Latest Updates
-
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ
ಜೈಸಲ್ಮೇರ್ನಲ್ಲಿ ಸರಸ್ವತಿ ನದಿ ಮತ್ತೆ ಉಕ್ಕಿತ್ತಾ..? ಈ ಘಟನೆ ಸತ್ಯ ಏನು ಗೊತ್ತಾ?
ನೀವು ಹಿಂದೂ ಪುರಾಣಗಳಲ್ಲಿ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಸರಸ್ವತಿ ನದಿ ಅಸ್ಥಿತ್ವ ಕುರಿತು ಇಂದಿಗೂ ಹಲವು ಪ್ರಶ್ನೆಗಳು ಬಗೆಹರಿಯದಷ್ಟು ಕುತೂಹಲಗಳಿವೆ. ಭಾರತದ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತವಾಗಿರುವ ಪವಿತ್ರ ನದಿ ಎಂದು ಸರಸ್ವತಿ ನದಿಯ ಕರೆಯಲಾಗಿದೆ. ಋಗ್ವೇದ ಕಾಲದಲ್ಲಿ
ಇದರ ಉಲ್ಲೇಖ ಇದ್ದು, ನದಿ ಹರಿವು ಈಗ ಸಂಪೂರ್ಣ ಬತ್ತಿ ಹೋಗಿದೆ ಎಂಬುದಾಗಿ ನಂಬಲಾಗಿದೆ. ಹಲವು ಪುರಾಣಗಳಿಗೂ ಈ ನದಿಗೂ ಸಂಬಂಧವಿದೆ ಎಂಬ ನಂಬಲಾಗಿದೆ.

ಸುಮಾರು 5 ಸಾವಿರ ವರ್ಷಗಳ ಹಿಂದೆಯೇ ಈ ನದಿ ಬತ್ತಿ ಹೋಗಿದೆ ಎಂದು ನಂಬಲಾಗಿದೆ. ಹಾಗೆ ಈಗೊಂದು ವಿಡಿಯೋದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಸರಸ್ವತಿ ನದಿ ಏಕಾಏಕಿ ಮೇಲೆದ್ದು ಬಂದು ಮರುಭೂಮಿಯಾಗಿರುವ ರಾಜಸ್ಥಾನದಲ್ಲಿ ಹರಿಯಲು ಆರಂಭಿಸಿದೆ ಎಂಬ ವಿಡಿಯೋ ಇದಾಗಿದೆ.
ರಾಜಸ್ಥಾನದ ಜೈಸಲ್ಮೇರ್ನಲ್ಲಿ ರೈತರೊಬ್ಬರು ಬೋರ್ ವೆಲ್ ಕೊರೆಸುತ್ತಿರುವಾಗ ಏಕಾಏಕಿ ನೀರು ಚಿಮ್ಮಿ ನದಿಯಾಗಿ ರೂಪುಗೊಂಡು ಬೋರ್ ಕೊರೆಯುವ ಲಾರಿ ಆ ದೊಡ್ಡ ಕುಳಿಯಲ್ಲಿ ಸಿಲುಕಿದ ಘಟನೆ ನಡೆದಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸರಸ್ವತಿ ನದಿಯ ಹರಿವಿನ ಬಗ್ಗೆ ಮತ್ತೆ ಚರ್ಚೆಗಳು ಮುನ್ನಲೆಗೆ ಬಂದಿದೆ.
ಈ ವಿಚಿತ್ರ ಘಟನೆ ನೋಡಲು ಇಡೀ ಗ್ರಾಮಸ್ಥರು ನೆರೆದ್ದಿದ್ದರು. ಭೂಮಿ ಒಳಗಿಂದ ನೀರು ಧುಮುಕುವುದನ್ನು ಕಂಡು ನಿಬ್ಬೆರಗಾದರು, ಈ ನೀರು ಇಡೀ ಗ್ರಾಮವನ್ನೇಲ್ಲಾ ಆವರಿಸಿಕೊಂಡು ಪ್ರವಾಹದಂತೆ ಕಾಣುತ್ತಿತ್ತು. ಈ ಘಟನೆ ನಡೆದು ಇಂದಿಗೆ ಮೂರಕ್ಕೂ ಹೆಚ್ಚು ದಿನ ಕಳೆದಿದ್ದು ಈಗ ನೀರು ಹರಿಯುವಿಕೆ ಸಂಪೂರ್ಣ ನಿಂತು ಬಿಟ್ಟಿದೆ.
ಹೌದು ಸರಸ್ವತಿ ನದಿ ಹರಿಯುತ್ತಿದೆ ಎಂದು ವಾದಿಸುತ್ತಿರುವಾಗ ಭೂಮಿಯಿಂದ ಹೊರಬರುತ್ತಿದ್ದ ನೀರು ಈಗ ಸಂಪೂರ್ಣ ನಿಂತಿದೆ. ಹೀಗಾಗಿ ಇದು ನದಿಯ ಮೂಲ ಅಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಹಾಗಾದ್ರೆ ಇಷ್ಟೊಂದು ಪ್ರಮಾಣದ ನೀರು ಮರುಭೂಮಿಯಲ್ಲಿ ಸಿಕ್ಕಿದ್ದೇಗೆ? ಅಲ್ಲಿ ನಡೆದಿರುವ ಅಚ್ಚರಿ ವಿಚಾರ ಏನು ಎಂಬುದನ್ನು ನಾವಿಂದು ವಿವರಿಸುತ್ತೇವೆ ನೋಡಿ.
ಬೋರ್ವೆಲ್ ಅಗೆಯುವ ವೇಳೆ ಏಕಾಏಕಿ ಒತ್ತಡದಿಂದ ನೀರು ಮತ್ತು ಅನಿಲ ಹೊರಬಿದ್ದಿರುವ ಬಗ್ಗೆ ತನಿಖೆ ನಡೆಸಿ ಅದರ ಕಾರಣಗಳನ್ನು ಪತ್ತೆ ಮಾಡಲಾಗುವುದು ಎಂದು ರಾಜಸ್ಥಾನದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ (ಪಿಎಚ್ಇಡಿ) ತಿಳಿಸಿದೆ. ಅಂದರೆ ಬೋರ್ವೆಲ್ ಕೊರೆಯುವಾಗ ನದಿ ಉಗಮವಾಗಿಲ್ಲ ಬದಲಿಗೆ ಅನಿಲ ಹಾಗೂ ನೀರು ಏಕಾಏಕಿ ಉಕ್ಕಿ ಬಂದಿದೆ ಎಂದು ತಿಳಿಸಿದೆ.
ಹೊಂಡ ಮಾಡಲಾದ ನೆಲದಿಂದ ಅನಿಲದ ಜೊತೆಗೆ ನೀರಿನ ಹರಿವು ಆಗಸ್ಕೆ ಚಿಮ್ಮಿತ್ತು. ಭಾನುವಾರ ರಾತ್ರಿಯಿಂದ ಭೂಮಿಯಿಂದ ಹೊರಬರುವ ನೀರು ಮತ್ತು ಅನಿಲದ ಹರಿವು ನಿಂತಿದೆ. ಜಿಲ್ಲಾಡಳಿತವು ಪ್ರದೇಶದ 500 ಮೀಟರ್ ಒಳಗೆ ಯಾವುದೇ ವ್ಯಕ್ತಿ ಅಥವಾ ಜಾನುವಾರುಗಳನ್ನು ಪ್ರವೇಶಿಸುವುದನ್ನು ನಿಷೇಧಿಸಿದೆ ಮತ್ತು ಪ್ರದೇಶದ ಸುತ್ತಲಿನ ಹೊಲಗಳ ರೈತರನ್ನು ನಿರ್ಬಂಧಿಸಿದೆ. ತಜ್ಞರ ಅಭಿಪ್ರಾಯ ಬರುವವರೆಗೆ ಗುಂಡಿಯಲ್ಲಿ ಸಿಲುಕಿರುವ ಉಪಕರಣಗಳನ್ನು ಹೊರತೆಗೆಯದಂತೆ ಆಡಳಿತ ತಿಳಿಸಿದೆ.
ಈ ಪ್ರಕ್ರಿಯೆಗೆ ಕಾರಣ ಏನು ಎಂಬುದನ್ನು ಪತ್ತೆ ಮಾಡಲಿ ತಜ್ಞರ ತಂಡ ಸ್ಥಳಕ್ಕೆ ತಲುಪಿ ಪರಿಶೀಲನೆ ಕೂಡ ನಡೆಸಿದೆ. ಭೂಮಿ ಒಳಗಿಂದ ಇಷ್ಟೊಂದು ಪ್ರಮಾಣದ ಗ್ಯಾಸ್ ಹಾಗೂ ನೀರು ಬರಲು ಕಾರಣವೇನು ಎಂಬುದನ್ನು ಪತ್ತೆ ಮಾಡಬೇಕಿದೆ. ಹಾಗೆ ಮರುಭೂಮಿ ಪ್ರದೇಶ ಆಗಿರುವುದರಿಂದ ಅಲ್ಲಿನ ಗಟ್ಟಿ ನೆಲಸದಲ್ಲಿ ಗ್ಯಾಸ್ ಛೇಂಬರ್ನಂತಹ ಅಪಾಯವಿದೆಯೇ ಎಂಬುದನ್ನು ಕೂಡ ಪತ್ತೆ ಮಾಡಬೇಕಿದೆ. ಆದ್ರೆ ಸರಸ್ವತಿ ನದಿ ಈಗ ಮತ್ತೆ ಮೇಲೆದ್ದು ಹರಿಯ ತೊಡಗಿದ್ದಾಳೆ ಎಂಬ ವಾದ ಮತ್ತೆ ಸುಳ್ಳಾಗಿದೆ.



Click it and Unblock the Notifications











