Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮತದಾನ ಮಾಡಿ ಟಿವಿ, ಫ್ರಿಡ್ಜ್, ವಜ್ರದ ಉಂಗುರ ಗೆಲ್ಲಿ..! ಹೇಗೆ ಗೊತ್ತಾ?
ಭಾರತ ಈಗ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಹಬ್ಬಕ್ಕೆ ಸಾಕ್ಷಿಯಾಗುತ್ತಿದೆ. ಕೋಟಿ ಕೋಟಿ ಮಂದಿ ತಮ್ಮ ಹಕ್ಕು ಚಲಾಯಿಸುವ ಲೋಕಸಭೆ ಚುನಾವಣೆ ನಡೆಯುತ್ತಿದೆ. ದೇಶದಾದ್ಯಂತ ವಿವಿಧ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮತದಾರರ ಸೆಳೆಯುವ ಕಾರ್ಯವೂ ಭರದಿಂದ ಸಾಗಿದೆ.
ಇತ್ತಿಚಿಗೆ ಜನರು ಶಿಕ್ಷಣ ಪಡೆದರು ಸಹ ತಮ್ಮ ಹಕ್ಕುಗಳ ಬಗ್ಗೆ ನಿರ್ಲಕ್ಷ ತಳೆದಿರುತ್ತಾರೆ. ಅದರಲ್ಲಿ ಮತದಾನದ ಹಕ್ಕು ಸಹ ಸೇರಿದೆ. ಆದರೆ ಜನ ಮತದಾನ ಮಾಡಲು ಮನೆಯಿಂದ ಹೊರಬಾರದೆ ಇರುವುದು ಚುನಾವಣಾ ಆಯೋಗಕ್ಕೆ ತಲೆನೋವು ತಂದಿದೆ.

ವರ್ಷದಿಂದ ವರ್ಷಕ್ಕೆ ಈ ಮತದಾನದ ಪ್ರಮಾಣ ಏರಿಸಬೇಕು ಎಂಬ ಪಣ ತೊಟ್ಟಿರುವ ಆಯೋಗಕ್ಕೆ ಹಿನ್ನಡೆಯಾಗುತ್ತಲೇ ಇದೆ. ಹೀಗಾಗಿ ಆಯೋಗ ಈ ಬಾರಿ ವಿಶೇಷ ಅಭಿಯಾನ ನಡೆಸುತ್ತಲೇ ಇದೆ. ಮತದಾನ ಮಾಡುವಂತೆ ಉತ್ತೇಜಿಸಲು ನಟ, ನಟಿಯರ ಮೂಲಕ, ಜಾಹೀರಾತುಗಳ ಮೂಲಕ, ಅಧಿಕಾರಿ, ಸಿಬ್ಬಂದಿ ಮೂಲಕ ಮತದಾರರ ಮನ ಪರಿವರ್ತನೆಗೆ ಶ್ರಮಿಸುತ್ತಿದೆ.
ಹೀಗೆ ಮತದಾರರ ಸೆಳೆಯುವ ತಂತ್ರವಾಗಿ ಈಗ ಜನರಿಗೆ ಹೊಸ ಹೊಸ ಆಸೆ ತೋರಿಸಲು ಆಯೋಗ ಮುಂದಾಗಿದೆ. ಮತದಾನ ಮಾಡುವವರಿಗೆ ಟಿವಿ, ಫ್ರಿಡ್ಜ್, ಲ್ಯಾಪ್ಟಾಪ್, ಬೈಕ್, ವಜ್ರದ ಉಂಗುರ ಹೀಗೆ ಹತ್ತಾರು ಉಡುಗೊರೆಗಳ ಕೊಡಲು ಮುಂದಾಗಿದೆ. ಈ ಮೂಲಕ ಒಂದಿಷ್ಟು ಪ್ರಮಾಣದ ಮತದಾನ ಹೆಚ್ಚಳ ಮಾಡುವ ಗುರಿ ಹೊಂದಿದೆ.
2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಮಧ್ಯಪ್ರದೇಶದಲ್ಲಿ ಮತದಾನದ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ, ಸರಾಸರಿ 8.5 ಪ್ರತಿಶತದಷ್ಟು ಕಡಿಮೆಯಾಗಿದೆ. ಇಲ್ಲಿನ ಭೋಪಾಲ್ ಜಿಲ್ಲಾಡಳಿತವು ಜನರಿಗೆ ವಜ್ರದ ಉಂಗುರಗಳು, ಟಿವಿ, ಬೈಕ್ ಮತ್ತು ರೆಫ್ರಿಜರೇಟರ್ಗಳನ್ನು ನೀಡುವ ಲಕ್ಕಿ ಡ್ರಾವನ್ನು ಘೋಷಿಸಿದೆ.
ಭೋಪಾಲ್ ಕ್ಷೇತ್ರದಲ್ಲಿ ಒಟ್ಟು 2,097 ಮತಗಟ್ಟೆಗಳಿವೆ. ಬಂಪರ್ ಬಹುಮಾನಗಳ ಜೊತೆಗೆ 6,000 ಕ್ಕೂ ಹೆಚ್ಚು ಬಹುಮಾನಗಳು ಲಭ್ಯವಿವೆ. ಮತದಾರರು ತಮ್ಮ ಹಕ್ಕು ಚಲಾಯಿಸಿ, ಕೈ ಬೆರಳಿನ ಮೇಲಿರುವ ಶಾಹಿ ಗುರುತು ತೋರಿಸಿ, ತಮ್ಮ ಮೊಬೈಲ್ ಸಂಖ್ಯೆ, ಹೆಸರು ಮತ್ತು ವೋಟರ್ ಐಡಿಗಳೊಂದಿಗೆ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ಅವುಗಳನ್ನು ಕೂಪನ್ ಬಾಕ್ಸ್ನಲ್ಲಿ ಹಾಕಬೇಕಾಗುತ್ತದೆ.
ಪ್ರತಿ ಬೂತ್ನಲ್ಲಿ ಮೂರು ಮಂದಿ ಲಕ್ಕಿ ಡ್ರಾ ವಿಜೇತರಾಗಬಹುದು. ಯಾರ ಹೆಸರು ಚೀಟಿಯಲ್ಲಿ ಬರುತ್ತದೆಯೋ ಅವರು ಈ ಬಹುಮಾನಗಳ ಪಡೆಯುವ ಅದೃಷ್ಟವಂತರಾಗುತ್ತಾರೆ. ಬೆಳಗ್ಗೆ 10 ಗಂಟೆಗೆ, ಮಧ್ಯಾಹ್ನ 3 ಮತ್ತು ಸಂಜೆ 6 ಗಂಟೆಗೆ ಮೂರು ಬಾರಿ ಲಕ್ಕಿ ಡ್ರಾ ನಡೆಸಲಾಗುತ್ತದೆ. ಈ ಪ್ರತಿಯೊಂದು ಡ್ರಾದಲ್ಲಿ ಒಬ್ಬ ವಿಜೇತರು ಬಹುಮಾನವನ್ನು ಗೆಲ್ಲುತ್ತಾರೆ. ತದನಂತರ, ಚುನಾವಣೆಯ ನಂತರ ಒಂದು ಅಥವಾ ಎರಡು ದಿನ, ನಾವು ಮೆಗಾ ಡ್ರಾವನ್ನು ನಡೆಸುತ್ತೇವೆ ಅಲ್ಲಿ ವಿಜೇತರಿಗೆ ದೊಡ್ಡ ಬಹುಮಾನಗಳನ್ನು ವಿತರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಹುಮಾನಗಳನ್ನು ನೀಡಲು ಹಲವು ಸಂಘ ಸಂಸ್ಥೆಗಳು ಚುನಾವಣಾ ಆಯೋಗದ ಜೊತೆ ಕೈ ಜೋಡಿಸಿವೆ. ಹೀಗಾದರೂ ಮಾಡಿ ಒಂದಿಷ್ಟು ಮತದಾನದ ಪ್ರಮಾಣ ಏರಿಸುವತ್ತ ಆಯೋಗ ಗಮನ ಹರಿಸಿದೆ. ಜೊತೆಗೆ ಈ ಬಹುಮಾನ ಪಡೆದ ಮಂದಿ ಮುಂದೆಯೂ ಮತದಾನ ಮಾಡಬಹುದು. ಇಲ್ಲವೆ ಮತದಾನ ಮಾಡುವಂತೆ ಪ್ರೇರೇಪಿಸಬಹುದು ಎಂದು ಅಂದಾಜಿಸಲಾಗಿದೆ.
ಐದು ವಜ್ರದ ಉಂಗುರಗಳು, ಲ್ಯಾಪ್ಟಾಪ್, ರೆಫ್ರಿಜರೇಟರ್, ಎಂಟು ಡಿನ್ನರ್ ಸೆಟ್ಗಳು ಮತ್ತು ಎರಡು ಮೊಬೈಲ್ ಫೋನ್ಗಳು ಸೇರಿದಂತೆ 35 ವಸ್ತುಗಳು ಬಹುಮಾನವಾಗಿ ನೀಡಲು ಮುಂದಾಗಲಾಗಿದೆ. ಇದರ ಜೊತೆ ಹಲವು ಸಂಘ ಸಂಸ್ಥೆಗಳು ಬಹುಮಾನಗಳನ್ನು ನೀಡಲು ಮುಂದೆ ಬಂದಿವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಸ್ಥೆಗಳು ಮುಂದೆ ಬರುವ ನಿರೀಕ್ಷೆಯಲ್ಲಿ ಚುನಾವಣಾ ಆಯೋಗವಿದೆ.



Click it and Unblock the Notifications











