Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
29 ವರ್ಷದಿಂದ 3 ಹೊತ್ತು ಉಚಿತ ಊಟ ನೀಡುವ ಏಕೈಕ ರೈಲಿದು..! ಯಾವ ಮಾರ್ಗ ಗೊತ್ತಾ?
ಭಾರತೀಯ ರೈಲ್ವೆ ಇಂದು ಬಹಳ ವೇಗವಾಗಿ ಬೆಳೆಯುತ್ತಿರುವ ವಲಯವಾಗಿ. ವಿಶ್ವದ ಅತ್ಯಂತ ದೊಡ್ಡ ನೌಕರರ ಹೊಂದಿರುವ ಹಾಗೆ ದೊಡ್ಡ ಸಂಪರ್ಕ ಜಾಲ ಹೊಂದಿರುವ ರೈಲ್ವೆ ಎಂವ ಹೆಗ್ಗಳಿಕೆ ಕೂಡ ಪಡೆದುಕೊಂಡಿದೆ. ಈಗ ವಂದೇ ಭಾರತ್, ಬುಲೆಟ್ ಟ್ರೈನ್, ಹೈಪರ್ ಲೂಪ್ ಸೇರಿದಂತೆ ಹೈ ಸ್ಪೀಡ್ ರೈಲಿನಂತರ ಹೊಸ ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದೆ.
ಭಾರತೀಯ ರೈಲ್ವೆ ಹಲವು ವಿಚಾರಗಳಿಗೆ ಈಗ ಸುದ್ದಿಯಾಗುತ್ತಿದೆ. ಇತ್ತೀಚಿಗೆ ರೈಲ್ವೆಯಲ್ಲಿ ನೀಡಲಾಗುತ್ತಿರುವ ಆಹಾರ ಹಾಗೆ ರೈಲಿನಲ್ಲಿ ಸೀಟು ಸಿಗದೆ ಇರುವುದು ಸೇರಿ ಹಲವು ರೀತಿಯ ಸಮಸ್ಯೆಗಳಿಂದ ತುಂಬಿದ ಘಟನೆಗಳು ವರದಿಯಾಗುತ್ತಿವೆ. ಭಾರತದ ರೈಲ್ವೆ ಮೇಲ್ದರ್ಜೆಗೆ ಏರಿಸಿದ್ದರು ಕೂಡ ಅದರಿಂದ ಯಾವುದೇ ಪ್ರಯೋಜವಾಗದಿರುವುದು ಹಾಗೆ ಕೆಲವು ಕಡೆ ರೈಲು ಸಂಪರ್ಕ ಇಲ್ಲದಿರುವುದು ಸಹ ನೋಡಬಹುದು.

ಇನ್ನೊಂದು ಕಡೆ ರೈಲ್ವೆ ಜನರ ನಿತ್ಯದ ಬದುಕಿನಲ್ಲಿ ಹಾಸು ಹೊಕ್ಕಾಗಿರುವುದು. ಕಡಿಮೆ ದರದಲ್ಲಿ ಒಂದುಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸುವುದು. ಹಾಗೆ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿರುವ ಒಂದು ವಲಯವಾಗಿಯೂ ರೈಲ್ವೆ ಕಾಣಿಸಿಕೊಂಡಿದೆ. ಹಾಗೆ ಈಗ ಭಾರತೀಯ ರೈಲ್ವೆಯು ಪ್ರತಿ ದಿನ ಸುಮಾರು 2.5 ಕೋಟಿ ಪ್ರಯಾಣಿರನ್ನು ಹೊತ್ತು ಸಾಗಲಿದೆ. ಇದು ವಿಶ್ವದ ಯಾವುದೇ ರೈಲ್ವೆ ನೀವು ಹೋಲಿಸಿದರೂ ಇದು ಹೆಚ್ಚು.
ಭಾರತದಲ್ಲಿ ಈಗ 13,452 ರೈಲುಗಳು ಚಲಿಸುತ್ತಿವೆ ಎಂದು ತಿಳಿದುಬಂದಿದೆ. ಆದ್ರೆ ಇಷ್ಟು ರೈಲುಗಳಲ್ಲಿ ಕೇವಲ ಒಂದು ರೈಲು ಮಾತ್ರವೇ ಈಗ ವಿಶೇಷ ರೈಲು ಎನಿಸಿದೆ. ಹೌದು ಈ ರೈಲು ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ, ಹಾಗೆ ರಾತ್ರಿ ಊಟವನ್ನು ಉಚಿತವಾಗಿ ನೀಡುತ್ತಿದೆ. ಅದರಲ್ಲೂ ಎಲ್ಲಾ ಪ್ರಯಾಣಿಕರಿಗೂ ಇದು ಉಚಿತ ಎಂಬುದು ನಿಮಗೆ ಗೊತ್ತಾ?
ಸಚ್ಖಂಡ್ ಎಕ್ಸ್ಪ್ರೆಸ್ (12715) ಎಂಬ ಹೆಸರಿನ ರೈಲು ಪ್ರತಿ ದಿನವು ಈ ರೀತಿ ಉಚಿತ ಊಟ, ಉಪಹಾರ ನೀಡುತ್ತದೆ. ಇದು ಮಹಾರಾಷ್ಟ್ರದ ನಾಂದೇಡ್ ಮತ್ತು ಪಂಜಾಬ್ನ ಅಮೃತಸರದ ನಡುವೆ ಕಾರ್ಯ ನಿರ್ವಹಿಸುತ್ತದೆ. ನಾಂದೇಡ್ ಹಾಗೂ ಈ ಪಂಜಾಬ್ನ ಅಮೃತಸರ ಸಿಖ್ಖರ ಪವಿತ್ರ ಭೂಮಿಯಾಗಿದೆ. ಹೀಗಾಗೀ ಈ ರೈಲಿನಲ್ಲಿ ನಿತ್ಯ ಸಾವಿರಾರು ಮಂದಿ ಈ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವುದು ನೋಡಬಹುದು. ಹೀಗಾಗಿ ಈ ರೈಲಿನಲ್ಲಿ ಉಚಿತ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗುತ್ತದೆ.
ಸಚ್ಖಂಡ್ ಎಕ್ಸ್ಪ್ರೆಸ್ ಅಮೃತಸರದ ಶ್ರೀ ಹರ್ಮಂದರ್ ಸಾಹಿಬ್ ಗುರುದ್ವಾರದಿಂದ ನಾಂದೇಡ್ನಲ್ಲಿರುವ ಶ್ರೀ ಹಜೂರ್ ಸಾಹಿಬ್ ಗುರುದ್ವಾರಕ್ಕೆ ಚಲಿಸುತ್ತದೆ. ಕಳೆದ 29 ವರ್ಷಗಳಿಂದ ಈ ರೈಲು ತನ್ನ ಪ್ರಯಾಣಿಕರಿಗೆ ಉಚಿತ ಆಹಾರವನ್ನು ನೀಡುತ್ತಾ ಬಂದಿದೆ. ಈ ಎರಡು ಪವಿತ್ರ ಸ್ಥಳಗಳ ನಡುವೆ ಸುಮಾರು 2 ಸಾವಿರ ಕಿ.ಮೀ ಅಂತರವಿದೆ. ಹಾಗೆ ಬರೋಬ್ಬರಿ 39 ನಿಲ್ದಾಣಗಳನ್ನು ದಾಟಲಿದೆ. ಇಂತಹ ಪ್ರಮುಖ ನಿಲ್ದಾಣಗಳಲ್ಲಿಯೂ ಈ ರೈಲು ಪ್ರಯಾಣಿಕರಿಗೆ ಸಾಮೂಹಿಕ ಊಟದ ವ್ಯವಸ್ಥೆ ಮಾಡುವುದು ಇದರ ಇನ್ನೊಂದು ವಿಶೇಷ ಎನ್ನಬಹುದು. ಹಾಗೆ ಈ ರೈಲು ಪ್ರಯಾಣವು ಸುಮಾರು 33 ಗಂಟೆ ತೆಗೆದುಕೊಳ್ಳಲಿದೆ.
ಸಾಮಾನ್ಯವಾಗಿ ಈ ರೈಲಿನಲ್ಲಿ ಅನ್ನ, ಚಪಾತಿ, ಚೋಲೆ, ದಾಲ್ ಖಿಚಡಿ, ಆಲೂಗಡ್ಡೆಯಿಂದ ಮಾಡಲಾದ ಹಲವು ಖಾದ್ಯಗಳ ನೋಡಬಹುದು. ಹಾಗೆ ಈ ರೈಲು ಪ್ರಯಾಣಿಕರು ತಮ್ಮದೇ ತಟ್ಟೆ ಹಾಗೂ ಲೋಟಗಳನ್ನು ಪ್ರಯಾಣದ ಸಮಯದಲ್ಲಿ ಬಳಸುವಂತೆ ಹೇಳಲಾಗುತ್ತದೆ. ಹೀಗಾಗಿ ಪರಿಸರ ಸ್ನೇಹಿಯಾಗಿಯೂ ಗುರುತಿಸಿಕೊಂಡಿದೆ. ಇಂತಹ ಹಲವು ವಿಶೇಷತೆಗಳನ್ನು ಭಾರತೀಯ ರೈಲ್ವೆ ತನ್ನ ಬಳಿ ಇಟ್ಟುಕೊಂಡಿದೆ.



Click it and Unblock the Notifications