ ಇಲ್ಲ ಅಂದ್ರೆ ಅತ್ತೆ-ಸೊಸೆ ಸಂಬಂಧಕ್ಕೆ ಅರ್ಥವೇ ಇರೋದಿಲ್ಲ. ಇತ್ತೀಚಿಗೆ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿರುವುದು ನೋಡಬಹುದು. ಅದರಲ್ಲೂ ಅತ್ತೆ ಸೊಸೆ ಅಂದರೆ ಅವರು ಜಗಳ ಮಾಡಲೇಬೇಕು ಎಂಬಷ್ಟು ಮಟ್ಟಿಗೆ ಬಂದು ತಲುಪಿದೆ. ಇನ್ನು ಇಬ್ಬರ ನಡುವಿನ ಜಗಳ ಕೆಲವು ಗಂಟೆ, ದಿನ, ವಾರ, ತಿಂಗಳ, ವರ್ಷದ ಎಲ್ಲಾ ದಿನವೂ ಇರಬಹುದು.
ಆದ್ರೆ ಇಲ್ಲೊಂದು ಪ್ರಕರಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಸೊಸೆ, ಅತ್ತೆಯ ಉಸಿರು ನಿಲ್ಲಿಸುವ ಯೋಜನೆ ರೂಪಿಸಿದ್ದಾಳೆ. ಆದ್ರೆ ಇದಕ್ಕೆ ಅವಳು ಕೇಳಿದ್ದು ಮಾತ್ರ ಜೀವ ಉಳಿಸುವ ವೈದ್ಯರ ನೆರವನ್ನ. ಹೌದು ಈ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ವಿದ್ಯಾವಂತರೇ ತುಂಬಿರುವ ಬೆಂಗಳೂರಿನಲ್ಲಿ ಇಂತಹದೊಂದು ಘಟನೆ ವರದಿಯಾಗಿರುವುದು ಆಘಾತಕ್ಕೆ ಕಾರಣವಾಗಿದೆ.

ಉತ್ತರ ಬೆಂಗಳೂರಿನ ವೈದ್ಯರೊಬ್ಬರಿಗೆ ವಾಟ್ಸಾಪ್ನಲ್ಲಿ ಬಂದಿದ್ದ ಸಂದೇಶ ನೋಡಿ ಶಾಕ್ಗೆ ಒಳಗಾಗಿದ್ದರು, ನಮ್ಮ ಅತ್ತೆಯನ್ನು ಕೊಲ್ಲಲು ಯಾವ ಮಾತ್ರೆ ಬಳಸಬೇಕು ಎಂಬುದು ತಿಳಿಸಿ ಎಂದು ಸೊಸೆ ಮೆಸೇಜ್ ಮಾಡಿದ್ದಳು. ಈ ಸಂದೇಶ ಓದಿದ ವೈದ್ಯರು ಆಘಾತಕ್ಕೊಳಗಾಗಿದ್ದಾರೆ. ಡಾ. ಸುನಿಲ್ ಕುಮಾರ್ ಎಂಬುವವರಿಗೆ ವಾಟ್ಸಾಪ್ ಮೂಲಕ ಈ ರೀತಿ ಪ್ರಶ್ನೆ ಕೇಳಲಾಗಿತ್ತು.
ಈ ಸಂದೇಶ ಸ್ವೀಕರಿಸಿದ ಬಳಿಕ ಪ್ರತ್ಯುತ್ತರ ನೀಡಿದ ವೈದ್ಯರು, ' ವೈದ್ಯರು ಜೀವ ಉಳಿಸಬೇಕೇ ವಿನಃ ಜೀವ ಕಸಿಯಬಾರದು ಎಂದು ಮೆಸೇಜ್ ಮಾಡಿದರು. ಈ ಸಂದೇಶ ನೋಡಿದ ತಕ್ಷಣ ಮಹಿಳೆ ತನ್ನ ಮೆಸೇಕ್ ಡಿಲೀಟ್ ಮಾಡಿದ್ದಾಳೆ. ಆದ್ರೆ ಅಷ್ಟರಾಗಲೆ ತಡವಾಗಿತ್ತು. ವೈದ್ಯರು ಈ ಸಂದೇಶ ಬಂದೊಡನೆ ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದರು.
ಸೋಮವಾರ ಮಧ್ಯಾಹ್ನ 2:10 ರ ಸುಮಾರಿಗೆ ಈ ಸಂದೇಶಗಳನ್ನು ಅವರು ಪಡೆದಿದ್ದಾರೆ. ಆರಂಭದಲ್ಲಿ ಮಹಿಳೆ ಕನ್ನಡದಲ್ಲಿ ಸಂದೇಶ ಕಳುಹಿದ್ದರಂತೆ. ಆಕೆಗೆ ಈ ವೈದ್ಯರು ಸಹಾಯ ಮಾಡುವುದಿಲ್ಲ ಎಂದು ತಿಳಿದು ಮೆಸೇಜ್ ಡಿಲೀಟ್ ಮಾಡಿದ್ದಾಳೆ. ಆಕೆ ತನ್ನ 70 ವರ್ಷದ ಅತ್ತೆ ಮಾನಸಿಕವಾಗಿ ಕಿರುಕುಳು ನೀಡುತ್ತಾಲೆ ಎಂದು ಹೇಳಿಕೊಂಡಿದ್ದಾಳಂತೆ.
ಸದ್ಯ ಡಾ. ಸುನಿಲ್ ಕುಮಾರ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಆಕೆಯ ಮೆಸೇಜ್ ಅನ್ನು ಸಾಕ್ಷ್ಯವಾಗಿಟ್ಟುಕೊಂಡು ದೂರ ನೀಡಲಾಗಿದ್ದು, ಪೊಲೀಸರು ಆಕೆಯ ಕುರಿತು ತನಿಖೆ ಆರಂಭಿಸಿ. ನೋಟಿಸ್ ಜಾರಿ ಮಾಡಿದ್ದರು, ಹೀಗಾಗಿ ಪತಿಯ ಜೊತೆಗೆ ಠಾಣೆಗೆ ಆಗಮಿಸಿದ ಆಕೆ ತನ್ನ ಅತ್ತೆಯ ಬದಲಾಗಿ ತಾನೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಈ ರೀತಿ ಕೇಳಿರುವುದಾಗಿ ಹೇಳಿದ್ದಾಳೆ. ತನಗಾಗಿ ಕೇಳಿದರೆ ನೀಡುವುದಿಲ್ಲ ಎಂದು ಅತ್ತೆಯ ಹೆಸರಿನಲ್ಲಿ ಕೇಳಲು ಮುಂದಾಗಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ.
ನಾನು ವೈದ್ಯರ ಬಳಿ ಆತ್ಮಹತ್ಯೆಗೆ ಮಾತ್ರೆಗಳ ನೀಡುವಂತೆ ಕೇಳಿದ್ದರೆ, ಅವರು ಖಂಡಿತವಾಗಿಯೂ ನಿರಾಕರಿಸುತ್ತಿದ್ದರು. ಹಾಗಾಗಿ ನಾನು ಅದನ್ನು ಬೇರೆ ರೀತಿಯಲ್ಲಿ ಕೇಳಿದೆ. ಒಂದು ವೇಳೆ ಅವರು ಮಾತ್ರೆಗಳ ಹೆಸರು ಹೇಳಿದ್ದರೆ ಅದನ್ನು ನಾನೇ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಆಕೆ ಪೊಲೀಸರ ಎದುರು ಹೇಳಿಕೊಂಡಿದ್ದಾಳೆ. ಆಕೆಗೆ ಸುಮಾರು 40 ವರ್ಷವಾಗಿದ್ದು, ಪತಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಕೆಗೆ ಚಿಕ್ಕ ಮಗಳು ಕೂಡ ಇದ್ದಾಳೆ. ಆಕೆ ಆನ್ಲೈನ್ನಲ್ಲಿ ಡಾ. ಸುನಿಲ್ ಕುಮಾರ್ ಅವರ ಮೊಬೈಲ್ ನಂಬರ್ ಪಡೆದಿರುವುದಾಗಿ ಹೇಳಿಕೊಂಡಿದ್ದಾಳೆ.



Click it and Unblock the Notifications