Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
Bengaluru: ಅತ್ತೆ ಸಾಯಿಸಲು ವೈದ್ಯರ ಬಳಿ ಸಹಾಯ ಕೇಳಿದ ಸೊಸೆ..! ಆದ್ರೆ ಆಮೇಲೆ ಆಗಿದ್ದೇ ಬೇರೆ..!
ಅತ್ತೆ ಸೊಸೆ ಅಂದ ಮೇಲೆ ಜಗಳ, ಪ್ರೀತಿ, ಮುನಿಸು, ಗಲಾಟೆ ಇದೆಲ್ಲವು ಸಾಮಾನ್ಯ. ಇದ್ಯಾವುದೂ ಇಲ್ಲ ಅಂದ್ರೆ ಅತ್ತೆ-ಸೊಸೆ ಸಂಬಂಧಕ್ಕೆ ಅರ್ಥವೇ ಇರೋದಿಲ್ಲ. ಇತ್ತೀಚಿಗೆ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿರುವುದು ನೋಡಬಹುದು. ಅದರಲ್ಲೂ ಅತ್ತೆ ಸೊಸೆ ಅಂದರೆ ಅವರು ಜಗಳ ಮಾಡಲೇಬೇಕು ಎಂಬಷ್ಟು ಮಟ್ಟಿಗೆ ಬಂದು ತಲುಪಿದೆ. ಇನ್ನು ಇಬ್ಬರ ನಡುವಿನ ಜಗಳ ಕೆಲವು ಗಂಟೆ, ದಿನ, ವಾರ, ತಿಂಗಳ, ವರ್ಷದ ಎಲ್ಲಾ ದಿನವೂ ಇರಬಹುದು.
ಆದ್ರೆ ಇಲ್ಲೊಂದು ಪ್ರಕರಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಸೊಸೆ, ಅತ್ತೆಯ ಉಸಿರು ನಿಲ್ಲಿಸುವ ಯೋಜನೆ ರೂಪಿಸಿದ್ದಾಳೆ. ಆದ್ರೆ ಇದಕ್ಕೆ ಅವಳು ಕೇಳಿದ್ದು ಮಾತ್ರ ಜೀವ ಉಳಿಸುವ ವೈದ್ಯರ ನೆರವನ್ನ. ಹೌದು ಈ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ವಿದ್ಯಾವಂತರೇ ತುಂಬಿರುವ ಬೆಂಗಳೂರಿನಲ್ಲಿ ಇಂತಹದೊಂದು ಘಟನೆ ವರದಿಯಾಗಿರುವುದು ಆಘಾತಕ್ಕೆ ಕಾರಣವಾಗಿದೆ.

ಉತ್ತರ ಬೆಂಗಳೂರಿನ ವೈದ್ಯರೊಬ್ಬರಿಗೆ ವಾಟ್ಸಾಪ್ನಲ್ಲಿ ಬಂದಿದ್ದ ಸಂದೇಶ ನೋಡಿ ಶಾಕ್ಗೆ ಒಳಗಾಗಿದ್ದರು, ನಮ್ಮ ಅತ್ತೆಯನ್ನು ಕೊಲ್ಲಲು ಯಾವ ಮಾತ್ರೆ ಬಳಸಬೇಕು ಎಂಬುದು ತಿಳಿಸಿ ಎಂದು ಸೊಸೆ ಮೆಸೇಜ್ ಮಾಡಿದ್ದಳು. ಈ ಸಂದೇಶ ಓದಿದ ವೈದ್ಯರು ಆಘಾತಕ್ಕೊಳಗಾಗಿದ್ದಾರೆ. ಡಾ. ಸುನಿಲ್ ಕುಮಾರ್ ಎಂಬುವವರಿಗೆ ವಾಟ್ಸಾಪ್ ಮೂಲಕ ಈ ರೀತಿ ಪ್ರಶ್ನೆ ಕೇಳಲಾಗಿತ್ತು.
ಈ ಸಂದೇಶ ಸ್ವೀಕರಿಸಿದ ಬಳಿಕ ಪ್ರತ್ಯುತ್ತರ ನೀಡಿದ ವೈದ್ಯರು, ' ವೈದ್ಯರು ಜೀವ ಉಳಿಸಬೇಕೇ ವಿನಃ ಜೀವ ಕಸಿಯಬಾರದು ಎಂದು ಮೆಸೇಜ್ ಮಾಡಿದರು. ಈ ಸಂದೇಶ ನೋಡಿದ ತಕ್ಷಣ ಮಹಿಳೆ ತನ್ನ ಮೆಸೇಕ್ ಡಿಲೀಟ್ ಮಾಡಿದ್ದಾಳೆ. ಆದ್ರೆ ಅಷ್ಟರಾಗಲೆ ತಡವಾಗಿತ್ತು. ವೈದ್ಯರು ಈ ಸಂದೇಶ ಬಂದೊಡನೆ ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದರು.
ಸೋಮವಾರ ಮಧ್ಯಾಹ್ನ 2:10 ರ ಸುಮಾರಿಗೆ ಈ ಸಂದೇಶಗಳನ್ನು ಅವರು ಪಡೆದಿದ್ದಾರೆ. ಆರಂಭದಲ್ಲಿ ಮಹಿಳೆ ಕನ್ನಡದಲ್ಲಿ ಸಂದೇಶ ಕಳುಹಿದ್ದರಂತೆ. ಆಕೆಗೆ ಈ ವೈದ್ಯರು ಸಹಾಯ ಮಾಡುವುದಿಲ್ಲ ಎಂದು ತಿಳಿದು ಮೆಸೇಜ್ ಡಿಲೀಟ್ ಮಾಡಿದ್ದಾಳೆ. ಆಕೆ ತನ್ನ 70 ವರ್ಷದ ಅತ್ತೆ ಮಾನಸಿಕವಾಗಿ ಕಿರುಕುಳು ನೀಡುತ್ತಾಲೆ ಎಂದು ಹೇಳಿಕೊಂಡಿದ್ದಾಳಂತೆ.
ಸದ್ಯ ಡಾ. ಸುನಿಲ್ ಕುಮಾರ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಆಕೆಯ ಮೆಸೇಜ್ ಅನ್ನು ಸಾಕ್ಷ್ಯವಾಗಿಟ್ಟುಕೊಂಡು ದೂರ ನೀಡಲಾಗಿದ್ದು, ಪೊಲೀಸರು ಆಕೆಯ ಕುರಿತು ತನಿಖೆ ಆರಂಭಿಸಿ. ನೋಟಿಸ್ ಜಾರಿ ಮಾಡಿದ್ದರು, ಹೀಗಾಗಿ ಪತಿಯ ಜೊತೆಗೆ ಠಾಣೆಗೆ ಆಗಮಿಸಿದ ಆಕೆ ತನ್ನ ಅತ್ತೆಯ ಬದಲಾಗಿ ತಾನೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಈ ರೀತಿ ಕೇಳಿರುವುದಾಗಿ ಹೇಳಿದ್ದಾಳೆ. ತನಗಾಗಿ ಕೇಳಿದರೆ ನೀಡುವುದಿಲ್ಲ ಎಂದು ಅತ್ತೆಯ ಹೆಸರಿನಲ್ಲಿ ಕೇಳಲು ಮುಂದಾಗಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ.
ನಾನು ವೈದ್ಯರ ಬಳಿ ಆತ್ಮಹತ್ಯೆಗೆ ಮಾತ್ರೆಗಳ ನೀಡುವಂತೆ ಕೇಳಿದ್ದರೆ, ಅವರು ಖಂಡಿತವಾಗಿಯೂ ನಿರಾಕರಿಸುತ್ತಿದ್ದರು. ಹಾಗಾಗಿ ನಾನು ಅದನ್ನು ಬೇರೆ ರೀತಿಯಲ್ಲಿ ಕೇಳಿದೆ. ಒಂದು ವೇಳೆ ಅವರು ಮಾತ್ರೆಗಳ ಹೆಸರು ಹೇಳಿದ್ದರೆ ಅದನ್ನು ನಾನೇ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಆಕೆ ಪೊಲೀಸರ ಎದುರು ಹೇಳಿಕೊಂಡಿದ್ದಾಳೆ. ಆಕೆಗೆ ಸುಮಾರು 40 ವರ್ಷವಾಗಿದ್ದು, ಪತಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಕೆಗೆ ಚಿಕ್ಕ ಮಗಳು ಕೂಡ ಇದ್ದಾಳೆ. ಆಕೆ ಆನ್ಲೈನ್ನಲ್ಲಿ ಡಾ. ಸುನಿಲ್ ಕುಮಾರ್ ಅವರ ಮೊಬೈಲ್ ನಂಬರ್ ಪಡೆದಿರುವುದಾಗಿ ಹೇಳಿಕೊಂಡಿದ್ದಾಳೆ.



Click it and Unblock the Notifications